AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IT-BT ಉದ್ಯೋಗಿಗಳಿಗೆ ಸಖತ್​ Kick ಕೊಡ್ತಿದ್ದ ಹ್ಯಾಶ್​ ಆಯಿಲ್​ ಮಾರಾಟಗಾರರು ಅರೆಸ್ಟ್​

ಬೆಂಗಳೂರು: ಐಟಿ-ಬಿಟಿ ನಗರ ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಜಾಲ ಎಲ್ಲೆಡೆ ಹಬ್ಬುತ್ತಿದೆ. ನಗರದ ಕಾಳಸಂತೆಯಲ್ಲಿ ಮತ್ತೇರಿಸುವ ಎಣ್ಣೆ ಮಾರಾಟ ದಂಧೆ ಜೋರಾಗಿದೆ. ಇದೀಗ, ಅಫೀಮು, ಗಾಂಜಾ,‌ ಕೊಕೈನ್​ಗಿಂತ ಹೆಚ್ಚು ನಶೆ ಏರಿಸುವ ದ್ರವ್ಯವೊಂದು ಈಗ ಕಾಳಸಂತೆಯಲ್ಲಿ ಲಭ್ಯವಾಗುತ್ತಿದೆ. ಇತರೆ ರಾಜ್ಯಗಳಲ್ಲಿ ತಯಾರಾಗಿ ನಗರದ ಐಟಿ-ಬಿಟಿ ಉದ್ಯೋಗಿಗಳಿಗೆ ಸರಬರಾಜಾಗುವ ಈ ಹ್ಯಾಶ್​ ಆಯಿಲ್​ನ (Hash oil) ಮಾರಾಟ ಎಗ್ಗಿಲ್ಲದೆ ಸಾಗುತ್ತಿದೆ. 1 ಗ್ರಾಂ ಹ್ಯಾಶ್​ ಆಯಿಲ್ ಬೆಲೆ 3ರಿಂದ 5 ಸಾವಿರ ರೂಪಾಯಿಯಷ್ಟು ಇದೆ. ಆಂಧ್ರದ ವಿಶಾಖಪಟ್ಟಣಂನಿಂದ ಈ […]

IT-BT ಉದ್ಯೋಗಿಗಳಿಗೆ ಸಖತ್​ Kick ಕೊಡ್ತಿದ್ದ ಹ್ಯಾಶ್​ ಆಯಿಲ್​ ಮಾರಾಟಗಾರರು ಅರೆಸ್ಟ್​
ಆಯೇಷಾ ಬಾನು
| Updated By: KUSHAL V|

Updated on: Aug 23, 2020 | 2:17 PM

Share

ಬೆಂಗಳೂರು: ಐಟಿ-ಬಿಟಿ ನಗರ ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಜಾಲ ಎಲ್ಲೆಡೆ ಹಬ್ಬುತ್ತಿದೆ. ನಗರದ ಕಾಳಸಂತೆಯಲ್ಲಿ ಮತ್ತೇರಿಸುವ ಎಣ್ಣೆ ಮಾರಾಟ ದಂಧೆ ಜೋರಾಗಿದೆ. ಇದೀಗ, ಅಫೀಮು, ಗಾಂಜಾ,‌ ಕೊಕೈನ್​ಗಿಂತ ಹೆಚ್ಚು ನಶೆ ಏರಿಸುವ ದ್ರವ್ಯವೊಂದು ಈಗ ಕಾಳಸಂತೆಯಲ್ಲಿ ಲಭ್ಯವಾಗುತ್ತಿದೆ.

