AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IT-BT ಉದ್ಯೋಗಿಗಳಿಗೆ ಸಖತ್​ Kick ಕೊಡ್ತಿದ್ದ ಹ್ಯಾಶ್​ ಆಯಿಲ್​ ಮಾರಾಟಗಾರರು ಅರೆಸ್ಟ್​

ಬೆಂಗಳೂರು: ಐಟಿ-ಬಿಟಿ ನಗರ ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಜಾಲ ಎಲ್ಲೆಡೆ ಹಬ್ಬುತ್ತಿದೆ. ನಗರದ ಕಾಳಸಂತೆಯಲ್ಲಿ ಮತ್ತೇರಿಸುವ ಎಣ್ಣೆ ಮಾರಾಟ ದಂಧೆ ಜೋರಾಗಿದೆ. ಇದೀಗ, ಅಫೀಮು, ಗಾಂಜಾ,‌ ಕೊಕೈನ್​ಗಿಂತ ಹೆಚ್ಚು ನಶೆ ಏರಿಸುವ ದ್ರವ್ಯವೊಂದು ಈಗ ಕಾಳಸಂತೆಯಲ್ಲಿ ಲಭ್ಯವಾಗುತ್ತಿದೆ. ಇತರೆ ರಾಜ್ಯಗಳಲ್ಲಿ ತಯಾರಾಗಿ ನಗರದ ಐಟಿ-ಬಿಟಿ ಉದ್ಯೋಗಿಗಳಿಗೆ ಸರಬರಾಜಾಗುವ ಈ ಹ್ಯಾಶ್​ ಆಯಿಲ್​ನ (Hash oil) ಮಾರಾಟ ಎಗ್ಗಿಲ್ಲದೆ ಸಾಗುತ್ತಿದೆ. 1 ಗ್ರಾಂ ಹ್ಯಾಶ್​ ಆಯಿಲ್ ಬೆಲೆ 3ರಿಂದ 5 ಸಾವಿರ ರೂಪಾಯಿಯಷ್ಟು ಇದೆ. ಆಂಧ್ರದ ವಿಶಾಖಪಟ್ಟಣಂನಿಂದ ಈ […]

IT-BT ಉದ್ಯೋಗಿಗಳಿಗೆ ಸಖತ್​ Kick ಕೊಡ್ತಿದ್ದ ಹ್ಯಾಶ್​ ಆಯಿಲ್​ ಮಾರಾಟಗಾರರು ಅರೆಸ್ಟ್​
ಆಯೇಷಾ ಬಾನು
| Edited By: |

Updated on: Aug 23, 2020 | 2:17 PM

Share

ಬೆಂಗಳೂರು: ಐಟಿ-ಬಿಟಿ ನಗರ ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಜಾಲ ಎಲ್ಲೆಡೆ ಹಬ್ಬುತ್ತಿದೆ. ನಗರದ ಕಾಳಸಂತೆಯಲ್ಲಿ ಮತ್ತೇರಿಸುವ ಎಣ್ಣೆ ಮಾರಾಟ ದಂಧೆ ಜೋರಾಗಿದೆ. ಇದೀಗ, ಅಫೀಮು, ಗಾಂಜಾ,‌ ಕೊಕೈನ್​ಗಿಂತ ಹೆಚ್ಚು ನಶೆ ಏರಿಸುವ ದ್ರವ್ಯವೊಂದು ಈಗ ಕಾಳಸಂತೆಯಲ್ಲಿ ಲಭ್ಯವಾಗುತ್ತಿದೆ.

ಇತರೆ ರಾಜ್ಯಗಳಲ್ಲಿ ತಯಾರಾಗಿ ನಗರದ ಐಟಿ-ಬಿಟಿ ಉದ್ಯೋಗಿಗಳಿಗೆ ಸರಬರಾಜಾಗುವ ಈ ಹ್ಯಾಶ್​ ಆಯಿಲ್​ನ (Hash oil) ಮಾರಾಟ ಎಗ್ಗಿಲ್ಲದೆ ಸಾಗುತ್ತಿದೆ. 1 ಗ್ರಾಂ ಹ್ಯಾಶ್​ ಆಯಿಲ್ ಬೆಲೆ 3ರಿಂದ 5 ಸಾವಿರ ರೂಪಾಯಿಯಷ್ಟು ಇದೆ. ಆಂಧ್ರದ ವಿಶಾಖಪಟ್ಟಣಂನಿಂದ ಈ ಮಾದಕ ದ್ರವ್ಯವನ್ನು ನಗರಕ್ಕೆ ತಂದು ಮಾರಾಟ ಮಾಡಲಾಗುತ್ತಿದೆಯಂತೆ.

