AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೂಟಿಂಗ್ ಸೆಟ್​ನಲ್ಲಿ ಮಾಧುರಿ ದೀಕ್ಷಿತ್​ಗೆ ಬ್ಲೌಸ್​ ಬಿಚ್ಚುವಂತೆ ಒತ್ತಾಯಿಸಿದ್ದ ನಿರ್ದೇಶಕ

‘ಅದು ಸಿನಿಮಾದ ಪ್ರಮುಖ ದೃಶ್ಯವಾಗಿದ್ದು, ಅದನ್ನು ಮೊದಲ ದಿನವೇ ಚಿತ್ರೀಕರಿಸಲು ನಾನು ನಿರ್ಧರಿಸಿದ್ದೆ. ಅದಕ್ಕೆ ಮಾಧುರಿ ಕೂಡ ಒಪ್ಪಿಕೊಂಡಿದ್ದರು. ಆದರೆ ಶೂಟಿಂಗ್​ ಸಂದರ್ಭದಲ್ಲಿ ತಕರಾರು ತೆಗೆದರು’ ಎಂದು ಟಿನು ಆನಂದ್​ ಹೇಳಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಅವರು ಮಾತನಾಡಿದ್ದಾರೆ.

ಶೂಟಿಂಗ್ ಸೆಟ್​ನಲ್ಲಿ ಮಾಧುರಿ ದೀಕ್ಷಿತ್​ಗೆ ಬ್ಲೌಸ್​ ಬಿಚ್ಚುವಂತೆ ಒತ್ತಾಯಿಸಿದ್ದ ನಿರ್ದೇಶಕ
ಮಾಧುರಿ ದೀಕ್ಷಿತ್​, ಟಿನು ಆನಂದ್​
TV9 Web
| Updated By: ಮದನ್​ ಕುಮಾರ್​|

Updated on: Sep 08, 2023 | 2:50 PM

Share

ನಟಿ ಮಾಧುರಿ ದೀಕ್ಷಿತ್​ (Madhuri Dixit) ಅವರು ಬಾಲಿವುಡ್​ನಲ್ಲಿ ಮಿಂಚಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅನೇಕ ಕಷ್ಟಗಳನ್ನು ದಾಟಿಕೊಂಡು ಅವರು ಈ ಹಂತಕ್ಕೆ ಬಂದಿದ್ದಾರೆ. ಕೆಲವೊಮ್ಮೆ ಅವರು ಶೂಟಿಂಗ್​ ಸೆಟ್​ನಲ್ಲಿ ತೀರಾ ಮುಜುಗರದ ಸಂದರ್ಭಗಳನ್ನು ಎದುರಿಸಿದ್ದು ಕೂಡ ಉಂಟು. ‘ಶನಖ್ತ್​’ ಸಿನಿಮಾದ ಶೂಟಿಂಗ್ ವೇಳೆ ಬ್ಲೌಸ್​ ಬಿಚ್ಚುವಂತೆ ನಿರ್ದೇಶಕ ಟಿನು ಆನಂದ್​ ಒತ್ತಾಯಿಸಿದ್ದರು. ಅದಕ್ಕೆ ಮಾಧುರಿ ದೀಕ್ಷಿತ್​ ವಿರೋಧ ವ್ಯಕ್ತಪಡಿಸಿದ್ದರು. ಅಂದು ಶೂಟಿಂಗ್​ ಸೆಟ್​ನಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿತ್ತು. ಅಲ್ಲಿ ಅಸಲಿಗೆ ನಡೆದಿದ್ದು ಏನು ಎಂಬುದನ್ನು ಟಿನು ಆನಂದ್​ ಅವರು ವಿವರಿಸಿದ್ದಾರೆ. ಸಿನಿಮಾದ ದೃಶ್ಯದಲ್ಲಿ ಮಾಧುರಿ ದೀಕ್ಷಿತ್​ ಅವರು ಬ್ಲೌಸ್​ ತೆಗೆಯುವುದು ಅವಶ್ಯಕವಾಗಿತ್ತು ಎಂದು ಟಿನು ಆನಂದ್​ (Tinnu Anand) ಹೇಳಿದ್ದಾರೆ.

ಆ ಸಿನಿಮಾದಲ್ಲಿ ಅಮಿತಾಭ್​ ಬಚ್ಚನ್​ ಹೀರೋ. ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ನಾಯಕನನ್ನು ವಿಲನ್​ಗಳು ಸರಪಳಿಯಿಂದ ಕಟ್ಟಿ ಹಾಕಿರುತ್ತಾರೆ. ಆತನನ್ನು ಉಳಿಸುವ ನಾಯಕಿ (ಮಾಧುರಿ) ಒಂದು ಉಪಾಯ ಮಾಡುತ್ತಾಳೆ. ‘ಮಹಿಳೆಯಾದ ನಾನು ಇಲ್ಲಿ ನಿಂತಿರುವಾಗ ಪುರುಷನ ಮೇಲೆ ಸರಪಳಿಯಿಂದ ಯಾಕೆ ದಾಳಿ ಮಾಡುತ್ತೀರಿ’ ಎಂದು ಆಕೆ ಕೇಳುತ್ತಾಳೆ. ಆ ದೃಶ್ಯದಲ್ಲಿ ಮಾಧುರಿ ದೀಕ್ಷಿತ್​ ಅವರು ತಮ್ಮ ಬ್ಲೌಸ್​ ಬಿಚ್ಚಬೇಕು ಎಂದು ಒಪ್ಪಂದ ಆಗಿತ್ತು ಎಂಬುದು ಟಿನು ಆನಂದ್​ ಅವರ ವಾದ.

