AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜ್ಞಾನಜ್ಯೋತಿ ನಗರದಲ್ಲಿ ಚಿನ್ನದ ಸರಕ್ಕಾಗಿ ನಡೆದ ಕೊಲೆ ಕೇಸ್; ಇಬ್ಬರು ಬಂಧನ

ರಂಜಿತಾ ವಾಸವಿದ್ದ ಕಟ್ಟಡದ ಮೊದಲ ಮಹಡಿಯಲ್ಲಿ ಆರೋಪಿಗಳು ವಾಸವಿದ್ದರು. ಕೆಳ ಮಹಡಿಯಲ್ಲಿ ರಂಜಿತಾ ಮತ್ತು ಓಂಕಾರ್ ದಂಪತಿ ಇದ್ದರು. ಕತ್ತು ಸೀಳಿ ಬಳಿಕ ಚಾಕುವನ್ನು ರಂಜಿತಾ ಕೈಯಲ್ಲೇ ಇಟ್ಟು ಆರೋಪಿಗಳು ಪರಾರಿಯಾಗಿದ್ದರು.

ಜ್ಞಾನಜ್ಯೋತಿ ನಗರದಲ್ಲಿ ಚಿನ್ನದ ಸರಕ್ಕಾಗಿ ನಡೆದ ಕೊಲೆ ಕೇಸ್; ಇಬ್ಬರು ಬಂಧನ
ಬಂಧಿತ ಆರೋಪಿಗಳು
TV9 Web
| Edited By: |

Updated on: Jul 12, 2021 | 12:25 PM

Share

ಬೆಂಗಳೂರು: ಜ್ಞಾನಜ್ಯೋತಿ ನಗರದಲ್ಲಿ ನಡೆದ ಮಹಿಳೆ ಹತ್ಯೆ ಕೇಸ್ ಸಂಬಂಧ ಇಬ್ಬರನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ. ರಾಜು, ಇಂದಿರಮ್ಮ ಎಂಬುವವರು ಬಂಧನಕ್ಕೆ ಒಳಗಾದವರು. ಜುಲೈ 10 ರಂದು ಕತ್ತು ಸೀಳಿ ರಂಜಿತಾ ಎಂಬ ಮಹಿಳೆಯನ್ನು ಕೊಲೆಗೈದಿದ್ದರು. ಬಳಿಕ ರಂಜಿತಾ ಕೈಯಲ್ಲಿ ಚಾಕು ಇಟ್ಟು ಪರಾರಿಯಾಗಿದ್ದರು. ಈ ಪ್ರಕರಣ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

ರಂಜಿತಾ ವಾಸವಿದ್ದ ಕಟ್ಟಡದ ಮೊದಲ ಮಹಡಿಯಲ್ಲಿ ಆರೋಪಿಗಳು ವಾಸವಿದ್ದರು. ಕೆಳ ಮಹಡಿಯಲ್ಲಿ ರಂಜಿತಾ ಮತ್ತು ಓಂಕಾರ್ ದಂಪತಿ ಇದ್ದರು. ಕತ್ತು ಸೀಳಿ ಬಳಿಕ ಚಾಕುವನ್ನು ರಂಜಿತಾ ಕೈಯಲ್ಲೇ ಇಟ್ಟು ಆರೋಪಿಗಳು ಪರಾರಿಯಾಗಿದ್ದರು. ಆದರೆ ಪ್ರಕರಣ ದಾಖಲಿಸಿಕೊಂಡ ಜ್ಞಾನಭಾರತಿ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಒಂದೇ ಕಟ್ಟಡದ ವಾಸಿಗಳಾಗಿದ್ದರಿಂದ ರಂಜಿತಾ ಹಾಗೂ ಇಂದಿರಾಮ್ಮಗೆ ಪರಿಚಯವಿತ್ತು. ಒಮ್ಮೆ ರಂಜಿತಾಳ ಫೋಟೋ ನೊಡಿದ ವೇಳೆ ಕೊರಳಲಿದ್ದ ಸರ ಕಣ್ಣು ಕುಕ್ಕಿತ್ತು. ನಲವತ್ತು ಗ್ರಾಂ ಚಿನ್ನದ ಸರಕ್ಕಾಗಿ ಇಂದಿರಮ್ಮ ಹೊಂಚು ಹಾಕಿದ್ದಳು. ಮೊದಲಿಗೆ ಸರ ಪಡೆದು ನಂತರ ಕೊಡದೆ ಮೊಸ ಮಾಡುವ ಉದ್ದೇಶ ಇಂದಿರಮ್ಮಗಿತ್ತು. ಆದರೆ ರಂಜಿತಾ ಚಿನ್ನದ ಸರ ಕೊಡಲು ನಿರಾಕರಿಸಿದ್ದಳು.

