AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರ್ಫಾನ್​ ಖಾನ್​ ಜನ್ಮದಿನ: ‘ತಂದೆ ನಿಧನರಾದಾಗ 45 ದಿನ ಮನೆಯಿಂದ ನಾನು ಹೊರಬರಲಿಲ್ಲ’: ಪುತ್ರ ಬಬಿಲ್​ ಖಾನ್​

Irrfan Khan | Babil Khan: ಇಂದು (ಜ.7) ಖ್ಯಾತ ನಟ ಇರ್ಫಾನ್​ ಖಾನ್​ ಅವರ ಹುಟ್ಟುಹಬ್ಬ. ಆ ಸಲುವಾಗಿ ಅವರನ್ನು ಅಪಾರ ಸಂಖ್ಯೆಯ ಅಭಿಮಾನಿಗಳು ಸ್ಮರಿಸಿಕೊಳ್ಳುತ್ತಿದ್ದಾರೆ.

ಇರ್ಫಾನ್​ ಖಾನ್​ ಜನ್ಮದಿನ: ‘ತಂದೆ ನಿಧನರಾದಾಗ 45 ದಿನ ಮನೆಯಿಂದ ನಾನು ಹೊರಬರಲಿಲ್ಲ’: ಪುತ್ರ ಬಬಿಲ್​ ಖಾನ್​
ಇರ್ಫಾನ್ ಖಾನ್, ಬಬಿಲ್ ಖಾನ್
Follow us
TV9 Web
| Updated By: ಮದನ್​ ಕುಮಾರ್​

Updated on: Jan 07, 2023 | 7:30 AM

ಭಾರತೀಯ ಚಿತ್ರರಂಗ ಕಂಡ ಅಪರೂಪದ ನಟ ಇರ್ಫಾನ್​ ಖಾನ್​ (Irrfan Khan). ಹಿಂದಿ ಸಿನಿಮಾಗಳಲ್ಲಿ ನಟಿಸಿ ಜನಮನ ಗೆದ್ದಿದ್ದ ಅವರು ಹಾಲಿವುಡ್​ ಮಂದಿಗೂ ಅಚ್ಚುಮೆಚ್ಚು ಆಗಿದ್ದರು. ಟಾಮ್​ ಹ್ಯಾಂಕ್ಸ್​ ಅವರಂತಹ ದಿಗ್ಗಜ ನಟರ ಜೊತೆ ತೆರೆಹಂಚಿಕೊಳ್ಳುವ ಅವಕಾಶವನ್ನು ಇರ್ಫಾನ್​ ಖಾನ್​ ಪಡೆದಿದ್ದರು. ಆದರೆ ಅಂಥ ಪ್ರತಿಭಾವಂತ ಕಲಾವಿದನನ್ನು ಕಳೆದುಕೊಂಡಿದ್ದು ನೋವಿನ ಸಂಗತಿ. ಇಂದು (ಜ.7) ಅವರ ಜನ್ಮದಿನ (Irrfan Khan Birth Anniversary). ಒಂದು ವೇಳೆ ಅವರು ಬದುಕಿದ್ದರೆ 56ನೇ ವರ್ಷಕ್ಕೆ ಕಾಲಿಡಬೇಕಿತ್ತು. ಅಭಿಮಾನಿಗಳು ಅವರನ್ನು ಎಂದೆಂದಿಗೂ ಮಿಸ್​ ಮಾಡಿಕೊಳ್ಳುತ್ತಾರೆ. ಈಗ ಇರ್ಫಾನ್​ ಖಾನ್​ ಪುತ್ರ ಬಬಿಲ್​ ಖಾನ್​ (Irrfan Khan son Babil Khan) ಕೂಡ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಅವರಿಗೂ ಸಿನಿಪ್ರಿಯರಿಂದ ಪ್ರೋತ್ಸಾಹ ದೊರೆಯುತ್ತಿದೆ.