Madhuri Dixit: ಪಾಕಿಸ್ತಾನಿ ಹುಡುಗಿಯ ಡ್ಯಾನ್ಸ್​ ಕಾಪಿ ಮಾಡಿದ ಮಾಧುರಿ ದೀಕ್ಷಿತ್​; ನೆಟ್ಟಿಗರಿಂದ ಬುದ್ಧಿಮಾತು

‘ಆ ದೃಶ್ಯದಲ್ಲಿ ಬ್ಲೌಸ್​ ತೆಗೆಯಬೇಕು ಮತ್ತು ನಿಮ್ಮನ್ನು ಜನರು ಮೊದಲ ಬಾರಿಗೆ ಬ್ರಾನಲ್ಲಿ ನೋಡುತ್ತಾರೆ ಎಂದು ಮಾಧುರಿಗೆ ನಾನು ಮೊದಲೇ ಹೇಳಿದ್ದೆ. ಹೀರೋನನ್ನು ಕಾಪಾಡಲು ಆಕೆ ತನ್ನನ್ನು ತಾನು ವಿಲನ್​ಗೆ ಒಪ್ಪಿಸಿಕೊಳ್ಳುವ ದೃಶ್ಯ ಅದಾಗಿತ್ತು. ಅದು ಸಿನಿಮಾದ ಪ್ರಮುಖ ದೃಶ್ಯವಾಗಿದ್ದು, ಅದನ್ನು ಮೊದಲ ದಿನವೇ ಚಿತ್ರೀಕರಿಸಲು ನಾನು ನಿರ್ಧರಿಸಿದ್ದೆ. ಅದಕ್ಕೆ ಮಾಧುರಿ ಕೂಡ ಒಪ್ಪಿಕೊಂಡಿದ್ದರು. ಆದರೆ ಶೂಟಿಂಗ್​ ಸಂದರ್ಭದಲ್ಲಿ ತಕರಾರು ತೆಗೆದರು’ ಎಂದು ಟಿನು ಆನಂದ್​ ಹೇಳಿದ್ದಾರೆ.

‘ಏಕ್​ ದೋ ತೀನ್​..’ ಹಾಡಿಗೆ ಡ್ಯಾನ್ಸ್ ಮಾಡಿದ ರವೀನಾ ಟಂಡನ್​; ಮಾಧುರಿ ದೀಕ್ಷಿತ್​ ಮೆಚ್ಚುಗೆ

‘ಏನಾಯಿತು ಎಂದು ಮಾಧುರಿಗೆ ಕೇಳಿದೆ. ಈ ಸೀನ್​ ಮಾಡಲು ತಾವು ಸಿದ್ಧರಿಲ್ಲ ಎಂದು ಅವರು ಹೇಳಿದರು. ನೀವು ಈ ಸೀನ್​ ಮಾಡಲೇಬೇಕು ಅಂತ ನಾನು ಹೇಳಿದೆ. ಆಗಲೂ ಅವರು ಒಪ್ಪಲಿಲ್ಲ. ಹಾಗಿದ್ದರೆ ಈ ಸಿನಿಮಾಗೆ ನೀವು ವಿದಾಯ ಹೇಳಿ, ನಾನು ಶೂಟಿಂಗ್ ಕ್ಯಾನ್ಸಲ್​ ಮಾಡುತ್ತೇನೆ ಅಂತ ಹೇಳಿದೆ. ಅವರಿಗೆ ಆ ದೃಶ್ಯದ ಬಗ್ಗೆ ತಕರಾರು ಇದ್ದರೆ ಒಪ್ಪಂದಕ್ಕೆ ಸಹಿ ಹಾಕುವುದಕ್ಕಿಂತ ಮುನ್ನವೇ ಅದನ್ನು ಹೇಳಬೇಕಿತ್ತು’ ಎಂದು ಆ ದಿನದ ಘಟನೆಯನ್ನು ಟಿನು ಆನಂದ್​ ನೆನಪಿಸಿಕೊಂಡಿದ್ದಾರೆ.

ಬಾಲಿವುಡ್​ನಲ್ಲಿ ನಟನಾಗಿ ಮತ್ತು ನಿರ್ದೇಶಕನಾಗಿ ಟಿನು ಆನಂದ್​ ಗುರುತಿಸಿಕೊಂಡಿದ್ದಾರೆ. ಈಗ ಅವರು ‘ಸಲಾರ್​’ ಸಿನಿಮಾದಲ್ಲೂ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಬಿಡುಗಡೆ ಆಗಿರುವ ಟೀಸರ್​ನಲ್ಲಿ ಅವರ ಪಾತ್ರ ಹೈಲೈಟ್​ ಆಗಿದೆ. ಈ ಸಿನಿಮಾ ಮೇಲೆ ಪ್ರಭಾಸ್​ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!