AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋತ ಸಿನಿಮಾವನ್ನು ಗೆಲ್ಲಿಸಲು ಅಕ್ಷಯ್​ ಕುಮಾರ್​ ಪ್ಲ್ಯಾನ್​; ಒಂದು ಟಿಕೆಟ್​ಗೆ ಇನ್ನೊಂದು ಫ್ರೀ

ಸತ್ಯ ಘಟನೆಯನ್ನು ಆಧರಿಸಿ ‘ಮಿಷನ್​ ರಾಣಿಗಂಜ್​’ ಸಿನಿಮಾ ಸಿದ್ಧವಾಗಿದೆ. ಈ ಮೊದಲು ಇಂಥ ಕಥೆಗಳನ್ನು ಹೊಂದಿರುವ ಸಿನಿಮಾ ಮಾಡಿ ಅಕ್ಷಯ್​ ಕುಮಾರ್ ಗೆಲುವು ಕಂಡಿದ್ದರು. ಆದರೆ ಈಗ ಅವರ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ. ‘ಮಿಷನ್​ ರಾಣಿಗಂಜ್​’ ಸಿನಿಮಾ ಈವರೆಗೂ ಗಳಿಸಿದ್ದು ಕೇವಲ 18 ಕೋಟಿ ರೂಪಾಯಿ ಮಾತ್ರ.

ಸೋತ ಸಿನಿಮಾವನ್ನು ಗೆಲ್ಲಿಸಲು ಅಕ್ಷಯ್​ ಕುಮಾರ್​ ಪ್ಲ್ಯಾನ್​; ಒಂದು ಟಿಕೆಟ್​ಗೆ ಇನ್ನೊಂದು ಫ್ರೀ
ಅಕ್ಷಯ್​ ಕುಮಾರ್​
ಮದನ್​ ಕುಮಾರ್​
|

Updated on: Oct 15, 2023 | 11:19 AM

Share

ನಟ ಅಕ್ಷಯ್​ ಕುಮಾರ್​ (Akshay Kumar) ಅವರು ಮೊದಲಿನ ಚಾರ್ಮ್​ಗೆ ಮರಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಒಂದು ಕಾಲದಲ್ಲಿ ಅವರು ನಟಿಸಿದ ಸಿನಿಮಾಗಳು ಉತ್ತಮವಾಗಿ ಬಿಸ್ನೆಸ್​ ಮಾಡುತ್ತಿದ್ದವು. ಆದರೆ ಅವಸರದಲ್ಲಿ ಸಿನಿಮಾ ಮಾಡುವ ಅವರ ಪಾಲಿಸಿಯಿಂದಾಗಿ ಗುಣಮಟ್ಟದ ಚಿತ್ರ ನೀಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ಆ ಕಾರಣದಿಂದಲೇ ಅಕ್ಷಯ್​ ಕುಮಾರ್ ಆಗಾಗ ಟ್ರೋಲ್​ ಆಗುತ್ತಾರೆ. ಇತ್ತೀಚೆಗೆ ಅವರು ನಟಿಸಿದ ‘ಮಿಷನ್​ ರಾಣಿಗಂಜ್​’ (Mission Raniganj) ಸಿನಿಮಾ ಬಿಡುಗಡೆಯಾಗಿ ನೀರಸ ಗಳಿಕೆ ಮಾಡಿದೆ. ಹಾಗಾಗಿ ಚಿತ್ರವನ್ನು ಹೇಗಾದರೂ ಗೆಲ್ಲಿಸಬೇಕು ಎಂದು ಬೇರೆ ಬೇರೆ ತಂತ್ರಗಳನ್ನು ರೂಪಿಸಲಾಗಿದೆ. ಈಗ ಒಂದು ಟಿಕೆಟ್​ ಖರೀದಿಸಿದರೆ ಇನ್ನೊಂದು ಟಿಕೆಟ್​ ಉಚಿತ (Buy One Get One Free) ಎಂದು ಘೋಷಿಸಲಾಗಿದೆ. ಈ ಮೂಲಕವಾದರೂ ಸಿನಿಮಾಗೆ ಪ್ರೇಕ್ಷಕರು ಬರಲಿ ಎಂಬುದು ಚಿತ್ರತಂಡದ ಆಶಯ.

