AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಶಾರುಖ್ ಜೊತೆ ಸೇರಿದ್ದಕ್ಕೆ ನನ್ನ ಪರಿಸ್ಥಿತಿ ಮತ್ತಷ್ಟು ಕಠಿಣವಾಯ್ತು’; ನಿರ್ದೇಶಕ

ವಿಶಾಲ್ ಪಂಜಾಬಿ ಅವರು ಬಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ನಿರ್ದೇಶಕನಾಗಿ, ನಿರ್ಮಾಪಕನಾಗಿ ಅವರು ಗಮನ ಸೆಳೆದಿದ್ದಾರೆ. ಅವರು ‘ದಿ ವೆಡ್ಡಿಂಗ್ ಫಿಲ್ಮರ್​’ ಎಂದೇ ಫೇಮಸ್. ಅವರು ತಮ್ಮ ಬಿಸ್ನೆಸ್ ಆರಂಭಿಸುವುದಕ್ಕೂ ಮೊದಲು ಶಾರುಖ್ ಖಾನ್ ಜೊತೆ ಕೆಲಸ ಮಾಡಿದ್ದರು.

‘ಶಾರುಖ್ ಜೊತೆ ಸೇರಿದ್ದಕ್ಕೆ ನನ್ನ ಪರಿಸ್ಥಿತಿ ಮತ್ತಷ್ಟು ಕಠಿಣವಾಯ್ತು’; ನಿರ್ದೇಶಕ
ಶಾರುಖ್ ಖಾನ್
ರಾಜೇಶ್ ದುಗ್ಗುಮನೆ
|

Updated on: Sep 06, 2024 | 12:09 PM

Share

ಶಾರುಖ್ ಖಾನ್ ಹಾಗೂ ಸರ್ಕಾರದ ಮಧ್ಯೆ ಒಳ್ಳೆಯ ಸಂಬಂಧ ಇದೆ. ಅವರು ಸರ್ಕಾರದ ವಿರುದ್ಧ ಮಾತನಾಡಿದವರಲ್ಲ. ವಿವಾದಗಳಿಂದ ಅವರು ಸದಾ ದೂರ ಇರಲು ಬಯಸುತ್ತಾರೆ. ಆದರೆ, ಈ ಮೊದಲು ಹಾಗೆ ಇರಲಿಲ್ಲ. ಶಾರುಖ್ ಖಾನ್ ಅವರು ಆಗಾಗ ಸರ್ಕಾರದ ಕೆಂಗಣ್ಣಿಗೆ ಗುರಿಯಾಗುತ್ತಿದ್ದರು. ಅವರಿಂದಾಗಿ ಕೆಲವರು ತೊಂದರೆ ಅನುಭವಿಸಬೇಕಾಗಿ ಬಂದಿತ್ತು.

ವಿಶಾಲ್ ಪಂಜಾಬಿ ಅವರು ಬಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ನಿರ್ದೇಶಕನಾಗಿ, ನಿರ್ಮಾಪಕನಾಗಿ ಅವರು ಗಮನ ಸೆಳೆದಿದ್ದಾರೆ. ಅವರು ‘ದಿ ವೆಡ್ಡಿಂಗ್ ಫಿಲ್ಮರ್​’ ಎಂದೇ ಫೇಮಸ್. ಅವರು ತಮ್ಮ ಬಿಸ್ನೆಸ್ ಆರಂಭಿಸುವುದಕ್ಕೂ ಮೊದಲು ಶಾರುಖ್ ಖಾನ್ ಜೊತೆ ಕೆಲಸ ಮಾಡಿದ್ದರು. ಆದರೆ, ಅವರು ಭಾರತದಲ್ಲಿ ಕೆಲಸ ಮಾಡಿದ್ದು ಟೂರಿಸ್ಟ್ ವೀಸಾದಲ್ಲಿ.

ವಿಶಾಲ್ ಪಂಜಾಬಿ ಅವರು ಪಶ್ಚಿಮ ಆಫ್ರಿಕಾದ ಘಾನಾದವರು. ಅವರು ಈಗ ಭಾರತದ ನಾಗರಿಕತ್ವ ಪಡೆದಿದ್ದಾರೆ. ಆದರೆ, ಮೊದಲು ಅವರು ಅಲ್ಲಿಯ ಪ್ರಜೆ ಆಗಿದ್ದರು. ‘ಶಾರುಖ್ ಖಾನ್ ಅವರು ಅತ್ಯುತ್ತಮ ಕಲಾವಿದ. ಅವರು ಒಳ್ಳೆಯ ಮೆಂಟರ್. ಅವರ ನೆರಳಲ್ಲಿ ನಾನು ಬೆಳೆದೆ. 10 ವರ್ಷ ಅವರಿಂದ ಹಲವು ವಿಚಾರ ಕಲಿತೆ’ ಎಂದಿದ್ದಾರೆ ಅವರು.

