Sign In

By signing in or creating an account, you agree with Associated Broadcasting Company's Terms & Conditions and Privacy Policy.

3 ಈಡಿಯಟ್ಸ್ ಚಿತ್ರಕ್ಕೆ ಆಡಿಷನ್ ಕೊಟ್ಟಿದ್ದ ಅನುಷ್ಕಾ ಶರ್ಮಾ; ರಿವೀಲ್ ಆಗಿದ್ದೆಲ್ಲಿ?

Anushka Sharma: ನಟಿ ಅನುಷ್ಕಾ ಶರ್ಮಾ ಕೊಹ್ಲಿಯ ಮದುವೆಯಾಗಿ ಎರಡು ಮಕ್ಕಳ ತಾಯಾದ ಬಳಿಕ ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. ಅನುಷ್ಕಾ ನಾಯಕಿಯಾಗಿ ಮೊದಲು ನಟಿಸಿದ್ದು ಶಾರುಖ್ ಖಾನ್ ನಟನೆಯ ‘ರಬ್ ನೇ ಬನಾದಿ ಜೋಡಿ’ ಸಿನಿಮಾದಲ್ಲಿ. ಅಸಲಿಗೆ ಆಮಿರ್ ಖಾನ್ ನಟನೆಯ ‘3 ಇಡಿಯಟ್ಸ್’ ಸಿನಿಮಾಕ್ಕೂ ಅನುಷ್ಕಾ ಶರ್ಮಾ ಆಡಿಷನ್ ಕೊಟ್ಟಿದ್ದರು. ಆದರೆ ಆಯ್ಕೆ ಆಗಲಿಲ್ಲ.

3 ಈಡಿಯಟ್ಸ್ ಚಿತ್ರಕ್ಕೆ ಆಡಿಷನ್ ಕೊಟ್ಟಿದ್ದ ಅನುಷ್ಕಾ ಶರ್ಮಾ; ರಿವೀಲ್ ಆಗಿದ್ದೆಲ್ಲಿ?
Anushka Sharma
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Feb 18, 2025 | 2:56 PM

ಅನುಷ್ಕಾ ಶರ್ಮಾ ಅವರು ಚಿತ್ರರಂಗದಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅವರು ಮತ್ತೆ ನಟನೆಗೆ ಮರಳೋದು ಅನುಮಾನ ಎಂದೇ ಹೇಳಲಾಗುತ್ತಿದೆ. ಸದ್ಯ ಪತಿ ವಿರಾಟ್ ಕೊಹ್ಲಿ ಜೊತೆ ಸೇರಿ ಅವರು ಲಂಡನ್ನಲ್ಲಿ ಸೆಟಲ್ ಆಗುವ ಪ್ಲ್ಯಾನ್ ನಲ್ಲಿ ಇದ್ದಾರೆ. ಅವರ ಮಕ್ಕಳಿಗೂ ಅಲ್ಲಿಯೇ ಶಿಕ್ಷಣ ಕೊಡಿಸುವ ಆಲೋಚನೆ ಇದೆ. ಹೀಗಿರುವಾಗಲೇ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಒಂದು ಅಚ್ಚರಿಯ ವಿಚಾರ ರಿವೀಲ್ ಮಾಡಿದ್ದರು.

2009ರಲ್ಲಿ ‘3 ಈಡಿಯಟ್ಸ್’ ಸಿನಿಮಾ ಬಂತು. ಈ ಚಿತ್ರದಲ್ಲಿ ಪಿಯಾ ಸಹಸ್ರಬುದ್ಧೆ ಪಾತ್ರವನ್ನು ಮಾಡಲು ಅನುಷ್ಕಾ ಅವರು ಆಡಿಷನ್ ನೀಡಿದ್ದರು. ಆದರೆ, ಅವರು ಸೆಲೆಕ್ಟ್ ಆಗಲೇ ಇಲ್ಲ. ಈ ಪಾತ್ರ ಕರೀನಾ ಕಪೂರ್ ಖಾನ್ ಕೈ ಸೇರಿತ್ತು. ಈ ವಿಚಾರವನ್ನು ‘ಪಿಕೆ’ ಸಿನಿಮಾ ಸಂದರ್ಭದಲ್ಲಿ ಅನುಷ್ಕಾ ರಿವೀಲ್ ಮಾಡಿದ್ದರು.

