AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Social media rules: ಸಾಮಾಜಿಕ ಮಾಧ್ಯಮಗಳ ಹೊಸ ನೀತಿ ನಿರೂಪಣೆಗೆ ಸರ್ಕಾರದಿಂದ ನೇಮಿಸಿದ ಸಮಿತಿಯನ್ನು ಬಳಕೆದಾರರು ಸಂಪರ್ಕ ಸಾಧ್ಯತೆ

ಸರ್ಕಾರದಿಂದ ನೇಮಿಸಲಾದ ಸಮಿತಿಯನ್ನು ಸಾಮಾಜಿಕ ಮಾಧ್ಯಮಕ್ಕೆ ಸಂಬಂಧಿಸಿದ ನೀತಿ ನಿರೂಪಣೆಯ ವಿಚಾರವಾಗಿ ಮಾಧ್ಯಮ ಬಳಕೆದಾರರು ಭೇಟಿ ಆಗಲು ನಿರ್ಧರಿಸಿದ್ದಾರೆ.

Social media rules: ಸಾಮಾಜಿಕ ಮಾಧ್ಯಮಗಳ ಹೊಸ ನೀತಿ ನಿರೂಪಣೆಗೆ ಸರ್ಕಾರದಿಂದ ನೇಮಿಸಿದ ಸಮಿತಿಯನ್ನು ಬಳಕೆದಾರರು ಸಂಪರ್ಕ ಸಾಧ್ಯತೆ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on:Jun 04, 2022 | 11:11 AM

Share

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಪ್ರತಿಕೂಲ ಕಾರ್ಯಗಳಿಂದ ಅಸಮಾಧಾನಗೊಂಡಿರುವ ಸಾಮಾಜಿಕ ಮಾಧ್ಯಮ (Social Media) ಬಳಕೆದಾರರು ಸದ್ಯದಲ್ಲೇ ಪರಿಹಾರಕ್ಕಾಗಿ ಸರ್ಕಾರ ನೇಮಿಸಿದ ಸಮಿತಿಯನ್ನು ಸಂಪರ್ಕಿಸಬಹುದು. ಆದರೆ ಈ ಪರಿಣಾಮವನ್ನು ಸರ್ಕಾರದ ಕರಡು ಪ್ರಸ್ತಾವನೆಯ ಅಂತಿಮ ಹಂತಕ್ಕೆ ತರಬೇಕಾಗುತ್ತದೆ. ಸದ್ಯಕ್ಕೆ, ಬಳಕೆದಾರರು ನ್ಯಾಯಾಲಯದಲ್ಲಿ ಮಾತ್ರ ಇಂತಹ ಕ್ರಮಗಳನ್ನು ಪ್ರಶ್ನಿಸಬಹುದು. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (Meity) ಕರಡು ಪ್ರಸ್ತಾವನೆಯ ಪ್ರಕಾರ, ಯಾವುದೇ ನೊಂದ ವ್ಯಕ್ತಿ ಹೊಸ ದೂರನ್ನು ಮೇಲ್ಮನವಿ ಸಮಿತಿಯ ಮುಂದೆ ಸಾಮಾಜಿಕ ಮಾಧ್ಯಮ ಕಂಪೆನಿಯ ಕುಂದುಕೊರತೆ ಅಧಿಕಾರಿ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು. ಕೇಂದ್ರ ಸರ್ಕಾರದಿಂದ ನೇಮಕಗೊಂಡ ಅಧ್ಯಕ್ಷರು ಮತ್ತು ಸದಸ್ಯರನ್ನು ಒಳಗೊಂಡಿರುವ ಸಮಿತಿಯು ಈ ಮೇಲ್ಮನವಿಗಳನ್ನು ಪರಿಶೀಲಿಸಿ, 30 ದಿನಗಳಲ್ಲಿ ಅವುಗಳ ಬಗ್ಗೆ ನಿರ್ಧರಿಸುತ್ತದೆ ಮತ್ತು ಅದರ ನಿರ್ಧಾರವು ಕಂಪೆನಿಗೆ ಬದ್ಧವಾಗಿರುತ್ತದೆ. ಜೂನ್ 22 ರವರೆಗೆ ಭಾಗೀದಾರರಿಂದ ಅಭಿಪ್ರಾಯಗಳಿಗೆ ತಿದ್ದುಪಡಿಗಳು ಮುಕ್ತವಾಗಿರುತ್ತವೆ. ದೂರುದಾರರು ನ್ಯಾಯಾಂಗ ಪರಿಹಾರವನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ.

ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021ಕ್ಕೆ ಪ್ರಸ್ತಾವಿತ ತಿದ್ದುಪಡಿಯನ್ನು ಜೂನ್ 1ರಂದು MeitY ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಯಿತು. ಆದರೆ ನಂತರ ತೆಗೆದುಹಾಕಲಾಯಿತು ಮತ್ತು ಈ ಸುದ್ದಿ ಪ್ರಕಟ ಆಗುವವರೆಗೆ ಮರುಪ್ರಕಟಿಸಲಾಗಿಲ್ಲ.ಚಟೆಕ್ ನೀತಿ ವಿಶ್ಲೇಷಕರಾದ ಪ್ರಶಾಂತೋ ಕುಮಾರ್ ರಾಯ್, Meity ಪ್ರಸ್ತಾವನೆಯು ಸೂಚಿಸಿದಾಗಿನಿಂದ “ಸಾಕಷ್ಟು ಫ್ಲಾಕ್” ಅನ್ನು ಸ್ವೀಕರಿಸಿದೆ ಎಂದು ಹೇಳಿದ್ದಾರೆ. “ಖಾಸಗಿ ಪ್ಲಾಟ್‌ಫಾರ್ಮ್‌ಗಳು ಮಾಡಿದ ನಿರ್ಧಾರಗಳ ಮೇಲೆ ಸರ್ಕಾರದ ನಿಯಂತ್ರಣವು ಹಾಸ್ಯಾಸ್ಪದ ಕಲ್ಪನೆಯಾಗಿದೆ ಮತ್ತು ಇದು ವಿಶ್ವಾದ್ಯಂತ ಸಂಪೂರ್ಣವಾಗಿ ಈ ಹಿಂದೆಂದೂ ಕಾಣದಂಥದ್ದಾಗಿದೆ,” ಎಂದು ಅವರು ಹೇಳಿದ್ದಾರೆ.

ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ನಿರ್ಬಂಧಿಸಿದ, ಅಮಾನತುಗೊಳಿಸಿದ ಅಥವಾ ಹಲವಾರು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳ ವಿರುದ್ಧ ಕ್ರಮ ಕೈಗೊಂಡ ನಂತರ ಈ ಕ್ರಮವು ಬರುತ್ತದೆ, ಅವುಗಳಲ್ಲಿ ಕೆಲವು ಸೆಲೆಬ್ರಿಟಿಗಳು ಮತ್ತು ಇತರ ಉನ್ನತ ವ್ಯಕ್ತಿಗಳಿಗೆ ಸೇರಿವೆ. ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನ ವಕ್ತಾರರು ಪ್ರಸ್ತಾವಿತ ತಿದ್ದುಪಡಿಯ ಕುರಿತು ಹೇಳಿಕೆಗಳಿಗಾಗಿ ಮಾಡಿದ ವಿನಂತಿಗಳಿಗೆ ಪ್ರತಿಕ್ರಿಯಿಸಿಲ್ಲ. ಡಿಜಿಟಲ್ ಹಕ್ಕುಗಳ ವಕಾಲತ್ತು ಸಂಸ್ಥೆ ಇಂಟರ್‌ನೆಟ್ ಫ್ರೀಡಂ ಫೌಂಡೇಷನ್‌ನ ನೀತಿ ನಿರ್ದೇಶಕರಾದ ಪ್ರತೀಕ್ ವಾಘ್ರೆ, ಅಂತಹ ಸಮಿತಿಯನ್ನು ಯಾವ ರೀತಿಯಲ್ಲಿ ಕಾರ್ಯಗತಗೊಳಿಸಲಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾರೆ.

