AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪಾಕಿಸ್ತಾನದ ನಿಜ ಮುಖ ಬಯಲು ಮಾಡ್ತೀನಿ, ಆಗ ನಿಮಗೆ ಗೊತ್ತಾಗುತ್ತೆ’; ಗಾಯಕನ ಎಚ್ಚರಿಕೆ

ಅದ್ನಾನ್ ಸಮಿ ಅವರ ಈ ಪೋಸ್ಟ್​​ಗೆ ಅನೇಕರು ಬೆಂಬಲ ಸೂಚಿಸಿದ್ದಾರೆ. ‘ಭಾರತೀಯರು ನಿಮ್ಮೊಂದಿಗೆ ಇದ್ದಾರೆ. ನೀವು ಭಾರತೀಯರು ಎಂದು ಹೇಳಲು ಹೆಮ್ಮೆ ಆಗುತ್ತಿದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ.  

‘ಪಾಕಿಸ್ತಾನದ ನಿಜ ಮುಖ ಬಯಲು ಮಾಡ್ತೀನಿ, ಆಗ ನಿಮಗೆ ಗೊತ್ತಾಗುತ್ತೆ’; ಗಾಯಕನ ಎಚ್ಚರಿಕೆ
ಅದ್ನಾನ್ ಸಮಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 14, 2022 | 3:55 PM

ಗಾಯಕ ಅದ್ನಾನ್ ಸಮಿ (Adnan Sami) ಅವರು ತಮ್ಮ ಕಂಠದ ಮೂಲಕ ಗುರುತಿಸಿಕೊಂಡಿದ್ದಾರೆ. ಪಾಕಿಸ್ತಾನದ ಪೌರತ್ವ ಹೊಂದಿದ್ದ ಅದ್ನಾನ್ ಸಮಿ ಕೆಲ ವರ್ಷಗಳಿಂದ ಭಾರತದ ಪ್ರಜೆ ಆಗಿದ್ದಾರೆ. ಅವರು ಹುಟ್ಟಿದ್ದು ಇಂಗ್ಲೆಂಡ್​ನಲ್ಲಿ. ಅವರ ತಂದೆ ಪಾಕಿಸ್ತಾನದವರು. ಈಗ ಅವರು ಪಾಕಿಸ್ತಾನದ ಆಡಳಿತದ ಬಗ್ಗೆ ಕಿಡಿಕಾರಿದ್ದಾರೆ. ಪಾಕ್​ನ ಅಸಲಿ ಮುಖವನ್ನು ಬಹಿರಂಗ ಮಾಡುವ ಬಗ್ಗೆ ಅವರು ಎಚ್ಚರಿಕೆ ನೀಡಿದ್ದಾರೆ. ತಾವು ನೀಡುವ ಹೇಳಿಕೆ ಅನೇಕರಿಗೆ ಶಾಕ್ ತರಲಿದೆ ಎಂದು ಕೂಡ ಹೇಳಿದ್ದಾರೆ.

‘ಪಾಕಿಸ್ತಾನದ ಬಗ್ಗೆ ನನಗೆ ಯಾಕೆ ತಿರಸ್ಕಾರ ಮನೋಭಾವನೆ ಇದೆ ಎಂದು ಎಲ್ಲರೂ ಕೇಳುತ್ತಾರೆ. ಆದರೆ, ನನ್ನ ಜತೆ ಉತ್ತಮವಾಗಿರುವ ಪಾಕಿಸ್ತಾನದ ಜನರ ಬಗ್ಗೆ ಯಾವುದೇ ದ್ವೇಷ ಭಾವನೆ ಇಲ್ಲ. ನನ್ನನ್ನು ಯಾರೆಲ್ಲ ಪ್ರೀತಿಸುತ್ತಾರೋ ಅವರ ಬಗ್ಗೆ ನನಗೂ ಪ್ರೀತಿ ಇದೆ’ ಎಂದಿದ್ದಾರೆ ಅವರು.

‘ನನಗೆ ಪಾಕಿಸ್ತಾನದ ಆಡಳಿತದ ಬಗ್ಗೆ ದ್ವೇಷ ಇದೆ. ನನ್ನನ್ನು ನಿಜವಾಗಿಯೂ ತಿಳಿದಿರುವವರಿಗೆ ಪಾಕಿಸ್ತಾನದ ಆಡಳಿತ ನನಗೆ ಏನು ಮಾಡಿದೆ ಅನ್ನೋದು ಗೊತ್ತು. ಅದುವೇ ನಾನು ಪಾಕ್ ತೊರೆಯಲು ಪ್ರಮುಖ ಕಾರಣ’ ಎಂದಿದ್ದಾರೆ ಅವರು.

