AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shehzada: ಹೀನಾಯ ಸ್ಥಿತಿಯಲ್ಲಿ ‘ಶೆಹಜಾದಾ’ ಕಲೆಕ್ಷನ್​; ಶಿವರಾತ್ರಿ ಹಬ್ಬದಲ್ಲೂ ಕಾರ್ತಿಕ್​ ಆರ್ಯನ್​ಗೆ ನಿರಾಸೆ

Shehzada Collection | Kartik Aaryan: ಸಾಮಾನ್ಯವಾಗಿ ಹಬ್ಬಗಳ ಸಂದರ್ಭದಲ್ಲಿ ಸಿನಿಮಾ ಬಿಡುಗಡೆ ಮಾಡಿದರೆ ಉತ್ತಮ ಕಲೆಕ್ಷನ್​ ಆಗುತ್ತದೆ. ಆದರೆ ‘ಶೆಹಜಾದಾ’ ಚಿತ್ರದ ವಿಚಾರದಲ್ಲಿ ಈ ಸೂತ್ರ ವರ್ಕೌಟ್​ ಆಗಿಲ್ಲ.

Shehzada: ಹೀನಾಯ ಸ್ಥಿತಿಯಲ್ಲಿ ‘ಶೆಹಜಾದಾ’ ಕಲೆಕ್ಷನ್​; ಶಿವರಾತ್ರಿ ಹಬ್ಬದಲ್ಲೂ ಕಾರ್ತಿಕ್​ ಆರ್ಯನ್​ಗೆ ನಿರಾಸೆ
ಕಾರ್ತಿಕ್ ಆರ್ಯನ್
ಮದನ್​ ಕುಮಾರ್​
|

Updated on:Feb 19, 2023 | 5:51 PM

Share

ನಟ ಕಾರ್ತಿಕ್​ ಆರ್ಯನ್ (Kartik Aaryan)​ ಅವರು ಈ ವರ್ಷ ದೊಡ್ಡ ಗೆಲುವು ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಅವರಿಗೆ ನಿರಾಸೆ ಆಗಿದೆ. ಅವರು ನಟಿಸಿರುವ ‘ಶೆಹಜಾದಾ’ ಸಿನಿಮಾ ಫೆಬ್ರವರಿ 17ರಂದು ಬಿಡುಗಡೆ ಆಯಿತು. ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡಲು ಈ ಸಿನಿಮಾ ಸೋತಿದೆ. ಮೊದಲ ದಿನ ‘ಶೆಹಜಾದಾ’ (Shehzada Movie) ಚಿತ್ರಕ್ಕೆ ಗಲ್ಲಾಪೆಟ್ಟಿಗೆಯಲ್ಲಿ ಸಂಗ್ರಹ ಆಗಿದ್ದು ಕೇವಲ 6 ಕೋಟಿ ರೂಪಾಯಿ. ಎರಡನೇ ದಿನ (ಫೆ.18) ಬರೀ 6.65 ಕೋಟಿ ರೂಪಾಯಿ ಕಲೆಕ್ಷನ್​ (Shehzada Box Office Collection) ಆಗಿದೆ. ವೀಕೆಂಡ್​ನಲ್ಲಿ ಇಷ್ಟು ಕಡಿಮೆ ಆದಾಯ ಬಂದರೆ ಸೋಮವಾರದ ಹೊತ್ತಿಗೆ ಈ ಸಿನಿಮಾ ಮಕಾಡೆ ಮಲಗುವುದು ಖಚಿತ ಎಂದು ಟ್ರೇಡ್​ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈ ಸಿನಿಮಾದಲ್ಲಿ ಕಾರ್ತಿಕ್​ ಆರ್ಯನ್​​ಗೆ ಜೋಡಿಯಾಗಿ ಕೃತಿ ಸನೋನ್​ ನಟಿಸಿದ್ದಾರೆ.

ಸಾಮಾನ್ಯವಾಗಿ ಹಬ್ಬಗಳ ಸಂದರ್ಭದಲ್ಲಿ ಸಿನಿಮಾ ಬಿಡುಗಡೆಯಾದರೆ ಉತ್ತಮ ಕಲೆಕ್ಷನ್​ ಆಗುತ್ತದೆ. ಅದೇ ಉದ್ದೇಶದಿಂದ ಶಿವರಾತ್ರಿ ಪ್ರಯುಕ್ತ ‘ಶೆಹಜಾದಾ’ ಸಿನಿಮಾವನ್ನು ತೆರೆ ಕಾಣಿಸಲಾಯಿತು. ಶನಿವಾರ (ಫೆ.18) ಹಬ್ಬ ಮತ್ತು ವೀಕೆಂಡ್​ ಇದ್ದರೂ ಕೂಡ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದಿಲ್ಲ. ಇದರಿಂದ ಕಾರ್ತಿಕ್​ ಆರ್ಯನ್​ ಅವರ ಚಿತ್ರಕ್ಕೆ ದೊಡ್ಡ ಪೆಟ್ಟು ಬಿದ್ದಿದೆ.

