AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Akshay Kumar: 30 ಸಾವಿರ ರೂಪಾಯಿ ಬೆಲೆಯ ಬ್ಯಾಗ್​ ಧರಿಸಿದ್ದೇ ತಪ್ಪಾಯ್ತಾ? ಹಿಗ್ಗಾಮುಗ್ಗಾ ಟ್ರೋಲ್​ ಆದ ಅಕ್ಷಯ್​ ಕುಮಾರ್​

Akshay Kumar Bag: ಅಕ್ಷಯ್​ ಕುಮಾರ್​ ಧರಿಸಿದ ಬ್ಯಾಗ್​ ವಿಶೇಷವಾಗಿದೆ. ಅದರಲ್ಲಿ ಐರನ್​ ಮ್ಯಾನ್​ ಮುಖವಿದೆ. ಅದಕ್ಕೆ ಎಲ್​ಇಡಿ ಲೈಟ್​ ಕೂಡ ಅಳವಡಿಕೆ ಆಗಿದೆ. ಅದನ್ನು​ ಕಂಡು ಅನೇಕರಿಗೆ ಅಚ್ಚರಿಗೆ ಆಗಿದೆ.

Akshay Kumar: 30 ಸಾವಿರ ರೂಪಾಯಿ ಬೆಲೆಯ ಬ್ಯಾಗ್​ ಧರಿಸಿದ್ದೇ ತಪ್ಪಾಯ್ತಾ? ಹಿಗ್ಗಾಮುಗ್ಗಾ ಟ್ರೋಲ್​ ಆದ ಅಕ್ಷಯ್​ ಕುಮಾರ್​
ಅಕ್ಷಯ್​ ಕುಮಾರ್​ ಬ್ಯಾಗ್​
ಮದನ್​ ಕುಮಾರ್​
|

Updated on: May 30, 2023 | 6:29 PM

Share

ನಟ ಅಕ್ಷಯ್​ ಕುಮಾರ್​ (Akshay Kumar) ಅವರಿಗೆ ಈಗ ಟೈಮ್​ ಚೆನ್ನಾಗಿಲ್ಲ ಎನ್ನಬಹುದು. ಇತ್ತೀಚೆಗೆ ಅವರು ಮಾಡಿದ ಯಾವ ಚಿತ್ರವೂ ಗೆಲ್ಲುತ್ತಿಲ್ಲ. ಅದೂ ಸಾಲದೆಂಬಂತೆ ಮತ್ತೆ ಮತ್ತೆ ಟ್ರೋಲ್​ ಆಗುತ್ತಿದ್ದಾರೆ ಕೂಡ. ಚಿಕ್ಕ ಪುಟ್ಟ ಕಾರಣಕ್ಕೂ ಅವರನ್ನು ಟೀಕೆ ಮಾಡಲಾಗುತ್ತಿದೆ. ಈಗ ಅವರು ದುಬಾರಿ ಬೆಲೆಯ ಬ್ಯಾಗ್​ ಧರಿಸಿದ್ದಕ್ಕೆ ಟ್ರೋಲ್​ (Akshay Kumar Troll) ಆಗಿದ್ದಾರೆ. ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುವ ಅಕ್ಷಯ್​ ಕುಮಾರ್​ ಅವರು ಐಷಾರಾಮಿ ಜೀವನ ನಡೆಸುತ್ತಾರೆ. ಇತ್ತೀಚೆಗೆ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಆ ವೇಳೆ ಅವರು ಧರಿಸಿದ್ದ ಬ್ಯಾಗ್​ (Akshay Kumar Bag) ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಈ ಬ್ಯಾಗ್​ ಬೆಲೆ 30 ಸಾವಿರ ರೂಪಾಯಿ. ಇಷ್ಟು ದುಬಾರಿ ಬ್ಯಾಗ್​ ಅವಶ್ಯಕತೆ ಇದೆಯೇ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ‘ನಿರ್ಮಾಪಕರಿಗೆ ನೂರಾರು ಕೋಟಿ ರೂಪಾಯಿ ನಷ್ಟ ಮಾಡುವ ಅಕ್ಷಯ್​ ಕುಮಾರ್​ ಈಗ ಶೋಕಿ ಜೀವನ ನಡೆಸುತ್ತಿದ್ದಾರೆ’ ಎಂದೆಲ್ಲ ಕಮೆಂಟ್​ ಮಾಡಲಾಗುತ್ತಿದೆ.

