AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹೋಗಿ ಆಮಿರ್​ನ ಪ್ರಶ್ನೆ ಮಾಡಲಿ’; ತಮ್ಮ ಸಿನಿಮಾ ಟೀಕಿಸಿ ಕಿರಣ್ ರಾವ್​​ಗೆ ‘ಅನಿಮಲ್’ ನಿರ್ದೇಶಕನ ಉತ್ತರ

‘ಕಬೀರ್ ಸಿಂಗ್’ ಹಾಗೂ ‘ಅನಿಮಲ್’ ಚಿತ್ರದ ಮಧ್ಯೆ ಸಾಕಷ್ಟು ಹೋಲಿಕೆ ಇದೆ. ಎರಡೂ ಸಿನಿಮಾಗಳಲ್ಲಿ ಸ್ತ್ರೀ ದ್ವೇಷ ಇದೆ. ಗೊತ್ತು ಗುರಿ ಇಲ್ಲದೆ ಸಿನಿಮಾದ ಕಥೆ ಸಾಗುತ್ತದೆ. ಚಿತ್ರದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಕೀಳು ಶಬ್ದ ಬಳಕೆ ಮಾಡಲಾಗಿದೆ. ಅವರನ್ನು ಕೆಟ್ಟದಾಗಿ ತೋರಿಸಲಾಗಿದೆ ಎನ್ನುವ ಆರೋಪ ಇದೆ. ಕಿರಣ್ ರಾವ್ ಅವರು ಈ ರೀತಿಯ ಸಿನಿಮಾಗಳ ಬಗ್ಗೆ ಅಪಸ್ವರ ತೆಗೆದಿದ್ದರು.

‘ಹೋಗಿ ಆಮಿರ್​ನ ಪ್ರಶ್ನೆ ಮಾಡಲಿ’; ತಮ್ಮ ಸಿನಿಮಾ ಟೀಕಿಸಿ ಕಿರಣ್ ರಾವ್​​ಗೆ ‘ಅನಿಮಲ್’ ನಿರ್ದೇಶಕನ ಉತ್ತರ
ಕಿರಣ್ ರಾವ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Feb 03, 2024 | 1:24 PM

ಸಂದೀಪ್ ರೆಡ್ಡಿ ವಂಗ ನಿರ್ದೇಶನದ ‘ಅನಿಮಲ್’ ಸಿನಿಮಾ (Animal Movie) ಸೂಪರ್ ಹಿಟ್ ಆಗಿದೆ. ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಈ ಚಿತ್ರ 900 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಬೇಕು ಎಂಬ ಆಸೆ ಇನ್ನೇನು ಈಡೇರುವುದರಲ್ಲಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಇನ್ನು ಒಂದು ವರ್ಗದ ಜನರು ಈ ಚಿತ್ರವನ್ನು ಟೀಕೆ ಮಾಡುತ್ತಿದ್ದಾರೆ. ಕೆಲವರು ಅವರ ನಿರ್ದೇಶನದ ‘ಕಬೀರ್ ಸಿಂಗ್’ ಚಿತ್ರವನ್ನು ಟೀಕೆ ಮಾಡಿದ್ದರು. ಆಮಿರ್ ಖಾನ್ ಅವರ ಮಾಜಿ ಪತ್ನಿ ಕಿರಣ್ ರಾವ್ ಕೂಡ ‘ಕಬೀರ್ ಸಿಂಗ್’ ಚಿತ್ರದ ಬಗ್ಗೆ ಅಪಸ್ವರ ತೆಗೆದಿದ್ದರು. ಇದಕ್ಕೆ ಸಂದೀಪ್ ರೆಡ್ಡಿ ವಂಗ ಉತ್ತರ ನೀಡಿದ್ದಾರೆ.

ಕಿರಣ್ ರಾವ್ ಹೇಳಿದ್ದೇನು?

‘ಕಬೀರ್ ಸಿಂಗ್’ ಹಾಗೂ ‘ಅನಿಮಲ್’ ಚಿತ್ರದ ಮಧ್ಯೆ ಸಾಕಷ್ಟು ಹೋಲಿಕೆ ಇದೆ. ಎರಡೂ ಸಿನಿಮಾಗಳಲ್ಲಿ ಸ್ತ್ರೀ ದ್ವೇಷ ಇದೆ. ಗೊತ್ತು ಗುರಿ ಇಲ್ಲದೆ ಸಿನಿಮಾದ ಕಥೆ ಸಾಗುತ್ತದೆ. ಚಿತ್ರದಲ್ಲಿ ಹೆಣ್ಣು ಮಕ್ಕಳ ಬಗ್ಗೆ ಕೀಳು ಶಬ್ದ ಬಳಕೆ ಮಾಡಲಾಗಿದೆ. ಅವರನ್ನು ಕೆಟ್ಟದಾಗಿ ತೋರಿಸಲಾಗಿದೆ ಎನ್ನುವ ಆರೋಪ ಇದೆ. ಕಿರಣ್ ರಾವ್ ಅವರು ಈ ರೀತಿಯ ಸಿನಿಮಾಗಳ ಬಗ್ಗೆ ಅಪಸ್ವರ ತೆಗೆದಿದ್ದರು. ‘ಕಬೀರ್ ಸಿಂಗ್ ಅಂಥ ಚಿತ್ರಗಳು ಸ್ತ್ರೀ ದ್ವೇಷ ಹರಡುತ್ತವೆ’ ಎಂದು ಕಿರಣ್ ರಾವ್ ನವೆಂಬರ್ ತಿಂಗಳಲ್ಲಿ ಹೇಳಿದ್ದರು. ಇದಕ್ಕೆ ಸಂದೀಪ್ ರೆಡ್ಡಿ ಈಗ ಉತ್ತರಿಸಿದ್ದಾರೆ.