ಇರ್ಫಾನ್​ ಖಾನ್​ ನಿಧನದ ಬಳಿಕ ಬಬಿಲ್​ ಖಾನ್​ ಅವರು ಸಖತ್​ ಕುಗ್ಗಿ ಹೋಗಿದ್ದರು. ತಂದೆ ಆ ರೀತಿ ಬಿಟ್ಟು ಹೋಗುತ್ತಾರೆ ಎಂದು ಅವರು ನಿರೀಕ್ಷಿಸಿರಲಿಲ್ಲ. ಆ ಸಮಯದ ಕಹಿ ಅನುಭವನ್ನು ಬಬಿಲ್​ ಅವರು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದುಂಟು. ಇರ್ಫಾನ್ ಖಾನ್​ ನಿಧನರಾದಾಗ ಬಬಿಲ್​ ಅವರು 45 ದಿನಗಳ ಕಾಲ ಮನೆಯಿಂದ ಹೊರಗೆ ಬಂದಿರಲಿಲ್ಲ. ತಂದೆ ಸಾವು ಅವರನ್ನು ಅಷ್ಟರಮಟ್ಟಿಗೆ ವಿಚಲಿತಗೊಳಿಸಿತ್ತು.

ಇದನ್ನೂ ಓದಿ: ಇರ್ಫಾನ್​ ಖಾನ್​ ಜನ್ಮದಿನ: ಅಪ್ರತಿಮ ಕಲಾವಿದನ 5 ಅತಿ ಮುಖ್ಯ ಸಿನಿಮಾಗಳು

ಇದನ್ನೂ ಓದಿ
Image
ಬಾಲಿವುಡ್​ನವರೂ ಕೆಟ್ಟ ಸಿನಿಮಾ ಮಾಡ್ತಾರೆ, ನಾವ್ಯಾಕೆ ಅವರಿಗೆ ರೇಂಜ್​ ಕೊಡಬೇಕು? ಸುದೀಪ್ ನೇರ ಪ್ರಶ್ನೆ
Image
ಬಾಲಿವುಡ್​ಗಿತ್ತು ಅಂಡರ್​​ವರ್ಲ್ಡ್​​ ಸಂಪರ್ಕ; ಕರಾಳ ಸತ್ಯ ಬಿಚ್ಚಿಟ್ಟ ಖ್ಯಾತ ನಟಿ
Image
ಬಾಲಿವುಡ್​ vs ಸೌತ್ ಎಂದರೆ ನನಗೆ ಸಿಟ್ಟೇ ಬರುತ್ತದೆ; ಅಕ್ಷಯ್ ಕುಮಾರ್ ನೇರ ನುಡಿ
Image
ಸೌತ್​ ಚಿತ್ರಗಳ ಎದುರು ಬಾಲಿವುಡ್​ ಎಡವಿದ್ದು ಎಲ್ಲಿ? ಉತ್ತರ ಹುಡುಕಿದ ‘ಕೆಜಿಎಫ್​ 2’ ಅಧೀರ ಸಂಜಯ್​ ದತ್​

ತಂದೆಯ ನಿಧನದ ನಂತರ ಬಬಿಲ್​ ಖಾನ್ ಅವರು ಬಣ್ಣ ಹಚ್ಚಲು ಆರಂಭಿಸಿದರು. ನೆಟ್​ಫ್ಲಿಕ್ಸ್​ನಲ್ಲಿ ರಿಲೀಸ್​ ಆದ ‘ಕಲಾ’ ಸಿನಿಮಾದಲ್ಲಿ ​ಅವರು ನಟಿಸಿದ್ದಾರೆ. ಈ ಚಿತ್ರದ ಪ್ರಮೋಷನ್​ ವೇಳೆ ತಂದೆಯ ಬಗ್ಗೆ ಬಬಿಲ್​ ಹೇಳಿಕೊಂಡರು. ‘ಮೊದಲ ದಿನ ನಾನು ನಂಬಲೇ ಇಲ್ಲ. ಒಂದು ವಾರ ಕಳೆಯಿತು. ಆ ನೋವು ನನ್ನನ್ನು ಘಾಸಿಗೊಳಿಸಿತು. ಕೆಟ್ಟ ಸುಳಿಯೊಳಗೆ ನಾನು ಸಿಲುಕಿದೆ. ರೂಮ್​ ಸೇರಿಕೊಂಡ ನಾನು ಒಂದೂವರೆ ತಿಂಗಳು ಹೊರಗೆ ಬರಲಿಲ್ಲ’ ಎಂದಿದ್ದಾರೆ ಬಬಿಲ್​ ಖಾನ್​.

