AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಯಕನ ಮಗಳು ಎಂದು ಖ್ಯಾತ ನಿರ್ದೇಶಕನಿಗೆ ಸುಳ್ಳು ಹೇಳಿದ್ದ ಅದಾ ಶರ್ಮಾ

Adah Sharma: ಬಾಲಿವುಡ್​ನಲ್ಲಿ ನೆಪೊಟಿಸಂ ಬಹಳ ನಡೆಯುತ್ತದೆ. ಸ್ಟಾರ್ ನಟ, ನಟಿಯರ ಮಕ್ಕಳಿಗೆ ಸಿನಿಮಾ ಅವಕಾಶಗಳು ಸುಲಭವಾಗಿ ಸಿಗುತ್ತವೆ. ಇದೇ ರೀತಿ ಸಿನಿಮಾ ಅವಕಾಶ ಸಿಗಬಹುದೇನೋ ಎಂಬ ಆಸೆಯಲ್ಲಿ ನಟಿ ಅದಾ ಶರ್ಮಾ, ತಾವು ಸಹ ಸಿನಿಮಾ ಸೆಲೆಬ್ರಿಟಿಗಳ ಮಗಳು ಎಂದು ಹೇಳಿಕೊಂಡಿದ್ದರಂತೆ. ಅದಾ ಶರ್ಮಾ, ಸುಳ್ಳು ಹೇಳಿದ್ದು ಯಾರಿಗೆ? ಆ ನಂತರ ಏನಾಯ್ತು? ಅವರಿಗೆ ಅವಕಾಶ ಸಿಕ್ಕಿತೆ?

ಗಾಯಕನ ಮಗಳು ಎಂದು ಖ್ಯಾತ ನಿರ್ದೇಶಕನಿಗೆ ಸುಳ್ಳು ಹೇಳಿದ್ದ ಅದಾ ಶರ್ಮಾ
Adha Sharma
 ಶ್ರೀಲಕ್ಷ್ಮೀ ಎಚ್
| Edited By: |

Updated on: Mar 07, 2025 | 6:13 PM

Share

ಬಾಲಿವುಡ್ ನಟಿ ಅದಾ ಶರ್ಮಾ (Adah Sharma) ಅತ್ಯುತ್ತಮ ಕಲಾವಿದರಲ್ಲಿ ಒಬ್ಬರು. ‘1920’, ‘ಹಸೀ ತೋ ಫಸೀ, ‘ದಿ ಕೇರಳ ಸ್ಟೋರಿ’ ರೀತಿಯ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಪುನೀತ್ ರಾಜ್​ಕುಮಾರ್ (Puneeth Rajkumar) ಜೊತೆ ‘ರಣವಿಕ್ರಮ’ ಸಿನಿಮಾ ಕೂಡ ಮಾಡಿರೋದು ಗೊತ್ತೇ ಇದೆ. ಇವರು ಆಫರ್ ಗಿಟ್ಟಿಸಿಕೊಳ್ಳಲು ಒಂದು ಸುಳ್ಳನ್ನು ಹೇಳಿದ್ದರು. ತಾವು ಸ್ಟಾರ್ ಗಾಯಕ ಅನು ಮಲಿಕ್ ಅವರ ಮಗ ಎಂದು ಹೇಳಿಕೊಂಡಿದ್ದರು. ಅಷ್ಟಕ್ಕೂ ಆಗಿದ್ದೇನು ಎನ್ನುವುದನ್ನು ನೋಡೋಣ.

ಇತ್ತೀಚೆಗೆ ಯೂಟ್ಯೂಬ್​ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ನಟಿ ಅದಾ ಶರ್ಮಾ ಅವರು ಮಾತನಾಡಿದ್ದಾರೆ. ಅವರು ಒಟಿಟಿಯಲ್ಲಿ ಹಿಟ್ ಆದ ‘ಹೀರಾಮಂಡಿ’ ಈವೆಂಟ್ ಒಂದಕ್ಕೆ ತೆರಳಿದ್ದರು. ಅಲ್ಲಿ ಸಂಜಯ್ ಲೀಲಾ ಬನ್ಸಾಲಿ ಅವರನ್ನು ಅದಾ ಶರ್ಮಾ ಅವರು ಮಾತನಾಡಿಸಿದ್ದರು. ಬನ್ಸಾಲಿ ಕನ್​ಫ್ಯೂಸ್ ಆದರು.

