AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನದ 24 ಗಂಟೆಯೂ ಪ್ರದರ್ಶನ ಕಾಣಲಿದೆ ‘ಧುರಂಧರ್ 2’ ಸಿನಿಮಾ

‘ಧುರಂಧರ್ 2’ ಸಿನಿಮಾ ದೇಶದ ಕೆಲವು ಭಾಗಗಳಲ್ಲಿ ದಿನದ 24 ಗಂಟೆಯೂ ಪ್ರದರ್ಶನ ಕಾಣುತ್ತಿದೆ. 4 ಗಂಟೆಯ ರನ್‌ಟೈಮ್ ಹೊಂದಿರುವ ಈ ಚಿತ್ರವು ಅಡ್ವಾನ್ಸ್ ಬುಕಿಂಗ್ ಮೂಲಕ 15 ಲಕ್ಷ ಟಿಕೆಟ್‌ ಮಾರಾಟ ಮಾಡಿದೆ. ಪೇಯ್ಡ್ ಪ್ರೀಮಿಯರ್‌ಗಳಿಂದ ಈಗಾಗಲೇ ₹35 ಕೋಟಿ ಗಳಿಸಿ ಹೊಸ ದಾಖಲೆ ಬರೆದಿದೆ.

ದಿನದ 24 ಗಂಟೆಯೂ ಪ್ರದರ್ಶನ ಕಾಣಲಿದೆ ‘ಧುರಂಧರ್ 2’ ಸಿನಿಮಾ
ಧುರಂಧರ್ 2
ರಾಜೇಶ್ ದುಗ್ಗುಮನೆ
|

Updated on: Mar 17, 2026 | 12:20 PM

Share

‘ಧುರಂಧರ್ 2’ (Dhurandhar 2) ರಿಲೀಸ್ ಆಗೋಕೆ ಕೌಂಟ್​ಡೌನ್ ಶುರುವಾಗಿದೆ. ಮಾರ್ಚ್ 19ಕ್ಕೆ ಸಿನಿಮಾ ರಿಲೀಸ್ ಆಗುತ್ತಿದ್ದರೂ, ಡಿಸೆಂಬರ್ 18ಕ್ಕೆ ಸಿನಿಮಾಗೆ ಪ್ರೀಮಿಯರ್ ಶೋಗಳನ್ನು ಆಯೋಜನೆ ಮಾಡಲಾಗಿದೆ. ಇದಕ್ಕೆ ಬುಕ್ಕಿಂಗ್ ಜೋರಾಗಿದೆ. ಹೀಗಿರುವಾಗಲೇ ಸಿನಿಮಾ ಹೊಸ ಹೊಸ ದಾಖಲೆಗಳನ್ನು ಬರೆಯಲು ರೆಡಿ ಆಗಿದೆ. ಭಾರತದ ಕೆಲ ಭಾಗದಲ್ಲಿ ದಿನದ 24 ಗಂಟೆಯೂ ‘ಧುರಂಧರ್ 2’ಗೆ ಶೋ ನೀಡಲಾಗುತ್ತಿದೆ!

‘ಧುರಂಧರ್ 2’ ಸಿನಿಮಾದ ಅವಧಿ ಸರಿ ಸುಮಾರು ನಾಲ್ಕು ಗಂಟೆ ಇದೆ. ದಿನಕ್ಕೆ ಐದು ಶೋ ಮಾಡಬೇಕು ಎಂದರೆ 20 ಗಂಟೆ ಬೇಕಾಗುತ್ತದೆ. ಇನ್ನು, ಪ್ರತಿ ಶೋನಿಂದ ಶೋಗೆ ಅರ್ಧ ಗಂಟೆ ಗ್ಯಾಪ್ ಕೊಟ್ಟರೂ, ಎರಡೂವರೆ ಹೆಚ್ಚುವರಿಯಾಗಿ ಬೇಕಾಗುತ್ತದೆ. ಇನ್ನು, ಇಂಟರ್​ವಲ್ ಎಲ್ಲಾ ಸೇರಿದರೆ ದಿನದ 24 ಗಂಟೆ ಸಂಪೂರ್ಣವಾಗಿ ಬೇಕಾಗುತ್ತದೆ.