ಇದನ್ನೂ ಓದಿ
Image
‘ಗುಡ್​ ಬೈ’ ಹೇಳಿದ ಖ್ಯಾತ ಗಾಯಕ ಅದ್ನಾನ್ ಸಮಿ: ಫ್ಯಾನ್ಸ್​ ವಲಯದಲ್ಲಿ ಆತಂಕ
Image
Mani Ratnam: ನಿರ್ದೇಶಕ ಮಣಿರತ್ನಂಗೆ ಕೊರೊನಾ ಪಾಸಿಟಿವ್​; ಖಾಸಗಿ ಆಸ್ಪತ್ರೆಗೆ ದಾಖಲು
Image
Breaking News: ಹಲವು ಸೂಪರ್ ಹಿಟ್ ಹಾಡುಗಳನ್ನು ನೀಡಿದ ಖ್ಯಾತ ಗಾಯಕ ಭೂಪಿಂದರ್ ಸಿಂಗ್ ನಿಧನ
Image
ಗಾಯಕ​ ಅದ್ನಾನ್​​ ಸಮಿ ಹೆಸರಲ್ಲಿದೆ ವಿಶೇಷ ದಾಖಲೆ

‘ಪಾಕಿಸ್ತಾನ ನನ್ನನ್ನು ಹೇಗೆ ಟ್ರೀಟ್ ಮಾಡಿದೆ ಎನ್ನುವ ವಿಚಾರವನ್ನು ಶೀಘ್ರದಲ್ಲೇ ಎಕ್ಸ್​​ಪೋಸ್ ಮಾಡುತ್ತೇನೆ. ಆಗ ನಿಮಗೆ ಗೊತ್ತಾಗುತ್ತದೆ. ಈ ವಿಚಾರ ಅನೇಕರಿಗೆ ಶಾಕ್ ನೀಡಬಹುದು. ನಾನು ಈ ವಿಚಾರದಲ್ಲಿ ಹಲವು ವರ್ಷಗಳಿಂದ ಮೌನವಾಗಿದ್ದೆ. ಇದಕ್ಕೆ ಹಲವು ಕಾರಣಗಳು ಇದ್ದವು. ಆದರೆ, ಸರಿಯಾದ ಸಮಯ ನೋಡಿ ಎಲ್ಲರಿಗೆ ಎಲ್ಲವನ್ನೂ ಹೇಳುತ್ತೇನೆ’ ಎಂದಿದ್ದಾರೆ ಅದ್ನಾನ್ ಸಮಿ.

ಅದ್ನಾನ್ ಸಮಿ ಅವರ ಈ ಪೋಸ್ಟ್​​ಗೆ ಅನೇಕರು ಬೆಂಬಲ ಸೂಚಿಸಿದ್ದಾರೆ. ‘ಭಾರತೀಯರು ನಿಮ್ಮೊಂದಿಗೆ ಇದ್ದಾರೆ. ನೀವು ಭಾರತೀಯರು ಎಂದು ಹೇಳಲು ಹೆಮ್ಮೆ ಆಗುತ್ತಿದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ.

ಅದ್ನಾನ್ ಸಮಿ ಅವರು 2016ರಲ್ಲಿ ಭಾರತದ ಪೌರತ್ವ ಪಡೆದರು. ಅದಕ್ಕೂ ಮೊದಲು ಅವರು ಪಾಕಿಸ್ತಾನದ ಪೌರತ್ವ ಹೊಂದಿದ್ದರು. ಆದರೆ, ಅದನ್ನು ಅವರು ಹಿಂದಿರುಗಿಸಿದರು. 2020ರಲ್ಲಿ ಅದ್ನಾನ್​ ಸಮಿಗೆ ಪದ್ಮಶ್ರೀ ನೀಡಿ ಗೌರವಿಸಲಾಯಿತು.

ಇದನ್ನೂ ಓದಿ: ‘ಗುಡ್​ ಬೈ’ ಹೇಳಿದ ಖ್ಯಾತ ಗಾಯಕ ಅದ್ನಾನ್ ಸಮಿ: ಫ್ಯಾನ್ಸ್​ ವಲಯದಲ್ಲಿ ಆತಂಕ

ಅದ್ನಾನ್ ಸಮಿ ಅವರು ಫಿಟ್​​ನೆಸ್ ವಿಚಾರದಲ್ಲೂ ಗಮನ ಸೆಳೆಯುತ್ತಾರೆ. ಈ ಮೊದಲು ಅವರು ಮಿತಿಮೀರಿದ ದೇಹದ ತೂಕ ಹೊಂದಿದ್ದರು. ಹಲವು ವರ್ಷಗಳ ಶ್ರಮ ಹಾಕಿ ಅವರು ದೇಹದ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಈ ವಿಚಾರದಲ್ಲಿ ಅವರು ಅನೇಕರಿಗೆ ಮಾದರಿ ಆಗಿದ್ದಾರೆ.

