AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಲ್ಲಿ ಹಾಡೋಕೆ ಅರಿಜಿತ್ ಸಿಂಗ್ ಪಡೆಯೋ ಸಂಭಾವನೆ ಎಷ್ಟು?

Arijit Singh: ಅರಿಜಿತ್ ಸಿಂಗ್ ಭಾರತದ ಅತ್ಯುತ್ತಮ ಸಿನಿಮಾ ಗಾಯಕ. ಅರಿಜಿತ್ ಸಿಂಗ್​ರ ಲೈವ್ ಕಾನ್ಸರ್ಟ್​ಗಳಿಗೆ ಭಾರಿ ಸಂಖ್ಯೆಯ ಜನ ಬರುತ್ತಾರೆ. ಅಂದಹಾಗೆ ಮದುವೆಯಲ್ಲಿ ಹಾಡು ಹಾಡಲು ಎಷ್ಟು ಸಂಭಾವನೆ ಪಡೆಯುತ್ತಾರೆ.

ಮದುವೆಯಲ್ಲಿ ಹಾಡೋಕೆ ಅರಿಜಿತ್ ಸಿಂಗ್ ಪಡೆಯೋ ಸಂಭಾವನೆ ಎಷ್ಟು?
 ಶ್ರೀಲಕ್ಷ್ಮೀ ಎಚ್
| Edited By: |

Updated on: Sep 22, 2024 | 12:17 PM

Share

ಗ್ರ್ಯಾಂಡ್ ಆಗಿ ಮದುವೆ ಆಗಬೇಕು ಎಂಬುದು ಅನೇಕರ ಕನಸು. ಅದೇ ರೀತಿ ಮಕ್ಕಳ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕು ಎಂಬುದು ಕೆಲವರ ಕನಸಾಗಿರುತ್ತದೆ. ದೊಡ್ಡ ಉದ್ಯಮಿಗಳು ಸದಾ ಖ್ಯಾತ ಸೆಲೆಬ್ರಿಟಿಗಳನ್ನು, ಗಾಯಕರನ್ನು ಕರೆಸಿ ಹಾಡಿಸೋ ಟ್ರೆಂಡ್ ಚಾಲ್ತಿಯಲ್ಲಿ ಇದೆ. ಈ ರೀತಿ ಅವರನ್ನು ಕರೆದಾಗ ಅವರು ದೊಡ್ಡ ಮೊತ್ತಕ್ಕೆ ಬೇಡಿಕೆ ಇಡುತ್ತಾರೆ. ಹಾಗಾದರೆ ಅರಿಜಿತ್ ಸಿಂಗ್ ಅವರು ಪ್ರತಿ ಮದುವೆಯಲ್ಲಿ ಭಾಗಿ ಆಗಲು, ದೊಡ್ಡ ಕಾರ್ಯಕ್ರಮ ನೀಡಲು ಎಷ್ಟು ಪಡೆಯುತ್ತಾರೆ ಅನ್ನೋದು ಗೊತ್ತೇ? ಆ ಬಗ್ಗೆ ಇಲ್ಲಿದೆ ವಿವರ.

ಅರಿಜಿತ್ ಸಿಂಗ್ ಅವರು ಅನೇಕ ಕಾನ್ಸರ್ಟ್ ನೀಡುತ್ತಾರೆ. ಅವರು ಸಂಗೀತ ಲೋಕದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅವರನ್ನು ಭೇಟಿ ಮಾಡಬೇಕು ಎಂಬುದು ಅನೇಕರ ಆಸೆ. ಅವರು ಅನೇಕ ಕಡೆಗಳಲ್ಲಿ ಕಾನ್ಸರ್ಟ್ ನೀಡುತ್ತಾರೆ. ಅವರು ಬಾಲಿವುಡ್ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಗಾಯಕರಲ್ಲಿ ಒಬ್ಬರು. ಅರಿಜಿತ್ ಸಿಂಗ್ ಅವರು ಮದುವೆ ಅಥವಾ ಇನ್ನಿತರ ಕಾರ್ಯಕ್ರಮದಲ್ಲಿ ಭಾಗಿ ಆಗಲು 5 ಕೋಟಿ ರೂಪಾಯಿ ಪಡೆಯುತ್ತಾರೆ ಎನ್ನಲಾಗಿದೆ.

