‘ಶಾರುಖ್ ಜೊತೆ ಸೇರಿದ್ದಕ್ಕೆ ನನ್ನ ಪರಿಸ್ಥಿತಿ ಮತ್ತಷ್ಟು ಕಠಿಣವಾಯ್ತು’; ನಿರ್ದೇಶಕ

ವಿಶಾಲ್ ಪಂಜಾಬಿ ಅವರು ಬಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ನಿರ್ದೇಶಕನಾಗಿ, ನಿರ್ಮಾಪಕನಾಗಿ ಅವರು ಗಮನ ಸೆಳೆದಿದ್ದಾರೆ. ಅವರು ‘ದಿ ವೆಡ್ಡಿಂಗ್ ಫಿಲ್ಮರ್​’ ಎಂದೇ ಫೇಮಸ್. ಅವರು ತಮ್ಮ ಬಿಸ್ನೆಸ್ ಆರಂಭಿಸುವುದಕ್ಕೂ ಮೊದಲು ಶಾರುಖ್ ಖಾನ್ ಜೊತೆ ಕೆಲಸ ಮಾಡಿದ್ದರು.

‘ಶಾರುಖ್ ಜೊತೆ ಸೇರಿದ್ದಕ್ಕೆ ನನ್ನ ಪರಿಸ್ಥಿತಿ ಮತ್ತಷ್ಟು ಕಠಿಣವಾಯ್ತು’; ನಿರ್ದೇಶಕ
ಶಾರುಖ್ ಖಾನ್
Follow us
|

Updated on: Sep 06, 2024 | 12:09 PM

ಶಾರುಖ್ ಖಾನ್ ಹಾಗೂ ಸರ್ಕಾರದ ಮಧ್ಯೆ ಒಳ್ಳೆಯ ಸಂಬಂಧ ಇದೆ. ಅವರು ಸರ್ಕಾರದ ವಿರುದ್ಧ ಮಾತನಾಡಿದವರಲ್ಲ. ವಿವಾದಗಳಿಂದ ಅವರು ಸದಾ ದೂರ ಇರಲು ಬಯಸುತ್ತಾರೆ. ಆದರೆ, ಈ ಮೊದಲು ಹಾಗೆ ಇರಲಿಲ್ಲ. ಶಾರುಖ್ ಖಾನ್ ಅವರು ಆಗಾಗ ಸರ್ಕಾರದ ಕೆಂಗಣ್ಣಿಗೆ ಗುರಿಯಾಗುತ್ತಿದ್ದರು. ಅವರಿಂದಾಗಿ ಕೆಲವರು ತೊಂದರೆ ಅನುಭವಿಸಬೇಕಾಗಿ ಬಂದಿತ್ತು.

ವಿಶಾಲ್ ಪಂಜಾಬಿ ಅವರು ಬಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ನಿರ್ದೇಶಕನಾಗಿ, ನಿರ್ಮಾಪಕನಾಗಿ ಅವರು ಗಮನ ಸೆಳೆದಿದ್ದಾರೆ. ಅವರು ‘ದಿ ವೆಡ್ಡಿಂಗ್ ಫಿಲ್ಮರ್​’ ಎಂದೇ ಫೇಮಸ್. ಅವರು ತಮ್ಮ ಬಿಸ್ನೆಸ್ ಆರಂಭಿಸುವುದಕ್ಕೂ ಮೊದಲು ಶಾರುಖ್ ಖಾನ್ ಜೊತೆ ಕೆಲಸ ಮಾಡಿದ್ದರು. ಆದರೆ, ಅವರು ಭಾರತದಲ್ಲಿ ಕೆಲಸ ಮಾಡಿದ್ದು ಟೂರಿಸ್ಟ್ ವೀಸಾದಲ್ಲಿ.

ವಿಶಾಲ್ ಪಂಜಾಬಿ ಅವರು ಪಶ್ಚಿಮ ಆಫ್ರಿಕಾದ ಘಾನಾದವರು. ಅವರು ಈಗ ಭಾರತದ ನಾಗರಿಕತ್ವ ಪಡೆದಿದ್ದಾರೆ. ಆದರೆ, ಮೊದಲು ಅವರು ಅಲ್ಲಿಯ ಪ್ರಜೆ ಆಗಿದ್ದರು. ‘ಶಾರುಖ್ ಖಾನ್ ಅವರು ಅತ್ಯುತ್ತಮ ಕಲಾವಿದ. ಅವರು ಒಳ್ಳೆಯ ಮೆಂಟರ್. ಅವರ ನೆರಳಲ್ಲಿ ನಾನು ಬೆಳೆದೆ. 10 ವರ್ಷ ಅವರಿಂದ ಹಲವು ವಿಚಾರ ಕಲಿತೆ’ ಎಂದಿದ್ದಾರೆ ಅವರು.

