AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎ.ಆರ್.​ ರೆಹಮಾನ್ ಆಗಿ ಬದಲಾದ ದಿಲೀಪ್ ಕುಮಾರ್; ಮತಾಂತರಕ್ಕೆ ಕಾರಣ ಆಗಿತ್ತು ಈ ವಿಚಾರ

AR Rahman Birthday: ರೆಹಮಾನ್ ಅವರ ಮೂಲ ಹೆಸರು ದಿಲೀಪ್ ಕುಮಾರ್. ಅವರು ಹುಟ್ಟಿದ್ದು ಚೆನ್ನೈನಲ್ಲಿ. ಸಂಗೀತ ಸಂಯೋಜಕ ಆರ್​.ಎಸ್​. ಶೇಖರ್ ಅವರ ಮಗನಾಗಿ ದಿಲೀಪ್​ ಕುಮಾರ್ ಜನಿಸಿದ್ದರು. ದಿಲೀಪ್​ ಅವರು ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆ ಊರುವ ಮೊದಲೇ ಶೇಖರ್ ಮೃತಪಟ್ಟರು.

ಎ.ಆರ್.​ ರೆಹಮಾನ್ ಆಗಿ ಬದಲಾದ ದಿಲೀಪ್ ಕುಮಾರ್; ಮತಾಂತರಕ್ಕೆ ಕಾರಣ ಆಗಿತ್ತು ಈ ವಿಚಾರ
ರೆಹಮಾನ್
TV9 Web
| Edited By: |

Updated on: Jan 06, 2023 | 7:40 AM

Share

ಖ್ಯಾತ ಸಂಗೀತ ಸಂಯೋಜಕ ಎ.ಆರ್​. ರೆಹಮಾನ್ (AR Rahman) ಅವರು ಹಲವು ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಅವರು ಪ್ರತಿಷ್ಠಿತ ಆಸ್ಕರ್ ಅವಾರ್ಡ್ ಕೂಡ ಗೆದ್ದಿದ್ದಾರೆ. ಇಡೀ ವಿಶ್ವಕ್ಕೆ ಎ.ಆರ್. ರೆಹಮಾನ್ ಅವರ ಸಂಗೀತ ಸಂಯೋಜನೆ ಬಗ್ಗೆ ಮೆಚ್ಚುಗೆ ಇದೆ. ಇಂದು (ಜನವರಿ 6) ಹುಟ್ಟುಹಬ್ಬ (AR Rahman Birthday) ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದಲೂ ಶುಭಾಶಯ ಬರುತ್ತಿದೆ. ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಅವರ ಫೋಟೋ ಹಾಕಿ ವಿಶ್ ಮಾಡುತ್ತಿದ್ದಾರೆ. ಅವರು ಮೊದಲು ಹಿಂದು ಕುಟುಂಬಕ್ಕೆ ಸೇರಿದ್ದರು. ಆದರೆ, ನಂತರ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡರು.

ರೆಹಮಾನ್ ಅವರ ಮೂಲ ಹೆಸರು ದಿಲೀಪ್ ಕುಮಾರ್. ಅವರು ಹುಟ್ಟಿದ್ದು ಚೆನ್ನೈನಲ್ಲಿ. ಸಂಗೀತ ಸಂಯೋಜಕ ಆರ್​.ಎಸ್​. ಶೇಖರ್ ಅವರ ಮಗನಾಗಿ ದಿಲೀಪ್​ ಕುಮಾರ್ ಜನಿಸಿದ್ದರು. ದಿಲೀಪ್​ ಅವರು ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆ ಊರುವ ಮೊದಲೇ ಶೇಖರ್ ಮೃತಪಟ್ಟರು. ಇದರಿಂದ ದಿಲೀಪ್ ಕುಮಾರ್ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಒಳಗಾಯಿತು. ಇದೇ ಸಂದರ್ಭದಲ್ಲಿ ದಿಲೀಪ್ ಕುಮಾರ್ ತಾಯಿ ಕರೀಮಾ ಬೇಗಂ (ಈಗಿನ ಹೆಸರು) ಸೂಫಿ ಸಂತ ಕರಿಮುಲ್ಲಾ ಶಾ ಖದ್ರಿಯನ್ನು ಭೇಟಿ ಮಾಡಿದರು. ಅವರಿಂದ ಪ್ರಭಾವಕ್ಕೆ ಒಳಗಾದರು. ದಿಲೀಪ್ ಕುಮಾರ್ ಕೂಡ ಅವರಿಂದ ಪ್ರಭಾವಿತರಾದರು. ಈ ಕಾರಣಕ್ಕೆ ಮುಸ್ಲಿಂ ಧರ್ಮಕ್ಕೆ ಒಳಗಾದರು.