ಇನ್ನು, ಪ್ರತಿ ಶೋಗಳನ್ನು ಸ್ಟ್ರೆಚ್ ಮಾಡಬೇಕಾದ ಪರಿಸ್ಥಿತಿ ಥಿಯೇಟರ್​​ ಅವರಿಗೆ ಬಂದಿದೆ. ಕೆಲವು ಕಡೆಗಳಲ್ಲಿ ದಿನವಿಡೀ ‘ಧುರಂಧರ್ 2’ ಓಡಲಿದೆ. ಮುಂಬೈನ ಪಿವಿಆರ್ ಚಕಲಾ, ಮೂವಿ ಮ್ಯಾಕ್ಸ್ ಸಿಯೋನ್​ ಮೊದಲಾದ ಕಡೆಗಳಲ್ಲಿ ಮುಂಜಾನೆ 1.50ಕ್ಕೆ ಶೋ ಇಡಲಾಗಿದೆ. ಪುಣೆ ಹಾಗೂ ಅಹ್ಮದಾಬಾದ್​​​ನಲ್ಲೂ ಇದೇ ಸ್ಥಿತಿ ಇದೆ. ಅಡ್ವಾನ್ಸ್ ಬುಕಿಂಗ್​​ನಿಂದ ಚಿತ್ರದ 15 ಲಕ್ಷ ಟಿಕೆಟ್ ಮಾರಾಟ ಆಗಿದೆ ಎನ್ನಲಾಗಿದೆ.

ಕಳೆದ 30 ವರ್ಷಗಳಿಂದ ಮುಂಬೈನ ಮರಾಠ ಮಂದಿರದಲ್ಲಿ ದಿನ ನಿತ್ಯ ಬೆಳಿಗ್ಗೆ 11.30ಕ್ಕೆ ‘ದಿಲ್​ವಾಲೆ ದುಲ್ಹನಿಯಾ ಲೇ ಜಾಯೆಂಗೆ’ ಸಿನಿಮಾ ಪ್ರದರ್ಶನ ಕಾಣುತ್ತಾ ಬರುತ್ತಿದೆ. ಆದರೆ, ‘ಧುರಂಧರ್ 2’ ಚಿತ್ರದ ಬೇಡಿಕೆ ಹಾಗೂ ರನ್​​ಟೈಮ್ ಕಾರಣಕ್ಕೆ ‘ಡಿಡಿಎಲ್​​ಜೆ’ ಚಿತ್ರಕ್ಕೆ ಬೆಳಿಗ್ಗೆ ಶೋ ನೀಡಲಾಗಿದೆ.

ಇದನ್ನೂ ಓದಿ: ಅಡ್ವಾನ್ಸ್ ಬುಕಿಂಗ್​​ನಲ್ಲಿಯೇ ನೂರು ಕೋಟಿ ಗಳಿಕೆ ದಾಟಿದ ‘ಧುರಂಧರ್ 2’

