AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

TDS Rule Change: ಜುಲೈನಿಂದ ಬದಲಾಗಲಿದೆ ಟಿಡಿಎಸ್ ನಿಯಮಾವಳಿ, ಏನಿದು ಬದಲಾವಣೆ ಎಂಬ ವಿವರ ಇಲ್ಲಿದೆ

ಜುಲೈ ತಿಂಗಳಿನಿಂದ ಅನ್ವಯ ಆಗುವಂತೆ ಟಿಡಿಎಸ್​ ನಿಯಮಾವಳಿ ಬದಲಾವಣೆ ಆಗಲಿದೆ. ಯಾವ್ಯಾವುದಕ್ಕೆ ಈ ಬದಲಾವಣೆ ಅನ್ವಯ ಎಂಬುದರ ವಿವರ ಇಲ್ಲಿದೆ.

TDS Rule Change: ಜುಲೈನಿಂದ ಬದಲಾಗಲಿದೆ ಟಿಡಿಎಸ್ ನಿಯಮಾವಳಿ, ಏನಿದು ಬದಲಾವಣೆ ಎಂಬ ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jun 20, 2022 | 10:39 AM

ಮಾರಾಟ ಪ್ರಚಾರಕ್ಕಾಗಿ ಉದ್ಯಮಗಳಿಂದ ಪಡೆದ ಪುಕ್ಕಟೆ ವಸ್ತು, ಪದಾರ್ಥಗಳ ಮೇಲೆ ಮೂಲದಲ್ಲಿ (TDS) ಕಡಿತಗೊಳಿಸಲಾದ ಶೇಕಡಾ 10 ತೆರಿಗೆಯು ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ಮತ್ತು ವೈದ್ಯರಿಗೆ ಜುಲೈನಿಂದ ಅನ್ವಯಿಸುತ್ತದೆ. ಹೊಸ ಟಿಡಿಎಸ್ ನಿಯಮವು ಜುಲೈ 1ರಿಂದ ಜಾರಿಗೆ ಬರಲಿದ್ದು, ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಈ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಿದೆ. 2022ರ ಹಣಕಾಸು ಕಾಯ್ದೆಯಲ್ಲಿ ತೆರಿಗೆ ನೆಲೆಯನ್ನು ವಿಸ್ತರಿಸಲು ಮತ್ತು ವ್ಯವಹಾರಗಳಿಂದ ಅಂತಹ ಮಾರಾಟ ಪ್ರಚಾರದ ವೆಚ್ಚದಿಂದ ಲಾಭ ಪಡೆಯುವವರು ಅದನ್ನು ತಮ್ಮ ತೆರಿಗೆ ರಿಟರ್ನ್ಸ್‌ನಲ್ಲಿ ವರದಿ ಮಾಡುತ್ತಾರೆ ಮತ್ತು ತೆರಿಗೆಯನ್ನು ಪಾವತಿಸುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ಈ ನಿಬಂಧನೆಯನ್ನು ಪರಿಚಯಿಸಲಾಗಿದೆ. ಸಾಮಾಜಿಕ ಮಾಧ್ಯಮದ ಪ್ರಭಾವಿಗಳಿಗೆ ಕಂಪೆನಿಯು ಮಾರ್ಕೆಟಿಂಗ್ ಪ್ರಚಾರದ ಭಾಗವಾಗಿ ನೀಡುವ ಉಪಕರಣಗಳನ್ನು ಆ ವ್ಯಕ್ತಿ ಉಳಿಸಿಕೊಂಡರೆ ಟಿಡಿಎಸ್ ಮೊತ್ತವನ್ನು ಪಾವತಿಸುವುದು ಅತ್ಯಗತ್ಯವಾಗಿರುತ್ತದೆ. ಆದರೆ ಅವುಗಳನ್ನು ಕಂಪೆನಿಗೆ ಹಿಂತಿರುಗಿಸಿದರೆ ಟಿಡಿಎಸ್ ಅನ್ವಯಿಸುವುದಿಲ್ಲ ಎಂದು ಸಿಬಿಡಿಟಿ ಸ್ಪಷ್ಟಪಡಿಸಿದೆ.

