AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amitabh Bachchan: ಸಾಲದ ಸುಳಿಗೆ ಸಿಲುಕಿದ್ದ ಅಮಿತಾಭ್​ ಬಚ್ಚನ್​ ಮತ್ತೆ ಗೆದ್ದು ತೋರಿಸಿದ್ದೇ ಒಂದು ಸ್ಫೂರ್ತಿಯ ಕಥೆ

Amitabh Bachchan 80th birthday: ಸ್ಟಾರ್​ ಆಗಿ ಮೆರೆದ ಬಳಿಕವೂ ಅಮಿತಾಭ್​ ಬಚ್ಚನ್​ ಅವರಿಗೆ ತೀರಾ ಕಷ್ಟದ ಸಂದರ್ಭ ಎದುರಾಗಿತ್ತು. ನಿರ್ಮಾಪಕರ ಮನೆಗೆ ಹೋಗಿ ‘ದಯವಿಟ್ಟು ಒಂದೇ ಒಂದು ಅವಕಾಶ ಕೊಡಿ’ ಎಂದು ಅವರು ಬೇಡಿಕೊಂಡರು.

Amitabh Bachchan: ಸಾಲದ ಸುಳಿಗೆ ಸಿಲುಕಿದ್ದ ಅಮಿತಾಭ್​ ಬಚ್ಚನ್​ ಮತ್ತೆ ಗೆದ್ದು ತೋರಿಸಿದ್ದೇ ಒಂದು ಸ್ಫೂರ್ತಿಯ ಕಥೆ
ಅಮಿತಾಭ್ ಬಚ್ಚನ್
TV9 Web
| Edited By: |

Updated on:Oct 11, 2022 | 12:10 PM

Share

ನಟ ಅಮಿತಾಭ್​ ಬಚ್ಚನ್​ (Amitabh Bachchan) ಅವರು 80ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ವಿಶ್ವಾದ್ಯಂತ ಇರುವ ಅಭಿಮಾನಿಗಳು ಇಂದು (ಅ.11) ಅವರ ಹುಟ್ಟುಹಬ್ಬ (Amitabh Bachchan Birthday) ಆಚರಿಸುತ್ತಿದ್ದಾರೆ. 80ನೇ ವಯಸ್ಸಿನಲ್ಲೂ ಅಮಿತಾಭ್​ ಬಚ್ಚನ್​ ಅವರು ದಣಿವರಿಯದ ಯುವಕನಂತೆ ಕೆಲಸ ಮಾಡುತ್ತಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಎಷ್ಟೋ ಜನರಿಗೆ ಅವರೇ ಸ್ಫೂರ್ತಿ. ಅವರ ಅಭಿನಯಕ್ಕೆ ಮನಸೋಲದವರೇ ಇಲ್ಲ. ಹಾಗಂತ ಅಮಿತಾಭ್​ ಬಚ್ಚನ್​ ಸಾಗಿ ಬಂದ ಹಾದಿ ತುಂಬ ಸುಲಭವಾಗಿಯೇನೂ ಇರಲಿಲ್ಲ. ಅನೇಕ ಕಷ್ಟಗಳನ್ನು ದಾಟಿಕೊಂಡು ಅವರು ಮುಂದೆ ಬಂದಿದ್ದಾರೆ. ಒಮ್ಮೆಯಂತೂ ಅವರು ಎಲ್ಲವನ್ನೂ ಕಳೆದುಕೊಂಡು ಸಂಪೂರ್ಣ ಸೋತ ಸ್ಥಿತಿಗೆ ತಲುಪಿದ್ದರು. ಆ ಕಷ್ಟದ ದಿನಗಳನ್ನು ಎದುರಿಸಿ ಅವರು ಮತ್ತೆ ಗೆದ್ದು ತೋರಿಸಿದ್ದೇ ಒಂದು ಸ್ಫೂರ್ತಿಯ ಕಥೆ.

ಅದು 1999ರ ಸಮಯ. ಹಲವಾರು ಸಿನಿಮಾ, ಜಾಹೀರಾತುಗಳಲ್ಲಿ ನಟಿಸಿ ಫೇಮಸ್​ ಆಗಿದ್ದರೂ ಕೂಡ ಅಮಿತಾಭ್​ ಬಚ್ಚನ್​ ಅವರು ಬಿಸ್ನೆಸ್​ನಲ್ಲಿ ಸೋತರು. ಅವರ ‘ಅಮಿತಾಭ್​ ಬಚ್ಚನ್​ ಕಾರ್ಪೊರೇಷನ್​ ಲಿಮಿಟೆಡ್​’ ಕಂಪನಿ ಭಾರಿ ನಷ್ಟ ಅನುಭವಿಸಿತು. ಸಾಲ ಕೊಟ್ಟವರು ಬಂದು ಮನೆ ಬಳಿ ನಿಲ್ಲುವಂತಾಯಿತು. ಕುಟುಂಬದವರಿಗೆ ಬೆದರಿಕೆ ಬಂದವು. ಆ ಸಮಯದಲ್ಲಿ ಅಮಿತಾಭ್ ಬಚ್ಚನ್​ ಚಿಂತೆಗೆ ಒಳಗಾಗಿದ್ದರು. ಅಂಥ ಕಷ್ಟದ ಸಂದರ್ಭದಲ್ಲಿಯೂ ಅಮಿತಾಭ್​ ಬಚ್ಚನ್​ ಅವರು ಸೋಲು ಒಪ್ಪಿಕೊಳ್ಳಲಿಲ್ಲ. ಕೆಲಸದ ಮೂಲಕವೇ ಮತ್ತೆ ಎದ್ದು ನಿಲ್ಲುವ ಮನಸ್ಸು ಮಾಡಿದರು.