ಪೇಡ್ ಪ್ರೀಮಿಯರ್​​​ಗಳಿಂದ ‘ಧುರಂಧರ್ 2’ ಸಿನಿಮಾಗೆ 35 ಕೋಟಿ ರೂಪಾಯಿ ಹರಿದು ಬಂದಿದೆ. ಇದು ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಲಿದೆ. ಈ ಚಿತ್ರದಲ್ಲಿ ರಣವೀರ್ ಸಿಂಗ್, ಧುರಂಧರ್ 2, ಆರ್ ಮಾಧವನ್, ಅರ್ಜುನ್ ರಾಮ್​​ ಪಾಲ್​, ಸಂಜಯ್ ದತ್, ಸಾರಾ ಅರ್ಜುನ್ ಮೊದಲಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮಗನ ಆಸ್ಪತ್ರೆಗೆ ಕರೆದೊಯ್ದಿದ್ದ ಮಹಿಳೆಯ ಬಲಿ ಪಡೆದ ಬಿಎಂಟಿಸಿ ಬಸ್​​
ಮಗನ ಆಸ್ಪತ್ರೆಗೆ ಕರೆದೊಯ್ದಿದ್ದ ಮಹಿಳೆಯ ಬಲಿ ಪಡೆದ ಬಿಎಂಟಿಸಿ ಬಸ್​​
ಗೃಹ ಸಚಿವರಿಗೇ 50 ಲಕ್ಷ ಲಂಚ ಕೊಟ್ಟಿದ್ರಾ ಇನ್ಸ್‌ಪೆಕ್ಟರ್? ಸಂತ್ರಸ್ತೆ ಆರೋಪ
ಗೃಹ ಸಚಿವರಿಗೇ 50 ಲಕ್ಷ ಲಂಚ ಕೊಟ್ಟಿದ್ರಾ ಇನ್ಸ್‌ಪೆಕ್ಟರ್? ಸಂತ್ರಸ್ತೆ ಆರೋಪ
ಕರವೇ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ: ಮುಂಬಡ್ತಿ ಪರೀಕ್ಷೆ ಮುಂದೂಡಿಕೆ
ಕರವೇ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ: ಮುಂಬಡ್ತಿ ಪರೀಕ್ಷೆ ಮುಂದೂಡಿಕೆ
ಲೈಂಗಿಕ ಕಿರುಕುಳ ಆರೋಪ: ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಹೇಳಿದ್ದಿಷ್ಟು
ಲೈಂಗಿಕ ಕಿರುಕುಳ ಆರೋಪ: ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಹೇಳಿದ್ದಿಷ್ಟು
ಕನ್ನಡದಲ್ಲಿ ರೇಲ್ವೆ ಇಲಾಖೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ
ಕನ್ನಡದಲ್ಲಿ ರೇಲ್ವೆ ಇಲಾಖೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ
ಅಡುಗೆ ಮನೆಯಲ್ಲಿ ಹೆಡೆ ಎತ್ತಿ ಕುಳಿತಿದ್ದ ನಾಗಪ್ಪ!
ಅಡುಗೆ ಮನೆಯಲ್ಲಿ ಹೆಡೆ ಎತ್ತಿ ಕುಳಿತಿದ್ದ ನಾಗಪ್ಪ!
ಎಲ್​ಪಿಜಿ ಸಿಲಿಂಡರ್ ಸಮಸ್ಯೆ ಇದ್ರೂ ಇವರಿಗೆ ನೋ ಟೆನ್ಶನ್! ಯಾಕೆ ಗೊತ್ತೇ?
ಎಲ್​ಪಿಜಿ ಸಿಲಿಂಡರ್ ಸಮಸ್ಯೆ ಇದ್ರೂ ಇವರಿಗೆ ನೋ ಟೆನ್ಶನ್! ಯಾಕೆ ಗೊತ್ತೇ?
ಮಹಿಳೆ ಜತೆ ಅಕ್ರಮ ಸಂಬಂಧಕ್ಕಾಗಿ ತಡರಾತ್ರಿ ಕಂಪೌಂಡ್ ಹಾರಿದ್ದ ಪೊಲೀಸ್!
ಮಹಿಳೆ ಜತೆ ಅಕ್ರಮ ಸಂಬಂಧಕ್ಕಾಗಿ ತಡರಾತ್ರಿ ಕಂಪೌಂಡ್ ಹಾರಿದ್ದ ಪೊಲೀಸ್!
‘ವಿಜಯಲಕ್ಷ್ಮೀ ದರ್ಶನ್ಗೆ ಸಿನಿಮಾ ತೋರಿಸೋಕೆ ರೆಡಿ’; ‘ಬಾಸ್’ ನಿರ್ದೇಶಕ
‘ವಿಜಯಲಕ್ಷ್ಮೀ ದರ್ಶನ್ಗೆ ಸಿನಿಮಾ ತೋರಿಸೋಕೆ ರೆಡಿ’; ‘ಬಾಸ್’ ನಿರ್ದೇಶಕ
ಪೂಜೆ, ಪುನಸ್ಕಾರ ಮಾಡುವುದರಿಂದ ಕಷ್ಟಗಳು ನಿವಾರಣೆಯಾಗುತ್ತವಾ?
ಪೂಜೆ, ಪುನಸ್ಕಾರ ಮಾಡುವುದರಿಂದ ಕಷ್ಟಗಳು ನಿವಾರಣೆಯಾಗುತ್ತವಾ?