ಇದನ್ನೂ ಓದಿ
Image
ಬಾಲಿವುಡ್​ನವರೂ ಕೆಟ್ಟ ಸಿನಿಮಾ ಮಾಡ್ತಾರೆ, ನಾವ್ಯಾಕೆ ಅವರಿಗೆ ರೇಂಜ್​ ಕೊಡಬೇಕು? ಸುದೀಪ್ ನೇರ ಪ್ರಶ್ನೆ
Image
ಬಾಲಿವುಡ್​ಗಿತ್ತು ಅಂಡರ್​​ವರ್ಲ್ಡ್​​ ಸಂಪರ್ಕ; ಕರಾಳ ಸತ್ಯ ಬಿಚ್ಚಿಟ್ಟ ಖ್ಯಾತ ನಟಿ
Image
ಬಾಲಿವುಡ್​ vs ಸೌತ್ ಎಂದರೆ ನನಗೆ ಸಿಟ್ಟೇ ಬರುತ್ತದೆ; ಅಕ್ಷಯ್ ಕುಮಾರ್ ನೇರ ನುಡಿ
Image
ಸೌತ್​ ಚಿತ್ರಗಳ ಎದುರು ಬಾಲಿವುಡ್​ ಎಡವಿದ್ದು ಎಲ್ಲಿ? ಉತ್ತರ ಹುಡುಕಿದ ‘ಕೆಜಿಎಫ್​ 2’ ಅಧೀರ ಸಂಜಯ್​ ದತ್​

‘ಶೆಹಜಾದಾ’ ಸೋಲಿಗೆ ಕಾರಣ ಏನು?

ಕಳೆದ ವರ್ಷ ಕಾರ್ತಿಕ್​ ಆರ್ಯನ್​ ಅವರು ‘ಭೂಲ್​ ಭುಲಯ್ಯ 2’ ಸಿನಿಮಾ ಮಾಡಿ ಗೆದ್ದಿದ್ದರು. ಆದರೆ ಈ ವರ್ಷ ಆರಂಭದಲ್ಲೇ ಅವರು ಮುಗ್ಗರಿಸುವಂತಾಗಿದೆ. ಇದಕ್ಕೆ ಕಾರಣ ಆಗಿದ್ದು ರಿಮೇಕ್. ಹೌದು, ತೆಲುಗಿನ ‘ಅಲಾ ವೈಕುಂಠಪುರಮುಲೋ’ ಚಿತ್ರದ ಹಿಂದಿ ರಿಮೇಕ್​ ಆಗಿ ‘ಶೆಹಜಾದಾ’ ಸಿನಿಮಾ ಮೂಡಿಬಂದಿದೆ. ಮೂಲ ಸಿನಿಮಾವನ್ನು ಜನರು ಈಗಾಗಲೇ ಚಿತ್ರಮಂದಿರ ಮತ್ತು ಒಟಿಟಿಯಲ್ಲಿ ನೋಡಿರುವುದರಿಂದ ಹಿಂದಿ ರಿಮೇಕ್​ ಬಗ್ಗೆ ಪ್ರೇಕ್ಷಕರು ಹೆಚ್ಚು ಆಸಕ್ತಿ ತೋರಿಸಿಲ್ಲ.

ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಕಾರ್ತಿಕ್​ ಆರ್ಯನ್​ಗೆ​ ದುಂಬಾಲುಬಿದ್ದ ಲೇಡಿ ಫ್ಯಾನ್ಸ್​; ವೈರಲ್​ ಆಯ್ತು ವಿಡಿಯೋ

ಫೈಟ್​ ಮಾಡಲು ಹೋಗಿ ಪೆಟ್ಟು ತಿಂದ ಕಾರ್ತಿಕ್​ ಆರ್ಯನ್​:

ನಟ ಕಾರ್ತಿಕ್​ ಆರ್ಯನ್ ಅವರು ಈವರೆಗೂ ಲವರ್​ ಬಾಯ್​ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಆದರೆ ‘ಶೆಹಜಾದಾ’ ಸಿನಿಮಾ ಮೂಲಕ ಅವರು ಆ್ಯಕ್ಷನ್​ ಅವತಾರ ತಾಳಿದ್ದಾರೆ. ಈ ಚಿತ್ರದಲ್ಲಿ ಅವರು ಭರ್ಜರಿಯಾಗಿ ಫೈಟ್​ ಮಾಡಿದ್ದಾರೆ. ಆದರೂ ಕೂಡ ಇದು ಅವರ ಅಭಿಮಾನಿಗಳಿಗೆ ಇಷ್ಟ ಆಗಿಲ್ಲ. ಆ್ಯಕ್ಷನ್​ ಹೀರೋ ಗೆಟಪ್​ನಲ್ಲಿ ಅವರನ್ನು ಪ್ರೇಕ್ಷಕರು ಒಪ್ಪಿಕೊಂಡಿಲ್ಲ. ಹಾಗಾಗಿ ಫೈಟ್​ ಮಾಡಲು ಹೋಗಿ ಅವರು ಪೆಟ್ಟು ತಿಂದಂತಾಗಿದೆ.

ಶಾರುಖ್​ ಖಾನ್​ ನಟನೆಯ ‘ಪಠಾಣ್​’ ಸಿನಿಮಾ ಇಂದಿಗೂ ಹಲವು ಕಡೆಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಜೊತೆಗೆ ಹಾಲಿವುಡ್​ ಸಿನಿಮಾಗಳು ಕೂಡ ಬಿಡುಗಡೆಯಾಗಿ ಪೈಪೋಟಿ ನೀಡುತ್ತಿವೆ. ಈ ಎಲ್ಲ ಚಿತ್ರಗಳ ನಡುವೆ ಸ್ಪರ್ಧಿಸುವಲ್ಲಿ ‘ಶೆಹಜಾದಾ’ ಸಿನಿಮಾ ವಿಫಲವಾಗಿದೆ. ಈ ಚಿತ್ರಕ್ಕೆ ರೋಹಿತ್​ ಧವನ್​ ನಿರ್ದೇಶನ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:51 pm, Sun, 19 February 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್