AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pariksha Pe Charcha 2025: ನಿಮ್ಮನ್ನು ಬೇರೆಯವರೊಂದಿಗೆ ಹೋಲಿಸಿಕೊಳ್ಳಬೇಡಿ, ವಿದ್ಯಾರ್ಥಿಗಳಿಗೆ ಕ್ರೀಡಾ ದಿಗ್ಗಜರ ಅಭಯ

ಪರೀಕ್ಷಾ ಪೆ ಚರ್ಚಾದ 7ನೇ ಸಂಚಿಕೆ ಇಂದು ಪ್ರಸಾರಗೊಂಡಿದೆ. ಕ್ರೀಡಾ ದಿಗ್ಗಜರು ವಿದ್ಯಾರ್ಥಿಗಳಿಗೆ ಅಭಯ ನೀಡಿದ್ದಾರೆ. ವಿದ್ಯಾರ್ಥಿಗಳು ಮೇರಿ ಕೋಮ್, ಅವನಿ ಲೇಖರಾ ಮತ್ತು ಸುಹಾಸ್ ಯತಿರಾಜ್ ಅವರೊಂದಿಗೆ ಸಂವಹನ ನಡೆಸಿದರು. ಪ್ಯಾರಾ-ಬ್ಯಾಡ್ಮಿಂಟನ್ ಬೆಳ್ಳಿ ಪದಕ ವಿಜೇತ ಮತ್ತು ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್, ಶಾಲಾ ಪರೀಕ್ಷೆಯಾಗಿರಲಿ ಅಥವಾ ಜೀವನದಲ್ಲಿ ಸವಾಲಾಗಿರಲಿ, ಪ್ರತಿಯೊಂದು ಪರೀಕ್ಷೆಯೊಂದಿಗೆ ಬರುವ ಸವಾಲುಗಳ ಬಗ್ಗೆ ಮಾತನಾಡಿದರು.

Pariksha Pe Charcha 2025: ನಿಮ್ಮನ್ನು ಬೇರೆಯವರೊಂದಿಗೆ ಹೋಲಿಸಿಕೊಳ್ಳಬೇಡಿ, ವಿದ್ಯಾರ್ಥಿಗಳಿಗೆ ಕ್ರೀಡಾ ದಿಗ್ಗಜರ ಅಭಯ
ಪರೀಕ್ಷಾ ಪೆ ಚರ್ಚಾ
ನಯನಾ ರಾಜೀವ್
|

Updated on: Feb 17, 2025 | 12:18 PM

Share

ಪರೀಕ್ಷಾ ಪೆ ಚರ್ಚಾದ 7ನೇ ಸಂಚಿಕೆ ಇಂದು ಪ್ರಸಾರಗೊಂಡಿದೆ. ಕ್ರೀಡಾ ದಿಗ್ಗಜರು ವಿದ್ಯಾರ್ಥಿಗಳಿಗೆ ಅಭಯ ನೀಡಿದ್ದಾರೆ. ವಿದ್ಯಾರ್ಥಿಗಳು ಮೇರಿ ಕೋಮ್, ಅವನಿ ಲೇಖರಾ ಮತ್ತು ಸುಹಾಸ್ ಯತಿರಾಜ್ ಅವರೊಂದಿಗೆ ಸಂವಹನ ನಡೆಸಿದರು. ಪ್ಯಾರಾ-ಬ್ಯಾಡ್ಮಿಂಟನ್ ಬೆಳ್ಳಿ ಪದಕ ವಿಜೇತ ಮತ್ತು ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್, ಶಾಲಾ ಪರೀಕ್ಷೆಯಾಗಿರಲಿ ಅಥವಾ ಜೀವನದಲ್ಲಿ ಸವಾಲಾಗಿರಲಿ, ಪ್ರತಿಯೊಂದು ಪರೀಕ್ಷೆಯೊಂದಿಗೆ ಬರುವ ಸವಾಲುಗಳ ಬಗ್ಗೆ ಮಾತನಾಡಿದರು.

ವೈಫಲ್ಯದ ಭಯವನ್ನು ನಿವಾರಿಸುವುದರಿಂದ ವ್ಯಕ್ತಿಗಳು ತಮ್ಮ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮ ಮನಸ್ಸು ನಿಮ್ಮ ದೊಡ್ಡ ಸ್ನೇಹಿತ ಮತ್ತು ದೊಡ್ಡ ಶತ್ರು, ಹೀಗಾಗಿ ನೀವು ನಿಮ್ಮನ್ನು ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳಬೇಡಿ ಎಂದು ಯತಿರಾಜ್ ಹೇಳಿದರು.