‘2007ರಲ್ಲಿ ನಾನು ಬಾಲಿವುಡ್ ಸಿನಿಮಾ ಮಾಡಬೇಕಿತ್ತು. ಜೋಯಾ ಅಖ್ತರ್ ಜೊತೆ ಸೇರಿ ಸ್ಕ್ರಿಪ್ಟ್ ಮಾಡಿದೆ. ಅವರು ದೊಡ್ಡ ನಿರ್ದೇಶಕಿ ಈಗ. ಆಗ ನಾವು ಮೊದಲ ಸಿನಿಮಾ ಮಾಡಲು ಕಷ್ಟಪಡುತ್ತಿದ್ದೆವು. ಆಗಿನ್ನೂ ಪ್ರಿಯಾಂಕಾ ಹಾಗೂ ಶಾರುಖ್ ಖಾನ್ ನಮ್ಮ ಸಿನಿಮಾಗೆ (ಡಾನ್) ಓಕೆ ಎಂದಿರಲಿಲ್ಲ. ಆಗ ನಾನು ಟೂರಿಸ್ಟ್ ವಿಸಾದಲ್ಲಿ ಇದ್ದೆ. ನಾನು ಟೂರಿಸ್ಟ್ ವಿಸಾದಲ್ಲಿ ಕೆಲಸ ಮಾಡಿರೋ ಹಾಗಿರಲಿಲ್ಲ. ಅದು ನಿಜಕ್ಕೂ ಸ್ಟುಪಿಡ್ ಆಗಿತ್ತು. ಇದು ಇಂಡಿಯಾ ಅವರು ಸಮಸ್ಯೆ ಬಗೆಹರಿಸ್ತಾರೆ ಎಂದುಕೊಂಡೆ’ ಎಂದಿದ್ದಾರೆ ಅವರು.

‘ನಾನು ಅಪಾರವಾದ ನೋವನ್ನು ಅನುಭವಿಸಿದ್ದೇನೆ. ವಿಸಾ ಇಲ್ಲದೆ ನಾನು ಗಡೀಪಾರು ಆಗಿದ್ದೆ. ಯಾರೂ ಏನೂ ಮಾಡಲು ಸಾಧ್ಯವಾಗಲಿಲ್ಲ. ನಾನು ಶಾರುಖ್ ಅವರೊಂದಿಗೆ ಕೆಲಸ ಮಾಡಿರುವುದು ನನ್ನ ಪ್ರಕರಣವನ್ನು ಇನ್ನಷ್ಟು ಹದಗೆಡಿಸಿತು. ಅವರು ಸರ್ಕಾರದ ರೇಡಾರ್​ನಲ್ಲಿ ಇದ್ದರು. ಸರ್ಕಾರಗಳು ಅವರ ಮೇಲೆ ಯಾವುದೇ ದಯೆ ತೋರುತ್ತಿಲ್ಲ. ಅದು ಅವರ ಧರ್ಮಕ್ಕೆ ಸಂಬಂಧಿಸಿದೆ ಎಂದು ನಾನು ಭಾವಿಸುತ್ತೇನೆ. ನನ್ನ ಹೊರತಲು ಅವರು ಪ್ರಯತ್ನಿಸಿದರು’ ಎಂದಿದ್ದಾರೆ ವಿಶಾಲ್.

ಇದನ್ನೂ ಓದಿ: ಶಾರುಖ್ ಖಾನ್, ಅತಿ ಹೆಚ್ಚು ತೆರಿಗೆ ಪಾವತಿಸುವ ನಟ: ಟಾಪ್ ಐದು ನಟರು ಯಾರ್ಯಾರು?

