AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳ ಫೈಟ್​ ತಡೆದ ಜಾನಿ ಲಿವರ್​; ವಿಡಿಯೋ ವೈರಲ್​

ಜಾನಿ ಲಿವರ್​ ಅವರ ಇಬ್ಬರು ಮಕ್ಕಳು ಈ ವಿಡಿಯೋದಲ್ಲಿದ್ದಾರೆ. ಜ್ಯಾಮಿ ಮತ್ತು ಜೆಸ್ಸೆ ಲಿವರ್​ ಇಬ್ಬರೂ ಕಿತ್ತಾಡುತ್ತಿರುತ್ತಾರೆ. ಇವರ ಮಧ್ಯೆ ಜಾನಿ ಎಂಟ್ರಿ ಆಗುತ್ತದೆ.

ಮಕ್ಕಳ ಫೈಟ್​ ತಡೆದ ಜಾನಿ ಲಿವರ್​; ವಿಡಿಯೋ ವೈರಲ್​
ಜಾನಿ ಲಿವರ್
TV9 Web
| Edited By: |

Updated on: Oct 09, 2021 | 4:48 PM

Share

ಜಾನಿ ಲಿವರ್​ ಅವರು ಬಾಲಿವುಡ್​ನಲ್ಲಿ ಸಾಕಷ್ಟು ಹಾಸ್ಯ ಪಾತ್ರಗಳನ್ನು ಮಾಡಿ ಗುರುತಿಸಿಕೊಂಡಿದ್ದಾರೆ. ಅವ ಪಾತ್ರ ತೆರೆಮೇಲೆ ಕಾಣಿಸಿಕೊಂಡರೆ ಸಾಕು ಎಲ್ಲರೂ ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ. ಸಾಕಷ್ಟು ಸ್ಟಾರ್​ ನಟರ ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಈಗಲೂ ಹಿಂದಿ ಚಿತ್ರರಂಗದಲ್ಲಿ ಅವರಿಗೆ ಬೇಡಿಕೆ ಇದೆ. ಸಿನಿಮಾ ಜತೆಗೆ ಹಾಯಾಗಿ ಕುಟುಂಬದ ಜತೆಗೂ ಜಾನಿ ಸಮಯ ಕಳೆಯುತ್ತಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋಗಳನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈಗ ಜಾನಿ ಲಿವರ್​ ಅವರು ಮಕ್ಕಳ ನಡುವೆ ನಡೆದ ಫೈಟ್​ ತಪ್ಪಿಸಿದ್ದಾರೆ. ಇದರ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸಖತ್​ ಫನ್ನಿ ಆಗಿದೆ.

ಜಾನಿ ಲಿವರ್​ ಅವರ ಇಬ್ಬರು ಮಕ್ಕಳು ಈ ವಿಡಿಯೋದಲ್ಲಿದ್ದಾರೆ. ಜ್ಯಾಮಿ ಮತ್ತು ಜೆಸ್ಸೆ ಲಿವರ್​ ಇಬ್ಬರೂ ಕಿತ್ತಾಡುತ್ತಿರುತ್ತಾರೆ. ಇವರ ಮಧ್ಯೆ ಜಾನಿ ಎಂಟ್ರಿ ಆಗುತ್ತದೆ. ಆಗ ಪ್ರಸಾರವಾಗುವ ‘ಇನ್​ ಡಾ ಗೆಟ್ಟೋ..’ ಹಾಡಿಗೆ ಇವರು ಡ್ಯಾನ್ಸ್​ ಮಾಡುತ್ತಾರೆ. ಆ ಮೂಲಕ ಫೈಟ್​ ತಪ್ಪಿಸುತ್ತಾರೆ.

ಈ ಹಾಡು ಬರೋಬ್ಬರಿ 12 ಲಕ್ಷ ಬಾರಿ ವೀಕ್ಷಣೆ ಕಂಡಿದೆ. ಅಲ್ಲದೆ, ಲಕ್ಷಾಂತರ ಲೈಕ್ಸ್​ ಪಡೆದುಕೊಂಡಿದೆ. ಈ ರೀಲ್ಸ್​ಅನ್ನು ಸಾಕಷ್ಟು ಜನರು ಶೇರ್​ ಮಾಡಿಕೊಳ್ಳುತ್ತಿದ್ದಾರೆ. ‘ಜಾನಿ ಸರ್​ ಯಾವಾಗಲೂ ರಾಕಿಂಗ್​’, ‘ಸೂಪರ್ಬ್​’, ‘ನೀವು ಅದ್ಭುತ’, ‘ಅಪ್ಪ-ಮಕ್ಕಳು ಈ ರೀತಿ ಇರಬೇಕು’ ಎಂದು ಅಭಿಮಾನಿಗಳು ಕಮೆಂಟ್​ ಮಾಡುತ್ತಿದ್ದಾರೆ.

1982ರಲ್ಲಿ ತೆರೆಗೆ ಬಂದ ‘ದರ್ದ್​ ಕಾ ರಿಷ್ತಾ’ ಸಿನಿಮಾ ಮೂಲಕ ಜಾನಿ ಚಿತ್ರರಂಗಕ್ಕೆ ಕಾಲಿಟ್ಟರು. ಅದಾದ ನಂತರ ಅವರಿಗೆ ಬೇಡಿಕೆ ಹೆಚ್ಚಿತು. ಪೋಷಕ ಹಾಗೂ ಕಾಮಿಡಿ ಪಾತ್ರಗಳಲ್ಲಿ ನಟಿಸೋಕೆ ಅವಕಾಶಗಳು ಹರಿದು ಬಂದವು. ಸಾಕಷ್ಟು ಹಿಟ್​ ಸಿನಿಮಾಗಳಲ್ಲಿ ಜಾನಿ ನಟಿಸಿದ್ದಾರೆ. ಈ ವರ್ಷ ಒಟಿಟಿಯಲ್ಲಿ ತೆರೆಗೆ ಬಂದ ‘ಹಂಗಾಮಾ 2’ ಸಿನಿಮಾದಲ್ಲಿ ಜಾನಿ ನಟಿಸಿದ್ದರು. ಆದರೆ, ಈ ಸಿನಿಮಾ ಯಶಸ್ಸು ಕಂಡಿಲ್ಲ. ಇದಲ್ಲದೆ, ‘ಹೌಸ್​ಫುಲ್​’ ಮೊದಲಾದ ಸೀರಿಸ್​ಗಳಲ್ಲಿ ಅವರು ನಟಿಸಿದ್ದಾರೆ.

ಇದನ್ನೂ ಓದಿ: 750 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾಗುತ್ತಿದೆ ಸಿನಿಮಾ; ಈ ಸ್ಟಾರ್​ ನಟರ ಸಂಭಾವನೆ 75 ಕೋಟಿ

Follow Us
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’