ಅಕ್ಷಯ್​ ಕುಮಾರ್​ ಧರಿಸಿದ ಬ್ಯಾಗ್​ ವಿಶೇಷವಾಗಿದೆ. ಅದರಲ್ಲಿ ಐರನ್​ ಮ್ಯಾನ್​ ಮುಖವಿದೆ. ಅದಕ್ಕೆ ಎಲ್​ಇಡಿ ಲೈಟ್​ ಕೂಡ ಅಳವಡಿಕೆ ಆಗಿದೆ. ಈ ಬ್ಯಾಕ್​ಪ್ಯಾಕ್​ ಕಂಡು ಅನೇಕರಿಗೆ ಅಚ್ಚರಿಗೆ ಆಗಿದೆ. ಅದರ ಬೆಲೆ ಎಷ್ಟಿರಬಹುದು ಎಂದು ಗೂಗಲ್​ನಲ್ಲಿ ಹುಡುಕಾಡುವ ಪ್ರಯತ್ನ ನಡೆದಿದೆ. ಈ ಬ್ಯಾಗ್​ನ ಬೆಲೆ 30 ಸಾವಿರ ರೂಪಾಯಿ ಎಂದು ಗೊತ್ತಾದ ಕೂಡಲೇ ಬಹುತೇಕರು ಹೌಹಾರಿದ್ದಾರೆ. ಇದು ದುಂದುವೆಚ್ಚ ಎಂದೆಲ್ಲ ಟ್ರೋಲ್​ ಮಾಡಲಾಗುತ್ತಿದೆ. ಆದರೆ ಅಪ್ಪಟ ಅಭಿಮಾನಿಗಳು ಅಕ್ಷಯ್​ ಕುಮಾರ್​ ಪರ ನಿಂತಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ, ಅಕ್ಷಯ್​ ಕುಮಾರ್​ ಅವರು ಇತ್ತೀಚೆಗೆ ‘ಶಂಕರ’ ಸಿನಿಮಾದ ಶೂಟಿಂಗ್​ನಲ್ಲಿ ಭಾಗಿ ಆಗಿದ್ದರು. ಇದರಲ್ಲಿ ನಾಯಕಿಯಾಗಿ ಅನನ್ಯಾ ಪಾಂಡೆ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಬಗ್ಗೆ ಅವರು ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ಸಾಕಷ್ಟು ಗೌಪ್ಯವಾಗಿಯೇ ಎಲ್ಲ ಕೆಲಸಗಳನ್ನು ಮುಗಿಸಲಾಗುತ್ತಿದೆ. ಇದಲ್ಲದೇ ಹಲವು ಚಿತ್ರಗಳು ಅವರ ಕೈಯಲ್ಲಿವೆ. ‘ಸೂರರೈ ಪೋಟ್ರು’ ಹಿಂದಿ ರಿಮೇಕ್​, ‘ಬಡೆಮಿಯಾ ಚೋಟೆ ಮಿಯಾ’, ‘ಓಹ್​ ಮೈ ಗಾಡ್​ 2’, ‘ವೇಡಾತ್​ ಮರಾಠೆ ವೀರ್​ ದೌಡಲೇ ಸಾಥ್​’, ‘ದ ಗ್ರೇಡ್​ ಇಂಡಿಯನ್​ ರೆಸ್ಕ್ಯೂ’ ಮುಂತಾದ ಸಿನಿಮಾಗಳು ಒಂದರಹಿಂದೊಂದು ಬಿಡುಗಡೆ ಆಗಲಿವೆ.

ಇದನ್ನೂ ಓದಿ: Akshay Kumar: ಸೋಲಿನ ನೋವು ಮರೆತು ಪೊಲೀಸರ ಜೊತೆ ವಾಲಿಬಾಲ್​ ಆಡಿದ ನಟ ಅಕ್ಷಯ್​ ಕುಮಾರ್​; ವಿಡಿಯೋ ವೈರಲ್​

2022ರ ವರ್ಷ ಅಕ್ಷಯ್​ ಕುಮಾರ್​ ಪಾಲಿಗೆ ನೀರಸವಾಗಿತ್ತು. ಅವರು ನಟಿಸಿದ ಯಾವ ಚಿತ್ರಗಳೂ ಗೆಲ್ಲಲಿಲ್ಲ. ಕೊನೇ ಪಕ್ಷ 2023ರಲ್ಲಾದರೂ ಅವರು ಗೆಲುವಿನ ಖಾತೆ ತೆರೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಕೂಡ ಸಾಧ್ಯವಾಗಲಿಲ್ಲ. ಅವರು ನಟಿಸಿದ ‘ಸೆಲ್ಫೀ’ ಸಿನಿಮಾ ಫೆಬ್ರವರಿಯಲ್ಲಿ ತೆರೆಕಂಡು ಸೋತಿತು. ಮುಂಬರುವ ಚಿತ್ರಗಳ ಮೂಲಕವಾದರೂ ಅವರಿಗೆ ಯಶಸ್ಸು ಸಿಗಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