“ಇದು (ಸಾಮಾಜಿಕ ಮಾಧ್ಯಮದಲ್ಲಿ ಮಾರಾಟ ಪ್ರಚಾರದ ಚಟುವಟಿಕೆಗಾಗಿ ನೀಡಲಾದ ಉತ್ಪನ್ನ) ಅನುಕೂಲವಾಗಿದೆಯೇ ಅಥವಾ ಅಗತ್ಯವಾಗಿದೆಯೇ ಎಂಬುದು ಪ್ರತಿ ಪ್ರಕರಣದ ಸತ್ಯದ ಮೇಲೆ ಅವಲಂಬಿತವಾಗಿರುತ್ತದೆ. ಕಾರು, ಮೊಬೈಲ್, ಬಟ್ಟೆಗಳು, ಕಾಸ್ಮೆಟಿಕ್ಸ್ ಇತ್ಯಾದಿಗಳಂತಹ ಉತ್ಪನ್ನವು ಲಾಭ ಅಥವಾ ಸವಲತ್ತು ಆಗಿದ್ದರೆ ಮತ್ತು ಸೇವೆಯನ್ನು ಸಲ್ಲಿಸುವ ಉದ್ದೇಶಕ್ಕಾಗಿ ಬಳಸಿದ ನಂತರ ಉತ್ಪನ್ನವನ್ನು ಉತ್ಪಾದನಾ ಕಂಪೆನಿಗೆ ಹಿಂತಿರುಗಿಸಿದರೆ ಅದನ್ನು ಪ್ರಯೋಜನ ಅಥವಾ ಅಗತ್ಯ ಎಂದು ಕಾಯ್ದೆಯ ಸೆಕ್ಷನ್ 194R (ಟಿಡಿಎಸ್ ನಿಬಂಧನೆ) ಪರಿಗಣಿಸಲಾಗುವುದಿಲ್ಲ,” ಎಂದು ಸಿಬಿಡಿಟಿ ತಿಳಿಸಿದೆ.

ಮತ್ತೊಂದೆಡೆ, ಅದನ್ನು ಆ ವ್ಯಕ್ತಿಯು ಇಟ್ಟುಕೊಂಡರೆ ಅದು ಅನುಕೂಲ ಅಥವಾ ಸವಲತ್ತು ಸ್ವರೂಪದಲ್ಲಿರುತ್ತದೆ ಮತ್ತು ಕಾಯ್ದೆಯ ಸೆಕ್ಷನ್ 194R ಅಡಿಯಲ್ಲಿ ತೆರಿಗೆಯನ್ನು ಕಡಿತಗೊಳಿಸಬೇಕಾಗುತ್ತದೆ. ಇದಲ್ಲದೆ, ಗ್ರಾಹಕರಿಗೆ ಅನುಮತಿಸುವ ಮಾರಾಟದ ರಿಯಾಯಿತಿ, ನಗದು ರಿಯಾಯಿತಿ ಮತ್ತು ರಿಯಾಯಿತಿಗಳ ಮೇಲೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 194R ಅಡಿಯಲ್ಲಿ ಯಾವುದೇ ತೆರಿಗೆಯನ್ನು ಕಡಿತಗೊಳಿಸುವ ಅಗತ್ಯವಿಲ್ಲ ಎಂದು ಸಿಬಿಡಿಟಿ ಸ್ಪಷ್ಟಪಡಿಸಿದೆ. ಅದೇ ರೀತಿ ಉಚಿತ ಸ್ಯಾಂಪಲ್​​ಗಳನ್ನು ನೀಡಿದರೆ ಆಗ ಸನ್ನಿವೇಶ ಬದಲಾಗುತ್ತದೆ. ಅವರಿಗೆ ವಿನಾಯಿತಿ ಅನ್ವಯಿಸುವುದಿಲ್ಲ.

