AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

21 ವರ್ಷದ ಹಿಂದೆ ಪ್ರಿಯಕರ ಕೊಟ್ಟ ಹೂವು​ ಜೆನಿಲಿಯಾ ಬಳಿ ಇನ್ನೂ ಹೇಗಿದೆ ನೋಡಿ..

ಪ್ರೇಮಿಗಳ ದಿನದ ಈ ಸಂದರ್ಭದಲ್ಲಿ ಸಿನಿಮಾ ತಾರೆಯರ ಪ್ರೀತಿ-ಪ್ರೇಮದ ಬಗ್ಗೆ ಅಭಿಮಾನಿಗಳು ಮಾತನಾಡುತ್ತಿದ್ದಾರೆ. ಜೆನಿಲಿಯಾ ಡಿಸೋಜಾ ಮತ್ತು ರಿತೇಶ್​ ದೇಶಮುಖ್​ ಅವರ ಲವ್​​ಸ್ಟೋರಿಯನ್ನೂ ನೆನಪಿಸಿಕೊಳ್ಳಲಾಗುತ್ತಿದೆ. ಜೆನಿಲಿಯಾಗೆ 21 ವರ್ಷಗಳ ಹಿಂದೆ ರಿತೇಶ್​ ಅವರು ನೀಡಿದ್ದ ಅತ್ಯಮೂಲ್ಯವಾದ ಗಿಫ್ಟ್​ನ ಫೋಟೋ ಈಗ ಮತ್ತೆ ವೈರಲ್​ ಆಗುತ್ತಿದೆ.

21 ವರ್ಷದ ಹಿಂದೆ ಪ್ರಿಯಕರ ಕೊಟ್ಟ ಹೂವು​ ಜೆನಿಲಿಯಾ ಬಳಿ ಇನ್ನೂ ಹೇಗಿದೆ ನೋಡಿ..
ಜೆನಿಲಿಯಾ ಡಿಸೋಜಾ, ರಿತೇಶ್​ ದೇಶಮುಖ್​
ಮದನ್​ ಕುಮಾರ್​
|

Updated on: Feb 14, 2024 | 12:24 PM

Share

ನಟಿ ಜೆನಿಲಿಯಾ ಡಿಸೋಜಾ (Genelia D’souza) ಅವರು ಅನೇಕರಿಗೆ ಮಾದರಿ ಆಗಿದ್ದಾರೆ. ಸಿನಿಮಾದಲ್ಲೂ, ರಿಯಲ್​ ಲೈಫ್​ನಲ್ಲೂ ಅವರನ್ನು ಇಷ್ಟಪಡುವ ಅಪಾರ ಅಭಿಮಾನಿಗಳು ಇದ್ದಾರೆ. ನಟ ರಿತೇಶ್​ ದೇಶಮುಖ್​ ಜೊತೆ ಜೆನಿಲಿಯಾ ಅವರದ್ದು ಚಂದದ ಲವ್​ಸ್ಟೋರಿ. ಅವರಿಬ್ಬರ ಪ್ರೇಮಕಥೆ ಶುರುವಾಗಿದ್ದು 2003ರಲ್ಲಿ. ಆ ಸಂದರ್ಭದಲ್ಲಿ ರಿತೇಶ್ ದೇಶಮುಖ್​ (Riteish Deshmukh) ನೀಡಿದ ಗುಲಾಬಿ ಹೂವನ್ನು ಜೆನಿಲಿಯಾ ಅವರು ಈಗಲೂ ಜೊತೆಯಲ್ಲಿ ಇಟ್ಟುಕೊಂಡಿದ್ದಾರೆ. ಅವರ ಪಾಲಿಗೆ ಈ ಹೂವು ಅಷ್ಟು ಅಮೂಲ್ಯವಾದದ್ದು. ಇಂದು (ಫೆಬ್ರವರಿ 14) ಪ್ರೇಮಿಗಳ ದಿನ (Valentine’s Day). ಈ ಸಂದರ್ಭದಲ್ಲಿ ಸೆಲೆಬ್ರಿಟಿಗಳ ಪ್ರೀತಿ-ಪ್ರೇಮದ ಬಗ್ಗೆ ಫ್ಯಾನ್ಸ್​ ಮಾತನಾಡುತ್ತಿದ್ದಾರೆ. ಜೆನಿಲಿಯಾ-ರಿತೇಶ್​ ಅವರ ಲವ್​​ಸ್ಟೋರಿಯನ್ನೂ ಸೋಶಿಯಲ್​ ಮೀಡಿಯಾದಲ್ಲಿ ಮೆಲುಕು ಹಾಕಲಾಗುತ್ತಿದೆ.

