AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Azadi Ka Amrit Mahotsav: ಸ್ವಾತಂತ್ರ್ಯಾ ಪೂರ್ವ ಹಾಗೂ ನಂತರದ ಚಿತ್ರರಂಗ

ಭಾರತದಲ್ಲಿ 1913ರಲ್ಲಿ ಮೊಟ್ಟ ಮೊದಲ ಸಿನಿಮಾ ಸಿದ್ಧಗೊಂಡಿತು. ಅದು ‘ರಾಜಾ ಹರಿಚಂದ್ರ’. ಈ ಸಿನಿಮಾ ನಿರ್ದೇಶನ ಮಾಡಿದ್ದು ದಾದಾ ಸಾಹೇಬ್ ಫಾಲ್ಕೆ. ಭಾರತೀಯ ಸಿನಿಮಾದ ಪಿತಾಮಹ ಎಂದು ಅವರನ್ನು ಕರೆಯಲಾಗುತ್ತದೆ.

Azadi Ka Amrit Mahotsav: ಸ್ವಾತಂತ್ರ್ಯಾ ಪೂರ್ವ ಹಾಗೂ ನಂತರದ ಚಿತ್ರರಂಗ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Aug 05, 2022 | 6:30 AM

Share

ಭಾರತೀಯರ ನಿತ್ಯ ಜೀವನದಲ್ಲಿ ಸಿನಿಮಾ (Cinema) ಎಂಬುದು ಹಾಸು ಹೊಕ್ಕಾಗಿದೆ. ಸ್ಟಾರ್ ನಟ/ನಟಿಯರನ್ನು ಆರಾಧಿಸುವ ಕಾರ್ಯ ಈ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಭಾರತಕ್ಕೆ ಸಿನಿಮಾ (Indian Cinema) ಕಾಲಿಟ್ಟು 100 ವರ್ಷಗಳೇ ಕಳೆದಿವೆ. ಈ ಅವಧಿಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡಿವೆ. ತಂತ್ರಜ್ಞಾನ, ವೀಕ್ಷಕರ ವಲಯ ಹೀಗೆ ಪ್ರತಿ ವಿಚಾರದಲ್ಲೂ ಹಲವು ಬದಲಾವಣೆಗಳನ್ನು ಭಾರತದ ಚಿತ್ರರಂಗ ಕಂಡಿದೆ.

ಮೊದಲು ಬ್ಲ್ಯಾಕ್ ಆ್ಯಂಡ್ ವೈಟ್ ಸಿನಿಮಾಗಳು ಸಿದ್ಧಗೊಳ್ಳುತ್ತಿದ್ದವು. ಈಗ ಕಲರಿಂಗ್​ನಲ್ಲೇ ಮೋಡಿ ಮಾಡುವ ತಂತ್ರಜ್ಞಾನ ಬದಿದೆ. ಮೊದಲಿನ ಸಿನಿಮಾಗಳಿಗೆ ಜೀರೋ ಗ್ರಾಫಿಕ್ಸ್ ಇರುತ್ತಿತ್ತು. ಈಗ ಗ್ರಾಫಿಕ್ಸ್ ಬಳಕೆ ಮಾಡಿಕೊಂಡೇ ಸಂಪೂರ್ಣ ಸಿನಿಮಾ ಸಿದ್ಧಗೊಂಡ ಉದಾಹರಣೆ ಇದೆ. ಡಾರ್ವಿನ್ ಅವರ ವಿಕಸನಾ ವಾದ ಚಿತ್ರರಂಗಕ್ಕೆ ಉತ್ತಮ ರೀತಿಯಲ್ಲಿ ಅನ್ವಯ ಆಗುತ್ತದೆ.

ಭಾರತದಲ್ಲಿ 1913ರಲ್ಲಿ ಮೊಟ್ಟ ಮೊದಲ ಸಿನಿಮಾ ಸಿದ್ಧಗೊಂಡಿತು. ಅದು ‘ರಾಜಾ ಹರಿಚಂದ್ರ’. ಈ ಸಿನಿಮಾ ನಿರ್ದೇಶನ ಮಾಡಿದ್ದು ದಾದಾ ಸಾಹೇಬ್ ಫಾಲ್ಕೆ. ಭಾರತೀಯ ಸಿನಿಮಾದ ಪಿತಾಮಹ ಎಂದು ಅವರನ್ನು ಕರೆಯಲಾಗುತ್ತದೆ. ಇದು ಮೂಕಿ ಚಿತ್ರವಾಗಿತ್ತು. ಆದರೆ, ಈ ಚಿತ್ರ ಅನೇಕರ ಮೇಲೆ ಪ್ರಭಾವ ಬೀರಿತು. ಈ ಚಿತ್ರದಿಂದ ಸ್ಫೂರ್ತಿ ಪಡೆದು ಹಲವು ನಿರ್ದೇಶಕರು ಹುಟ್ಟಿಕೊಂಡರು. ಆ ಬಳಿಕ ಸುಮಾರು 20 ವರ್ಷಗಳ ಕಾಲ ತೆರೆಗೆ ಬಂದಿದ್ದ ಎಲ್ಲ ಚಿತ್ರಗಳು ಮೂಕಿಯೇ. 1931ರ ಮಾರ್ಚ್​ 14ರಂದು ‘ಆಲಂ ಆರ’ ಸಿನಿಮಾ ತೆರೆಗೆ ಬಂತು. ಇದು ಮೊದಲ ಸೌಂಡ್​ ಒಳಗೊಂಡ ಚಿತ್ರ.