ಟಿಡಿಎಸ್ ಅನ್ವಯಿಸುವ ನಿದರ್ಶನಗಳು ಅಂದರೆ, ನಗದು ಅಥವಾ ಕಾರು, ಟೀವಿ, ಕಂಪ್ಯೂಟರ್‌ಗಳು, ಚಿನ್ನದ ನಾಣ್ಯ, ಮೊಬೈಲ್ ಫೋನ್, ವಿದೇಶಿ ಪ್ರವಾಸಗಳು ಮತ್ತು ಮಾರಾಟವನ್ನು ಉತ್ತೇಜಿಸಲು ನೀಡಿದ ಕಾರ್ಯಕ್ರಮಗಳಿಗೆ ನೀಡುವ ಉಚಿತ ಟಿಕೆಟ್‌ಗಳಂತಹ ಸವಲತ್ತುಗಳನ್ನು ಒಳಗೊಂಡಿರುತ್ತದೆ. ವೈದ್ಯರು, ಆಸ್ಪತ್ರೆಯ ಉದ್ಯೋಗಿಗಳು ಅಥವಾ ಸಲಹೆಗಾರರಾಗಿದ್ದರೆ ಅವರು ಕಂಪೆನಿಯಿಂದ ಉಚಿತ ಔಷಧಿ ಮಾದರಿಯನ್ನು ಪಡೆದರೆ ಅದು TDS ವ್ಯಾಪ್ತಿಗೆ ಒಳಪಡುತ್ತದೆ. ವೈದ್ಯರು ಆಸ್ಪತ್ರೆಯ ಉದ್ಯೋಗಿ ಎಂಬ ಕಾರಣಕ್ಕೆ ಟಿಡಿಎಸ್ ಆಸ್ಪತ್ರೆಯಿಂದ ಕಡಿತಗೊಳ್ಳುತ್ತದೆ.

ಸಿಬಿಡಿಟಿ ವಿವರಿಸುವಂತೆ, “ಅಂತಹ ಸಂದರ್ಭದಲ್ಲಿ ಅದು ಆಸ್ಪತ್ರೆಯಿಂದ ಮೊದಲು ತೆರಿಗೆಗೆ ಒಳಪಡುತ್ತದೆ ಮತ್ತು ನಂತರ ಸಂಬಳದ ವೆಚ್ಚವಾಗಿ ಕಡಿತವನ್ನು ಅನುಮತಿಸಲಾಗುತ್ತದೆ. ಹೀಗಾಗಿ, ಅಂತಿಮವಾಗಿ ಮೊತ್ತವು ನೌಕರರ ಕೈಯಲ್ಲಿ ತೆರಿಗೆಯನ್ನು ಪಡೆಯುತ್ತದೆ ಮತ್ತು ಆಸ್ಪತ್ರೆಯಿಂದ ಅಲ್ಲ. ಆಸ್ಪತ್ರೆಯು ತನ್ನ ತೆರಿಗೆ ರಿಟರ್ನ್ ಅನ್ನು ಒದಗಿಸುವ ಮೂಲಕ ಕಾಯ್ದೆಯ ಸೆಕ್ಷನ್ 194R ಅಡಿಯಲ್ಲಿ ಕಡಿತಗೊಳಿಸಿದ ತೆರಿಗೆಯ ಕ್ರೆಡಿಟ್ ಪಡೆಯಬಹುದು.”

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ 

ಇದನ್ನೂ ಓದಿ: Real Estate New TDS Rules: ಆಸ್ತಿ ವಹಿವಾಟುಗಳಿಗೆ ಹೊಸ ಟಿಡಿಎಸ್ ನಿಯಮ: ನಿಮಗೆ ಗೊತ್ತಿರಬೇಕಾದ ಸಂಗತಿಗಳಿವು

