ಶೂಟಿಂಗ್​ ತಡವಾದರೆ ಆಮಿರ್​ಗೆ ಕೊಡಬೇಕು ಡಬಲ್​ ಸಂಭಾವನೆ; ನಿರ್ದೇಶಕ ಬಿಚ್ಚಿಟ್ಟ ಅಚ್ಚರಿಯ ವಿಚಾರ

ಆಮಿರ್​ ಖಾನ್​ ಬಾಲಿವುಡ್​ನ ಮಿಸ್ಟರ್​ ಪರ್ಫೆಕ್ಟ್​ ಎನ್ನುವ ಖ್ಯಾತಿ ಪಡೆದುಕೊಂಡಿದ್ದಾರೆ. ಅವರು ಯಾವುದೇ ಸಿನಿಮಾ ಕೈಗೆತ್ತಿಕೊಂಡರೂ ಅದನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ. ಸಿನಿಮಾ ಮೇಲಿನ ಪ್ರೀತಿ ಇದಕ್ಕೆಲ್ಲ ಕಾರಣ.

ಶೂಟಿಂಗ್​ ತಡವಾದರೆ ಆಮಿರ್​ಗೆ ಕೊಡಬೇಕು ಡಬಲ್​ ಸಂಭಾವನೆ; ನಿರ್ದೇಶಕ ಬಿಚ್ಚಿಟ್ಟ ಅಚ್ಚರಿಯ ವಿಚಾರ
ಅಮೀರ್ ಖಾನ್
Follow us
| Updated By: ರಾಜೇಶ್ ದುಗ್ಗುಮನೆ

Updated on: Jul 29, 2021 | 9:28 PM

‘ತೂಫಾನ್’ ಸಿನಿಮಾ​ ನಿರ್ದೇಶಕ ರಾಕೇಶ್​ ಓಂ​ಪ್ರಕಾಶ್​ ಮೆಹ್ರಾ ‘ದಿ ಸ್ಟ್ರೇಂಜರ್ ಇನ್ ದಿ ಮಿರರ್’ ಆಟೋಬಯೋಗ್ರಫಿ ಬರೆದಿದ್ದಾರೆ. ಜುಲೈ 27ರಂದು ಈ ಪುಸ್ತಕ ಬಿಡುಗಡೆ ಆಗಿದೆ. ಈ ಆಟೋಬಯೋಗ್ರಫಿಯಲ್ಲಿ ಬಾಲಿವುಡ್​ ನಟ ಆಮಿರ್ ಖಾನ್​ ಬಗ್ಗೆ ಬರೆಯಲಾಗಿದೆ. ಶೂಟಿಂಗ್​ ತಡವಾದರೆ ಡಬಲ್​ ಸಂಭಾವನೆ ಕೊಡಬೇಕಾಗುತ್ತದೆ ಎಂದು ಓಂ​ಪ್ರಕಾಶ್​ಗೆ ಆಮಿರ್​ ಹೇಳಿದ್ದರು ಎನ್ನುವ ವಿಚಾರ ಈ ಪುಸ್ತಕದದಿಂದ ಬೆಳಕಿಗೆ ಬಂದಿದೆ.

2006ರಲ್ಲಿ ತೆರೆಗೆ ಬಂದ ‘ರಂಗ್​ ದೇ ಬಸಂತಿ’ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಈ ಸಿನಿಮಾವನ್ನು ರಾಕೇಶ್ ಓಂ ಪ್ರಕಾಶ್​ ನಿರ್ದೇಶನ ಮಾಡಿದ್ದರು. ಆಮಿರ್ ಖಾನ್​ ನಟಿಸಿದ್ದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಈ ಸಿನಿಮಾ ಶೂಟಿಂಗ್​ ಸಮಯದಲ್ಲಿ ಆಮಿರ್​ ಖಾನ್​ ವಿಧಿಸಿದ್ದ ಷರತ್ತನ್ನು ರಾಕೇಶ್ ಓಂ​ಪ್ರಕಾಶ್​ ನೆನಪಿಸಿಕೊಂಡಿದ್ದಾರೆ.

