AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada Elimination: ಮೊದಲ ವಾರವೇ ಟಿಕ್​ಟಾಕ್​ ಸ್ಟಾರ್​ ಧನುಶ್ರೀಯನ್ನು ಟಾರ್ಗೆಟ್​ ಮಾಡಿದ್ದೇಕೆ ಬಿಗ್​ ಬಾಸ್​?

Bigg Boss Kannada Updates : ಬಿಗ್​ ಬಾಸ್​ ಮನೆಯೊಳಗೆ ಮೊದಲ ಸ್ಪರ್ಧಿಯಾಗಿ ಕಾಲಿಟ್ಟಿದ್ದ ಟಿಕ್​ ಟಾಕ್​ ಸ್ಟಾರ್​ ಧನುಶ್ರೀ ಅವರಿಗೆ ಮೊದಲ ವಾರವೇ ಹಿನ್ನಡೆ ಆಗಿದೆ. ಇನ್ನುಳಿದವರಿಗೆ ಪೈಪೋಟಿ ನೀಡುವಲ್ಲಿ ಅವರು ಸೋತಿದ್ದಾರೆ.

Bigg Boss Kannada Elimination: ಮೊದಲ ವಾರವೇ ಟಿಕ್​ಟಾಕ್​ ಸ್ಟಾರ್​ ಧನುಶ್ರೀಯನ್ನು ಟಾರ್ಗೆಟ್​ ಮಾಡಿದ್ದೇಕೆ ಬಿಗ್​ ಬಾಸ್​?
ಧನುಶ್ರೀ
ರಾಜೇಶ್ ದುಗ್ಗುಮನೆ
| Edited By: |

Updated on: Mar 07, 2021 | 4:29 PM

Share

ನೂರು ದಿನಗಳನ್ನು ಪೂರೈಸಿ ವಿನ್ನರ್​ ಆಗಬೇಕು ಎಂಬ ಆಸೆ ಇಟ್ಟುಕೊಂಡೇ ಎಲ್ಲರೂ ಬಿಗ್​ ಬಾಸ್​ ಮನೆ ಪ್ರವೇಶಿಸುತ್ತಾರೆ. ಆದರೆ ಸೂಕ್ತ ಪೈಪೋಟಿ ನೀಡದಿದ್ದರೆ ಮೊದಲ ವಾರವೇ ಮನೆಯಿಂದ ಹೊರಗೆ ಬರಬೇಕಾದ ಸಂದರ್ಭ ಎದುರಾಗುತ್ತದೆ. ಟಿಕ್​ ಟಾಕ್​ ಮೂಲಕ ಫೇಮಸ್​ ಆಗಿದ್ದ ಧನುಶ್ರೀ ಅವರು ಮೊದಲ ವಾರವೇ ಎಮಿಲಿನೇಟ್​ ಆಗಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ. ಪ್ರಸ್ತುತ ಈ ಎಪಿಸೋಡ್​ನ ಶೂಟಿಂಗ್​ನಲ್ಲಿ ಕಿಚ್ಚ ಸುದೀಪ್​ ಪಾಲ್ಗೊಂಡಿದ್ದಾರೆ.

ಶನಿವಾರವೇ ಸೇಫ್​ ಆಗಿದ್ದ ಶುಭಾ, ವಿಶ್ವನಾಥ್​ ಈ ವಾರ ರಘು, ನಿರ್ಮಲಾ ಚೆನ್ನಪ್ಪ, ಶುಭಾ ಪೂಂಜಾ, ವಿಶ್ವನಾಥ್​, ಧನುಶ್ರೀ ನಾಮಿನೇಟ್​ ಆಗಿದ್ದರು. ಆದರೆ ಶನಿವಾರದ ಸಂಚಿಕೆಯಲ್ಲಿ ವಿಶ್ವನಾಥ್​ ಮತ್ತು ಶುಭಾ ಪೂಂಜಾ ಸೇಫ್​ ಆದರು. ಈ ಸುದ್ದಿ ಕೇಳಿ ಅವರ ಅಭಿಮಾನಿಗಳು ಸಮಾಧಾನಪಟ್ಟುಕೊಂಡರು. ಇನ್ನುಳಿದಂತೆ ಧನುಶ್ರೀ, ನಿರ್ಮಲಾ ಚೆನ್ನಪ್ಪ ಮತ್ತು ರಘು ಅವರಿಗೆ ಢವಢವ ಮುಂದುವರಿದಿತ್ತು.