ಟಿವಿ9 ಕನ್ನಡ ವರದಿಗಾರನೊಂದಿಗೆ ಆರೆಮನಸ್ಸಿನಿಂದ ಮಾತಾಡಿದ ವಿದ್ಯಾರ್ಥಿ
ಟಿವಿ9 ಕನ್ನಡ ವರದಿಗಾರನೊಂದಿಗೆ ಆರೆಮನಸ್ಸಿನಿಂದ ಮಾತಾಡಿದ ವಿದ್ಯಾರ್ಥಿ
ಇದು ರಾಜಕೀಯ ಮಾಡುವ ಸಂದರ್ಭ ಅಲ್ಲ, ರೂಪಾನಿ ಅತ್ಮಕ್ಕೆ ಶಾಂತಿ ಸಿಗಲಿ: ಈಶ್ವರ್
ಇದು ರಾಜಕೀಯ ಮಾಡುವ ಸಂದರ್ಭ ಅಲ್ಲ, ರೂಪಾನಿ ಅತ್ಮಕ್ಕೆ ಶಾಂತಿ ಸಿಗಲಿ: ಈಶ್ವರ್
ರಮೋಲಾ ಮನೆಗೆ ಹೋದ ರಕ್ಷಕ್​ಗೆ ಭರ್ಜರಿ ಆತಿಥ್ಯ
ರಮೋಲಾ ಮನೆಗೆ ಹೋದ ರಕ್ಷಕ್​ಗೆ ಭರ್ಜರಿ ಆತಿಥ್ಯ
ಭಾರತದ ಪೈಲಟ್ ಮತ್ತು ಇಂಜಿನೀಯರ್​ಗಳು ವಿಶ್ವದಲ್ಲೇ ಅತ್ಯುತ್ತಮ: ಇಬ್ರಾಹಿಂ
ಭಾರತದ ಪೈಲಟ್ ಮತ್ತು ಇಂಜಿನೀಯರ್​ಗಳು ವಿಶ್ವದಲ್ಲೇ ಅತ್ಯುತ್ತಮ: ಇಬ್ರಾಹಿಂ
ವಿಮಾನ ದುರಂತ: ರಾಜೀನಾಮೆ ಏಕೆ ಕೊಡಬೇಕು? ಮೋದಿ ಪರ ಇಬ್ರಾಹಿಂ ಬ್ಯಾಟಿಂಗ್
ವಿಮಾನ ದುರಂತ: ರಾಜೀನಾಮೆ ಏಕೆ ಕೊಡಬೇಕು? ಮೋದಿ ಪರ ಇಬ್ರಾಹಿಂ ಬ್ಯಾಟಿಂಗ್
ವಿಮಾನ ದುರಂತ ಹಿಂದಿನ ಕಾರಣವನ್ನು ಬಿಚ್ಚಿಡಲಿರುವ ಬ್ಲ್ಯಾಕ್ ಬಾಕ್ಸ್
ವಿಮಾನ ದುರಂತ ಹಿಂದಿನ ಕಾರಣವನ್ನು ಬಿಚ್ಚಿಡಲಿರುವ ಬ್ಲ್ಯಾಕ್ ಬಾಕ್ಸ್
ಜೋಶಿಯ ಚಿಕ್ಕಮಕ್ಖಳನ್ನು ನೆನೆದು ಕರುಳು ಕಿತ್ತುಬಂದಂತಾಗುತ್ತಿದೆ: ಸಹಪಾಠಿಗಳು
ಜೋಶಿಯ ಚಿಕ್ಕಮಕ್ಖಳನ್ನು ನೆನೆದು ಕರುಳು ಕಿತ್ತುಬಂದಂತಾಗುತ್ತಿದೆ: ಸಹಪಾಠಿಗಳು
ಸಂಬಂಧಿಯ ಡಿಎನ್​ಎ ಜೊತೆ ಮೃತರ ಡಿಎನ್​ಎ ಮ್ಯಾಚ್ ಆದರೆ ದೇಹ ಹಸ್ತಾಂತರ
ಸಂಬಂಧಿಯ ಡಿಎನ್​ಎ ಜೊತೆ ಮೃತರ ಡಿಎನ್​ಎ ಮ್ಯಾಚ್ ಆದರೆ ದೇಹ ಹಸ್ತಾಂತರ
ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ: ಸ್ಫೋಟಕ ಅಂಶ ಬಿಚ್ಚಿಟ್ಟ ಲಾಯರ್
ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ: ಸ್ಫೋಟಕ ಅಂಶ ಬಿಚ್ಚಿಟ್ಟ ಲಾಯರ್
Ahmedabad Plane Crash: ವೈದ್ಯ ಪ್ರತೀಕ್ ನೆನೆದು ಸ್ನೇಹಿತ ಭಾವುಕ
Ahmedabad Plane Crash: ವೈದ್ಯ ಪ್ರತೀಕ್ ನೆನೆದು ಸ್ನೇಹಿತ ಭಾವುಕ