ಆರ್​​​ಸಿಬಿ ಅಭಿಮಾನಿಗಳು ವಿಧಾನಸೌಧ ಬಳಿ ಅವಾಂತರ ಮಾಡಿದ್ದು ಅಷ್ಟಿಷ್ಟಲ್ಲ
ಆರ್​​​ಸಿಬಿ ಅಭಿಮಾನಿಗಳು ವಿಧಾನಸೌಧ ಬಳಿ ಅವಾಂತರ ಮಾಡಿದ್ದು ಅಷ್ಟಿಷ್ಟಲ್ಲ
ವಿಯೆಟ್ನಾಂನ ಬೈಕ್ ಅಪಘಾತದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವು
ವಿಯೆಟ್ನಾಂನ ಬೈಕ್ ಅಪಘಾತದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವು
ಆಟೋಚಾಲಕನಿಗೆ ತನ್ನ ಫೋನ್ ಕಳುವು ಗೊತ್ತಾಗಿದ್ದು ಕಳ್ಳನನ್ನು ಹಿಡಿದ ನಂತರ!
ಆಟೋಚಾಲಕನಿಗೆ ತನ್ನ ಫೋನ್ ಕಳುವು ಗೊತ್ತಾಗಿದ್ದು ಕಳ್ಳನನ್ನು ಹಿಡಿದ ನಂತರ!
ಕಾಲ್ತುಳಿತದ ನಡುವೆ ನೂರರು ಮೊಬೈಲ್‌ ಎಗರಿಸಿದ ಕಳ್ಳರು...!
ಕಾಲ್ತುಳಿತದ ನಡುವೆ ನೂರರು ಮೊಬೈಲ್‌ ಎಗರಿಸಿದ ಕಳ್ಳರು...!
ಉಚಿತ ಪಾಸ್​ಗಳನ್ನು ವಿತರಿಸಿದ್ದಕ್ಕೆ ಕಾಲ್ತುಳಿತದ ಘಟನೆ ಸಂಭವಿಸಿದೆ: ವಕೀಲ
ಉಚಿತ ಪಾಸ್​ಗಳನ್ನು ವಿತರಿಸಿದ್ದಕ್ಕೆ ಕಾಲ್ತುಳಿತದ ಘಟನೆ ಸಂಭವಿಸಿದೆ: ವಕೀಲ
ಎರಡೆರಡು ಕಡೆ ಸತ್ಕಾರ ಸಮಾರಂಭ ಏರ್ಪಡಿಸುವ ಅಗತ್ಯವೇನಿತ್ತು? ಚಲವಾದಿ
ಎರಡೆರಡು ಕಡೆ ಸತ್ಕಾರ ಸಮಾರಂಭ ಏರ್ಪಡಿಸುವ ಅಗತ್ಯವೇನಿತ್ತು? ಚಲವಾದಿ
ತಮ್ಮ ಮನೆಯಲ್ಲಿ ಸಿಂಧೂರ ಸಸಿ ನೆಟ್ಟ ಪ್ರಧಾನಿ ಮೋದಿ; ಏನಿದರ ವಿಶೇಷತೆ?
ತಮ್ಮ ಮನೆಯಲ್ಲಿ ಸಿಂಧೂರ ಸಸಿ ನೆಟ್ಟ ಪ್ರಧಾನಿ ಮೋದಿ; ಏನಿದರ ವಿಶೇಷತೆ?
ಅರ್​ಸಿಬಿ ಆಟಗಾರರ ವಿಕ್ಟರಿ ಪರೇಡ್ ನೋಡಲು ಅಕ್ಷತಾರನ್ನು ಕರೆತಂದಿದ್ದ ಪತಿ
ಅರ್​ಸಿಬಿ ಆಟಗಾರರ ವಿಕ್ಟರಿ ಪರೇಡ್ ನೋಡಲು ಅಕ್ಷತಾರನ್ನು ಕರೆತಂದಿದ್ದ ಪತಿ
ಆರ್​ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ: ಚಂದನ್ ಶೆಟ್ಟಿ ಹೇಳಿದ್ದೇನು?
ಆರ್​ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ: ಚಂದನ್ ಶೆಟ್ಟಿ ಹೇಳಿದ್ದೇನು?
ಸರ್ಕಾರದ ತಪ್ಪಿನಿಂದಾಗಿ ಅನೇಕ ಜನ ಪ್ರಾಣ ಕಳೆದುಕೊಂಡರು: ಹಿರಿಯ ನಾಗರಿಕ
ಸರ್ಕಾರದ ತಪ್ಪಿನಿಂದಾಗಿ ಅನೇಕ ಜನ ಪ್ರಾಣ ಕಳೆದುಕೊಂಡರು: ಹಿರಿಯ ನಾಗರಿಕ