AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಷ್ಯಾಗೆ ಯುದ್ಧನೆರವು ಒದಗಿಸಿದ ಆರೋಪದ ಮೇಲೆ 400 ಜನರು ಮತ್ತು ಸಂಸ್ಥೆಗಳ ಮೇಲೆ ಅಮೆರಿಕ ನಿಷೇಧ; ಭಾರತೀಯರೂ ಪಟ್ಟಿಯಲ್ಲಿ

US sanction on entities helping Russia: ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಲು ಸಾಧ್ಯವಾಗುವಂತೆ ರಷ್ಯನ್ ಮಿಲಿಟರಿ ಉತ್ಪಾದನಾ ಕಂಪನಿಗಳಿಗೆ ಪ್ರಮುಖ ಬಿಡಿಭಾಗಗಳನ್ನು ಪೂರೈಸುವ ಜಾಲದ ಮೇಲೆ ಅಮೆರಿಕ ಕಣ್ಣಿಟ್ಟಿದೆ. ಅಮೆರಿಕದ ಗೃಹ ಇಲಾಖೆ, ಹಣಕಾಸು ಇಲಾಖೆ ಮತ್ತು ವಾಣಿಜ್ಯ ಇಲಾಖೆಗಳು ವಿವಿಧ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ನಿಷೇಧಿಸಿ ಪ್ರತ್ಯೇಕ ಪಟ್ಟಿಗಳನ್ನು ಬಿಡುಗಡೆ ಮಾಡಿವೆ. ಈ ಪಟ್ಟಿಯಲ್ಲಿ ಕೆಲ ಭಾರತೀಯ ಕಂಪನಿಗಳೂ ಇವೆ.

ರಷ್ಯಾಗೆ ಯುದ್ಧನೆರವು ಒದಗಿಸಿದ ಆರೋಪದ ಮೇಲೆ 400 ಜನರು ಮತ್ತು ಸಂಸ್ಥೆಗಳ ಮೇಲೆ ಅಮೆರಿಕ ನಿಷೇಧ; ಭಾರತೀಯರೂ ಪಟ್ಟಿಯಲ್ಲಿ
ಅಮೆರಿಕ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 01, 2024 | 4:48 PM

ವಾಷಿಂಗ್ಟನ್, ನವೆಂಬರ್ 1: ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಲು ಸಹಾಯ ಮಾಡಿದ್ದಾರೆ ಎನ್ನಲಾದವರ ಮೇಲೆ ಅಮೆರಿಕ ಕ್ರಮ ಕೈಗೊಳ್ಳುತ್ತಿದೆ. ಇಂಥ ಸುಮಾರು 400 ಸಂಖ್ಯೆಯ ಸಮೀಪದಷ್ಟು ಸಂಸ್ಥೆಗಳು ಹಾಗೂ ವ್ಯಕ್ತಿಗಳ ಎರಡು ಪಟ್ಟಿಯನ್ನು ಅಮೆರಿಕ ಬಿಡುಗಡೆ ಮಾಡಿದೆ. ಅಮೆರಿಕದ ಗೃಹ ಇಲಾಖೆಯು 120ಕ್ಕೂ ಹೆಚ್ಚು ಜನರು ಮತ್ತು ಸಂಸ್ಥೆಗಳನ್ನು ನಿಷೇಧಿಸಿದೆ. ಇನ್ನು, ಹಣಕಾಸು ಇಲಾಖೆಯು 270ಕ್ಕೂ ಹೆಚ್ಚು ಹೆಸರುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರ ಜೊತೆಗೆ ಅಮೆರಿಕದ ವಾಣಿಜ್ಯ ಇಲಾಖೆಯು 40 ಸಂಸ್ಥೆಗಳನ್ನು ನಿಷೇಧಿಸಿದೆ.

ರಷ್ಯನ್ ವ್ಯಕ್ತಿಗಳು ಮತ್ತು ಸಂಸ್ಥೆಗಳ ಜೊತೆಗೆ ಚೀನಾ, ಭಾರತ, ಮಲೇಷ್ಯಾ, ಥಾಯ್ಲೆಂಡ್, ಟರ್ಕಿ, ಯುಎಇ ಮೊದಲಾದ ಕೆಲ ದೇಶಗಳ ಸಂಸ್ಥೆಗಳೂ ಅಮೆರಿಕದ ನಿಷೇಧಿತ ಪಟ್ಟಿಯಲ್ಲಿವೆ. ಉಕ್ರೇನ್ ವಿರುದ್ಧ ಯುದ್ಧಕ್ಕೆ ಬೇಕಾದ ಹಣಕಾಸು ವ್ಯವಸ್ಥೆ, ಸರಕು ಸರಬರಾಜು, ಯುದ್ಧ ಸಾಮಗ್ರಿಗಳ ಸರಬರಾಜು ಪಡೆಯಲು ರಷ್ಯಾಗೆ ಸಾಧ್ಯವಾಗದ ರೀತಿಯಲ್ಲಿ ಏನೇನು ಮಾಡಬಹುದು ಎಲ್ಲಾ ಮಾರ್ಗೋಪಾಯಗಳನ್ನು ಅನುಸರಿಸುವುದಾಗಿ ಅಮೆರಿಕ ಬಹಳ ಸ್ಪಷ್ಟವಾಗಿ ಹೇಳುತ್ತಿದೆ. ಈ ನಿಟ್ಟಿನಲ್ಲಿ ತೆಗೆದುಕೊಳ್ಳಲಾಗುತ್ತಿರುವ ವಿವಿಧ ಕ್ರಮಗಳಲ್ಲಿ ಈ ನಿಷೇಧವೂ ಒಂದು.

