AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾರುಖ್​ ಪುತ್ರ ಆರ್ಯನ್​ ಲೆನ್ಸ್​ ಬಾಕ್ಸ್​ನಲ್ಲಿ ಇತ್ತು ಡ್ರಗ್ಸ್, ಹುಡುಗಿಯರು ಸ್ಯಾನಿಟರಿ ಪ್ಯಾಡ್​​ ಮಧ್ಯದಲ್ಲಿ ಇಟ್ಟುಕೊಂಡಿದ್ದರು: ಎನ್​ಸಿಬಿ

ಮುಂಬೈ ಐಷಾರಾಮಿ ಹಡಗಿನಲ್ಲಿ ನಡೆದ ರೇವ್​ ಪಾರ್ಟಿ ಪ್ರಕರಣದಲ್ಲಿ ಎನ್​ಸಿಬಿ ಆರ್ಯನ್​ ಖಾನ್​ ಸೇರಿ ಒಟ್ಟು 8 ಮಂದಿಯನ್ನು ಬಂಧಿಸಿದೆ. ಈ ಎಂಟು ಮಂದಿಯಲ್ಲಿ ಆರ್ಯನ್​ ಖಾನ್​ ಸೇರಿ ಇಬ್ಬರನ್ನು ನ್ಯಾಯಾಲಯದ ಎದುರು ಹಾಜರುಪಡಿಸಿತ್ತು.

ಶಾರುಖ್​ ಪುತ್ರ ಆರ್ಯನ್​ ಲೆನ್ಸ್​ ಬಾಕ್ಸ್​ನಲ್ಲಿ ಇತ್ತು ಡ್ರಗ್ಸ್, ಹುಡುಗಿಯರು ಸ್ಯಾನಿಟರಿ ಪ್ಯಾಡ್​​ ಮಧ್ಯದಲ್ಲಿ ಇಟ್ಟುಕೊಂಡಿದ್ದರು: ಎನ್​ಸಿಬಿ
ಆರ್ಯನ್​ ಖಾನ್​
TV9 Web
| Edited By: |

Updated on:Oct 04, 2021 | 9:13 AM

Share

ಐಷಾರಾಮಿ ಹಡಗಿನಲ್ಲಿ ನಡೆಸಲಾಗಿದ್ದ ಐಷಾರಾಮಿ ಡ್ರಗ್ಸ್​ ಪಾರ್ಟಿಯಲ್ಲಿ ಸಿಕ್ಕಿಬಿದ್ದ ಶಾರೂಖ್​ಖಾನ್​ ಪುತ್ರ ಆರ್ಯನ್​ ಖಾನ್ (Aryan Khan)​ ಸದ್ಯ ಮಾದಕದ್ರವ್ಯ ನಿಯಂತ್ರಣ ಮಂಡಳಿ (NCB)ಯ ವಶದಲ್ಲಿದ್ದಾರೆ. ಪುತ್ರನ ಬಂಧನವಾಗುತ್ತಿದ್ದಂತೆ ಶಾರುಖ್​ ಖಾನ್​ ತಮ್ಮ ಪಠಾಣ್​ ಚಿತ್ರದ ಶೂಟಿಂಗ್​ ಕೂಡ ನಿಲ್ಲಿಸಿ, ವಾಪಸ್​ ಮನೆಗೆ ಬಂದಿದ್ದಾರೆ.ಈ ಮಧ್ಯೆ ಆರ್ಯನ್​ಖಾನ್​ ಪರ ವಕೀಲ ಸತೀಶ್​ ಮನಶಿಂಧೆ, ಪಾರ್ಟಿಯಲ್ಲಿ ಭಾಗವಹಿಸಿದ್ದ ಆರ್ಯನ್​ ಬಳಿ ಮಾದಕವಸ್ತುಗಳು ಏನೂ ಸಿಗಲಿಲ್ಲ. ಅವರು ಹಡಗನ್ನು ಪ್ರವೇಶಿಸುವಾಗ ಸ್ಕ್ರೀನಿಂಗ್​ ಮಾಡಲಾಗಿತ್ತು. ಆದರೆ ಏನೂ ಪತ್ತೆಯಾಗಿರಲಿಲ್ಲ ಎಂದು ಕೋರ್ಟ್​ಗೆ ಹೇಳಿದ್ದರು. ಆದರೆ ಈಗ ಆರ್ಯನ್​​ರ ಕಣ್ಣಿನ ಲೆನ್ಸ್​ ಹಾಕುವ ಬಾಕ್ಸ್​ (ಲೆನ್ಸ್​ ಕೇಸ್​​)ನಿಂದ ಡ್ರಗ್ಸ್​ ವಶಪಡಿಸಿಕೊಳ್ಳಲಾಗಿದೆ ಎಂದು ಎನ್​ಸಿಬಿ ಹೇಳಿದ್ದಾಗಿ ವರದಿಯಾಗಿದೆ. 