ಅಲ್ಲಿಯವರೆಗಿನ 44 ವರ್ಷಗಳ ವೃತ್ತಿಜೀವನದಲ್ಲಿ ಅಮಿತಾಭ್​ ಬಚ್ಚನ್​ ಅವರಿಗೆ ಆ ರೀತಿಯ ಕಷ್ಟ ಎಂದೂ ಬಂದಿರಲಿಲ್ಲ. ಸೀದಾ ಅವರು ನಿರ್ಮಾಪಕ ಯಶ್​ ಚೋಪ್ರಾ ನಿವಾಸಕ್ಕೆ ಹೋದರು. ದಯವಿಟ್ಟು ಅವಕಾಶ ಕೊಡಿ ಎಂದು ಬೇಡಿಕೊಂಡರು. ಆಗ ಶಾರುಖ್​ ಖಾನ್​ ಹೀರೋ ಆಗಿದ್ದ ‘ಮೊಹಬ್ಬತೇ’ ಸಿನಿಮಾದಲ್ಲಿ ಬಚ್ಚನ್​ ಅವರಿಗೆ ಒಂದು ಪಾತ್ರ ಸಿಕ್ಕಿತು. ಅಲ್ಲಿಂದ ಅವರ ಬದುಕು ಮತ್ತೆ ಬದಲಾಯಿತು. ತಮ್ಮ ವಯಸ್ಸಿಗೆ ಹೊಂದುವಂತಹ ಪಾತ್ರಗಳನ್ನು ಮಾಡುತ್ತ ಅವರು ಮುನ್ನುಗ್ಗಲು ಆರಂಭಿಸಿದರು.

ಇದನ್ನೂ ಓದಿ
Image
ಸಿದ್ದಗಂಗಾ ಶ್ರೀಗಳ ಪಾತ್ರದಲ್ಲಿ ಅಮಿತಾಭ್ ಬಚ್ಚನ್​?; ಸಿದ್ಧವಾಗುತ್ತಿದೆ ಮಿನಿ ಸಿನಿ ಸೀರಿಸ್​
Image
ಅಮಿತಾಭ್​ ಬಚ್ಚನ್​ ಸಿನಿಮಾಗೆ ತಡೆಕೋರಿ ಅರ್ಜಿ ಸಲ್ಲಿಸಿದ ವ್ಯಕ್ತಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್​
Image
79ರ ಪ್ರಾಯದ ಅಮಿತಾಭ್​ ಆರೋಗ್ಯದ ಬಗ್ಗೆ ಮೂಡಿದೆ ಆತಂಕ; ಒಂದೇ ಟ್ವೀಟ್​ನಿಂದ ಗಾಬರಿಗೊಳಿಸಿದ ಬಿಗ್​ ಬಿ
Image
ಅಮಿತಾಭ್​ ಬಚ್ಚನ್​ ವ್ಯಕ್ತಿತ್ವ ಎಂಥದ್ದು? ಇಂಚಿಂಚು ವಿವರಿಸಿದ ರಶ್ಮಿಕಾ ಮಂದಣ್ಣ

ಆ ಬಳಿಕ ತಮ್ಮ ಪಾಲಿಗೆ ಬಂದ ಎಲ್ಲ ಅವಕಾಶವನ್ನೂ ಅವರು ಒಪ್ಪಿಕೊಳ್ಳಲು ಶುರು ಮಾಡಿದರು. ಒಂದೊಂದೇ ಸಾಲ ತೀರಿಸುತ್ತಾ ಬಂದರು. ಕಳೆದುಕೊಂಡಿದ್ದ ಎಲ್ಲವನ್ನೂ ಮರಳಿ ಪಡೆದರು. ಈಗಲೂ ಅವರು ಬಹುಬೇಡಿಕೆಯ ಕಲಾವಿದನಾಗಿ ತಮ್ಮ ಚಾರ್ಮ್​ ಉಳಿಸಿಕೊಂಡಿದ್ದಾರೆ.

ಇಳಿ ವಯಸ್ಸಿನಲ್ಲೂ ಪ್ರತಿ ದಿನ ಕೆಲಸ ಮಾಡುವ ಮೂಲಕ ಕೋಟ್ಯಂತರ ಜನರಿಗೆ ಅಮಿತಾಭ್ ಬಚ್ಚನ್​ ಅವರು ಮಾದರಿ ಆಗಿದ್ದಾರೆ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಅವರ ಜೊತೆ ಸಿನಿಮಾ ಮಾಡಬೇಕು ಎಂದು ಎಷ್ಟೋ ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಕಾಯುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:10 pm, Tue, 11 October 22

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?