AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

27 ವರ್ಷಗಳ ಬಳಿಕ ಮತ್ತೆ ಹಾಡಲು ಸಿದ್ಧವಾದ ಆಮಿರ್ ಖಾನ್

Aamir Khan: ಆಮಿರ್ ಖಾನ್ ಬಾಲಿವುಡ್​ನ ಸೂಪರ್ ಸ್ಟಾರ್ ನಟ. ಇತ್ತೀಚೆಗಷ್ಟೆ ಅವರ ನಟನೆಯ ‘ಸಿತಾರೆ ಜಮೀನ್ ಪರ್’ ಸಿನಿಮಾ ಬಿಡುಗಡೆ ಆಗಿದ್ದು ಸೂಪರ್ ಹಿಟ್ ಆಗಿದೆ. ಆಮಿರ್ ಖಾನ್, ಭಾರತದ ಅತ್ಯುತ್ತಮ ನಟರಲ್ಲಿ ಒಬ್ಬರು. ಯಾವುದೇ ಪಾತ್ರವಾದರೂ ಪರ್ಫೆಕ್ಟ್ ಆಗಿ ನಿಭಾಯಿಸುತ್ತಾರೆ. ಇದೀಗ ಆಮಿರ್ ಖಾನ್ ಬರೋಬ್ಬರು 27 ವರ್ಷಗಳ ನಂತರ ಮತ್ತೆ ಸಿನಿಮಾನಲ್ಲಿ ಹಾಡು ಹಾಡಲಿದ್ದಾರೆ. ಯಾವ ಸಿನಿಮಾಕ್ಕೆ?

27 ವರ್ಷಗಳ ಬಳಿಕ ಮತ್ತೆ ಹಾಡಲು ಸಿದ್ಧವಾದ ಆಮಿರ್ ಖಾನ್
Aamir Khan
 ಶ್ರೀಲಕ್ಷ್ಮೀ ಎಚ್
| Edited By: |

Updated on: Jul 15, 2025 | 6:52 PM

Share

ನಟ ಆಮಿರ್ ಖಾನ್ (Aamir Khan) ತಮ್ಮ ಚಿತ್ರಗಳಿಗಾಗಿ ತುಂಬಾ ಶ್ರಮಿಸುತ್ತಾರೆ. ಅವರು ಬಹಳ ಕಡಿಮೆ ಚಿತ್ರಗಳನ್ನು ಮಾಡುತ್ತಾರೆ. ಅದಕ್ಕಾಗಿಯೇ ಅವರನ್ನು ‘ಮಿಸ್ಟರ್ ಪರ್ಫೆಕ್ಷನಿಸ್ಟ್’ ಎಂದು ಕರೆಯಲಾಗುತ್ತದೆ. ಅವರ ಇತ್ತೀಚಿನ ಚಿತ್ರ ‘ಸಿತಾರೆ ಜಮೀನ್ ಪರ್’ ಬಿಡುಗಡೆಯಾಯಿತು. ಈಗ 27 ವರ್ಷಗಳ ನಂತರ, ನಟ ಆಮಿರ್ ಹಾಡಲು ಪ್ರಯತ್ನಿಸುತ್ತಿದ್ದಾರೆ. ಆಮಿರ್ ಹಾಸ್ಯ ಚಿತ್ರದಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದು ಎರಡು ಹಾಡನ್ನು ಹಾಡುತ್ತಿದ್ದಾರೆ.

ಇತ್ತೀಚೆಗೆ ಆಮಿರ್ ಬಾಲಿವುಡ್ ಹಂಗಾಮಾಗೆ ಹೇಳಿದ್ದರ ಪ್ರಕಾರ, ‘ಹೆಸರಿಡದ ಹಾಸ್ಯ ಚಿತ್ರದಲ್ಲಿ ನಟಿಸುವುದರ ಜೊತೆಗೆ ಹಾಡನ್ನು ಹಾಡೋದಾಗಿ ಹೇಳಿದ್ದರು. ಅದಕ್ಕಾಗಿ ಅವರು ಹಾಡುವ ಅಭ್ಯಾಸ ಮಾಡಲು ಪ್ರಾರಂಭಿಸಿದ್ದಾರೆ ಮತ್ತು ತರಬೇತಿಯನ್ನೂ ಪಡೆಯುತ್ತಿದ್ದಾರೆ. ರಾಣಿ ಮುಖರ್ಜಿ ಅವರೊಂದಿಗೆ ‘ಗುಲಾಮ್’ ಚಿತ್ರದಲ್ಲಿ ‘ಆತಿ ಕ್ಯಾ ಖಂಡಾಲಾ..’ ಹಾಡನ್ನು ಹಾಡುವ ಮೂಲಕ ಆಮಿರ್ ಸಂಚಲನ ಮೂಡಿಸಿದ್ದರು. ಈಗ 27 ವರ್ಷಗಳ ನಂತರ, ಆಮಿರ್ ತಮ್ಮ ಗಾಯನ ಕೌಶಲ್ಯವನ್ನು ಮತ್ತೆ ಬಳಸಿಕೊಳ್ಳಲಿದ್ದಾರೆ.