ಇದನ್ನೂ ಓದಿ: ತಂದೆಯ ಬಟ್ಟೆಯನ್ನೇ ತೊಟ್ಟು ಫಿಲ್ಮ್​ ಫೇರ್​ ಸ್ವೀಕರಿಸಿದ ಇರ್ಫಾನ್​ ಖಾನ್​ ಪುತ್ರ

2018ರಲ್ಲಿ ಇರ್ಫಾನ್​ ಖಾನ್ ಅವರಿಗೆ ಕ್ಯಾನ್ಸರ್​ ಇರುವ ವಿಷಯ ತಿಳಿಯಿತು. ಆ ಸುದ್ದಿ ಹೊರಬಿದ್ದಾಗ ಅಭಿಮಾನಿಗಳಿಗೆ ಆಘಾತ ಆಯಿತು. ಬಳಿಕ ಅವರು ಚಿಕಿತ್ಸೆಗಾಗಿ ಇಂಗ್ಲೆಂಡ್​ಗೆ ತೆರಳಿದರು. 2019ರ ಫೆಬ್ರವರಿಯಲ್ಲಿ ಭಾರತಕ್ಕೆ ಮರಳಿದರು. ಇನ್ನೇನು ಗುಣಮುಖರಾಗುತ್ತಾರೆ ಎಂದೇ ಅಭಿಮಾನಿಗಳು ಭಾವಿಸಿದ್ದರು. ಆದರೆ ಆಗಿದ್ದೇ ಬೇರೆ. ಅಂತಿಮವಾಗಿ ಇರ್ಫಾನ್​ ಖಾನ್​ ಅವರನ್ನು ಕಳೆದುಕೊಳ್ಳಬೇಕಾಯಿತು.

ಇದನ್ನೂ ಓದಿ: ನಟ ಇರ್ಫಾನ್​ ಖಾನ್​ ಮತ್ತು ರಂಗಕರ್ಮಿ ಪ್ರಸನ್ನ ಒಡನಾಟದ ಇಣುಕು ನೋಟ..!

ಬಬಿಲ್​ ಖಾನ್​ ಅವರಿಗೆ ತಂದೆಯ ಸಾಧನೆಗಳೇ ಈಗ ಸ್ಫೂರ್ತಿ. ಚಿತ್ರರಂಗದಲ್ಲಿ ಅವರಿಗೆ ಒಳ್ಳೆಯ ಅವಕಾಶಗಳು ಸಿಗುತ್ತಿವೆ. 1984ರ ಭೋಪಾಲ್​ ಅನಿಲ ದುರಂತದ ಘಟನೆಯನ್ನು ಆಧರಿಸಿದ ‘ದಿ ರೈಲ್ವೆ ಮೆನ್​’ ವೆಬ್​ ಸರಣಿಯಲ್ಲಿ ಬಬಿಲ್​ ಖಾನ್​ ನಟಿಸಲಿದ್ದಾರೆ. ಈ ಸೀರಿಸ್​ಗೆ ಯಶ್​ ರಾಜ್​ ಫಿಲ್ಮ್ಸ್​ ಬಂಡವಾಳ ಹೂಡಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಸಮಾಜದಲ್ಲಿ ಈ ರಾಶಿಯವರ ಗೌರವ ಹೆಚ್ಚಾಗುತ್ತದೆ, ಸಹೋದ್ಯೋಗಿಗಳ ಬೆಂಬಲ
ಸಮಾಜದಲ್ಲಿ ಈ ರಾಶಿಯವರ ಗೌರವ ಹೆಚ್ಚಾಗುತ್ತದೆ, ಸಹೋದ್ಯೋಗಿಗಳ ಬೆಂಬಲ
25 ವರ್ಷಗಳ ನಂತರ ಆಂಗ್ಲರ ವಿರುದ್ಧ ಶತಕ ದಾಖಲು
25 ವರ್ಷಗಳ ನಂತರ ಆಂಗ್ಲರ ವಿರುದ್ಧ ಶತಕ ದಾಖಲು
ಆಸ್ಪತ್ರೆಗೆ ಹೋಗಲು ರಸ್ತೆಯಿಲ್ಲದೇ ವೃದ್ಧೆ ಪರದಾಟ
ಆಸ್ಪತ್ರೆಗೆ ಹೋಗಲು ರಸ್ತೆಯಿಲ್ಲದೇ ವೃದ್ಧೆ ಪರದಾಟ
ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ
ಗಂಡ-ಹೆಂಡ್ತಿ ಜಗಳದಲ್ಲಿ ಮದ್ವೆ ಮಾಡಿಸಿದ್ದ ಬ್ರೋಕರ್ ಕೊಲೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?