ಜೆನಿಲಿಯಾ ಡಿಸೋಜಾ ನಟಿಸಿದ ಮೊದಲ ಸಿನಿಮಾ ‘ತುಜೆ ಮೇರಿ ಕಸಮ್​’ 2003ರಲ್ಲಿ ಬಿಡುಗಡೆ ಆಯಿತು. ಆ ಸಿನಿಮಾಗೆ ಹೀರೋ ಆಗಿದ್ದವರು ರಿತೇಶ್​ ದೇಶಮುಖ್​. ಅದು ರಿತೇಶ್​ ನಟನೆಯ ಮೊದಲ ಸಿನಿಮಾ ಕೂಡ ಹೌದು. ಖ್ಯಾತ ರಾಜಕಾರಣಿ ವಿಲಾಸ್​ ರಾವ್​ ದೇಶಮುಖ್​ ಅವರ ಪುತ್ರ ರಿತೇಶ್​. ರಾಜಕಾರಣಿಯ ಮಗ ಎಂಬ ಕಾರಣಕ್ಕೆ ರಿತೇಶ್​ ಅವರಿಗೆ ಅಹಂ ಇರಬಹುದು ಎಂದು ಜೆನಿಲಿಯಾ ಅಂದುಕೊಂಡಿದ್ದರು. ಆದರೆ ರಿತೇಶ್​ ಅವರ ಗುಣ ಆ ರೀತಿ ಇರಲಿಲ್ಲ. ಇಬ್ಬರ ನಡುವೆ ಪ್ರೀತಿ ಮೂಡಿತು. ಆ ದಿನಗಳಲ್ಲಿ ಕೆಂಪು ಗುಲಾಬಿ ಹೂವನ್ನು ಜೆನಿಲಿಯಾಗೆ ರಿತೇಶ್​ ನೀಡಿದ್ದರು.

2022ರ ಜೂನ್​ನಲ್ಲಿ ಜೆನಿಲಿಯಾ ಅವರು ಸೋಶಿಯಲ್​ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಪ್ರಶ್ನೋತ್ತರ ನಡೆಸಿದರು. ‘ರಿತೇಶ್ ನಿಮಗೆ ನೀಡಿದ ಬೆಸ್ಟ್​ ಗಿಫ್ಟ್​ ಯಾವುದು’ ಎಂದು ಅಭಿಮಾನಿಯೊಬ್ಬರು ಪ್ರಶ್ನೆ ಕೇಳಿದರು. ಅದಕ್ಕೆ ಉತ್ತರಿಸಿದ ಜೆನಿಲಿಯಾ ಅವರು ಎರಡು ದಶಕಗಳಷ್ಟು ಹಳೆಯದಾದ ಗುಲಾಬಿ ಹೂವನ್ನು ತೋರಿಸಿದ್ದರು! ಪ್ರಿಯಕರ ನೀಡಿದ ಆ ಉಡುಗೊರೆಯನ್ನು ಇಂದಿಗೂ ಅಷ್ಟು ಜೋಪಾನವಾಗಿ ಕಾಪಾಡಿಕೊಂಡಿರುವ ಅವರಿಗೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದರು.