ಸಾಮಾನ್ಯವಾಗಿ ಯಾರಾದರೂ ಬಂದು ಮಾತನಾಡಿಸಿದಾಗ ಗೊಂದಲ ಆಗುತ್ತದೆ. ಅವರು ಯಾರು ಇರಬಹುದು ಎನ್ನುವ ಪ್ರಶ್ನೆ ಮೂಡುತ್ತದೆ. ಬನ್ಸಾಲಿಗೂ ಹಾಗೆಯೇ ಆಗಿದೆ. ಆದಾಗ್ಯೂ ಬನ್ಸಾಲಿ ಅವರು ‘ನೀವು ಅನು ಮಲಿಕ್ ಅವರ ಮಗಳಲ್ಲವೇ’ ಎಂದು ಕೇಳಿದರಂತೆ. ‘ನಾನು ಕೆರಳಸ್ಟೋರಿ ರೀತಿಯ ಸಿನಿಮಾ ಮಾಡಿದ್ದೇನೆ ಎಂದು ಹೇಳೋಣ ಎಂದುಕೊಂಡೆ. ಆದರೆ, ಹಾಗೆ ಹೇಳಿಲ್ಲ. ನಾನು ಯೆಸ್ ಎಂದೆ. ಅವರು ತಂದೆ ಹೇಗಿದ್ದಾರೆ ಎಂದು ಕೇಳಿದರು. ನಾನು ಚೆನ್ನಾಗಿದ್ದಾರೆ ಎಂದೆ’ ಎಂದು ಅದಾ ಶರ್ಮಾ ಅವರು ನಕ್ಕಿದ್ದಾರೆ.

ಇದನ್ನೂ ಓದಿ:ಸುಶಾಂತ್ ಫ್ಲ್ಯಾಟ್​ನಲ್ಲಿರೋ ಎನರ್ಜಿ ಎಂಥದ್ದು? ವಿವರಿಸಿದ ಅದಾ ಶರ್ಮಾ

ಅದಾ ಶರ್ಮಾ ಅವರು ‘ದಿ ಕೇರಳ ಸ್ಟೋರಿ’ ಸಿನಿಮಾ ಮಾಡಿದ್ದರು. ಈ ಚಿತ್ರದಲ್ಲಿ ಸಾಕಷ್ಟು ಕರಾಳ ವಿಚಾರಗಳನ್ನು ಹೇಳಲಾಗಿತ್ತು. ಕೇರಳದಲ್ಲಿ ನಡೆದಿದೆ ಎನ್ನಲಾದ ಲವ್ ಜಿಹಾದ್ ವಿಚಾರ ಪ್ರಸ್ತಾಪಿಸಲಾಗಿತ್ತು. ಹಿಂದೂ ಹುಡುಗಿಯರ ಧರ್ಮ ಬದಲಾಯಿಸಿ ಅವರನ್ನು ಐಸಿಸ್​ಗೆ ಸೇರಿಸುವ ಕೆಲಸ ಆಗಿತ್ತು. ಈ ವಿಚಾರವನ್ನು ಸಿನಿಮಾದಲ್ಲಿ ಹೇಳಲಾಗಿತ್ತು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುವುದರ ಜೊತೆ ವಿವಾದವನ್ನೂ ಸೃಷ್ಟಿ ಮಾಡಿತ್ತು.

10 ವರ್ಷಗಳ ಹಿಂದೆ ಅಂದರೆ 2015ರಲ್ಲಿ ರಿಲೀಸ್ ಆದ ‘ರಣ ವಿಕ್ರಮ’ ಸಿನಿಮಾದಲ್ಲಿ ಅದಾ ಅವರು ಪುನೀತ್ ಜೊತೆ ನಟಿಸಿದ್ದರು. ಪುನೀತ್ ಜೊತೆ ಒಳ್ಳೆಯ ಬಾಂಧವ್ಯ ಅವರಿಗೆ ಬೆಳೆದಿತ್ತು.  ಆ ಬಳಿಕ ಅವರು ಕನ್ನಡ ಸಿನಿಮಾ ಮಾಡಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
TV9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ DIG ಬೋರಲಿಂಗಯ್ಯ, ಅರುಣ್ ಯೋಗಿರಾಜ್
TV9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ DIG ಬೋರಲಿಂಗಯ್ಯ, ಅರುಣ್ ಯೋಗಿರಾಜ್
ಹುಬ್ಬಳ್ಳಿ ಪುಷ್ಕರಣಿ ವಿವಾದ: ಪ್ರದೀಪ್ ಶೆಟ್ಟರ್ ಅನೇಕ ನಾಯಕರಿಂದ ಪ್ರತಿಭಟನೆ
ಹುಬ್ಬಳ್ಳಿ ಪುಷ್ಕರಣಿ ವಿವಾದ: ಪ್ರದೀಪ್ ಶೆಟ್ಟರ್ ಅನೇಕ ನಾಯಕರಿಂದ ಪ್ರತಿಭಟನೆ
ಬಾಂಗ್ಲಾ ಅಕ್ರಮ ವಲಸಿಗರ ಕಾಟ; ಅರೆಸ್ಟ್ ಆದವ್ರ ಹಿನ್ನೆಲೆ ಏನು?
ಬಾಂಗ್ಲಾ ಅಕ್ರಮ ವಲಸಿಗರ ಕಾಟ; ಅರೆಸ್ಟ್ ಆದವ್ರ ಹಿನ್ನೆಲೆ ಏನು?