Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದೂ- ಮುಸ್ಲಿಂ ಯಾರ ಬಳಿ ಇದೆ ಎಷ್ಟು ಸಂಪತ್ತು? ಅಂಕಿಅಂಶ ಹೇಳೋದೇನು?

ಭಾರತದಲ್ಲಿರುವ ಹಿಂದೂ - ಮುಸ್ಲಿಂ ಇರುವ ಸಂಪತ್ತು ಎಷ್ಟು? ಯಾರ ಬಳಿ ಎಷ್ಟು ಸಂಪತ್ತಿದೆ ಎಂಬ ಅಂಕಿ ಅಂಶವನ್ನು ನಾವು ಇಲ್ಲಿ ತಿಳಿಸಿದ್ದೇವೆ. ಈ ಚರ್ಚೆ ಬರಲು ಒಂದು ಕಾರಣವು ಇದೆ. ಹೌದು ಇತ್ತೀಚೆಗೆ ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದರು. ಈ ವೇಳೆ ಮೋದಿ ಅವರು 2006ರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದರು. ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಆಸ್ತಿಯಲ್ಲಿ ಮುಸ್ಲಿಂರಿಗೆ ಮೊದಲ ಹಕ್ಕು. ಜೊತೆಗೆ ದೇಶದ ಆಸ್ತಿಯನ್ನು ನುಸುಳುಕೋರರಿಗೆ ನೀಡಲಾಗುವುದು ಎಂದು ಮೋದಿ ಹೇಳಿದ್ದರು. ಇದೀಗ ವಿಚಾರವಾಗಿ ದೇಶದಲ್ಲಿ ಚರ್ಚೆಯಾಗುತ್ತಿದೆ.

ಹಿಂದೂ- ಮುಸ್ಲಿಂ ಯಾರ ಬಳಿ ಇದೆ ಎಷ್ಟು ಸಂಪತ್ತು? ಅಂಕಿಅಂಶ ಹೇಳೋದೇನು?
Follow us
ಅಕ್ಷಯ್​ ಪಲ್ಲಮಜಲು​​
|

Updated on: Apr 24, 2024 | 3:30 PM

ಪ್ರಧಾನಿ ಮೋದಿ (Narendra Modi) ಅವರ ಹೇಳಿಕೆ ಈಗ ಭಾರೀ ಚರ್ಚೆಯಾಗುತ್ತಿದೆ. ಇತ್ತೀಚೆಗೆ ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದರು. ಈ ವೇಳೆ ಮೋದಿ ಅವರು 2006ರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದರು. ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಆಸ್ತಿಯಲ್ಲಿ ಮುಸ್ಲಿಂರಿಗೆ ಮೊದಲ ಹಕ್ಕು. ಜೊತೆಗೆ ದೇಶದ ಆಸ್ತಿಯನ್ನು ನುಸುಳುಕೋರರಿಗೆ ನೀಡಲಾಗುವುದು ಎಂದು ಮೋದಿ ಹೇಳಿದ್ದರು. ಇದಕ್ಕೆ ಕಾಂಗ್ರೆಸ್​​ ಕೂಡ ಅಕ್ರೋಶ ವ್ಯಕ್ತಪಡಿಸಿತ್ತು. ಇದೀಗ ಭಾರತದಲ್ಲಿರುವ ಹಿಂದೂ ಹಾಗೂ ಮುಸ್ಲಿಂ ಎಷ್ಟು ಸಂಪತ್ತು ಇದೆ. ಯಾರಲ್ಲಿ ಎಷ್ಟು ಆಸ್ತಿ ಇದೆ ಎಂಬ ವರದಿಯನ್ನು ಇಲ್ಲಿ ನೀಡಲಾಗಿದೆ ನೋಡಿ.