‘26/11 ಮುಂಬೈ ದಾಳಿಯ ನಂತರ ಸರ್ಕಾರ ರಾತ್ರೋರಾತ್ರಿ ಬದಲಾಯಿತು. ಶಾರುಖ್‌ಗೆ ದಯೆ ತೋರಿದ ಜನರು ಅಧಿಕಾರಕ್ಕೆ ಬಂದರು. ಪ್ರಬಲ ವ್ಯಕ್ತಿಗಳ ಕೆಲವು ಬಲವಾದ ಶಿಫಾರಸುಗಳ ಆಧಾರದ ಮೇಲೆ, ನನ್ನ ಗಡೀಪಾರು ಹಿಂತೆಗೆದುಕೊಳ್ಳಲಾಯಿತು’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಭದ್ರತಾ ಪಡೆಯಿಂದ ಉಗ್ರನ ಎನ್​ಕೌಂಟರ್​, ವಿಡಿಯೋ ಸೆರೆಹಿಡಿದ ಡ್ರೋನ್
ಭದ್ರತಾ ಪಡೆಯಿಂದ ಉಗ್ರನ ಎನ್​ಕೌಂಟರ್​, ವಿಡಿಯೋ ಸೆರೆಹಿಡಿದ ಡ್ರೋನ್
ಭಜರಂಗದಳ, VHPಯಿಂದ ಬಿಸಿ ರೋಡ್ ಚಲೋ ಕರೆ, ಪೊಲೀಸ್​​ ಬಿಗಿ ಬಂದೋಬಸ್ತ್​​
ಭಜರಂಗದಳ, VHPಯಿಂದ ಬಿಸಿ ರೋಡ್ ಚಲೋ ಕರೆ, ಪೊಲೀಸ್​​ ಬಿಗಿ ಬಂದೋಬಸ್ತ್​​
ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ಮಲಗಿದ್ದ ವ್ಯಕ್ತಿ
ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ಮಲಗಿದ್ದ ವ್ಯಕ್ತಿ
Daily Devotional: ಪತ್ನಿಯ ಪೂಜಾ ಫಲ ಪತಿಗೆ ಸಲ್ಲುತ್ತಾ? ವಿಡಿಯೋ ನೋಡಿ
Daily Devotional: ಪತ್ನಿಯ ಪೂಜಾ ಫಲ ಪತಿಗೆ ಸಲ್ಲುತ್ತಾ? ವಿಡಿಯೋ ನೋಡಿ
Nithya Bhavishya: ಅನಂತಪದ್ಮನಾಭ ವ್ರತ ಸೋಮವಾರದ ದಿನ ಭವಿಷ್ಯ ತಿಳಿಯಿರಿ
Nithya Bhavishya: ಅನಂತಪದ್ಮನಾಭ ವ್ರತ ಸೋಮವಾರದ ದಿನ ಭವಿಷ್ಯ ತಿಳಿಯಿರಿ
ಆಟೋ ಡ್ರೈವರ್​ ಆದ ರಾಧಿಕಾ ಕುಮಾರಸ್ವಾಮಿ; ‘ಭೈರಾದೇವಿ’ ಪ್ರಚಾರಕ್ಕೆ ಚಾಲನೆ
ಆಟೋ ಡ್ರೈವರ್​ ಆದ ರಾಧಿಕಾ ಕುಮಾರಸ್ವಾಮಿ; ‘ಭೈರಾದೇವಿ’ ಪ್ರಚಾರಕ್ಕೆ ಚಾಲನೆ
ಆರ್​ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಕನ್ನಡಿಗ ರಾಹುಲ್
ಆರ್​ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಕನ್ನಡಿಗ ರಾಹುಲ್
ಮಾನವ ಸರಪಳಿ ವೇಳೆ ಡೊಳ್ಳಿನ ನಾದಕ್ಕೆ ತಾಳ ಹಾಕಿದ ಇ ತುಕಾರಾಂ
ಮಾನವ ಸರಪಳಿ ವೇಳೆ ಡೊಳ್ಳಿನ ನಾದಕ್ಕೆ ತಾಳ ಹಾಕಿದ ಇ ತುಕಾರಾಂ
ಚೆನ್ನೈನಲ್ಲಿ ಕೊಹ್ಲಿ, ರೋಹಿತ್ ಭರ್ಜರಿ ಬ್ಯಾಟಿಂಗ್ ಪ್ರಾಕ್ಟೀಸ್
ಚೆನ್ನೈನಲ್ಲಿ ಕೊಹ್ಲಿ, ರೋಹಿತ್ ಭರ್ಜರಿ ಬ್ಯಾಟಿಂಗ್ ಪ್ರಾಕ್ಟೀಸ್
ಚಿಕ್ಕಮಗಳೂರಿನಲ್ಲಿ ಪ್ಯಾಲಿಸ್ತೀನ್‌ ಧ್ವಜ ಹಿಡಿದು ಮುಸ್ಲಿಂ ಯುವಕರ ಓಡಾಟ
ಚಿಕ್ಕಮಗಳೂರಿನಲ್ಲಿ ಪ್ಯಾಲಿಸ್ತೀನ್‌ ಧ್ವಜ ಹಿಡಿದು ಮುಸ್ಲಿಂ ಯುವಕರ ಓಡಾಟ