AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯೋಧ್ಯೆಯಲ್ಲಿ ಜಾಗ ಖರೀದಿಗೆ ರಾತ್ರೋರಾತ್ರಿ 15 ಕೋಟಿ ರೂಪಾಯಿ ಕೊಟ್ಟಿದ್ದ ಅಮಿತಾಭ್ ಬಚ್ಚನ್

ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅಯೋಧ್ಯೆಯಲ್ಲಿ ಜಾಗ ಖರೀದಿಸಿದ ಮೊದಲ ಸೆಲೆಬ್ರಿಟಿ. ರಾಮಮಂದಿರ ಉದ್ಘಾಟನೆಗೂ ಮುನ್ನವೇ 'ದಿ ಸರಯೂ' ಪ್ರಾಜೆಕ್ಟ್‌ನಲ್ಲಿ 15,000 ಚದರ ಅಡಿ ಭೂಮಿ ಕೊಂಡಿದ್ದರು. ಅಭಿನಂದನ್ ಲೋಧಾ ಪ್ರಕಾರ, ಅರ್ಧರಾತ್ರಿ ಬಿಗ್ ಬಿ ಕರೆ ಮಾಡಿ ತಮ್ಮ ಯುಪಿ ಮೂಲವನ್ನು ಹೇಳಿ ಅಯೋಧ್ಯೆಯಲ್ಲಿ ಆಸ್ತಿ ಖರೀದಿಸುವ ಆಸಕ್ತಿ ವ್ಯಕ್ತಪಡಿಸಿದ್ದರು.

ಅಯೋಧ್ಯೆಯಲ್ಲಿ ಜಾಗ ಖರೀದಿಗೆ ರಾತ್ರೋರಾತ್ರಿ 15 ಕೋಟಿ ರೂಪಾಯಿ ಕೊಟ್ಟಿದ್ದ ಅಮಿತಾಭ್ ಬಚ್ಚನ್
ಅಮಿತಾಭ್
ರಾಜೇಶ್ ದುಗ್ಗುಮನೆ
|

Updated on: Jul 08, 2026 | 8:49 AM

Share

ಮುಖ್ಯಾಂಶಗಳು

  • ಅರ್ಧರಾತ್ರಿಯಲ್ಲಿ ಕರೆ ಮಾಡಿ ಹೂಡಿಕೆ ಮಾಡಿದ್ದ ಅಮಿತಾಭ್
  • ಅಯೋಧ್ಯೆಯಲ್ಲಿ ಅಮಿತಾಭ್ ಬಚ್ಚನ್ ಆಸ್ತಿ ವಿಸ್ತರ
  • ಅಯೋಧ್ಯೆಯಲ್ಲಿ ರಣಬೀರ್ ಕಪೂರ್ ಕೂಡ ಇದೆ

ಬಾಲಿವುಡ್‌ ನಟ ಅಮಿತಾಭ್ ಬಚ್ಚನ್ ಅವರು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಜಾಗ ಖರೀದಿಸಿದ ಮೊದಲ ಸೆಲೆಬ್ರಿಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2024ರ ಜನವರಿಯಲ್ಲಿ ನಡೆದ ರಾಮಮಂದಿರ ಉದ್ಘಾಟನೆಗೂ ಮುನ್ನವೇ ಅವರು ಅಯೋಧ್ಯೆಯ ‘ದಿ ಸರಯೂ’ ಪ್ರಾಜೆಕ್ಟ್‌ನಲ್ಲಿ 15,000 ಚದರ ಅಡಿಯ ಜಾಗ ಖರೀದಿಸಿದ್ದರು. ಅಂದಿನಿಂದ ಇಂದಿನವರೆಗೂ ಅವರು ಅಯೋಧ್ಯೆಯಲ್ಲಿ ಆಸ್ತಿಯನ್ನು ವಿಸ್ತರಿಸುತ್ತಲೇ ಇದ್ದಾರೆ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ‘ದಿ ಹೌಸ್ ಆಫ್ ಅಭಿನಂದನ್ ಲೋಧಾ’ ಸಂಸ್ಥೆಯ ಸಂಸ್ಥಾಪಕ ಅಭಿನಂದನ್ ಲೋಧಾ ಅವರು, ಅಮಿತಾಭ್ ಹೇಗೆ ತಾವಾಗಿಯೇ ಕರೆ ಮಾಡಿ ಅಯೋಧ್ಯೆಯಲ್ಲಿ ಜಾಗ ಖರೀದಿಸಿದರು ಎಂಬ ಸ್ವಾರಸ್ಯಕರ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.