ICSSR (Indian Council of Social Science Research) ಯಿಂದ ಮಾನ್ಯತೆ ಪಡೆದ ಸಂಶೋಧನಾ ಸಂಸ್ಥೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ದಲಿತ್ ಸ್ಟಡೀಸ್‌ ಭಾರತದಲ್ಲಿ ಸಂಪತ್ತಿನ ಮಾಲೀಕತ್ವದಲ್ಲಿನ ಅಂತರ-ಅಸಮಾನತೆಯ ಅಧ್ಯಯನ ವರದಿಯ ಅಂಕಿಅಂಶವನ್ನು ಇಲ್ಲಿ ನೀಡಲಾಗಿದೆ. ಇದರ ಜತೆಗೆ NSSO ಮತ್ತು ಇಂಡಿಯನ್ ಎಕನಾಮಿಕ್ ಸೆನ್ಸ್‌ಗಳು ನಡೆಸಿದ ಅಖಿಲ ಭಾರತ ಸಾಲ ಮತ್ತು ಹೂಡಿಕೆ ಸಮೀಕ್ಷೆಯ ಅಂದರೆ AIDIS ನ ಡೇಟಾವನ್ನು ಕೂಡ ಬಳಸಲಾಗಿದೆ. ಪರಿಶಿಷ್ಟ ಪಂಗಡಗಳು, ಪರಿಶಿಷ್ಟ ಜಾತಿಗಳು ಮತ್ತು ಮುಸ್ಲಿಮರಲ್ಲಿ ಆಸ್ತಿ ಮಾಲೀಕತ್ವವು ಅತ್ಯಂತ ಕಡಿಮೆ ಎಂದು ಈ ವರದಿಯು ಸ್ಪಷ್ಟವಾಗಿ ಹೇಳುತ್ತದೆ.

ಭಾರತದಲ್ಲಿ ಯಾವ ಧರ್ಮ ಎಷ್ಟು ಸಂಪತ್ತನ್ನು ಹೊಂದಿದೆ?

ವರದಿಯ ಅಂಕಿಅಂಶಗಳ ಪ್ರಕಾರ, ದೇಶದ ಒಟ್ಟು ಸಂಪತ್ತಿನ ಶೇಕಡಾ 41 ರಷ್ಟು ಭಾಗವನ್ನು ಹಿಂದೂಗಳ ಮೇಲ್ಜಾತಿಗಳು ಹೊಂದಿದ್ದಾರೆ. ಹಿಂದೂ OBC ಗಳು (31 ಶೇಕಡಾ). ಮುಸ್ಲಿಮರು, ಎಸ್‌ಸಿ ಮತ್ತು ಎಸ್‌ಟಿಗಳು ಕ್ರಮವಾಗಿ ಶೇ.8, ಶೇ.7.3 ಮತ್ತು ಶೇ.3.7ರಷ್ಟು ಸಂಪತ್ತನ್ನು ಹೊಂದಿದ್ದಾರೆ. ಹಿಂದೂ ಮೇಲ್ಜಾತಿಗಳ ಒಟ್ಟು ಸಂಪತ್ತು 1,46,394 ಶತಕೋಟಿ ರೂಪಾಯಿಗಳು, ಇದು ಎಸ್ಟಿಗಳ ಒಟ್ಟು ಸಂಪತ್ತಿನ ಸುಮಾರು 11 ಪಟ್ಟು (ರೂ 13,268 ಶತಕೋಟಿ). ಆದರೆ ಮುಸ್ಲಿಮರು 28,707 ಬಿಲಿಯನ್ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಈ ವರದಿ ಹೇಳಿದೆ.

ಇದನ್ನೂ ಓದಿ: ಮದ್ಯದೊರೆಯ ಮಗಳು; ಫ್ಯಾಷನ್ ಜಗತ್ತಿನಲ್ಲಿ ಲೈಲಾ ಓ ಲೈಲಾ..! ಯಶಸ್ಸು ಕಂಡ ಲೈಲಾ ಮಲ್ಯ

ದೇಶದ ಸಾಮಾಜಿಕ ಗುಂಪುಗಳು ಎಷ್ಟು ಸಂಪತ್ತನ್ನು ಹೊಂದಿವೆ (ಬಿಲಿಯನ್ ರೂಪಾಯಿಗಳಲ್ಲಿ)

ಸಾಮಾಜಿಕ ಗುಂಪು ಗ್ರಾಮೀಣ ನಗರ ಒಟ್ಟು
ಪರಿಶಿಷ್ಟ ಪಂಗಡ 9544 3724 13268
ನಿಗದಿತ ಪ್ರವರ್ಗ 16163 9971 26134
ಹಿಂದೂ ಒಬಿಸಿ 62952 47568 110520
 ಹಿಂದೂ ಮೇಲ್ಜಾತಿ 42338 104057 146394
ಮುಸ್ಲಿಂ 14379 14329 28707
ಉಳಿದ ಸಮುದಾಯಗಳು 15224 18105 33329
ಒಟ್ಟು 160600 197753 358354

ಮೂಲ: AIDIS 2013

ದೇಶದ ಪ್ರತಿಯೊಂದು ಕುಟುಂಬವು ಎಷ್ಟು ಆಸ್ತಿಯನ್ನು ಹೊಂದಿದೆ?