ಅನುಷ್ಕಾ ಅವರು ಆಡಿಷನ್ ನೀಡಿದ ವಿಡಿಯೋನ ರಾಜ್ಕುಮಾರ್ ಹಿರಾನಿ ಹಾಗೂ ಆಮಿರ್ ಖಾನ್ ಎದುರು ಪ್ರದರ್ಶನ ಮಾಡಲಾಯಿತು. ಅನುಷ್ಕಾ ಅವರು ಅದ್ಭುತವಾಗಿ ನಟಿಸಿದ್ದರು. ಅನುಷ್ಕಾ ಅವರನ್ನು ಏಕೆ ಈ ಪಾತ್ರಕ್ಕೆ ಆಯ್ಕೆ ಮಾಡಿಲ್ಲ ಎಂದು ಆಮಿರ್ ಖಾನ್ ಅವರೇ ಅಚ್ಚರಿಪಟ್ಟಿದ್ದರು. ಈ ಬಗ್ಗೆ ಅವರು ರಾಜ್ಕುಮಾರ್ ಹಿರಾನಿ ಅವರನ್ನು ಕೂಡ ಕೇಳಿದರು.

ಇದನ್ನೂ ಓದಿ:ಕಂಗನಾ ರನೌತ್​ ಸಿನಿಮಾ ನೋಡಿ ಫಿದಾ ಆದ ನಟಿ ಮೃಣಾಲ್ ಠಾಕೂರ್

ರಾಜ್ಕುಮಾರ್ ಹಿರಾನಿ ಅವರಿಗೆ ಈ ವಿಚಾರ ಗೊತ್ತೇ ಇರಲಿಲ್ಲ. ಅವರು ಕೂಡ ಶಾಕ್ ಆದರು. ‘ನಾನು ಅನುಷ್ಕಾನ ಸಂದರ್ಶಿಸಿದ್ದೇನೆ’ ಎಂಬ ರೀತಿಯಲ್ಲಿ ಇತ್ತು ಅವರ ನೋಟ. 2007ರಲ್ಲಿ ಅನುಷ್ಕಾ ಸಂದರ್ಶನ ನೀಡಿದ್ದರು. ಇದಾದ 7 ವರ್ಷಗಳ ಬಳಿಕ ‘ಪಿಕೆ’ ಸಿನಿಮಾ ಬಂದಿತ್ತು. ಹೀಗಾಗಿ, ರಾಜ್ಕುಮಾರ್ ಹಿರಾನಿ ಅವರಿಗೆ ಅದು ನೆನಪಿನಲ್ಲಿ ಇರಲೇ ಇಲ್ಲ.

ಅನುಷ್ಕಾ ಶರ್ಮಾ ಅವರು ‘ರಬ್ ನೇ ಬನಾದಿ ಜೋಡಿ’ (2008) ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಶಾರುಖ್ ಖಾನ್ ಜೊತೆ ಮೊದಲ ಸಿನಿಮಾದಲ್ಲಿ ನಟಿಸಿ ಎಲ್ಲರ ಗಮನ ಸೆಳೆದರು. ಅವರ ಮೊದಲ ಚಿತ್ರವೇ ಹಿಟ್ ಆಗಿದ್ದರಿಂದ ಬಾಲಿವುಡ್ನಲ್ಲಿ ಅವರಿಗೆ ಭದ್ರ ಬುನಾದಿ ಸಿಕ್ಕಂತೆ ಆಯಿತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
ಕಮ್ರಾ ವಿವಾದಾತ್ಮಕ ಶೋ ಬಳಿಕ ಮುಂಬೈ ಕಾಮಿಡಿ ಕ್ಲಬ್‌ ಧ್ವಂಸ ಕಾರ್ಯಾಚರಣೆ
ಕಮ್ರಾ ವಿವಾದಾತ್ಮಕ ಶೋ ಬಳಿಕ ಮುಂಬೈ ಕಾಮಿಡಿ ಕ್ಲಬ್‌ ಧ್ವಂಸ ಕಾರ್ಯಾಚರಣೆ
ಸ್ಪೀಕರ್ ಖಾದರ್ ನಿರ್ಣಯ ಪುನರ್ ಪರಿಶೀಲಿಸಿ ವಾಪಸ್ಸು ಪಡೆಯಬೇಕು: ಕಾಗೇರಿ
ಸ್ಪೀಕರ್ ಖಾದರ್ ನಿರ್ಣಯ ಪುನರ್ ಪರಿಶೀಲಿಸಿ ವಾಪಸ್ಸು ಪಡೆಯಬೇಕು: ಕಾಗೇರಿ