ಉತ್ತರ ಕೊಟ್ಟ ಸಂದೀಪ್

ಸಂದೀಪ್ ರೆಡ್ಡಿ ವಂಗ ಅವರು ಈ ಆರೋಪಕ್ಕೆ ಉತ್ತರ ನೀಡಿದ್ದಾರೆ. ‘ಇಂದು ಮುಂಜಾನೆ ನನ್ನ ಸಹಾಯಕ ನಿರ್ದೇಶಕ ಒಂದು ಆರ್ಟಿಕಲ್ ತೋರಿಸಿದರು. ಸೂಪರ್​ಸ್ಟಾರ್​ನ ಎರಡನೇ ಮಾಜಿ ಪತ್ನಿ ನೀಡಿದ ಹೇಳಿಕೆಯ ಬಗ್ಗೆ ಆ ಬರಹ ಇತ್ತು. ಬಾಹುಬಲಿ ಹಾಗೂ ಕಬೀರ್ ಸಿಂಗ್ ಸಿನಿಮಾಗಳು ಸ್ತ್ರೀದ್ವೇಷವನ್ನು ಪ್ರಚಾರ ಮಾಡುತ್ತವೆ ಎಂದು ಹೇಳಿದ್ದರು. ಬಹುಶಃ ಅವರಿಗೆ ವ್ಯತ್ಯಾಸ ತಿಳಿಯುತ್ತಿಲ್ಲ ಅನಿಸುತ್ತದೆ. ಕೆಲವರು ಇದನ್ನು ಓದಿ ಒಪ್ಪಿಕೊಳ್ಳಬಹುದು. ಆದರೆ ಇದು ತಪ್ಪು. ಕೆಲವರಿಗೆ ತಾವು ಏನು ಮಾತನಾಡುತ್ತಿದ್ದೇವೆ ಎಂಬ ಅರಿವೇ ಇರುವುದಿಲ್ಲ’ ಎಂದಿದ್ದಾರೆ ಸಂದೀಪ್ ರೆಡ್ಡಿ ವಂಗ.

ಇದನ್ನೂ ಓದಿ: ಮುಗಿಯಿತು ಮಗಳ ಮದುವೆ ಸಂಭ್ರಮ; ಮಗನ ಚಿತ್ರಕ್ಕಾಗಿ ಜಪಾನ್​ಗೆ ತೆರಳಲಿದ್ದಾರೆ ಆಮಿರ್ ಖಾನ್?

