AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು​ 4ವರ್ಷಗಳಿಂದ ಡ್ರಗ್ಸ್​ ಸೇವಿಸುತ್ತಿದ್ದೇನೆ, ಅಪ್ಪ-ಅಮ್ಮಂಗೂ ಗೊತ್ತು‘; ಎನ್​ಸಿಬಿ ಎದುರು ಅಳುತ್ತ ಸತ್ಯ ಒಪ್ಪಿಕೊಂಡ ಶಾರುಖ್​ ಪುತ್ರ ಆರ್ಯನ್​ !

Aryan Khan: ಡ್ರಗ್ಸ್​ ಪಾರ್ಟಿಯಲ್ಲಿ ಎನ್​ಸಿಬಿ ಬಂಧಿಸಿದವರನ್ನು ಮುನ್ಮುನ್ ಧಮೇಚಾ, ಅರ್ಬಾಜ್ ಮರ್ಚೆಂಟ್, ಇಸ್ಮೀತ್ ಸಿಂಗ್, ಮೋಹಕ್ ಜಸ್ವಾಲ್, ಗೋಮಿತ್ ಚೋಪ್ರಾ, ನೂಪುರ್ ಸಾರಿಕಾ ಮತ್ತು ವಿಕ್ರಾಂತ್ ಚೋಕರ್ ಎಂದು ಗುರುತಿಸಲಾಗಿದೆ.

‘ನಾನು​ 4ವರ್ಷಗಳಿಂದ ಡ್ರಗ್ಸ್​ ಸೇವಿಸುತ್ತಿದ್ದೇನೆ, ಅಪ್ಪ-ಅಮ್ಮಂಗೂ ಗೊತ್ತು‘; ಎನ್​ಸಿಬಿ ಎದುರು ಅಳುತ್ತ ಸತ್ಯ ಒಪ್ಪಿಕೊಂಡ ಶಾರುಖ್​ ಪುತ್ರ ಆರ್ಯನ್​ !
ತಂದೆ-ತಾಯಿಯ ಜತೆ ಆರ್ಯನ್​ ಖಾನ್​
TV9 Web
| Updated By: Digi Tech Desk|

Updated on:Oct 04, 2021 | 12:33 PM

Share

ಬಾಲಿವುಡ್​ ಸೂಪರ್​ ಸ್ಟಾರ್ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್ (Aryan Khan)​ ಡ್ರಗ್ಸ್​ ಪಾರ್ಟಿ (Drugs Party)ಯಲ್ಲಿ ಪಾಲ್ಗೊಂಡು ಇದೀಗ ಎನ್​ಸಿಬಿ (NCB) ಬಳಿ ಸಿಕ್ಕಿಬಿದ್ದಿದ್ದಾರೆ. ಆರ್ಯನ್​ರನ್ನು ಪೊಲೀಸರು ಬಂಧಿಸಿದಾಗ, ಅವರ ಲೆನ್ಸ್​ ಬಾಕ್ಸ್​ ಮತ್ತು ಶೂಗಳಲ್ಲಿ ಮಾದಕ ದ್ರವ್ಯ ಸಿಕ್ಕಿದ್ದಾಗಿ ಎನ್​ಸಿಬಿ ಮಾಹಿತಿ ನೀಡಿತ್ತು. ಇದೀಗ ಇನ್ನೊಂದು ಅಚ್ಚರಿಯ ವಿಚಾರ ಎನ್​ಸಿಬಿ ಮೂಲಗಳಿಂದ ಹೊರಬಿದ್ದಿದೆ. ‘ನಾನು ಕಳೆದ ನಾಲ್ಕು ವರ್ಷಗಳಿಂದಲೂ ಡ್ರಗ್ಸ್​ ಸೇವಿಸುತ್ತಿದ್ದೇನೆ. ಬರೀ ಭಾರತದಲ್ಲಿ ಅಷ್ಟೇ ಅಲ್ಲ, ನಾನು ಯುಕೆ, ದುಬೈ ಸೇರಿ ಇನ್ನಿತರ ದೇಶಗಳಲ್ಲಿ ವಾಸವಾಗಿದ್ದಲೂ ಅಲ್ಲಿಯೂ ಡ್ರಗ್ಸ್​ ತೆಗೆದುಕೊಂಡಿದ್ದೇನೆ. ನಾನು ಡ್ರಗ್ಸ್​ ತೆಗೆದುಕೊಳ್ಳುತ್ತಿರುವುದು ನನ್ನ ಅಪ್ಪ ಶಾರುಖ್​ಖಾನ್​ ಮತ್ತು ಅಮ್ಮ ಗೌರಿಗೂ ಗೊತ್ತಿದೆ’ ಎಂದು ಆರ್ಯನ್​ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಎನ್​ಸಿಬಿ ಹೇಳಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ. ಅಷ್ಟೇ ಅಲ್ಲ, ಆರ್ಯನ್​ ಎನ್​ಸಿಬಿ ಅಧಿಕಾರಿಗಳ ವೇಳೆ ಇವೆಲ್ಲವನ್ನೂ ಹೇಳಿಕೊಂಡು ಅತ್ತಿದ್ದಾರೆ ಎಂದೂ ಹೇಳಲಾಗಿದೆ.