ಅರ್ಧರಾತ್ರಿ ಬಂದ ಬಿಗ್ ಬಿ ಫೋನ್ ಕಾಲ್!

ಅಭಿನಂದನ್ ಲೋಧಾ ಅವರು ಮಾಧ್ಯಮವೊಂದರ ಜೊತೆ ಮಾತನಾಡುತ್ತಾ 2023ರಲ್ಲಿ ನಡೆದ ಆ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಅಂದು ಅಭಿನಂದನ್ ಆಸ್ಟ್ರೇಲಿಯಾದಲ್ಲಿದ್ದರು. ಅಲ್ಲಿನ ಸಮಯ ಬೆಳಗಿನ ಜಾವ 3 ಗಂಟೆಗೆ ಅಮಿತಾಭ್ ಅವರಿಂದ ಕರೆ ಬಂದಿತ್ತು.

‘ನನ್ನ ಫೋನ್‌ಗೆ ಒಂದೆರಡು ಮಿಸ್ಡ್ ಕಾಲ್‌ಗಳು ಬಂದಿದ್ದವು. ಅದರ ಬೆನ್ನಲ್ಲೇ ಒಂದು ಮೆಸೇಜ್ ಕೂಡ ಬಂತು. ಅದರಲ್ಲಿ ನಾನು ಅಮಿತಾಭ್ ಬಚ್ಚನ್, ನಿಮಗೆ ಬಿಡುವಿದ್ದಾಗ ದಯವಿಟ್ಟು ಮರಳಿ ಕರೆ ಮಾಡಿ ಎಂದು ಬರೆಯಲಾಗಿತ್ತು. ಆ ಸಂದೇಶ ನೋಡಿದ ತಕ್ಷಣ ನಾನು ಅಕ್ಷರಶಃ ಎದ್ದು ನಿಂತು ಅವರಿಗೆ ಮರಳಿ ಕರೆ ಮಾಡಿದೆ’ ಎಂದು ಅಭಿನಂದನ್ ಹೇಳಿದ್ದಾರೆ.

ಜಾಗ ಖರೀದಿ ಚಿಂತನೆ

ಅಮಿತಾಭ್ ಬಚ್ಚನ್ ಅವರು ನನಗೆ, ‘ಅಭಿನಂದನ್ ಅವರೇ ನಾನು ಉತ್ತರ ಪ್ರದೇಶದವನು ಮತ್ತು ನನಗೆ ಅಯೋಧ್ಯೆಯಲ್ಲಿ ಜಾಗ ಖರೀದಿಸಬೇಕು ಎಂದರು. ಅದಕ್ಕೆ ನಾನು ಖಂಡಿತವಾಗಿಯೂ ನಿಮಗಾಗಿ ಅದನ್ನು ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದೆ’ ಎಂದಿದ್ದಾರೆ ಅಭಿನಂದನ್. ಅಂದಹಾಗೆ, ಅಮಿತಾಭ್ ಅವರ ಮೂಲ ಉತ್ತರ ಪ್ರದೇಶದ ಪ್ರಯಾಗ್‌ರಾಜ್.