ಇದನ್ನೂ ಓದಿ: ನಟಿ ಜೆನಿಲಿಯಾ ಮತ್ತೆ ಪ್ರೆಗ್ನೆಂಟ್​ ಎಂದವರಿಗೆ ಉತ್ತರ ಕೊಟ್ಟ ರಿತೇಶ್​

2023ರ ಫೆಬ್ರವರಿಯಲ್ಲಿ ರಿತೇಶ್​ ದೇಶಮುಖ್​ ಅವರು ಇದೇ ಗುಲಾಬಿ ಹೂವಿನ ಬಗ್ಗೆ ಮಾತನಾಡಿದ್ದರು. ‘ನಾನು ಆಕೆಗೆ ಒಂದು ಗುಲಾಬಿ ಹೂವು ನೀಡಿದ್ದೆ. ಅದನ್ನು ಇನ್ನೂ ಇಟ್ಟುಕೊಂಡಿದ್ದಾಳೆ. 20 ವರ್ಷ ಆಗಿದೆ. ಅದನ್ನು ನಾವು ಇನ್ನೂ ಇಟ್ಟುಕೊಂಡಿದ್ದೇವೆ’ ಎಂದು ಹೆಮ್ಮೆಯಿಂದ ಹೇಳಿದ್ದರು ರಿತೇಶ್​ ದೇಶಮುಖ್​. ಸುಮಾರು 9 ವರ್ಷಗಳ ಕಾಲ ಪರಸ್ಪರ ಡೇಟಿಂಗ್​ ಮಾಡಿದ ರಿತೇಶ್​ ದೇಶಮುಖ್​ ಮತ್ತು ಜೆನಿಲಿಯಾ ಡಿಸೋಜಾ ಅವರು 2012ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ.