ಇದನ್ನೂ ಓದಿ
Image
ಸ್ವಾತಂತ್ರ್ಯಾ ನಂತರ ಚಿತ್ರರಂಗದಿಂದ ಹಾಗೂ ಚಿತ್ರರಂಗದಲ್ಲಿ ಆದ ಬದಲಾವಣೆಗಳು ಏನು?
Image
ಆಜಾದಿ ಕಾ ಅಮೃತ್ ಮಹೋತ್ಸವ್: ದವಡೆ ಹಲ್ಲು ಮುರಿದು ಕೈಬೆರಳುಗಳ ಉಗುರುಗಳನ್ನು ಬ್ರಿಟಿಷರು ಕಿತ್ತಿದರೂ ಸುರ್ಯಸೇನ್ ಬಾಯಿಂದ ವಂದೇ ಮಾತರಂ ಘೋಷಣೆ ನಿಲ್ಲುತ್ತಿರಲಿಲ್ಲ
Image
Azadi Ka Amrit Mahotsav: ಸ್ವತಂತ್ರ ಭಾರತದ ರಾಜಕೀಯ ಇತಿಹಾಸದಲ್ಲಿ ಕನ್ನಡಿಗರ ಅಪರೂಪದ ಸಾಧನೆ !
Image
Har Ghar Tiramga Anthem: ಹರ್ ಘರ್ ತಿರಂಗಾ ಸ್ಫೂರ್ತಿ ಗೀತೆಯಲ್ಲಿ ಕನ್ನಡ ಕಲರವ; ಮನೆ ಮನೆಗೂ ತ್ರಿವರ್ಣ ಎಂದ ರಾಹುಲ್

ಬ್ರಿಟಿಷ್ ಆಳ್ವಿಕೆ ಕೊನೆಗೊಂಡ ಬಳಿಕದ ಸಮಯವನ್ನು ಸುವರ್ಣ ಯುಗ ಎಂದು ಸಿನಿ ಪಂಡಿತರು ಕರೆಯುತ್ತಾರೆ. 1940-60ರ ಸಮಯ ಭಾರತದ ಪಾಲಿಗೆ ವಿಶೇಷವಾಗಿತ್ತು. ಬೆಂಗಾಲಿ ನಿರ್ದೇಶಕರಾದ ಸತ್ಯಜಿತ್ ರೇ, ರಿತ್ವಿಕ್ ಘಟಕ್, ಮೃಣಾಲ್ ಸೇನ್ ಮೊದಲಾದವರು ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದರು. ಇದರ ಜತೆಗೆ ದಕ್ಷಿಣ ಭಾರತದ ಕೊಡುಗೆ ಕೂಡ ದೊಡ್ಡದಿದೆ.

ಸಿನಿಮಾದಲ್ಲಿ ಹಾಡುಗಳು, ಡ್ಯಾನ್ಸ್​, ಫೈಟ್ ಹಾಗೂ ಹೀರೋಯಿಸಂ ಚಿತ್ರಗಳು ಕೂಡ ಸಾಕಷ್ಟು ಬೇಡಿಕೆ ಪಡೆದುಕೊಂಡಿವೆ. ಇದನ್ನು ಕಮರ್ಷಿಯಲ್ ಸಿನಿಮಾಗಳು ಎಂದು ಕರೆಯಲಾಗುತ್ತದೆ. ಲಾಭದ ದೃಷ್ಟಿಯಲ್ಲಿ ಈ ರೀತಿಯ ಸಿನಿಮಾಗಳನ್ನು ತಯಾರಿಸಲಾಗುತ್ತದೆ. ರಾಜ್​ಕುಮಾರ್, ರಜನಿಕಾಂತ್, ಅಮಿತಾಭ್​ ಬಚ್ಚನ್, ಎನ್​ಟಿಆರ್​ ಮೊದಲಾದ ಸ್ಟಾರ್ ನಟರು ಭಾರತ ಚಿತ್ರರಂಗವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ನವದಂಪತಿಯನ್ನು ಮನೆಗೆ ಆಹ್ವಾನಿಸಿ ಉಡುಗೊರೆ ಕೊಟ್ಟ ನಟ ರಜನಿಕಾಂತ್

ಸಿನಿಮಾ ಮೇಕಿಂಗ್​ನಲ್ಲೂ ಸಾಕಷ್ಟು ಬದಲಾವಣೆ ಕಂಡಿದೆ. ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ದಕ್ಷಿಣ ನಿರ್ದೇಶಕರಾದ ಎಸ್​ಎಸ್ ರಾಜಮೌಳಿ, ಪ್ರಶಾಂತ್ ನೀಲ್ ಮೊದಲಾದ ಸ್ಟಾರ್ ನಿರ್ದೇಶಕರು ಫಿಕ್ಷನ್ ಸಿನಿಮಾ ಮೂಲಕ ವಿಶ್ವ ಮಟ್ಟದಲ್ಲಿ ಭಾರತದ ಸಿನಿಮಾವನ್ನು ಕರೆದುಕೊಂಡು ಹೋಗಿದ್ದಾರೆ. ವಿಶ್ವ ಮಾರುಕಟ್ಟೆಯಲ್ಲಿ ಭಾರತದ ಸಿನಿಮಾಗಳು ಪಾರುಪತ್ಯ ಸಾಧಿಸುತ್ತಿವೆ ಅನ್ನೋದು ಹೆಮ್ಮೆಯ ವಿಚಾರ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್