ಆಮಿರ್​ ಖಾನ್​ ಬಾಲಿವುಡ್​ನ ಮಿಸ್ಟರ್​ ಪರ್ಫೆಕ್ಟ್​ ಎನ್ನುವ ಖ್ಯಾತಿ ಪಡೆದುಕೊಂಡಿದ್ದಾರೆ. ಅವರು ಯಾವುದೇ ಸಿನಿಮಾ ಕೈಗೆತ್ತಿಕೊಂಡರೂ ಅದನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ. ಸಿನಿಮಾ ಮೇಲಿನ ಪ್ರೀತಿ ಇದಕ್ಕೆಲ್ಲ ಕಾರಣ. ಅಂದಹಾಗೆ, ಸಿನಿಮಾ ಶೂಟಿಂಗ್​ ಆರಂಭಕ್ಕೂ ಮೊದಲು ಆಮಿರ್ ಸಾಕಷ್ಟು ಷರತ್ತುಗಳನ್ನು ವಿಧಿಸುತ್ತಿದ್ದರಂತೆ.

‘ಆಮಿರ್​ ಸಿನಿಮಾ ಸೆಟ್​ಗೆ ಬಂದರು ಎಂದರೆ ಅವರು ಕೊಟ್ಟ ಡೇಟ್ಸ್​ನಲ್ಲೇ ಶೂಟಿಂಗ್​ ಮುಗಿಸಬೇಕು. ಇಲ್ಲವಾದರೆ, ಅವರಿಗೆ ಡಬಲ್​ ಸಂಭಾವನೆ ಕೊಡಬೇಕಿತ್ತು. ಅಂದರೆ, ಅವರ ಸಂಭಾವನೆ ನಾಲ್ಕು ಕೋಟಿ ಇದೆ ಎಂದರೆ, ಶೂಟಿಂಗ್​ ವಿಳಂಬವಾದರೆ 8 ಕೋಟಿ ರೂಪಾಯಿ ಕೊಡಬೇಕಿತ್ತು. ಇದನ್ನು ಅವರು ಷರತ್ತಿನಲ್ಲೇ ಸೇರಿಸಿಬಿಡುತ್ತಿದ್ದರು. ನಾನು ‘ರಂಗ್​ ದೇ ಬಸಂತಿ’ ಶೂಟಿಂಗ್​ಅನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಿದೆ. ಹೀಗಾಗಿ, ದಂಡ ಕಟ್ಟುವ ಪ್ರಮೇಯ ಬಂದಿಲ್ಲ’ ಎಂದಿದ್ದಾರೆ ಅವರು.

ಲಾಲ್​ ಸಿಂಗ್​ ಚಡ್ಡಾ’ ಸಿನಿಮಾದ ಕೆಲಸಗಳಲ್ಲಿ ಆಮಿರ್​ ಖಾನ್​ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್​ಗೆ ಈಗಾಗಲೇ ಸಾಕಷ್ಟು ವಿಘ್ನಗಳು ಎದುರಾಗಿವೆ. ಇದನ್ನೆಲ್ಲವೂ ಮೆಟ್ಟಿ ನಿಂತಿರುವ ಆಮಿರ್​ ಖಾನ್ ಈಗ ಮತ್ತೆ ಸಿನಿಮಾದ ಶೂಟಿಂಗ್​ ಆರಂಭಿಸಿದ್ದಾರೆ. ಇದಕ್ಕಾಗಿಯೇ ಅವರು ಕಾರ್ಗಿಲ್​ಗೆ ತೆರಳಿದ್ದಾರೆ.

ಇದನ್ನೂ ಓದಿ: ನಿತ್ಯ ಒಂದೇ ಕಾರಲ್ಲಿ ಎರಡು ಗಂಟೆ ಪ್ರಯಾಣ ಮಾಡುತ್ತಿದ್ದಾರೆ ಆಮಿರ್-ನಾಗಚೈತನ್ಯ