‘1986ರಲ್ಲಿ ಕರಿಮುಲ್ಲಾ ಅವರನ್ನು ಭೇಟಿ ಮಾಡಿದೆವು. ಆಗ ಅವರಿಗೆ ಅನಾರೋಗ್ಯ ಕಾಡಿತ್ತು. ನನ್ನ ಅಮ್ಮ ಅವರ ಆರೈಕೆ ಮಾಡಿದರು. ನನ್ನ ತಾಯಿಯನ್ನು ಅವರು ಮಗಳು ಎಂದು ಸ್ವೀಕರಿಸಿದ್ದರು. ನನಗೆ ಆಗ 19 ವರ್ಷ ವಯಸ್ಸು. ನಾವು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡೆವು. ನಾನು ಎ.ಆರ್​. ರೆಹಮಾನ್ ಆದೆ’ ಎಂದು ರೆಹಮಾನ್ ಸಂದರ್ಶನದಲ್ಲಿ ಹೇಳಿದ್ದರು.

ಇದನ್ನೂ ಓದಿ
Image
AR Rahman: ಬರೋಬ್ಬರಿ ₹ 6.75 ಲಕ್ಷಕ್ಕೆ ಹರಾಜಾದ ಎಆರ್​ ರೆಹಮಾನ್ ದಿರಿಸು; ಹಣ ಯಾವುದಕ್ಕೆ ಬಳಕೆಯಾಗಲಿದೆ ಗೊತ್ತಾ?
Image
ಲತಾ ಮಂಗೇಶ್ಕರ್ ಜತೆ ಬಾಲಿವುಡ್​ ತಾರೆಯರ ಸವಿ ನೆನಪು; ಆ ಕ್ಷಣಗಳನ್ನು ನೆನಪಿಸಿದ ಫೋಟೋಗಳು
Image
AR Rahman Birthday: ಆಸ್ಕರ್ ಟ್ರೋಫಿ ಕಳೆದು ಹಾಕಿದ್ದ ರೆಹಮಾನ್; ಇಲ್ಲಿವೆ ಖ್ಯಾತ ಸಂಗೀತ ನಿರ್ದೇಶಕನ ಬಗ್ಗೆ ಗೊತ್ತಿಲ್ಲದ 8 ವಿಚಾರಗಳು
Image
ಎಆರ್​ ರೆಹಮಾನ್​ ಪುತ್ರಿ ನಿಶ್ಚಿತಾರ್ಥ; ರಿಯಾಸ್ದೀನ್​ ಶೇಖ್​ ಮೊಹಮ್ಮದ್​ ಕೈ ಹಿಡಿಯಲಿರುವ ಖತೀಜಾ

ಇದನ್ನೂ ಓದಿ: ‘ಐಫಾ 2022’ ಸಮಾರಂಭದಲ್ಲಿ ಎಸ್​ಪಿಬಿ, ಲತಾಜೀ, ಕೆಕೆ ನಿಧನದ ಬಗ್ಗೆ ಮಾತನಾಡಿದ ಎ.ಆರ್​. ರೆಹಮಾನ್​

ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದ ಮೊದಲ ಸಿನಿಮಾ ‘ರೋಜಾ’ ತೆರೆಗೆ ಬರುವುದಕ್ಕೂ ಕೆಲವೇ ದಿನ ಮೊದಲು ರೆಹಮಾನ್ ಮತಾಂತರಗೊಂಡಿದ್ದರು. ಸಿನಿಮಾದಲ್ಲಿ ಅವರ ಹೆಸರು ದಿಲೀಪ್ ಕುಮಾರ್ ಎಂದೇ ಇತ್ತು. ಈ ಕಾರಣಕ್ಕೆ ರೆಹಮಾನ್ ಎಂದು ಬದಲಾಯಿಸಿಕೊಳ್ಳುವಂತೆ ಅವರ ತಾಯಿ ಸೂಚಿಸಿದ್ದರು. ‘ನಿನ್ನ ಹೊಸ ಹೆಸರು ತೆರೆಮೇಲೆ ಕಾಣಲಿ. ಇಲ್ಲವಾದರೆ ನಿನ್ನ ಹೆಸರನ್ನು ಅವರು ಹಾಕುವುದೇ ಬೇಡ’ ಎಂದು ರೆಹಮಾನ್ ತಾಯಿ ಹೇಳಿದ್ದರಂತೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್