ಅಕ್ಟೋಬರ್​ 13ರಂದು ‘ರಾಷ್ಟ್ರೀಯ ಸಿನಿಮಾ ದಿನ’ ಆಚರಿಸಲಾಯಿತು. ಅಂದು ಎಲ್ಲ ಸಿನಿಮಾಗಳ ಟಿಕೆಟ್​ ಬೆಲೆಯನ್ನು ತಗ್ಗಿಸಲಾಗಿತ್ತು. ಅದರ ಪರಿಣಾಮವಾಗಿ ‘ಮಿಷನ್​ ರಾಣಿಗಂಜ್​’ ಚಿತ್ರಕ್ಕೆ ಅಂದಾಜು 5 ಕೋಟಿ ರೂಪಾಯಿ ಕಲೆಕ್ಷನ್​ ಆಗಿತ್ತು. ಇದರಿಂದ ಖುಷಿಯಾಗಿರುವ ಚಿತ್ರತಂಡ ಈಗ ‘ಬೈ ಒನ್​ ಗೆಟ್​ ಒನ್​ ಫ್ರೀ’ ಆಫರ್​ ನೀಡಿದೆ. ಅಕ್ಟೋಬರ್​ 14 ಮತ್ತು 15ರಂದು ಮಾತ್ರ ಈ ಅವಕಾಶ ಲಭ್ಯವಿದೆ. ‘ಬುಕ್​ ಮೈ ಶೋ’ ಮೂಲಕ ಟಿಕೆಟ್​ ಖರೀದಿಸಿದರೆ ಈ ಆಫರ್​ ಸಿಗಲಿದೆ. ಇದರಿಂದ ಚಿತ್ರದ ಕಲೆಕ್ಷನ್​ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಬೇರೆ ಹೀರೋಗಳ ಸಿನಿಮಾ ಸಾವಿರ ಕೋಟಿ ರೂ. ಗಳಿಸಿದ್ದಕ್ಕೆ ಅಕ್ಷಯ್​ ಕುಮಾರ್​ ಹೇಳೋದೇನು?

ರಿಯಲ್​ ಘಟನೆಗಳನ್ನು ಆಧರಿಸಿ ‘ಮಿಷನ್​ ರಾಣಿಗಂಜ್​’ ಸಿನಿಮಾ ಸಿದ್ಧವಾಗಿದೆ. ಈ ಮೊದಲು ಇಂಥ ಕಥೆಗಳನ್ನು ಹೊಂದಿರುವ ಸಿನಿಮಾ ಮಾಡಿ ಅಕ್ಷಯ್​ ಕುಮಾರ್ ಗೆಲುವು ಕಂಡಿದ್ದರು. ಆದರೆ ಈಗ ಅಂಥ ಪ್ರಯತ್ನಗಳಿಗೆ ಫಲ ಸಿಕ್ಕುತ್ತಿಲ್ಲ. ‘ಮಿಷನ್​ ರಾಣಿಗಂಜ್​’ ಸಿನಿಮಾ ಅಕ್ಟೋಬರ್​ 6ರಂದು ಬಿಡುಗಡೆ ಆಯಿತು. 9 ದಿನ ಕಳೆದರೂ ಈ ಸಿನಿಮಾ ಗಳಿಸಿದ್ದು ಕೇವಲ 18 ಕೋಟಿ ರೂಪಾಯಿ. ಅಕ್ಷಯ್​ ಕುಮಾರ್​ ಅವರಂತಹ ಸ್ಟಾರ್​ ನಟರ ಸಿನಿಮಾಗೆ ಇದು ತೀರಾ ಕಳಪೆ ಕಲೆಕ್ಷನ್​. ‘ಬೈ ಒನ್​ ಗೆಟ್​ ಒನ್​ ಫ್ರೀ’ ಆಫರ್​ನಿಂದ ಚಿತ್ರಕ್ಕೆ ಎಷ್ಟು ಅನುಕೂಲ ಆಗಲಿದೆ ಎಂಬುದು ಸದ್ಯದಲ್ಲೇ ತಿಳಿಯಲಿದೆ.

ಇದನ್ನೂ ಓದಿ: ಅಕ್ಷಯ್​ ಕುಮಾರ್​ಗೆ ಯಾವುದೇ ಧರ್ಮದ ಮೇಲೆ ನಂಬಿಕೆ ಇಲ್ಲ; ಹಾಗಾದ್ರೆ ಅವರ ನಿಲುವು ಏನು?

ಮಲ್ಟಿಪ್ಲೆಕ್ಸ್​ಗಳಲ್ಲಿ ಟಿಕೆಟ್​ ಬೆಲೆ ದುಬಾರಿ ಆಗಿರುತ್ತದೆ ಎಂಬ ಕಾರಣಕ್ಕೆ ಅನೇಕರು ಸಿನಿಮಾ ನೋಡಲು ಹಿಂದೇಟು ಹಾಕುತ್ತಾರೆ. ಆಫರ್​ ಬೆಲೆಯಲ್ಲಿ ಟಿಕೆಟ್​ ನೀಡಿದರೆ ಅಂಥವರು ಖಂಡಿತವಾಗಿಯೂ ಮಲ್ಟಿಪ್ಲೆಕ್ಸ್​ಗೆ ಬರುತ್ತಾರೆ. ಈ ವರ್ಷ ಅನೇಕ ಸಿನಿಮಾಗಳು ಈ ತಂತ್ರವನ್ನು ಪ್ರಯೋಗಿಸಿವೆ. ‘ಡ್ರೀಮ್​ ಗರ್ಲ್ 2’, ‘ದಿ ವ್ಯಾಕ್ಸಿನ್​ ವಾರ್​’, ‘ಸ್ಪೈಡರ್​ ಮ್ಯಾನ್​’, ‘ಜವಾನ್​’ ಚಿತ್ರಗಳು ಕೂಡ ಈ ಆಫರ್​ ನೀಡಿದ್ದವು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಟಿವಿ9 ಕನ್ನಡ ಡಿಜಿಟಲ್​ ವಾಟ್ಸ್ಯಾಪ್​ ಚಾನಲ್​ ಫಾಲೋ ಮಾಡಿ https://whatsapp.com/channel/0029Va59SztJ93wRPiKKuF1U

ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