AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೂಟಿಂಗ್​ ತಡವಾದರೆ ಆಮಿರ್​ಗೆ ಕೊಡಬೇಕು ಡಬಲ್​ ಸಂಭಾವನೆ; ನಿರ್ದೇಶಕ ಬಿಚ್ಚಿಟ್ಟ ಅಚ್ಚರಿಯ ವಿಚಾರ

ಆಮಿರ್​ ಖಾನ್​ ಬಾಲಿವುಡ್​ನ ಮಿಸ್ಟರ್​ ಪರ್ಫೆಕ್ಟ್​ ಎನ್ನುವ ಖ್ಯಾತಿ ಪಡೆದುಕೊಂಡಿದ್ದಾರೆ. ಅವರು ಯಾವುದೇ ಸಿನಿಮಾ ಕೈಗೆತ್ತಿಕೊಂಡರೂ ಅದನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ. ಸಿನಿಮಾ ಮೇಲಿನ ಪ್ರೀತಿ ಇದಕ್ಕೆಲ್ಲ ಕಾರಣ.

ಶೂಟಿಂಗ್​ ತಡವಾದರೆ ಆಮಿರ್​ಗೆ ಕೊಡಬೇಕು ಡಬಲ್​ ಸಂಭಾವನೆ; ನಿರ್ದೇಶಕ ಬಿಚ್ಚಿಟ್ಟ ಅಚ್ಚರಿಯ ವಿಚಾರ
ಅಮೀರ್ ಖಾನ್
TV9 Web
| Edited By: |

Updated on: Jul 29, 2021 | 9:28 PM

Share

‘ತೂಫಾನ್’ ಸಿನಿಮಾ​ ನಿರ್ದೇಶಕ ರಾಕೇಶ್​ ಓಂ​ಪ್ರಕಾಶ್​ ಮೆಹ್ರಾ ‘ದಿ ಸ್ಟ್ರೇಂಜರ್ ಇನ್ ದಿ ಮಿರರ್’ ಆಟೋಬಯೋಗ್ರಫಿ ಬರೆದಿದ್ದಾರೆ. ಜುಲೈ 27ರಂದು ಈ ಪುಸ್ತಕ ಬಿಡುಗಡೆ ಆಗಿದೆ. ಈ ಆಟೋಬಯೋಗ್ರಫಿಯಲ್ಲಿ ಬಾಲಿವುಡ್​ ನಟ ಆಮಿರ್ ಖಾನ್​ ಬಗ್ಗೆ ಬರೆಯಲಾಗಿದೆ. ಶೂಟಿಂಗ್​ ತಡವಾದರೆ ಡಬಲ್​ ಸಂಭಾವನೆ ಕೊಡಬೇಕಾಗುತ್ತದೆ ಎಂದು ಓಂ​ಪ್ರಕಾಶ್​ಗೆ ಆಮಿರ್​ ಹೇಳಿದ್ದರು ಎನ್ನುವ ವಿಚಾರ ಈ ಪುಸ್ತಕದದಿಂದ ಬೆಳಕಿಗೆ ಬಂದಿದೆ.

2006ರಲ್ಲಿ ತೆರೆಗೆ ಬಂದ ‘ರಂಗ್​ ದೇ ಬಸಂತಿ’ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಈ ಸಿನಿಮಾವನ್ನು ರಾಕೇಶ್ ಓಂ ಪ್ರಕಾಶ್​ ನಿರ್ದೇಶನ ಮಾಡಿದ್ದರು. ಆಮಿರ್ ಖಾನ್​ ನಟಿಸಿದ್ದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಈ ಸಿನಿಮಾ ಶೂಟಿಂಗ್​ ಸಮಯದಲ್ಲಿ ಆಮಿರ್​ ಖಾನ್​ ವಿಧಿಸಿದ್ದ ಷರತ್ತನ್ನು ರಾಕೇಶ್ ಓಂ​ಪ್ರಕಾಶ್​ ನೆನಪಿಸಿಕೊಂಡಿದ್ದಾರೆ.