ಶನಿವಾರ ಮುಂಬೈನ ಕರಾವಳಿ ತೀರದಲ್ಲಿ ಐಷಾರಾಮಿ ಹಡಗೊಂದರಲ್ಲಿ ನಡೆದಿದ್ದ ರೇವ್​ ಪಾರ್ಟಿ ಮೇಲೆ ದಾಳಿ ನಡೆಸಿದ್ದ ಎನ್​ಸಿಬಿ, ಶಾರುಖ್​ಖಾನ್​ ಪುತ್ರ ಆರ್ಯನ್​ ಸೇರಿ ಒಟ್ಟು ಎಂಟು ಮಂದಿಯನ್ನು ಬಂಧಿಸಿದೆ. ಬಂಧಿತರನ್ನು ಮುನ್ಮುನ್ ಧಮೇಚಾ, ಅರ್ಬಾಜ್ ಮರ್ಚೆಂಟ್, ಇಸ್ಮೀತ್ ಸಿಂಗ್, ಮೋಹಕ್ ಜಸ್ವಾಲ್, ಗೋಮಿತ್ ಚೋಪ್ರಾ, ನೂಪುರ್ ಸಾರಿಕಾ ಮತ್ತು ವಿಕ್ರಾಂತ್ ಚೋಕರ್ ಎಂದು ಗುರುತಿಸಲಾಗಿದೆ. ಇವರಲ್ಲಿ ಆರ್ಯನ್​ ಖಾನ್​ ಮತ್ತು ಅರ್ಬಾಜ್​ ಮರ್ಚಂಟ್​ ಕಳೆದ 15 ವರ್ಷಗಳಿಂದಲೂ ಸ್ನೇಹಿತರು. ಅರ್ಬಾಜ್​ ಸಹ ಡ್ರಗ್ಸ್​ ಅಡಿಕ್ಟ್​ ಎಂಬುದನ್ನು ಎನ್​ಸಿಬಿ ಹೇಳಿದೆ. ಇನ್ನು ಆರ್ಯನ್​ ಖಾನ್​​ ತನ್ನ ತಂದೆ ಶಾರುಖ್​ ಖಾನ್​ ಮತ್ತು ತಾಯಿ ಗೌರಿಯೊಂದಿಗೆ ಫೋನ್​ನಲ್ಲಿ ಮಾತನಾಡಲು ಅವಕಾಶ ಮಾಡಿಕೊಟ್ಟಿತ್ತು. ಆದರೆ ಹೆಚ್ಚಿಗೆ ಸಮಯ ಕೊಡಲಿಲ್ಲ. ಎರಡನೇ ನಿಮಿಷ ಮಾತನಾಡಿದ್ದಾರೆ ಎಂದು ವರದಿಯಾಗಿದೆ. ಮಗನ ಡ್ರಗ್ಸ್​ ಚಟದ ಬಗ್ಗೆ ತಂದೆ-ತಾಯಿಗೆ ಗೊತ್ತಿತ್ತು ಎಂದೂ ಹೇಳಿದೆ.

ಇಂದು ಆರ್ಯನ್​ ಖಾನ್​ ಮತ್ತು ಅರ್ಬಾಜ್​ ಮರ್ಚಂಟ್​​ರನ್ನು ಮತ್ತೆ ಎನ್​ಸಿಬಿ ನ್ಯಾಯಾಲಯದ ಎದುರು ಹಾಜರುಪಡಿಸಲಿದೆ. ಶನಿವಾರ ಕೋರ್ಟ್​ಗೆ ಹಾಜರುಪಡಿಸಿದಾಗ ಇಂದಿನವರೆಗೆ ಅಂದರೆ ಅಕ್ಟೋಬರ್​ 4ರವರೆಗೆ ಅವರನ್ನು ಎನ್​ಸಿಬಿ ವಶಕ್ಕೆ ನೀಡಲಾಗಿತ್ತು. ಇಂದು ಜಾಮೀನು ಸಿಗಲಿದೆಯೋ ಅಥವಾ ಇನ್ನಷ್ಟು ದಿನಗಳ ಕಾಲ ಎನ್​ಸಿಬಿ ಕಸ್ಟಡಿಯಲ್ಲಿ ಇರಬೇಕಾಗಿಬರಬಹುದೋ ಎಂಬುದನ್ನು ನೋಡಬೇಕು.

ಇದನ್ನೂ ಓದಿ: ಆರ್ಯನ್​ ಖಾನ್​ಗೆ ಜಾಮೀನು ಅಥವಾ ಜೈಲು? ಮತ್ತೆ ಕೋರ್ಟ್​ ಮುಂದೆ ಬರಲಿರುವ ಶಾರುಖ್​ ಪುತ್ರ

ಶಾರುಖ್​ ಪುತ್ರ ಆರ್ಯನ್​ ಖಾನ್​ ಅರೆಸ್ಟ್​ ಆದಾಗ ಅಕ್ಷಯ್​ ಕುಮಾರ್​ ಮಗ ಆರವ್​ ಏನು ಮಾಡ್ತಿದ್ರು? ಎಲ್ಲಿದ್ರು?

Published On - 12:09 pm, Mon, 4 October 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