“ಈ ಪ್ರಕ್ರಿಯೆಯಲ್ಲಿ ಅವರು ಹೇಗೆ ಪ್ರತಿಪಾದಿಸುತ್ತಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ತಿದ್ದುಪಡಿಗೆ ಕಾನೂನು ಆಧಾರವಿಲ್ಲ ಎಂದು ತೋರುತ್ತಿದೆ. ಸಮಿತಿಯು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ವಿಷಯದಲ್ಲಿ ಇದು ಅಸ್ಪಷ್ಟವಾಗಿದೆ, ಆದರೆ ಅವರು ಕಾರ್ಯನಿರ್ವಾಹಕ ಮೇಲ್ವಿಚಾರಣೆಯನ್ನು ರಚಿಸುತ್ತಿರುವಂತೆ ತೋರುತ್ತಿದೆ, ಅದರ ಮೂಲಕ ಬಳಕೆದಾರರು ವಿಷಯ ಮಾಡರೇಶನ್ ಮನವಿಗಳನ್ನು ಮಾಡಬಹುದು,” ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ಕಂಪೆನಿಗಳಿಗೆ ಭಾರತದ ಹೊಸ ನಿಯಮಗಳು ಕಳೆದ ವರ್ಷ ಮೇ 26ರಂದು ಜಾರಿಗೆ ಬಂದವು. ಭಾರತದ ಸಾರ್ವಭೌಮತ್ವ, ದೇಶದ ಭದ್ರತೆ ಅಥವಾ ಸಾರ್ವಜನಿಕ ಸುವ್ಯವಸ್ಥೆಯನ್ನು ದುರ್ಬಲಗೊಳಿಸುವ ಮಾಹಿತಿಯ ‘ಮೊದಲ ಮೂಲ’ವನ್ನು ಗುರುತಿಸಲು ಪ್ಲಾಟ್​ಫಾರ್ಮ್​ಗಳನ್ನು ಕಡ್ಡಾಯಗೊಳಿಸಿತು. ಐದು ಮಿಲಿಯನ್ ಬಳಕೆದಾರರನ್ನು ಹೊಂದಿರುವ ಭಾಗೀದಾರರಿಗೆ ಕುಂದುಕೊರತೆ ಅಧಿಕಾರಿ, ನೋಡಲ್ ಅಧಿಕಾರಿ ಮತ್ತು ಚೀಫ್ ಕಂಪ್ಲೈಯನ್ಸ್ ಆಫೀಸರ್ ನೇಮಿಸಬೇಕು, ಮತ್ತು ಆ ಎಲ್ಲ ಹುದ್ದೆಗಳಿಗೆ ಭಾರತೀಯ ನಾಗರಿಕರನ್ನು ನೇಮಿಸಲು ನಿಯಮಗಳು ಕಡ್ಡಾಯಗೊಳಿಸಲಾಯಿತು.

ಭಾಗೀದಾರರು ಯಾವುದೇ ಬಳಕೆದಾರ ಅಥವಾ ಬಳಕೆದಾರ ಖಾತೆಯನ್ನು ಅಮಾನತುಗೊಳಿಸುವುದು, ತೆಗೆದುಹಾಕುವುದು ಅಥವಾ ನಿರ್ಬಂಧಿಸುವುದು ಅಥವಾ ಅದರ ಬಳಕೆದಾರರಿಂದ ಯಾವುದೇ ದೂರನ್ನು 24 ಗಂಟೆಗಳ ಒಳಗೆ ಮಾಹಿತಿ ಅಥವಾ ಸಂವಹನ ಲಿಂಕ್ ಅನ್ನು ತೆಗೆದುಹಾಕುವ ವಿನಂತಿ ಸ್ವರೂಪದಲ್ಲಿ ಅಂಗೀಕರಿಸಬೇಕು ಮತ್ತು ದೂರನ್ನು 15 ದಿನಗಳಲ್ಲಿ ವಿಲೇವಾರಿ ಮಾಡಬೇಕು.

ಮಾನಹಾನಿಕರ, ಅಶ್ಲೀಲ, ಆಕ್ಷೇಪಾರ್ಹ, ಇನ್ನೊಬ್ಬರ ಗೋಪ್ಯತೆಗೆ ಆಕ್ರಮಣಕಾರಿ, ಮಾನಹಾನಿಕರ, ಸುಳ್ಳು ಮತ್ತು ಅಸತ್ಯ ಮಾಹಿತಿಯನ್ನು ಹೊಂದಿರುವ ಮಾಹಿತಿ ಅಥವಾ ಸಂವಹನ ಲಿಂಕ್ ಅನ್ನು ತೆಗೆದುಹಾಕುವ ವಿನಂತಿಯ ಸ್ವರೂಪದಲ್ಲಿ ಯಾವುದೇ ದೂರಿನ ಸಂದರ್ಭದಲ್ಲಿ, ಅವುಗಳನ್ನು ವರದಿ ಮಾಡಿದ 72 ಗಂಟೆಗಳ ಒಳಗೆ ಪರಿಹರಿಸಬೇಕು ಎಂದು ಮೇ 2021ರ ನಿಯಮಗಳು ತಿಳಿಸುತ್ತವೆ. ಅಲ್ಲದೆ, ಸಂಬಂಧಪಟ್ಟ ಇಂಟರ್​ಮೀಡಿಯರೀಸ್ ಬಳಕೆದಾರರಿಗೆ ತನ್ನ ಸೇವೆಗಳ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ಎಲ್ಲ ಸಮಂಜಸವಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:06 am, Sat, 4 June 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