‘2007ರಲ್ಲಿ ನಾನು ಬಾಲಿವುಡ್ ಸಿನಿಮಾ ಮಾಡಬೇಕಿತ್ತು. ಜೋಯಾ ಅಖ್ತರ್ ಜೊತೆ ಸೇರಿ ಸ್ಕ್ರಿಪ್ಟ್ ಮಾಡಿದೆ. ಅವರು ದೊಡ್ಡ ನಿರ್ದೇಶಕಿ ಈಗ. ಆಗ ನಾವು ಮೊದಲ ಸಿನಿಮಾ ಮಾಡಲು ಕಷ್ಟಪಡುತ್ತಿದ್ದೆವು. ಆಗಿನ್ನೂ ಪ್ರಿಯಾಂಕಾ ಹಾಗೂ ಶಾರುಖ್ ಖಾನ್ ನಮ್ಮ ಸಿನಿಮಾಗೆ (ಡಾನ್) ಓಕೆ ಎಂದಿರಲಿಲ್ಲ. ಆಗ ನಾನು ಟೂರಿಸ್ಟ್ ವಿಸಾದಲ್ಲಿ ಇದ್ದೆ. ನಾನು ಟೂರಿಸ್ಟ್ ವಿಸಾದಲ್ಲಿ ಕೆಲಸ ಮಾಡಿರೋ ಹಾಗಿರಲಿಲ್ಲ. ಅದು ನಿಜಕ್ಕೂ ಸ್ಟುಪಿಡ್ ಆಗಿತ್ತು. ಇದು ಇಂಡಿಯಾ ಅವರು ಸಮಸ್ಯೆ ಬಗೆಹರಿಸ್ತಾರೆ ಎಂದುಕೊಂಡೆ’ ಎಂದಿದ್ದಾರೆ ಅವರು.

‘ನಾನು ಅಪಾರವಾದ ನೋವನ್ನು ಅನುಭವಿಸಿದ್ದೇನೆ. ವಿಸಾ ಇಲ್ಲದೆ ನಾನು ಗಡೀಪಾರು ಆಗಿದ್ದೆ. ಯಾರೂ ಏನೂ ಮಾಡಲು ಸಾಧ್ಯವಾಗಲಿಲ್ಲ. ನಾನು ಶಾರುಖ್ ಅವರೊಂದಿಗೆ ಕೆಲಸ ಮಾಡಿರುವುದು ನನ್ನ ಪ್ರಕರಣವನ್ನು ಇನ್ನಷ್ಟು ಹದಗೆಡಿಸಿತು. ಅವರು ಸರ್ಕಾರದ ರೇಡಾರ್​ನಲ್ಲಿ ಇದ್ದರು. ಸರ್ಕಾರಗಳು ಅವರ ಮೇಲೆ ಯಾವುದೇ ದಯೆ ತೋರುತ್ತಿಲ್ಲ. ಅದು ಅವರ ಧರ್ಮಕ್ಕೆ ಸಂಬಂಧಿಸಿದೆ ಎಂದು ನಾನು ಭಾವಿಸುತ್ತೇನೆ. ನನ್ನ ಹೊರತಲು ಅವರು ಪ್ರಯತ್ನಿಸಿದರು’ ಎಂದಿದ್ದಾರೆ ವಿಶಾಲ್.

ಇದನ್ನೂ ಓದಿ: ಶಾರುಖ್ ಖಾನ್, ಅತಿ ಹೆಚ್ಚು ತೆರಿಗೆ ಪಾವತಿಸುವ ನಟ: ಟಾಪ್ ಐದು ನಟರು ಯಾರ್ಯಾರು?

‘26/11 ಮುಂಬೈ ದಾಳಿಯ ನಂತರ ಸರ್ಕಾರ ರಾತ್ರೋರಾತ್ರಿ ಬದಲಾಯಿತು. ಶಾರುಖ್‌ಗೆ ದಯೆ ತೋರಿದ ಜನರು ಅಧಿಕಾರಕ್ಕೆ ಬಂದರು. ಪ್ರಬಲ ವ್ಯಕ್ತಿಗಳ ಕೆಲವು ಬಲವಾದ ಶಿಫಾರಸುಗಳ ಆಧಾರದ ಮೇಲೆ, ನನ್ನ ಗಡೀಪಾರು ಹಿಂತೆಗೆದುಕೊಳ್ಳಲಾಯಿತು’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ಕೊಲ್ಲೂರಿಗೆ ತಮಿಳುನಾಡು ಸಿಎಂ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ
ಕೊಲ್ಲೂರಿಗೆ ತಮಿಳುನಾಡು ಸಿಎಂ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ
ಕಬಿನಿ ಡ್ಯಾಂ ನೀರಿನಮಟ್ಟ ಭಾರೀ ಕುಸಿತ: ಭೀಕರ ಬರಗಾಲದ ಮುನ್ಸೂಚನೆಯಾ?
ಕಬಿನಿ ಡ್ಯಾಂ ನೀರಿನಮಟ್ಟ ಭಾರೀ ಕುಸಿತ: ಭೀಕರ ಬರಗಾಲದ ಮುನ್ಸೂಚನೆಯಾ?
ತುಂಗಭದ್ರಾ ಒಡಲು ಖಾಲಿ ಖಾಲಿ! ಜಲಾಶಯಲ್ಲಿ ಕೇವಲ 9 TMC ನೀರು ಸಂಗ್ರಹ
ತುಂಗಭದ್ರಾ ಒಡಲು ಖಾಲಿ ಖಾಲಿ! ಜಲಾಶಯಲ್ಲಿ ಕೇವಲ 9 TMC ನೀರು ಸಂಗ್ರಹ
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಗಂಡು ಮಕ್ಕಳಿಗೆ ಕಿವಿ ಚುಚ್ಚಿಸುವುದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಇಂದು ಈ ರಾಶಿಯವರ ಆರ್ಥಿಕ ವಿಷಯದಲ್ಲಿ ಸ್ವಲ್ಪ ತೊಂದರೆ ಕಾಡಬಹುದು
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಎತ್ತಿನ ಬದಲು ಹೆಂಡತಿಯನ್ನೇ ನೊಗಕ್ಕೆ ಕಟ್ಟಿ ಹೊಲ ಉಳುಮೆ ಮಾಡಿದ ರೈತ!
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!