ಇತರೆ ರಾಜ್ಯಗಳಲ್ಲಿ ತಯಾರಾಗಿ ನಗರದ ಐಟಿ-ಬಿಟಿ ಉದ್ಯೋಗಿಗಳಿಗೆ ಸರಬರಾಜಾಗುವ ಈ ಹ್ಯಾಶ್​ ಆಯಿಲ್​ನ (Hash oil) ಮಾರಾಟ ಎಗ್ಗಿಲ್ಲದೆ ಸಾಗುತ್ತಿದೆ. 1 ಗ್ರಾಂ ಹ್ಯಾಶ್​ ಆಯಿಲ್ ಬೆಲೆ 3ರಿಂದ 5 ಸಾವಿರ ರೂಪಾಯಿಯಷ್ಟು ಇದೆ. ಆಂಧ್ರದ ವಿಶಾಖಪಟ್ಟಣಂನಿಂದ ಈ ಮಾದಕ ದ್ರವ್ಯವನ್ನು ನಗರಕ್ಕೆ ತಂದು ಮಾರಾಟ ಮಾಡಲಾಗುತ್ತಿದೆಯಂತೆ.

ಈ ಮಾದಕ ದ್ರವ್ಯದ ವಿತರಕರಿಗೆ ನಗರದ ಐಟಿ-ಬಿಟಿ ಉದ್ಯೋಗಿಗಳೇ ಟಾರ್ಗೆಟ್​ . ಜೊತೆಗೆ, ಇದು ಬಹು ಬೇಡಿಕೆಯ ದ್ರವ್ಯವಾಗಿದೆ. ಸದ್ಯ ಈಗ ನಗರದಲ್ಲಿ ಹ್ಯಾಶ್​ ಆಯಿಲ್ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಸದ್ದುಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸುರಕತ್ತಿ ಪ್ರಭಾಕರ್, ಕೊರಳ ಕಾಮರಾಜ್ ಬಂಧಿತ ಆರೋಪಿಗಳು. ಬಂಧಿತರಿಂದ 950 ಗ್ರಾಂ‌ ಆಯಿಲ್ ಮತ್ತು 3 ಕೆ.ಜಿ. ಗಾಂಜಾ ಸಹ ಜಪ್ತಿ ಮಾಡಲಾಗಿದೆ.

ಚೆಕ್​ಪಾಯಿಂಟ್​ನಲ್ಲಿ ಕೆಲ ಬೈಕ್ ಸವಾರರನ್ನ ಸಂಶಯದ ಮೇಲೆ ಹಿಡಿದು ತಪಾಸಣೆ ನಡೆಸಿದ ವೇಳೆ ಅವರು ಗಾಂಜಾ ಸೇವನೆ‌ ಮಾಡಿರೋದು ಪೊಲೀಸರಿಗೆ ಕಂಡು ಬಂದಿತ್ತು. ವಿಚಾರಣೆ ನಡೆಸಿದಾಗ ಅವರಿಗೆ ಗಾಂಜಾ ಸಪ್ಲೈ ಮಾಡಿದ್ದವರ ಮಾಹಿತಿ ದೊರಕಿತ್ತು. ಹೀಗಾಗಿ, ಮಾರಾಟಗಾರರ ಮೇಲೆ ದಾಳಿ ಮಾಡಿ ಗಾಂಜಾ ಹಾಗೂ ಸೊಪ್ಪು ಸೀಜ್ ಮಾಡಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಾಹಿತಿ ನೀಡಿದ್ದಾರೆ.

ಆರೋಪಿಗಳು ಸುಮಾರು 80 ಕೆ.ಜಿ ಗಾಂಜಾ ಒಣಗಿಸಿ, ನಂತರ ಕುದಿಸಿ, ಅದರಿಂದ ಎಣ್ಣೆ ತೆಗಿಯುತ್ತಾರೆ. 1 ಕೆ.ಜಿ ಗಾಂಜಾ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತು ಆಗುತ್ತೆ. ದೀಪುರಾಜ್  ಎಂಬ ಬೈಕ್ ಸವಾರನನ್ನ ಬಂಧಿಸಿ ತನಿಖೆ ನಡೆಸಿದಾಗ ಆರೋಪಿಗಳ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದೆ ಎಂದು ಶ್ರೀನಾಥ್  ಹೇಳಿದ್ದಾರೆ.

ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್