ಇದನ್ನೂ ಓದಿ: ಪ್ರಧಾನಿಗಳ ಮುಖ್ಯ ಆರ್ಥಿಕ ಸಲಹೆಗಾರ ಹಾಗೂ ಧೀಮಂತ ಆರ್ಥಿಕ ತಜ್ಞ ವಿವೇಕ್ ದೇಬರಾಯ್ ವಿಧಿವಶ

ಈಗ ನಿಷೇಧಿಸಲಾಗಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳು ರಷ್ಯಾದ ಮಿಲಿಟರಿಗೆ ಅಗತ್ಯವಾದ ವಸ್ತುಗಳ ಸರಬರಾಜು ನೆಟ್ವರ್ಕ್​ನಲ್ಲಿ ಶಾಮೀಲಾದವರೇ ಆಗಿದ್ದಾರೆ.

ಅಮೆರಿಕ ನಿಷೇಧಿಸಿರುವ ಭಾರತೀಯ ಸಂಸ್ಥೆಗಳಿವು…

ಅಸೆಂಡ್ ಏವಿಯೇಶನ್ ಇಂಡಿಯಾ ಸಂಸ್ಥೆ 2023ರ ಮಾರ್ಚ್​ನಿಂದ 2024ರ ಮಾರ್ಚ್​ವರೆಗಿನ ಅವಧಿಯಲ್ಲಿ ರಷ್ಯಾ ಮೂಲದ ಕಂಪನಿಗಳಿಗೆ 700 ಪಾರ್ಸಲ್ ಕಳುಹಿಸಿದೆ. ಅಮೆರಿಕ ನಿರ್ಮಿತ ಏರ್​ಕ್ರಾಫ್ಟ್ ಕಾಂಪೊನೆಂಟ್ ಇತ್ಯಾದಿ ಸುಮಾರು 2 ಲಕ್ಷ ಡಾಲರ್ ಮೌಲ್ಯದ ವಸ್ತುಗಳನ್ನು ಈ ಕಂಪನಿಯು ರಷ್ಯಾಗೆ ಸರಬರಾಜು ಮಾಡಿತ್ತೆನ್ನಲಾಗಿದೆ.

ಮಾಸ್ಕ್ ಟ್ರಾನ್ಸ್ ಎನ್ನುವ ಮತ್ತೊಂದು ಭಾರತೀಯ ಕಂಪನಿ ಕೂಡ 2023ರ ಜೂನ್​ನಿಂದ 2024ರ ಏಪ್ರಿಲ್​ವರೆಗೆ ವೈಮಾನಿಕ ಬಿಡಿಭಾಗಗಳು ಸೇರಿದಂತೆ 3 ಲಕ್ಷ ಡಾಲರ್ ಮೌಲ್ಯದ ಸಿಎಚ್​ಪಿಎಲ್ ವಸ್ತುಗಳನ್ನು ರಷ್ಯನ್ ಮೂಲದ ಎಸ್7 ಎಂಜಿನಿಯರಿಂಗ್ ಎನ್ನುವ ಸಂಸ್ಥೆಗೆ ಸರಬರಾಜು ಮಾಡಿದೆಯಂತೆ.

ಇದನ್ನೂ ಓದಿ: ಕಮರ್ಷಿಯಲ್ ಎಲ್​ಪಿಜಿ ಗ್ಯಾಸ್ ಬೆಲೆ ಸತತ ನಾಲ್ಕನೇ ಬಾರಿ ಏರಿಕೆ; ಬೆಂಗಳೂರಿನಲ್ಲಿ 61 ರೂ ಹೆಚ್ಚಳ

ಸಿಎಚ್​ಪಿಎಲ್ ವಸ್ತು ಎಂದರೆ ಬಹಳ ಅಗತ್ಯ ಇರುವ ಸಾಮಾನ್ಯ ವಸ್ತುಗಳು. ಮಿಲಿಟರಿ ಉಪಕರಣ ಮತ್ತು ಶಸ್ತ್ರಾಸ್ತ್ರಗಳ ಅಸೆಂಬ್ಲಿಂಗ್​ಗೆ ಅಗತ್ಯವಾಗಿರುವ ಬಿಡಿಭಾಗಗಳಿವು.

ಭಾರತ ಮೂಲದ ಟಿಎಸ್​ಎಂಡಿ ಗ್ಲೋಬಲ್ ಪ್ರೈ ಎನ್ನುವ ಸಂಸ್ಥೆ 2023ರ ಜುಲೈನಿಂದ 2024ರ ಮಾರ್ಚ್​ವರೆಗೆ ರಷ್ಯನ್ ಕಂಪನಿಗಳಿಗೆ 4,30,000 ಡಾಲರ್ ಮೌಲ್ಯದ ಸಿಎಚ್​ಪಿಎಲ್ ವಸ್ತುಗಳನ್ನು ಪೂರೈಕೆ ಮಾಡಿದ ಆರೋಪ ಎದುರಿಸುತ್ತಿದೆ. ಇದರಲ್ಲಿ ಎಲೆಕ್ಟ್ರಾನಿಕ್ ಐಸಿ, ಸಿಪಿಯು ಹಾಗೂ ಇತರ ಫಿಕ್ಸೆಡ್ ಕೆಪಾಸಿಟರ್​ಗಳಂತಹ ಪ್ರಮುಖ ವಸ್ತುಗಳು ಸೇರಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ
ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ
ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ
ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ: ರಾಜಣ್ಣ
ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ: ರಾಜಣ್ಣ