‘ನಾನು ಗುಲಾಮ್‌ ಚಿತ್ರಕ್ಕಾಗಿ ಆತಿ ಕ್ಯಾ ಖಂಡಾಲಾ ಹಾಡನ್ನು ಸರಳ ತಮಾಷೆಯಾಗಿ ಹಾಡಿದ್ದೆ. ಅದೃಷ್ಟವಶಾತ್ ಅದು ಹಿಟ್ ಆಯಿತು. ಈಗ, ಕಳೆದ ಕೆಲವು ವರ್ಷಗಳಿಂದ ನಾನು ವೃತ್ತಿಪರ ಗಾಯಕನಾಗಲು ತರಬೇತಿ ಪಡೆಯುತ್ತಿದ್ದೇನೆ. ಇತ್ತೀಚಿನ ದಿನಗಳಲ್ಲಿ ನಾವು ಅಂತಹ ಚಿತ್ರಗಳನ್ನು ಮಾಡಲು ಮರೆಯುತ್ತಿದ್ದೇವೆ. ಈ ಚಿತ್ರದಲ್ಲಿ ಖಳನಾಯಕ ಇಲ್ಲ ಅಥವಾ ಅದರಲ್ಲಿ ಯಾರೂ ಸಾಯುವುದಿಲ್ಲ. ಈ ಚಿತ್ರವು ನಿಮಗೆ ಒಳ್ಳೆಯ ಭಾವನೆಯನ್ನು ನೀಡುತ್ತದೆ’ ಎಂದು ಆಮಿರ್ ಹೇಳಿದರು.

ಇದನ್ನೂ ಓದಿ:‘ನಾನು ಫಾತಿಮಾಗೆ ಲವರ್, ತಂದೆ ಎರಡೂ ಅಲ್ಲ’; ಆಮಿರ್ ಖಾನ್ ನೇರ ಮಾತು

‘ಈ ಹಾಸ್ಯ ಚಿತ್ರದಲ್ಲಿ ನನ್ನ ಪಾತ್ರ ಚಿಕ್ಕದಾಗಿರುತ್ತದೆ. ಆದರೆ ಈ ಚಿತ್ರದಲ್ಲಿ ನಾನು ಎರಡು ಹಾಡುಗಳನ್ನು ಹಾಡುತ್ತೇನೆ’ ಎಂದಿದ್ದಾರೆ.  ಆಮಿರ್ ಅವರು ಪ್ರಸಿದ್ಧ ಜಾನಪದ ಗಾಯಕಿ ಸುಚೇತಾ ಭಟ್ಟಾಚಾರ್ಯ ಅವರಿಂದ ತರಬೇತಿ ಪಡೆಯುತ್ತಿರುವುದಾಗಿ ಹೇಳಿದರು.

‘ಸಿತಾರೆ ಜಮೀನ್ ಪರ್’ ನಂತರ, ಆಮಿರ್ ಖಾನ್ ಅವರ ಬಳಿ ಹಲವು ಯೋಜನೆಗಳಿವೆ. ಈಗ ಅವರು ರಜನಿಕಾಂತ್ ಅವರ ‘ಕೂಲಿ’ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ, ಇದರಲ್ಲಿ ಅವರು ಸಣ್ಣ ಪಾತ್ರವನ್ನು ನಿರ್ವಹಿಸಲಿದ್ದಾರೆ . ಅದಾದ ನಂತರ, ಆಮಿರ್ ದಾದಾಸಾಹೇಬ್ ಫಾಲ್ಕೆ ಅವರ ಜೀವನ ಚರಿತ್ರೆಯಲ್ಲಿ ರಾಜ್‌ಕುಮಾರ್ ಹಿರಾನಿ ಅವರೊಂದಿಗೆ ಕೆಲಸ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