ಇದನ್ನೂ ಓದಿ: ಆಮಿರ್​ ಖಾನ್​ ಜೊತೆ ನಟಿ ಜೆನಿಲಿಯಾ ಡಿಸೋಜಾ ರೊಮ್ಯಾನ್ಸ್​

ರಿತೇಶ್​ ದೇಶಮುಖ್​ ಮತ್ತು ಜೆನಿಲಿಯಾ ಡಿಸೋಜಾ ದಂಪತಿ ಹಿಂದಿ ಹಾಗೂ ಮರಾಠಿ ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿ ಜೆನಿಲಿಯಾ ಫೇಮಸ್​ ಆಗಿದ್ದಾರೆ. 2008ರಲ್ಲಿ ಬಂದ ‘ಸತ್ಯ ಇನ್​ ಲವ್​’ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೂ ಜೆನಿಲಿಯಾ ಕಾಲಿಟ್ಟರು. ಈಗ ಅವರು ಕಿರೀಟಿ ರೆಡ್ಡಿ ನಟನೆಯ ‘ಜೂನಿಯರ್​’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಆ ಮೂಲಕ ಕನ್ನಡಕ್ಕೆ ಕಮ್​ಬ್ಯಾಕ್​ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಶಾಲಾ ಬಸ್‌ನಿಂದ ಇಳಿದು ರಸ್ತೆ ದಾಟುತ್ತಿದ್ದ ಮಗುವಿಗೆ ಬೈಕ್ ಡಿಕ್ಕಿ
ಶಾಲಾ ಬಸ್‌ನಿಂದ ಇಳಿದು ರಸ್ತೆ ದಾಟುತ್ತಿದ್ದ ಮಗುವಿಗೆ ಬೈಕ್ ಡಿಕ್ಕಿ
ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದ ಮಹಿಳೆ; ಸಿಸಿಟಿವಿ ದೃಶ್ಯ ವೈರಲ್
ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದ ಮಹಿಳೆ; ಸಿಸಿಟಿವಿ ದೃಶ್ಯ ವೈರಲ್
ಕೇದಾರನಾಥ ವಿಐಪಿ ದರ್ಶನ; ಬಿಕೆಟಿಸಿ ಮುಖ್ಯಸ್ಥರ ವಿರುದ್ಧ ಅರ್ಚಕರ ಪ್ರತಿಭಟನೆ
ಕೇದಾರನಾಥ ವಿಐಪಿ ದರ್ಶನ; ಬಿಕೆಟಿಸಿ ಮುಖ್ಯಸ್ಥರ ವಿರುದ್ಧ ಅರ್ಚಕರ ಪ್ರತಿಭಟನೆ
ನಿಧಿ ಆಸೆಗೆ ತಾಯಿಯನ್ನೇ ಬಲಿ ಕೊಡಲು ಯತ್ನ!: ಚಾಮರಾಜನಗರದಲ್ಲಿ ಶಾಕಿಂಗ್ ಘಟನೆ
ನಿಧಿ ಆಸೆಗೆ ತಾಯಿಯನ್ನೇ ಬಲಿ ಕೊಡಲು ಯತ್ನ!: ಚಾಮರಾಜನಗರದಲ್ಲಿ ಶಾಕಿಂಗ್ ಘಟನೆ
ಎಕ್ಸಿಟ್ ಪೋಲ್ ಬೆನ್ನಲ್ಲೇ ಬಾಂಗ್ಲಾದೇಶಕ್ಕೆ ನಡುಕ
ಎಕ್ಸಿಟ್ ಪೋಲ್ ಬೆನ್ನಲ್ಲೇ ಬಾಂಗ್ಲಾದೇಶಕ್ಕೆ ನಡುಕ
ಮಳೆ ಬಂದು ನಿಂತರೂ 2 ದಿನದಿಂದ ನಡೆಯುತ್ತಲೇ ಇದೆ ಅಂಡರ್ ಪಾಸ್ ಕ್ಲೀನ್ ಕಾರ್ಯ
ಮಳೆ ಬಂದು ನಿಂತರೂ 2 ದಿನದಿಂದ ನಡೆಯುತ್ತಲೇ ಇದೆ ಅಂಡರ್ ಪಾಸ್ ಕ್ಲೀನ್ ಕಾರ್ಯ
‘ವಸುದೇವ ಕುಟುಂಬ’ ಧಾರಾವಾಹಿ ಸಂಭಾವನೆ ವಿವಾದ: ವಿವರಿಸಿದ ನಟಿ ಚೈತ್ರಾ
‘ವಸುದೇವ ಕುಟುಂಬ’ ಧಾರಾವಾಹಿ ಸಂಭಾವನೆ ವಿವಾದ: ವಿವರಿಸಿದ ನಟಿ ಚೈತ್ರಾ
ಬೆಂಗಳೂರಿನ ಈ ಆಟೋ ಚಾಲಕನಿಗೆ ಆಟೋವೇ ಮನೆ, ಮೆಟ್ರೋ ನಿಲ್ದಾಣವೇ ಆಸರೆ
ಬೆಂಗಳೂರಿನ ಈ ಆಟೋ ಚಾಲಕನಿಗೆ ಆಟೋವೇ ಮನೆ, ಮೆಟ್ರೋ ನಿಲ್ದಾಣವೇ ಆಸರೆ
ಲೋಡ್ ಆಗಿದ್ದ ಬಂದೂಕು ಹಿಡಿದು ಯುವಕರ ಹುಚ್ಚಾಟ! ವಿಡಿಯೋ ವೈರಲ್
ಲೋಡ್ ಆಗಿದ್ದ ಬಂದೂಕು ಹಿಡಿದು ಯುವಕರ ಹುಚ್ಚಾಟ! ವಿಡಿಯೋ ವೈರಲ್
ಇನ್ಫೋಸಿಸ್ ನಾರಾಯಣ ಮೂರ್ತಿ ಹೇಳಿಕೆಗೆ ಹರಿಪ್ರಸಾದ್ ಕೆಂಡಾಮಂಡಲ
ಇನ್ಫೋಸಿಸ್ ನಾರಾಯಣ ಮೂರ್ತಿ ಹೇಳಿಕೆಗೆ ಹರಿಪ್ರಸಾದ್ ಕೆಂಡಾಮಂಡಲ