ವಿದ್ಯಾರ್ಥಿಗಳು ತಮ್ಮ ಸ್ಪರ್ಧಿಗಳ ಮೇಲೆ ಅಥವಾ ಮುಂದೆ ಏನಾಗಲಿದೆ ಎಂಬುದರ ಮೇಲೆ ಗಮನಹರಿಸಬಾರದು. ನೀವು ಓದಿರುವುದು, ತಯಾರಿ, ಪರಿಶ್ರಮದ ಕುರಿತು ನಂಬಿಕೆ ಇಡಬೇಕು ಎಂದರು.

ಅವನಿ ಲೇಖರಾ ಮಾತನಾಡಿ, ನಾವು ಅಂದಕೊಂಡಂತೆ ವಿಷಯಗಳು ಸಂಭವಿಸದಿದ್ದಾಗ ಫಲಿತಾಂಶಗಳು ನಿರೀಕ್ಷೆಯಂತೆ ಇಲ್ಲದಿದ್ದಾಗ ಹೇಗೆ ಚೇತರಿಸಿಕೊಳ್ಳಬೇಕೆಂಬ ಸಲಹೆ ನೀಡಿದರು. ಭಯವನ್ನು ಕಡಿಮೆ ಮಾಡಲು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಸ್ಥಿರತೆ ಬಹಳ ಮುಖ್ಯ. ನೀವು ಪ್ರತಿದಿನ ಸಂಪೂರ್ಣ ಗಮನದಿಂದ ಅಧ್ಯಯನ ಮಾಡಿದರೆ, ನೀವು ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.

ನಾನು ಶೂಟಿಂಗ್ ತ್ಯಜಿಸಬೇಕೆಂದು ಹಲವು ಬಾರಿ ಭಾವಿಸಿದ್ದೆ. ನಾನು ಅದನ್ನು ಮಾಡಲು ಸಾಧ್ಯವಿಲ್ಲ. ಆ ಸಮಯದಲ್ಲಿ ನಾನು 11 ನೇ ತರಗತಿಯಲ್ಲಿದ್ದೆ, ಆದರೆ ನಂತರ ಶೂಟಿಂಗ್ ಬಿಟ್ಟು ನನ್ನ ಪರೀಕ್ಷೆಗಳತ್ತ ಗಮನಹರಿಸಲು ಯೋಚಿಸಿದೆ.

ನಮಗೆ ಜ್ಞಾನವಿಲ್ಲದ ವಿಷಯಗಳಿಗೆ ನಾವು ಭಯಪಡುತ್ತೇವೆ ಮತ್ತು ಇದಾದ ನಂತರ ನಾನು ಜ್ಞಾನವನ್ನು ಪಡೆಯಲು ಪ್ರಾರಂಭಿಸಿದೆ ಮತ್ತು ನನ್ನನ್ನು ನಾನು ಸುಧಾರಿಸಿಕೊಂಡೆ ಮತ್ತು ಈ ರೀತಿಯಾಗಿ ನನ್ನ ಭಯ ಕ್ರಮೇಣ ಕಡಿಮೆಯಾಯಿತು ಎಂದು ಅವರು ಹೇಳಿದರು.

ನೀವು ಪ್ರತಿದಿನ ಅರ್ಧ ಗಂಟೆ ಪೂರ್ಣ ಗಮನದಿಂದ ಅಧ್ಯಯನ ಮಾಡುತ್ತಿದ್ದರೆ. ಅದು ನಿಮ್ಮ ಮನಸ್ಸಿನಲ್ಲಿ ಹೆಚ್ಚು ಉಳಿಯುತ್ತದೆ. ಉಸಿರಾಟದ ವ್ಯಾಯಾಮಗಳನ್ನು ಮಾಡಿ. ಇದು ನಿಮ್ಮ ಹೃದಯ ಬಡಿತವನ್ನು ಸಮತೋಲನಗೊಳಿಸಲು ಮತ್ತು ಬೋರ್ಡ್ ಪರೀಕ್ಷೆಗಳಿಗೆ ತಯಾರಿ ನಡೆಸುವಾಗ ಶಾಂತವಾಗಿರಲು ಸಹಾಯ ಮಾಡುತ್ತದೆ ಎಂದು ಸಲಹೆ ನೀಡಿದರು.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