ಕಳಪೆ ಹಣೆಪಟ್ಟಿ ಹೊತ್ತ ಧನುಶ್ರೀ ಟಾಸ್ಕ್​ಗಳಲ್ಲಿ ಧನುಶ್ರೀಯ ಪರ್ಫಾಮೆನ್ಸ್​ ತುಂಬ ಕಳಪೆ ಆಗಿತ್ತು. ನಾಮಿನೇಷನ್​ನಿಂದ ತಪ್ಪಿಸಿಕೊಳ್ಳಲು ಎರಡೆರಡು ಸಾರಿ ಅವಕಾಶ ಸಿಕ್ಕರೂ ಕೂಡ ಅವರು ಸರಿಯಾಗಿ ಆಟ ಆಡಲಿಲ್ಲ. ಅವರ ಈ ಸೋಲನ್ನು ಮನೆಯ ಎಲ್ಲ ಸದಸ್ಯರೂ ಒಪ್ಪಿಕೊಂಡರು. ಎಲ್ಲರೂ ಒಕ್ಕೊರಲಿನಿಂದ ಧನುಶ್ರೀಗೆ ‘ಕಳಪೆ’ ಎಂಬ ಹಣೆಪಟ್ಟಿ ಕಟ್ಟಿದರು. ಪರಿಣಾಮವಾಗಿ ಅವರನ್ನು ಜೈಲಿಗೂ ಕಳಿಸಲಾಗಿತ್ತು.

ಮನರಂಜನೆಯಲ್ಲಿ ಮುಗ್ಗರಿಸಿದ ಟಿಕ್​ಟಾಕ್​ ಪ್ರತಿಭೆ ಬಿಗ್​ ಬಾಸ್​ನಲ್ಲಿ ಬರೀ ಟಾಸ್ಕ್​ ಗೆದ್ದರೆ ಸಾಲದು. ಜನರಿಗೆ ಮನರಂಜನೆ ಕೂಡ ನೀಡಬೇಕು. ಅದಕ್ಕೆ ಯಾವ ಮಾರ್ಗ ಬೇಕಾದರೂ ಅನುಸರಿಸಬಹುದು. ಕೆಲವರು ಕಾಮಿಡಿ ಮಾಡ್ತಾರೆ, ಇನ್ನು ಕೆಲವರು ಕಿರಿಕ್​ ಮಾಡ್ತಾರೆ. ಹಾಡು ಹೇಳಿ ಕ್ಲಿಕ್​ ಆದವರೂ ಇದ್ದಾರೆ. ಆದರೆ ಧನುಶ್ರೀ ಈ ಯಾವುದನ್ನೂ ಮಾಡಿಲ್ಲ. ಸೋಶಿಯಲ್​ ಮೀಡಿಯಾದಲ್ಲಿ ಟಿಕ್​ಟಾಕ್​ ಮಾಡುತ್ತಿದ್ದ ಅವರ ಪ್ರತಿಭೆ ಬಿಗ್​ ಬಾಸ್​ ಮನೆಯಲ್ಲಿ ಉಪಯೋಗಕ್ಕೆ ಬಂದಿಲ್ಲ. ಹಾಗಾಗಿ ಅವರಿಗೆ ಹಿನ್ನಡೆ ಆಗಿದೆ.

ಇದನ್ನೂ ಓದಿ: Bigg Boss Kannada : ಬಿಗ್​ ಬಾಸ್​ ಮನೆಯಲ್ಲಿ ದರ್ಶನ್​ ಹಾಡು ಯಾಕೆ ಪ್ಲೇ ಆಗಲ್ಲ? ಸುದೀಪ್​ಗೆ ಪ್ರಶ್ನೆ ಎಸೆದ ‘ಡಿ ಬಾಸ್’​ ಫ್ಯಾನ್ಸ್​!

Bigg Boss Kannada: ಈ ಬಾರಿ ಬಿಗ್​ ಬಾಸ್​ ಗೆಲ್ಲುವ ಸ್ಪರ್ಧಿ ಇವರೇ.. ಎಂದು ಭವಿಷ್ಯ ನುಡಿದ ಶಂಕರ್​ ಅಶ್ವತ್ಥ್​! ಆದರೆ

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್