ಚಿನ್ನದ ಸರಕ್ಕಾಗಿ ನಡೆಯಿತು ಕೊಲೆ ಇಂದಿರಮ್ಮಗೆ ಹಣದ ಸಮಸ್ಯೆ ಇತ್ತು. ಆಕೆಯ ಸ್ನೇಹಿತ ರಾಜಶೇಖರ್​ಗೂ ಕೂಡಾ ಸಾಲದ ಸಮಸ್ಯೆಯಿತ್ತು. ಇವರಿಬ್ಬರು ಮದುವೆಯಾಗದಿದ್ದರೂ ಜೊತೆಯಲ್ಲಿದ್ದರು. ಜುಲೈ 10ರಂದು ಮನೆಗೆ ಮಾತನಾಡಿಸುವ ನೆಪದಲ್ಲಿ ಇಂದಿರಮ್ಮ ಬಂದಳು. ನಂತರ ರಾಜಶೇಖರ್ಗೆ ಕರೆ ಮಾಡಿ ಆತನನ್ನು ಕರೆಸಿಕೊಂಡಿದ್ದಳು. ನಂತರ ಟಿವಿ ವಾಲ್ಯೂಮ್ ಹೆಚ್ಚು ಮಾಡಿ ರಂಜಿತಾಳನ್ನು ಹತ್ಯೆ ಮಾಡಿದ್ದಾರೆ.

ಸರ ರಂಜಿತಾಳದಲ್ಲ ಅಸಲಿಗೆ ಫೋಟೋದಲ್ಲಿದ್ದ 40ಗ್ರಾಂನ ಸರ ಮೃತಳದ್ದಲ್ಲ. ಪರಿಚಯಸ್ಥರ ಬಳಿ ಕಾರ್ಯಕ್ರಮದ ಸಲುವಾಗಿ ಪಡೆದು ಫೋಟೋ ಕ್ಲಿಕ್ಕಿಸಿಕೊಂಡಿದ್ದಳು. ಆ ಫೋಟೋ ನೋಡಿ ಇಂದಿರಮ್ಮ ಸರ ಕೇಳಿದ್ದಳು. ಆದರೆ ಸರದ ಅಸಲಿ ಕಥೆಯನ್ನು ರಂಜಿತಾ ಮರೆ ಮಾಚಿದ್ದಳು. ಹತ್ಯೆ ಬಳಿಕ 40 ಗ್ರಾಂ ಚಿನ್ನದ ಸರ ಸಿಗಲಿಲ್ಲ. ಆಕೆಯ ಕೊರಳಿನಲ್ಲಿದ್ದ ಆರು ಗ್ರಾಂ ತಾಳಿ ಮಾತ್ರ ಸಿಕ್ಕಿತ್ತು. ಕಿವಿಯಲ್ಲಿದ್ದ ಓಲೆಗಾಗಿ ಕಿವಿಗಳನ್ನು ಕೊಯ್ದಿದ್ದರು. ಆದರೆ ಅದು ರೊಲ್ಡ್ ಗೊಲ್ಡ್ ಎಂದು ಗೊತ್ತಾಗಿ ಆರೋಪಿಗಳು ಅಲ್ಲೇ ಬಿಸಾಡಿದ್ದರು.

ಇದನ್ನೂ ಓದಿ

ಚನ್ನಪಟ್ಟಣ: ತಾಲೂಕಿನಲ್ಲಿದೆ ಮಾದರಿ ಸರ್ಕಾರಿ ಆಸ್ಪತ್ರೆ, ಇದು ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲ! ಏನಿದರ ವಿಶೇಷ?

ಎಂ.ಕೆ.ಹುಬ್ಬಳ್ಳಿಯಲ್ಲಿ ಸ್ನೇಹಿತರ ನಡುವಿನ ಜಗಳ ಬಿಡಿಸಲು ಹೋದ ಡಾಬಾ ಮಾಲೀಕನ ಭೀಕರ ಕೊಲೆ

(jnana jyothi nagar Police arrested two accused for murdering a woman for gold)

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