ಈ ಮಾದಕ ದ್ರವ್ಯದ ವಿತರಕರಿಗೆ ನಗರದ ಐಟಿ-ಬಿಟಿ ಉದ್ಯೋಗಿಗಳೇ ಟಾರ್ಗೆಟ್​ . ಜೊತೆಗೆ, ಇದು ಬಹು ಬೇಡಿಕೆಯ ದ್ರವ್ಯವಾಗಿದೆ. ಸದ್ಯ ಈಗ ನಗರದಲ್ಲಿ ಹ್ಯಾಶ್​ ಆಯಿಲ್ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಸದ್ದುಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸುರಕತ್ತಿ ಪ್ರಭಾಕರ್, ಕೊರಳ ಕಾಮರಾಜ್ ಬಂಧಿತ ಆರೋಪಿಗಳು. ಬಂಧಿತರಿಂದ 950 ಗ್ರಾಂ‌ ಆಯಿಲ್ ಮತ್ತು 3 ಕೆ.ಜಿ. ಗಾಂಜಾ ಸಹ ಜಪ್ತಿ ಮಾಡಲಾಗಿದೆ.

ಚೆಕ್​ಪಾಯಿಂಟ್​ನಲ್ಲಿ ಕೆಲ ಬೈಕ್ ಸವಾರರನ್ನ ಸಂಶಯದ ಮೇಲೆ ಹಿಡಿದು ತಪಾಸಣೆ ನಡೆಸಿದ ವೇಳೆ ಅವರು ಗಾಂಜಾ ಸೇವನೆ‌ ಮಾಡಿರೋದು ಪೊಲೀಸರಿಗೆ ಕಂಡು ಬಂದಿತ್ತು. ವಿಚಾರಣೆ ನಡೆಸಿದಾಗ ಅವರಿಗೆ ಗಾಂಜಾ ಸಪ್ಲೈ ಮಾಡಿದ್ದವರ ಮಾಹಿತಿ ದೊರಕಿತ್ತು. ಹೀಗಾಗಿ, ಮಾರಾಟಗಾರರ ಮೇಲೆ ದಾಳಿ ಮಾಡಿ ಗಾಂಜಾ ಹಾಗೂ ಸೊಪ್ಪು ಸೀಜ್ ಮಾಡಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಾಹಿತಿ ನೀಡಿದ್ದಾರೆ.

ಆರೋಪಿಗಳು ಸುಮಾರು 80 ಕೆ.ಜಿ ಗಾಂಜಾ ಒಣಗಿಸಿ, ನಂತರ ಕುದಿಸಿ, ಅದರಿಂದ ಎಣ್ಣೆ ತೆಗಿಯುತ್ತಾರೆ. 1 ಕೆ.ಜಿ ಗಾಂಜಾ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತು ಆಗುತ್ತೆ. ದೀಪುರಾಜ್  ಎಂಬ ಬೈಕ್ ಸವಾರನನ್ನ ಬಂಧಿಸಿ ತನಿಖೆ ನಡೆಸಿದಾಗ ಆರೋಪಿಗಳ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದೆ ಎಂದು ಶ್ರೀನಾಥ್  ಹೇಳಿದ್ದಾರೆ.

ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಮನೆಯಲ್ಲಿ ಆಲೋವೆರಾ ಇದ್ದರೆ ಏನೆಲ್ಲಾ ಲಾಭ?
ಮನೆಯಲ್ಲಿ ಆಲೋವೆರಾ ಇದ್ದರೆ ಏನೆಲ್ಲಾ ಲಾಭ?