ಅರಿಜಿತ್ ಸಿಂಗ್ ಅವರು ರಿಯಾಲಿಟಿ ಶೋಗಳ ಮೂಲಕ ಎಲ್ಲರಿಗೂ ಪರಿಚಿತರಾದರು. ಆ ಬಳಿಕ ಅವರು ಖ್ಯಾತಿ ಹೆಚ್ಚಿಸಿಕೊಂಡರು. ನಂತರ ಅವರಿಗೆ ಸಿನಿಮಾ ಆಫರ್ಗಳು ಬರೋಕೆ ಆರಂಭ ಆದವು. ‘ಸೋಚ್ ನಾ ಸಕೆ’, ‘ಆಯತ್’, ‘ಲಾಲ್ ಇಷ್ಕ್’, ‘ಚನ್ನ ಮೆರೆಯಾ..’, ‘ತುಮ್ ಹಿ ಹೋ’, ಫಿರ್ ಲೇ ಆಯಾ ದಿಲ್’ ಸೇರಿ ಅನೇಕ ಹಿಂದಿ ಹಾಡುಗಳನ್ನು ಹಾಡಿದ್ದರು.

ಇದನ್ನೂ ಓದಿ:Arijit Singh: ಗುಂಪಿನಲ್ಲಿ ಅರಿಜಿತ್​ ಸಿಂಗ್​​ ಕೈ ಎಳೆದ ಮಹಿಳಾ ಅಭಿಮಾನಿ; ಗಾಯಗೊಂಡ ಗಾಯಕನ ವಿಡಿಯೋ ವೈರಲ್​

ಅರಿಜಿತ್ ಸಿಂಗ್ ಅವರು ಕನ್ನಡದಲ್ಲಿ ಕೇವಲ ಎರಡು ಹಾಡನ್ನು ಹಾಡಿದ್ದಾರೆ. 2014ರಲ್ಲಿ ರಿಲೀಸ್ ಆದ ‘ನಿನ್ನಿಂದಲೇ’ ಸಿನಿಮಾದ ‘ಮೌನ ತಾಳಿತೆ..’ ಹಾಡನ್ನು ಹಾಡಿದ್ದಾರೆ. ‘ಬ್ರಹ್ಮಾಸ್ತ್ರ’ ಸಿನಿಮಾದ ಕನ್ನಡ ವರ್ಷನ್ ‘ದೇವ ದೇವ..’ ಹಾಡನ್ನು ಹಾಡಿದ್ದರು.

ಅರಿಜಿತ್ ಸಿಂಗ್ ಅವರು ಇತ್ತೀಚೆಗೆ ಲಂಡನ್ಗೆ ತೆರಳಿದ್ದರು. ಈ ವೇಳೆ ಅವರೇ ಬರೆದ ‘ಪ್ರೊಟೆಸ್ಟ್’ ಹಾಡನ್ನು ಹಾಡಿ ಎಂದು ಕೆಲ ಅಭಿಮಾನಿಗಳು ಬೇಡಿಕೆ ಇಟ್ಟಿದ್ದರು. ಇದರಿಂದ ಸಿಟ್ಟಾದ ಅರಿಜಿತ್ ಸಿಂಗ್ ಅವರು, ‘ಇದು ಸಮಯವಲ್ಲ. ನಾನು ಇಲ್ಲಿ ಬಂದಿರೋದು ಮನರಂಜನೆ ಮಾಡಲು’ ಎಂದು ಹೇಳಿದ್ದರು. ಅವರು ಈ ರೀತಿ ಸಿಟ್ಟಾಗೋದು ತುಂಬಾನೇ ಕಡಿಮೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