Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೀಗೊಂದು ನವರತ್ನ ವಿಚಾರ -ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಶಿಕ್ಷೆಗಳ ಹಿಂದೆ ಇದೆ ಸದುದ್ದೇಶ!

Punishment to school children: ಇದನ್ನು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ, ಇಂದಿನ ಮುಕ್ತ ಸಮಾಜದಲ್ಲಿ ನೋಡಲು, ಅನುಭವಿಸಲು ಸಾಧ್ಯವೇ ಇಲ್ಲ ಅಲ್ಲವಾ!? ಶಾಲಾ ಮಗುವಿಗೆ ಒಂದು ಏಟು ಹೊಡೆಯುವುದು ಹಾಗಿರಲಿ, ಜೋರಾಗಿ ಗದರಿಸಿದರೂ ಮುಗಿದೇ ಹೋಯ್ತು... ಮಾವನ ಹಕ್ಕುಗಳ ಉಲ್ಲಂಘನೆಯಾಗಿ ಅದು ಇನ್ನೆಲ್ಲೆಲ್ಲಿಗೋ ಹೋಗಿ ಕೊನೆಗೆ ಶಿಕ್ಷಕರಿಗೇ ಶಿಕ್ಷೆಯ ಉರುಳಾಗುತ್ತದೆ!

ಹೀಗೊಂದು ನವರತ್ನ ವಿಚಾರ -ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಶಿಕ್ಷೆಗಳ ಹಿಂದೆ ಇದೆ ಸದುದ್ದೇಶ!
ಹೀಗೊಂದು ನವ ರತ್ನ ವಿಚಾರ, ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಶಿಕ್ಷೆಗಳ ಹಿಂದೆ ಇದೆ ಸದುದ್ದೇಶ!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Mar 08, 2022 | 7:41 PM

ಹಿಂದಿನ ಕಾಲದ ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಕೊಡುತ್ತಿದ್ದ ಶಿಕ್ಷೆಗಳು ಬಗೆ ಬಗೆಯಾಗಿರುತ್ತಿದ್ದವು. ಕೆಲವೊಮ್ಮ ಆ ಶಿಕ್ಷೆಗಳು ಅತಿ ಎನಿಸಿದರೂ ಅವುಗಳ ಹಿಂದೆ ಒಂದು ಉದಾತ್ತ ಅರ್ಥ ಇರುತ್ತಿತ್ತು. ಶಿಕ್ಷೆಯೆಂಬ ನವರತ್ನಗಳಿಗೆ ಗೂಡಾರ್ಥವ ಜೋಡಿಸಿ (Punishment to school children), ಬದುಕು ತಿದ್ದುವ ಗುರುಗಳಿಗೆ ನಮೋ ನಮಃ ಅನ್ನೋಣ. ಆದರೆ ಇದನ್ನು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ, ಇಂದಿನ ಮುಕ್ತ ಸಮಾಜದಲ್ಲಿ ನೋಡಲು, ಅನುಭವಿಸಲು ಸಾಧ್ಯವೇ ಇಲ್ಲ ಅಲ್ಲವಾ!? ಶಾಲಾ ಮಗುವಿಗೆ ಒಂದು ಏಟು ಹೊಡೆಯುವುದು ಹಾಗಿರಲಿ, ಜೋರಾಗಿ ಗದರಿಸಿದರೂ ಮುಗಿದೇ ಹೋಯ್ತು… ಮಾವನ ಹಕ್ಕುಗಳ ಉಲ್ಲಂಘನೆಯಾಗಿ (Child Rights) ಅದು ಇನ್ನೆಲ್ಲೆಲ್ಲಿಗೋ ಹೋಗಿ ಕೊನೆಗೆ ಶಿಕ್ಷಕರಿಗೇ ಶಿಕ್ಷೆಯ ಉರುಳಾಗುತ್ತದೆ!

ಬನ್ನೀ ಶಿಕ್ಷೆಯೆಂಬ ಈ ನವರತ್ನಗಳ ಬಗ್ಗೆ ವಿಚಾರ ಮಾಡೋಣ. ಹಾಗಂತ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷೆ ವಿಧಿಸುವುದನ್ನು ಪ್ರೋತ್ಸಾಹಿಸುವುದು ಈ ಪುಟ್ಟ ಬರಹದ ಉದ್ದೇಶವಲ್ಲ. ಯಾವುದೇ ಆಗಲಿ, ಹಿತಮಿತವಾಗಿ ಇದ್ದರೆ ಒಳ್ಳೆಯದು; ಇಲ್ಲವಾದರೆ ಅಮೃತವೂ ವಿಷವಾದೀತು ಅಲ್ಲವಾ? ಆಯ್ಕೆ ನಿಮಗೆ ಬಿಟ್ಟಿದ್ದು!

  1.  ಮೊಣಕಾಲ ಮೇಲೆ ನಿಲ್ಲಿಸಿದರೆ: ವಿನಯವನ್ನು ರೂಢಿಸಿಕೋ ಎಂದರ್ಥ
  2. ಬಾಯಿಯ ಮೇಲೆ ಬೆರಳಿಟ್ಟಿಕೋ ಎಂದರೆ: ಸ್ವ ಪ್ರಶಂಸೆ ಮಾಡಿಕೊಳ್ಳಬೇಡಾ ಎಂದರ್ಥ
  3. ಕಿವಿ ಹಿಡಿದು ನಿಲ್ಲೆಂದರೆ: ಒಳ್ಳೆಯ ವಿಷಯಗಳನ್ನು ಶ್ರದ್ಧೆಯಿಂದ ಕೇಳು ಎಂದರ್ಥ
  4. ಬೆಂಚಿನ ಮೇಲೆ ನಿಲ್ಲು ಅಂದರೆ: ಎಲ್ಲರಿಗಿಂತ ಓದಿನಲ್ಲಿ ಎತ್ತರ ಇರು ಎಂದರ್ಥ
  5. ಕೈಯೆತ್ತಿ ನಿಲ್ಲು ಅಂದರೆ: ನಿನ್ನ ಗುರಿ ಉನ್ನತವಾಗಿರಲಿ, ನಿಶ್ಚಲವಾಗಿರಲಿ ಎಂದರ್ಥ
  6. ಗೋಡೆಗೆ ಮುಖ ಮಾಡಿ ನಿಲ್ಲು ಎಂದರೆ: ಆತ್ಮಾವಲೋಕನ ಮಾಡಿಕೋ ಎಂದರ್ಥ
  7. ತರಗತಿಯ ಕೋಣೆಯಿಂದ ಹೊರಗೆ ನಿಲ್ಲಿಸಿದರೆ: ಪರಿಸರದ ಜ್ಞಾನ ಮಡೆದುಕೋ ಎಂದರ್ಥ
  8. ಕರಿ ಹಲಗೆ ಒರಸು ಎಂದರೆ: ಯಾವಾಗಲೂ ನೀನು ಮಾಡುವ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಇರು ಎಂದರ್ಥ
  9. ಒಂದೇ ವಿಷಯವನ್ನು ಹಲವು ಬಾರಿ ಬರೆಯಲು ಹೇಳಿದರೆ: ಗೆಲುವು ಸಿಗುವವರೆಗೂ ಪ್ರಯತ್ನಿಸುತ್ತಿರು, ಸೋಲೊಪ್ಪಿಕೊಳ್ಳಬೇಡ ಎಂದರ್ಥ (ಬರಹ- ವಾಟ್ಸಪ್​ ಸದ್ವಿಚಾರ)

Published On - 7:32 pm, Tue, 8 March 22

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!