ಆಮಿರ್ ಖಾನ್ ಅವರ ಸಿನಿಮಾ ಒಂದರ ದೃಶ್ಯವನ್ನು ಸಂದೀಪ್ ರೆಡ್ಡಿ ನೆನಪಿಸಿಕೊಂಡಿದ್ದಾರೆ. ‘ನಾನು ಆ ಮಹಿಳೆಗೆ (ಕಿರಣ್ ರಾವ್) ಒಂದು ವಿಚಾರ ಹೇಳಲು ಬಯಸುತ್ತೇನೆ. 1990ರ ಸಿನಿಮಾ ದಿಲ್ ಬಗ್ಗೆ ಅವರು ಆಮಿರ್ ಖಾನ್​ಗೆ ಪ್ರಶ್ನೆ ಮಾಡಲಿ. ದಿಲ್ ಚಿತ್ರದಲ್ಲಿ ಆಮಿರ್ ಖಾನ್ ಅವರು ರೇಪ್ ಮಾಡಿಯೇ ಬಿಟ್ಟರು ಎನ್ನುವ ರೀತಿಯ ದೃಶ್ಯ ಇದೆ. ನಂತರ ಇಬ್ಬರ ಮಧ್ಯೆ ಪ್ರೀತಿ ಮೂಡುತ್ತದೆ. ಇದೆಲ್ಲ ಏನು? ತಮ್ಮ ಸುತ್ತಲೂ ಇರುವುದರ ಬಗ್ಗೆ ಗಮನ ಹರಿಸದೇ ಈ ರೀತಿ ನಮ್ಮ ಮೇಲೆ ಅಟ್ಯಾಕ್ ಮಾಡಲು ಬರೋದು ಏಕೆ ಎಂಬುದು ತಿಳಿದಿಲ್ಲ’ ಎಂದಿದ್ದಾರೆ ಸಂದೀಪ್ ರೆಡ್ಡಿ ವಂಗ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಜಮೀರ್ ಅಹ್ಮದ್​​ರಂಥ ಬೇಜವಾಬ್ದಾರಿ ಸಚಿವನನ್ನು ನೋಡೇ ಇಲ್ಲ: ಬೊಮ್ಮಾಯಿ
ಜಮೀರ್ ಅಹ್ಮದ್​​ರಂಥ ಬೇಜವಾಬ್ದಾರಿ ಸಚಿವನನ್ನು ನೋಡೇ ಇಲ್ಲ: ಬೊಮ್ಮಾಯಿ
ಪುರಿ ಜಗನ್ನಾಥ ದೇವಾಲಯದ ರಥಯಾತ್ರೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಭಾಗಿ
ಪುರಿ ಜಗನ್ನಾಥ ದೇವಾಲಯದ ರಥಯಾತ್ರೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಭಾಗಿ
ಧಾರವಾಡ ಟು ಬೆಂಗಳೂರು ವಂದೇ ಭಾರತ್​ ರೈಲಿನಲ್ಲಿ ಬೆಂಕಿ
ಧಾರವಾಡ ಟು ಬೆಂಗಳೂರು ವಂದೇ ಭಾರತ್​ ರೈಲಿನಲ್ಲಿ ಬೆಂಕಿ
ಹುಲಿಗಳ ಅಸಹಜ ಸಾವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದಂತಿದೆ
ಹುಲಿಗಳ ಅಸಹಜ ಸಾವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದಂತಿದೆ
ತಾಜ್​ ಮಹಲ್ ಮುಂದೆ ವಿಜಯಲಕ್ಷ್ಮಿಗೆ ಪ್ರಪೋಸ್ ಮಾಡಿದ ಪ್ರೇಮ್ ಥಾಪ: ವಿಡಿಯೋ
ತಾಜ್​ ಮಹಲ್ ಮುಂದೆ ವಿಜಯಲಕ್ಷ್ಮಿಗೆ ಪ್ರಪೋಸ್ ಮಾಡಿದ ಪ್ರೇಮ್ ಥಾಪ: ವಿಡಿಯೋ
ಕೊನೆಯ ಎಸೆತ, 1 ರನ್ ಬೇಕು; ಕ್ಯಾಚ್ ಬಿಟ್ಟ ನೈಟ್ ರೈಡರ್ಸ್ ತಂಡಕ್ಕೆ ಸೋಲು
ಕೊನೆಯ ಎಸೆತ, 1 ರನ್ ಬೇಕು; ಕ್ಯಾಚ್ ಬಿಟ್ಟ ನೈಟ್ ರೈಡರ್ಸ್ ತಂಡಕ್ಕೆ ಸೋಲು
ಶಾಸಕ ಅಶ್ವಥ್ ನಾರಾಯಣ್ ಮನೇಲಿ ಬಿಜೆಪಿ ನಾಯಕರ ಸಭೆ ನಡೆದಿದ್ದು ಯಾಕೆ?
ಶಾಸಕ ಅಶ್ವಥ್ ನಾರಾಯಣ್ ಮನೇಲಿ ಬಿಜೆಪಿ ನಾಯಕರ ಸಭೆ ನಡೆದಿದ್ದು ಯಾಕೆ?
ಮಂಗಳಮುಖಿಯರ ಅಶ್ಲೀಲ ಡ್ಯಾನ್ಸ್, ಕೆಂಪೇಗೌಡರ ಜಯಂತಿಯಲ್ಲಿ ಇದೆಂಥಾ ನೃತ್ಯ...?
ಮಂಗಳಮುಖಿಯರ ಅಶ್ಲೀಲ ಡ್ಯಾನ್ಸ್, ಕೆಂಪೇಗೌಡರ ಜಯಂತಿಯಲ್ಲಿ ಇದೆಂಥಾ ನೃತ್ಯ...?
ನಂದಿನಿ ಸ್ಕೂಟರ್​ಗೆ ಗುದ್ದಿದ ಕಾರು ಓಡಿಸುತ್ತಿದ್ದ ಮಹಿಳೆ ಕುಡಿದಿದ್ದಳೇ?
ನಂದಿನಿ ಸ್ಕೂಟರ್​ಗೆ ಗುದ್ದಿದ ಕಾರು ಓಡಿಸುತ್ತಿದ್ದ ಮಹಿಳೆ ಕುಡಿದಿದ್ದಳೇ?
ಕಾಂಗ್ರೆಸ್​ಗೆ ಸ್ವಾತಂತ್ರ್ಯಕ್ಕಾಗಿ ನಡೆದ ಕ್ರಾಂತಿ ಮಾತ್ರ ಗೊತ್ತು: ಪಾಟೀಲ್
ಕಾಂಗ್ರೆಸ್​ಗೆ ಸ್ವಾತಂತ್ರ್ಯಕ್ಕಾಗಿ ನಡೆದ ಕ್ರಾಂತಿ ಮಾತ್ರ ಗೊತ್ತು: ಪಾಟೀಲ್