ಆಮಿರ್​ ಖಾನ್​ ಬಾಲಿವುಡ್​ನ ಮಿಸ್ಟರ್​ ಪರ್ಫೆಕ್ಟ್​ ಎನ್ನುವ ಖ್ಯಾತಿ ಪಡೆದುಕೊಂಡಿದ್ದಾರೆ. ಅವರು ಯಾವುದೇ ಸಿನಿಮಾ ಕೈಗೆತ್ತಿಕೊಂಡರೂ ಅದನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ. ಸಿನಿಮಾ ಮೇಲಿನ ಪ್ರೀತಿ ಇದಕ್ಕೆಲ್ಲ ಕಾರಣ. ಅಂದಹಾಗೆ, ಸಿನಿಮಾ ಶೂಟಿಂಗ್​ ಆರಂಭಕ್ಕೂ ಮೊದಲು ಆಮಿರ್ ಸಾಕಷ್ಟು ಷರತ್ತುಗಳನ್ನು ವಿಧಿಸುತ್ತಿದ್ದರಂತೆ.

‘ಆಮಿರ್​ ಸಿನಿಮಾ ಸೆಟ್​ಗೆ ಬಂದರು ಎಂದರೆ ಅವರು ಕೊಟ್ಟ ಡೇಟ್ಸ್​ನಲ್ಲೇ ಶೂಟಿಂಗ್​ ಮುಗಿಸಬೇಕು. ಇಲ್ಲವಾದರೆ, ಅವರಿಗೆ ಡಬಲ್​ ಸಂಭಾವನೆ ಕೊಡಬೇಕಿತ್ತು. ಅಂದರೆ, ಅವರ ಸಂಭಾವನೆ ನಾಲ್ಕು ಕೋಟಿ ಇದೆ ಎಂದರೆ, ಶೂಟಿಂಗ್​ ವಿಳಂಬವಾದರೆ 8 ಕೋಟಿ ರೂಪಾಯಿ ಕೊಡಬೇಕಿತ್ತು. ಇದನ್ನು ಅವರು ಷರತ್ತಿನಲ್ಲೇ ಸೇರಿಸಿಬಿಡುತ್ತಿದ್ದರು. ನಾನು ‘ರಂಗ್​ ದೇ ಬಸಂತಿ’ ಶೂಟಿಂಗ್​ಅನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಿದೆ. ಹೀಗಾಗಿ, ದಂಡ ಕಟ್ಟುವ ಪ್ರಮೇಯ ಬಂದಿಲ್ಲ’ ಎಂದಿದ್ದಾರೆ ಅವರು.

ಲಾಲ್​ ಸಿಂಗ್​ ಚಡ್ಡಾ’ ಸಿನಿಮಾದ ಕೆಲಸಗಳಲ್ಲಿ ಆಮಿರ್​ ಖಾನ್​ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್​ಗೆ ಈಗಾಗಲೇ ಸಾಕಷ್ಟು ವಿಘ್ನಗಳು ಎದುರಾಗಿವೆ. ಇದನ್ನೆಲ್ಲವೂ ಮೆಟ್ಟಿ ನಿಂತಿರುವ ಆಮಿರ್​ ಖಾನ್ ಈಗ ಮತ್ತೆ ಸಿನಿಮಾದ ಶೂಟಿಂಗ್​ ಆರಂಭಿಸಿದ್ದಾರೆ. ಇದಕ್ಕಾಗಿಯೇ ಅವರು ಕಾರ್ಗಿಲ್​ಗೆ ತೆರಳಿದ್ದಾರೆ.

ಇದನ್ನೂ ಓದಿ: ನಿತ್ಯ ಒಂದೇ ಕಾರಲ್ಲಿ ಎರಡು ಗಂಟೆ ಪ್ರಯಾಣ ಮಾಡುತ್ತಿದ್ದಾರೆ ಆಮಿರ್-ನಾಗಚೈತನ್ಯ

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