ರಾತ್ರೋರಾತ್ರಿ ಮುಗಿದ 15 ಕೋಟಿಯ ಡೀಲ್

‘ನಾನು ಅವರಿಗೆ, ನಿಮ್ಮೊಂದಿಗೆ ನಾನು ಬೆಲೆಯ ಬಗ್ಗೆ ಹೇಗೆ ತಾನೇ ಮಾತನಾಡಲಿ ಎಂದೆ. ಅವರು ನೇರವಾಗಿ ನನಗೆ 15,000 ಚದರ ಅಡಿ ಜಾಗ ಬೇಕು ಎಂದರು. ನಾನು ಅದಕ್ಕೆ ಸರಿಸುಮಾರು 15 ಕೋಟಿ ರೂಪಾಯಿ ಆಗಬಹುದು ಎಂದು ತಿಳಿಸಿದೆ. ಆಶ್ಚರ್ಯವೆಂದರೆ, ಅದರ ಮರುದಿನವೇ ಅವರು ನನಗೆ 15 ಕೋಟಿ ರೂಪಾಯಿಗಳನ್ನು ಕಳುಹಿಸಿಕೊಟ್ಟರು’ ಎಂದು ಅಭಿನಂದನ್ ನೆನಪಿಸಿಕೊಂಡಿದ್ದಾರೆ.

ಅಯೋಧ್ಯೆಯಲ್ಲಿ ಬಚ್ಚನ್ ಅವರ ಆಸ್ತಿ ವಿವರ

ಅಮಿತಾಭ್ ಬಚ್ಚನ್ ಅವರು ಅಯೋಧ್ಯೆಯಲ್ಲಿ ದೊಡ್ಡ ಮಟ್ಟದ ಹೂಡಿಕೆ ಮಾಡುತ್ತಿದ್ದಾರೆ. ಮೊದಲ ಜಾಗ ಖರೀದಿಸಿದ ನಂತರ, ಅವರು ತಮ್ಮ ತಂದೆಯ ಹೆಸರಿನಲ್ಲಿರುವ ‘ಹರಿವಂಶ ರಾಯ್ ಬಚ್ಚನ್ ಮೆಮೋರಿಯಲ್ ಟ್ರಸ್ಟ್’ ಅಡಿಯಲ್ಲಿ ರಾಮಮಂದಿರದಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿ ಬರೋಬ್ಬರಿ 54,454 ಚದರ ಅಡಿಯ ಬೃಹತ್ ಜಾಗವನ್ನು ಖರೀದಿಸಿದ್ದಾರೆ. ಇದಲ್ಲದೆ, ಮಾರ್ಚ್​​ನಲ್ಲಿ ತಿಹುರಾ ಮಾಝಾ ಪ್ರದೇಶದಲ್ಲಿ 35 ಕೋಟಿ ರೂಪಾಯಿ ನೀಡಿ 2.67 ಎಕರೆ ಭೂಮಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕೆಲಸದ ಒತ್ತಡದಿಂದ ನಿದ್ದೆಯಿಲ್ಲದ ರಾತ್ರಿ ಕಳೆಯುತ್ತಿದ್ದಾರೆ ಅಮಿತಾಭ್ ಬಚ್ಚನ್

ರಣಬೀರ್ ಕಪೂರ್ ಕೂಡ ಮಾಲೀಕ

ಕೇವಲ ಅಮಿತಾಭ್ ಬಚ್ಚನ್ ಮಾತ್ರವಲ್ಲದೆ, ಬಾಲಿವುಡ್‌ನ ಮತ್ತೊಬ್ಬ ಸ್ಟಾರ್ ನಟ ರಣಬೀರ್ ಕಪೂರ್ ಕೂಡ ಪ್ರಭು ಅಯೋಧ್ಯೆಯಲ್ಲಿ ಜಾಗದ ಒಡೆಯನಾಗಿದ್ದಾರೆ. ‘ದಿ ಹೌಸ್ ಆಫ್ ಅಭಿನಂದನ್ ಲೋಧಾ’ ಸಂಸ್ಥೆಯ ಪ್ರೀಮಿಯಂ ಪ್ರಾಜೆಕ್ಟ್ ಆದ ‘ದಿ ಸರಯೂ’ನಲ್ಲೇ ರಣಬೀರ್ ಕೂಡ ಹೂಡಿಕೆ ಮಾಡಿದ್ದಾರೆ. ಅವರು 2,134 ಚದರ ಅಡಿ ವಿಸ್ತೀರ್ಣದ ಜಾಗವನ್ನು ಸುಮಾರು 3.31 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us