ದೇಶದ ಪ್ರತಿ ಕುಟುಂಬದ ಸರಾಸರಿ ಸಂಪತ್ತಿ 15.04 ಲಕ್ಷ ರೂ. ಸಾಮಾಜಿಕ ತಾರತಾಮ್ಯ ಇರುವ ಕಾರಣ ಅಥವಾ ಬಡತನದ ಆಧಾರವಾಗಿಸಿಕೊಂಡು ಸಂಪತ್ತಿನಲ್ಲಿ ಸಾಕಷ್ಟು ಅಸಮಾನತೆಗಳಿವೆ. ಹಿಂದೂ ಮೇಲ್ಜಾತಿಯಲ್ಲಿ ಪ್ರತಿ ಕುಟುಂಬದ ಒಟ್ಟು ಸಂಪತ್ತು 27.73 ಲಕ್ಷ ರೂ., ಇನ್ನು ಒಬಿಸಿಯಲ್ಲಿ ಸರಾಸರಿ 12.96 ಲಕ್ಷ ರೂ., ಇದು ಹಿಂದೂ ಮೇಲ್ಜಾತಿಗಿಂತ 50 ಪ್ರತಿಶತಕ್ಕಿಂತ ಕಡಿಮೆಯಾಗಿದೆ. ವರದಿ ಪ್ರಕಾರ ಮುಸ್ಲಿಂ ಕುಟುಂಬಗಳ ಸರಾಸರಿ ಸಂಪತ್ತು 9.95 ಲಕ್ಷ ರೂ. ಎಸ್‌ಟಿ ಕುಟುಂಬಗಳ ಸರಾಸರಿ ಆದಾಯ 6.13 ಲಕ್ಷ ಮತ್ತು ಎಸ್‌ಸಿ ಕುಟುಂಬಗಳ ಸರಾಸರಿ ಆದಾಯ 6.12 ಲಕ್ಷ ಎಂದು ವರದಿ ಹೇಳಿದೆ.

ದೇಶದಲ್ಲಿ ಯಾವ ಧರ್ಮ ಅಥವಾ ಜಾತಿಯವರು ಎಷ್ಟು ಆಸ್ತಿ (ಶೇಕಡಾವಾರು) ಹೊಂದಿದ್ದಾರೆ?

ಸಾಮಾಜಿಕ ಗುಂಪು ಭೂಮಿ ಕಟ್ಟಡ ಜಾನುವಾರು ಕೃಷಿ ಭೂಮಿ ಕೃಷಿಯೇತರ ಭೂಮಿ ಸಾರಿಗೆ ಹಣಕಾಸು ಚಿನ್ನ ಒಟ್ಟು ಆಸ್ತಿಗಳು
ಪರಿಶಿಷ್ಟ ಪಂಗಡ 4.2 2.7 12.9 8.1 1.2 4.1 3.9 3.4 3.7
ನಿಗದಿತ ಪ್ರವರ್ಗ 7.1 7 12.4 9.1 3.8 7.2 8.6 9.9 7.3
ಹಿಂದೂ ಒಬಿಸಿ 34.7 23.4 44 41.9 38.4 30 26.3 39.1 30.8
 ಹಿಂದೂ ಮೇಲ್ಜಾತಿ 35.3 51.4 19.9 28 38.4 41.5 46.3 31.3 40.9
ಮುಸ್ಲಿಂ 7.7 8.5 6.9 5.4 9.7 8.8 6 9.2 8
ಉಳಿದ ಸಮುದಾಯಗಳು 11 6.9 4 7.6 8.4 8.4 8.9 7.1 9.3
ಒಟ್ಟು 100 100 100 100 100 100 100 100 100

ಮೂಲ: AIDIS 2013

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಮನೆ ಗೋಡೆಲಿ, ಕಿಟಕಿಗಳಲ್ಲಿ ಜೇನುಗೂಡು ಕಟ್ಟಿದ್ರೆ ಏನರ್ಥ? ಇಲ್ಲಿದೆ ಮಾಹಿತಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