
ನಟಿ ಐಶ್ವರ್ಯಾ ರೈ (Aishwarya Rai) ಭಾಗವಹಿಸುವವರೆಗೂ ವಿಶ್ವವಿಖ್ಯಾತ ಕಾನ್ ಚಲನಚಿತ್ರೋತ್ಸವ ಅಪೂರ್ಣ ಎಂದು ಹೇಳುವುದು ಅತಿಶಯೋಕ್ತಿಯಾಗುವುದಿಲ್ಲ. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಕಾನ್ ರೆಡ್ ಕಾರ್ಪೆಟ್ ಮೇಲೆ ಆಕರ್ಷಕ ಶೈಲಿಯಲ್ಲಿ ಆಗಮಿಸುತ್ತಾರೆ. ಆದರೆ ಐಶ್ವರ್ಯಾ ಅವರಷ್ಟು ಗಮನ ಯಾರಿಗೂ ಸಿಗುವುದಿಲ್ಲ. ಈ ವರ್ಷವೂ ಐಶ್ವರ್ಯಾ ತಮ್ಮ ಮಗಳೊಂದಿಗೆ ಚಲನಚಿತ್ರೋತ್ಸವವನ್ನು ತಲುಪಿದರು. ಅವರಿಬ್ಬರ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ನೆಟ್ಟಿಗರು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಈ ವಿಡಿಯೋದಲ್ಲಿ ಆರಾಧ್ಯಳನ್ನು ಐಶ್ವರ್ಯಾ ಹಿಡಿದಿರುವ ರೀತಿಗೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ರೆಡ್ ಕಾರ್ಪೆಟ್ಗೆ ಸಿದ್ಧವಾದ ನಂತರ ಐಶ್ವರ್ಯಾ ತನ್ನ ಕೋಣೆಯಿಂದ ಹೊರಬರುತ್ತಾರೆ. ಈ ಬಾರಿ ಅವರ ಮಗಳು ಆರಾಧ್ಯ ಕೂಡ ಅವರೊಂದಿಗೆ ಇದ್ದಾರೆ. ಹೋಟೆಲ್ ಕೋಣೆಯಿಂದ ಹೊರಬಂದ ನಂತರವೂ ಐಶ್ವರ್ಯಾ ಅವರು ಆರಾಧ್ಯಳ ಕೈಯನ್ನು ಒಂದು ಕ್ಷಣವೂ ಬಿಡಲಿಲ್ಲ. ಅವರು ಮಗಳ ಕೈಯನ್ನು ಕೈಯಲ್ಲಿ ಹಿಡಿದುಕೊಂಡು ನಡೆದಿದ್ದಾರೆ. ಆರಾಧ್ಯ ತನ್ನ ತಾಯಿಯನ್ನು ಪ್ರೀತಿಯಿಂದ ಮುದ್ದಿಸಿದ್ದಾಳೆ. ಆರಾಧ್ಯ ಸಣ್ಣವರಂತೆ ವರ್ತಿಸಿದ್ದು ಸ್ಪಷ್ಟವಾಗಿ ಕಂಡು ಬಂತು. ಕೆಲವರು ಐಶ್ವರ್ಯಾ ಕೈ ಹಿಡಿದು ನಡೆದು ಬಂದಿದ್ದನ್ನು ಟೀಕಿಸಿದ್ದಾರೆ.
बेटी आराध्या पर प्यार लुटातीं ऐश्वर्या राय का #Cannes2025 से वीडियो वायरल#AishwaryaRaiBachchan #aaradhyabachchan #CannesFilmFestival pic.twitter.com/IdYlfDr7dr
— NBT Entertainment (@NBTEnt) May 26, 2025
‘ಅವರು ಮಗುವಲ್ಲ. ಆರಾಧ್ಯಗೆ 14 ವರ್ಷ’ ಎಂದು ಒಬ್ಬರು ಬರೆದಿದ್ದಾರೆ. ‘ನಿಜವಾಗಿಯೂ ಸಮಸ್ಯೆ ಏನು? 10 ವರ್ಷದ ಹುಡುಗಿ ಕೂಡ ಸಂವೇದನಾಶೀಲವಾಗಿ ವರ್ತಿಸುತ್ತಾಳೆ. ಆದರೆ ಅಮ್ಮ ಯಾಕೆ ಇಷ್ಟೊಂದು ಅತಿಯಾಗಿ ರಕ್ಷಿಸುತ್ತಿದ್ದಾರೆ?’ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಆರಾಧ್ಯಳನ್ನು ಪ್ರತಿಯೊಂದು ಕಾರ್ಯಕ್ರಮಕ್ಕೂ ಐಶ್ವರ್ಯಾ ಕರೆದುಕೊಂಡು ಹೋಗಿದ್ದಕ್ಕಾಗಿ ನೆಟ್ಟಿಗರು ಅವರನ್ನು ಟ್ರೋಲ್ ಮಾಡಿದ್ದಾರೆ. ‘ಅವಳು ಶಾಲೆಗೆ ಹೋಗುವುದಿಲ್ಲವೇ, ಪ್ರತಿ ಬಾರಿಯೂ ನಿಮ್ಮ ಜೊತೆ ಬರುವುದು ಏಕೆ’ ಎಂದು ಕೆಲವರು ಕೇಳಿದ್ದಾರೆ.
ಇದನ್ನೂ ಓದಿ: ಕಾನ್ ಚಿತ್ರೋತ್ಸವದಲ್ಲಿ ಐಶ್ವರ್ಯಾ ರೈ ಬಚ್ಚನ್ ಆಕರ್ಷಕ ಲುಕ್
ಏತನ್ಮಧ್ಯೆ, ಕಾನ್ ಚಲನಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ಐಶ್ವರ್ಯಾ ಅವರ ಲುಕ್ ವಿಶ್ವಾದ್ಯಂತ ಮಾಧ್ಯಮಗಳ ಗಮನ ಸೆಳೆಯಿತು. ದಂತದ ಬಣ್ಣದ ಸೀರೆ, ಅದರ ಮೇಲೆ ರೇಷ್ಮೆ ದುಪಟ್ಟಾ, ಕುತ್ತಿಗೆಗೆ ಮಾಣಿಕ್ಯ ಹಾರ ಇವೆಲ್ಲವುಗಳಿಗಿಂತ ಹೆಚ್ಚಾಗಿ ಅವರ ನೋಟ ಗಮನ ಸೆಳೆದಿದೆ. ಐಶ್ವರ್ಯಾ ಅವರ ಬಳೆಗಳಲ್ಲಿರುವ ಸಿಂಧೂರವು ಬಿಸಿ ಚರ್ಚೆಯ ವಿಷಯವಾಗಿತ್ತು. ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ್’ ಅನ್ನು ನಡೆಸಿತು, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿತು. ಅದೇ ರೀತಿ, ಐಶ್ವರ್ಯಾ ‘ಕಾನ್’ ರೆಡ್ ಕಾರ್ಪೆಟ್ ಮೇಲೆ ತಮ್ಮ ಬಳೆಗೆ ಸಿಂಧೂರ ಹಚ್ಚಿಕೊಳ್ಳುವ ಮೂಲಕ ದಿಟ್ಟ ಸಂದೇಶವನ್ನು ರವಾನಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.