ಡ್ರಗ್ಸ್​ ಪಾರ್ಟಿಯ ಮೇಲೆ ಎನ್​ಸಿಬಿ ದಾಳಿಯಾದ ಸಂದರ್ಭದಲ್ಲಿ ಆರ್ಯನ್​ ಖಾನ್​ ಸೇರಿ ಇನ್ನಿತರ ಹುಡುಗಿಯರನ್ನೂ ಬಂಧಿಸಲಾಗಿದೆ. ಇವರಲ್ಲಿ ಆರ್ಯನ್​ ಖಾನ್​ ಲೆನ್ಸ್​ ಕೇಸ್​​ನಲ್ಲಿ ಮಾದಕ ದ್ರವ್ಯ ಇದ್ದರೆ, ಬೇರೆ ಕೆಲವು ಮಹಿಳಾ ಆರೋಪಿಗಳ ಸ್ಯಾನಿಟರಿ ಪ್ಯಾಡ್​​, ಮೆಡಿಕಲ್​ ಬಾಕ್ಸ್​​ನಿಂದ ಡ್ರಗ್ಸ್​ ವಶಪಡಿಸಿಕೊಳ್ಳಲಾಗಿದೆ ಎಂದು ಎನ್​ಸಿಬಿ ಹೇಳಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ. ಇದೀಗ ಸಿಕ್ಕಿಬಿದ್ದವರು ಯಾರೂ ತಮ್ಮ ಬ್ಯಾಗ್​ ಅಥವಾ ಜೇಬು ಮತ್ತಿತರ ಕಡೆ ಡ್ರಗ್ಸ್​ ಇಟ್ಟುಕೊಂಡಿರಲಿಲ್ಲ ಎಂದೂ ಹೇಳಿದೆ.

ಇನ್ನು ಆರ್ಯನ್​ ಖಾನ್​ಗೆ ಮಾದಕ ದ್ರವ್ಯದ ನಂಟಿದೆ ಎಂಬುದಕ್ಕೆ ಸಾಕ್ಷಿಯಾಗಿ ಕೆಲವು ವಾಟ್ಸ್​ಆ್ಯಪ್​ ಚಾಟ್​ಗಳೂ ಸಿಕ್ಕಿವೆ ಎನ್ನಲಾಗಿದೆ. ಆರ್ಯನ್​ ಖಾನ್​ ಮತ್ತು ಅವರ ಸ್ನೇಹಿತರು ಡ್ರಗ್ಸ್​ ಪೆಡ್ಲರ್​ಗಳ ಜತೆ ಹಲವು ಬಾರಿ ವಾಟ್ಸ್​ಆ್ಯಪ್​​ನಲ್ಲಿ ಚಾಟ್​  ಮಾಡಿದ್ದು, ಅದನ್ನೆಲ್ಲ ಎನ್​ಸಿಬಿ ವಶಪಡಿಸಿಕೊಂಡಿದೆ. ಇನ್ನು ಐಷಾರಾಮಿ ಹಡಗಿನ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಎನ್​ಸಿಬಿ ಚರಸ್​, ಕೊಕೇನ್​ ಮತ್ತು ಎಂಡಿಎಂಎ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದೆ.

ಎಂಟು ಜನರ ಬಂಧನ ಮುಂಬೈ ಐಷಾರಾಮಿ ಹಡಗಿನಲ್ಲಿ ನಡೆದ ರೇವ್​ ಪಾರ್ಟಿ ಪ್ರಕರಣದಲ್ಲಿ ಎನ್​ಸಿಬಿ ಆರ್ಯನ್​ ಖಾನ್​ ಸೇರಿ ಒಟ್ಟು 8 ಮಂದಿಯನ್ನು ಬಂಧಿಸಿದೆ. ಈ ಎಂಟು ಮಂದಿಯಲ್ಲಿ ಆರ್ಯನ್​ ಖಾನ್​ ಸೇರಿ ಇಬ್ಬರನ್ನು ನ್ಯಾಯಾಲಯದ ಎದುರು ಹಾಜರುಪಡಿಸಿತ್ತು. ಅವರೀಗ ಎನ್​ಸಿಬಿ ಕಸ್ಟಡಿಯಲ್ಲಿಯೇ ಇದ್ದಾರೆ. ಇನ್ನು ಉಳಿದ ಐವರ ವೈದ್ಯಕೀಯ ತಪಾಸಣೆಯೂ ಆಗಬೇಕಿದ್ದು, ಅದಾದ ತಕ್ಷಣವನ್ನೇ ಅವರನ್ನೂ ಕೋರ್ಟ್​ ಎದುರು ಹಾಜರುಪಡಿಸಲಿದೆ.  ಹಾಗೇ, ಎಲ್ಲರೊಂದಿಗೂ ಮುಖಾಮುಖಿ ವಿಚಾರಣೆ ನಡೆಸಲು ಸಿದ್ಧವಾಗಿದೆ.

ಇದನ್ನೂ ಓದಿ: ಶಾರುಖ್​ ಖಾನ್​ಗೆ ಹೆಚ್ಚಿದ ಸಂಕಷ್ಟ; ಡ್ರಗ್ಸ್​ ಕೇಸ್​ನಲ್ಲಿ ಆರ್ಯನ್​ ಖಾನ್​ ಅರೆಸ್ಟ್​​

‘ಕೊರೊನಾ ಹಿನ್ನೆಲೆ ಸರಳವಾಗಿ ದಸರಾ ಆಚರಿಸೋಣ’ ಮೈಸೂರು ದಸರಾ ಆಹ್ವಾನ ಪತ್ರಿಕೆಯಲ್ಲಿ ಸಿಎಂ ಸಂದೇಶ

Published On - 9:06 am, Mon, 4 October 21

Follow Us
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್