AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿರ್ಮಾಪಕರ ಖಾಸಗಿ ಬೇಡಿಕೆಗೆ ಒಪ್ಪದ್ದಕ್ಕೆ ಸಿನಿಮಾದಿಂದ ಹೊರಗಿಟ್ಟರು’; ನಟಿಯ ಅಳಲು

ಇದು ಯಾವ ಸಿನಿಮಾ, ಅದರ ನಿರ್ಮಾಪಕರು ಯಾರು ಎಂಬಿತ್ಯಾದಿ ವಿಚಾರಗಳ ಬಗ್ಗೆ ಅದಿತಿ ಅವರು ಮಾಹಿತಿ ಬಿಟ್ಟುಕೊಟ್ಟಿಲ್ಲ. ಅದಿತಿ ಅವರು ಸದ್ಯ ‘ಭೇಜಾ ಫ್ರೈ 2’ ಹಾಗೂ ‘ಪಹೇಲಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.

‘ನಿರ್ಮಾಪಕರ ಖಾಸಗಿ ಬೇಡಿಕೆಗೆ ಒಪ್ಪದ್ದಕ್ಕೆ ಸಿನಿಮಾದಿಂದ ಹೊರಗಿಟ್ಟರು’; ನಟಿಯ ಅಳಲು
ಅದಿತಿ
ರಾಜೇಶ್ ದುಗ್ಗುಮನೆ
| Edited By: |

Updated on:Dec 06, 2023 | 2:45 PM

Share

ಮೀ ಟೂ ಅಭಿಯಾನ ಶುರುವಾದಾಗ ಕಾಸ್ಟಿಂಗ್ ಕೌಚ್ ವಿಚಾರದ ಬಗ್ಗೆ ಅನೇಕ ನಟಿಯರು ಮಾತನಾಡಿದ್ದಾರೆ. ಸಾಕಷ್ಟು ಹೀರೋಯಿನ್​ಗಳು ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆ ಬಗ್ಗೆ ಮೌನ ಮುರಿದಿದ್ದಾರೆ. ನಿರ್ಮಾಪಕರು, ನಟರು ಇಡುವ ಖಾಸಗಿ ಬೇಡಿಕೆಗಳನ್ನು ಪೂರೈಸದೇ ಇರುವುದಕ್ಕೆ ಸಾಕಷ್ಟು ಸಿನಿಮಾ ಆಫರ್​ಗಳನ್ನು ಕಳೆದುಕೊಂಡ ಬಗ್ಗೆ ಅನೇಕ ನಟಿಯರು ಹೇಳಿಕೊಂಡಿದ್ದಾರೆ. ಈಗ ಸೂಪರ್ ಮಾಡೆಲ್ ಹಾಗೂ ನಟಿ ಅದಿತಿ ಗೋವಿತ್ರಿಕರ್ (Aditi Govitrikar) ಕೂಡ ಈ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

1999ರಲ್ಲಿ ರಿಲೀಸ್ ಆದ ‘ತಮ್ಮುಡು’ ಸಿನಿಮಾ ಮೂಲಕ ಅದಿತಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಕನ್ನಡದ ‘ಲಂಕೇಶ್ ಪತ್ರಿಕೆ’ ಸಿನಿಮಾದಲ್ಲಿ ಅವರು ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದರು. 2001ರಲ್ಲಿ ಅವರು ‘ಮಿಸಸ್ ವರ್ಲ್ಡ್​’ ಟೈಟಲ್ ಪಡೆದರು. ಈ ಟೈಟಲ್ ಪಡೆದ ಮೊದಲ ಮಹಿಳೆ ಎನ್ನುವ ಖ್ಯಾತಿ ಅವರಿಗೆ ಸಿಕ್ಕಿದೆ.  ಅವರಿಗೂ ಕಾಸ್ಟಿಂಗ್ ಕೌಚ್ ಅನುಭವ ಆಗಿತ್ತು.

ಸಿದ್ದಾರ್ಥ್ ಖನ್ನಾ ಅವರ ಜೊತೆಗಿನ ಸಂದರ್ಶನದಲ್ಲಿ ಅದಿತಿ ಮಾತನಾಡಿದ್ದಾರೆ. ‘ದೊಡ್ಡ ಸಿನಿಮಾ ಶೂಟಿಂಗ್​ಗೆ ದಕ್ಷಿಣ ಆಫ್ರಿಕಾಗೆ ತೆರಳಿದ್ದೆ. ಆ ವ್ಯಕ್ತಿ ಮಾಡುತ್ತಿದ್ದ ಕೆಲವು ವರ್ತನೆಗಳ ಹಿಂದಿನ ಉದ್ದೇಶ ನನಗೆ ಗೊತ್ತಾಗಲಿಲ್ಲ. ಹೀಗಾಗಿ ನಾನು ನಕ್ಕು ಅಲ್ಲಿಂದ ನಡೆದೆ ಮತ್ತು ನೀವು ಮೂರ್ಖರಾ ಎಂದು ಕೇಳಿದೆ. ಇದು ಅವರ ಅಹಂಗೆ ಪೆಟ್ಟು ಕೊಟ್ಟಿತು. ಆ ಕ್ಷಣವೇ ಶೂಟಿಂಗ್​ ಮುಗಿಯಿತು ಎಂದರು. ಮರುದಿನ ಮುಂಬೈಗೆ ಬರಬೇಕಾಯಿತು. ಹೀಗೇಕೆ ಹೇಳಿದರು ಎಂಬುದೇ ಗೊತ್ತಾಗಿರಲಿಲ್ಲ’ ಎಂದಿದ್ದಾರೆ ಅದಿತಿ.

‘ನಂತರ ಮತ್ತೆ ನನ್ನನ್ನು ಕರೆದರು. ನಾಲ್ಕು ದಿನದ ಶೂಟ್ ಬಾಕಿ ಇತ್ತು. ಆದರೆ, ಆ ಸಂದರ್ಭದಲ್ಲಿ ಅವರು ಬೇರೆ ಬೇರೆ ರೀತಿಯ ಕಾರಣಗಳನ್ನು ನೀಡುತ್ತಿದ್ದರು. ಆಗ ನನಗೆ ಎಲ್ಲವೂ ಅರಿವಾಯಿತು. ನಾನು ಅವರ ಆಸೆಯಂತೆ ನಡೆದುಕೊಳ್ಳಲಿಲ್ಲ, ಹೀಗಾಗಿ ಸಿನಿಮಾದಿಂದ ನನ್ನನ್ನು ತೆಗೆದರು ಅನ್ನೋದು ಅರಿವಿಗೆ ಬಂತು’ ಎಂದಿದ್ದಾರೆ ಅದಿತಿ.

ಇದನ್ನೂ ಓದಿ: ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇದೆ, ಒಬ್ಬ ನಟ ನನ್ನ ಹಿಂದೆ ಬಿದ್ದಿದ್ದ: ಹನ್ಸಿಕಾ ಮೊಟ್ವಾನಿ

ಇದು ಯಾವ ಸಿನಿಮಾ, ಅದರ ನಿರ್ಮಾಪಕರು ಯಾರು ಎಂಬಿತ್ಯಾದಿ ವಿಚಾರಗಳ ಬಗ್ಗೆ ಅದಿತಿ ಅವರು ಮಾಹಿತಿ ಬಿಟ್ಟುಕೊಟ್ಟಿಲ್ಲ. ಅದಿತಿ ಅವರು ಸದ್ಯ ‘ಭೇಜಾ ಫ್ರೈ 2’ ಹಾಗೂ ‘ಪಹೇಲಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:31 pm, Wed, 6 December 23

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