AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೂಟಿಂಗ್ ಸೆಟ್​ನಲ್ಲಿ ಮಾಧುರಿ ದೀಕ್ಷಿತ್​ಗೆ ಬ್ಲೌಸ್​ ಬಿಚ್ಚುವಂತೆ ಒತ್ತಾಯಿಸಿದ್ದ ನಿರ್ದೇಶಕ

‘ಅದು ಸಿನಿಮಾದ ಪ್ರಮುಖ ದೃಶ್ಯವಾಗಿದ್ದು, ಅದನ್ನು ಮೊದಲ ದಿನವೇ ಚಿತ್ರೀಕರಿಸಲು ನಾನು ನಿರ್ಧರಿಸಿದ್ದೆ. ಅದಕ್ಕೆ ಮಾಧುರಿ ಕೂಡ ಒಪ್ಪಿಕೊಂಡಿದ್ದರು. ಆದರೆ ಶೂಟಿಂಗ್​ ಸಂದರ್ಭದಲ್ಲಿ ತಕರಾರು ತೆಗೆದರು’ ಎಂದು ಟಿನು ಆನಂದ್​ ಹೇಳಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಅವರು ಮಾತನಾಡಿದ್ದಾರೆ.

ಶೂಟಿಂಗ್ ಸೆಟ್​ನಲ್ಲಿ ಮಾಧುರಿ ದೀಕ್ಷಿತ್​ಗೆ ಬ್ಲೌಸ್​ ಬಿಚ್ಚುವಂತೆ ಒತ್ತಾಯಿಸಿದ್ದ ನಿರ್ದೇಶಕ
ಮಾಧುರಿ ದೀಕ್ಷಿತ್​, ಟಿನು ಆನಂದ್​
Follow us
TV9 Web
| Updated By: ಮದನ್​ ಕುಮಾರ್​

Updated on: Sep 08, 2023 | 2:50 PM

ನಟಿ ಮಾಧುರಿ ದೀಕ್ಷಿತ್​ (Madhuri Dixit) ಅವರು ಬಾಲಿವುಡ್​ನಲ್ಲಿ ಮಿಂಚಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅನೇಕ ಕಷ್ಟಗಳನ್ನು ದಾಟಿಕೊಂಡು ಅವರು ಈ ಹಂತಕ್ಕೆ ಬಂದಿದ್ದಾರೆ. ಕೆಲವೊಮ್ಮೆ ಅವರು ಶೂಟಿಂಗ್​ ಸೆಟ್​ನಲ್ಲಿ ತೀರಾ ಮುಜುಗರದ ಸಂದರ್ಭಗಳನ್ನು ಎದುರಿಸಿದ್ದು ಕೂಡ ಉಂಟು. ‘ಶನಖ್ತ್​’ ಸಿನಿಮಾದ ಶೂಟಿಂಗ್ ವೇಳೆ ಬ್ಲೌಸ್​ ಬಿಚ್ಚುವಂತೆ ನಿರ್ದೇಶಕ ಟಿನು ಆನಂದ್​ ಒತ್ತಾಯಿಸಿದ್ದರು. ಅದಕ್ಕೆ ಮಾಧುರಿ ದೀಕ್ಷಿತ್​ ವಿರೋಧ ವ್ಯಕ್ತಪಡಿಸಿದ್ದರು. ಅಂದು ಶೂಟಿಂಗ್​ ಸೆಟ್​ನಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿತ್ತು. ಅಲ್ಲಿ ಅಸಲಿಗೆ ನಡೆದಿದ್ದು ಏನು ಎಂಬುದನ್ನು ಟಿನು ಆನಂದ್​ ಅವರು ವಿವರಿಸಿದ್ದಾರೆ. ಸಿನಿಮಾದ ದೃಶ್ಯದಲ್ಲಿ ಮಾಧುರಿ ದೀಕ್ಷಿತ್​ ಅವರು ಬ್ಲೌಸ್​ ತೆಗೆಯುವುದು ಅವಶ್ಯಕವಾಗಿತ್ತು ಎಂದು ಟಿನು ಆನಂದ್​ (Tinnu Anand) ಹೇಳಿದ್ದಾರೆ.

ಆ ಸಿನಿಮಾದಲ್ಲಿ ಅಮಿತಾಭ್​ ಬಚ್ಚನ್​ ಹೀರೋ. ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ನಾಯಕನನ್ನು ವಿಲನ್​ಗಳು ಸರಪಳಿಯಿಂದ ಕಟ್ಟಿ ಹಾಕಿರುತ್ತಾರೆ. ಆತನನ್ನು ಉಳಿಸುವ ನಾಯಕಿ (ಮಾಧುರಿ) ಒಂದು ಉಪಾಯ ಮಾಡುತ್ತಾಳೆ. ‘ಮಹಿಳೆಯಾದ ನಾನು ಇಲ್ಲಿ ನಿಂತಿರುವಾಗ ಪುರುಷನ ಮೇಲೆ ಸರಪಳಿಯಿಂದ ಯಾಕೆ ದಾಳಿ ಮಾಡುತ್ತೀರಿ’ ಎಂದು ಆಕೆ ಕೇಳುತ್ತಾಳೆ. ಆ ದೃಶ್ಯದಲ್ಲಿ ಮಾಧುರಿ ದೀಕ್ಷಿತ್​ ಅವರು ತಮ್ಮ ಬ್ಲೌಸ್​ ಬಿಚ್ಚಬೇಕು ಎಂದು ಒಪ್ಪಂದ ಆಗಿತ್ತು ಎಂಬುದು ಟಿನು ಆನಂದ್​ ಅವರ ವಾದ.

Madhuri Dixit: ಪಾಕಿಸ್ತಾನಿ ಹುಡುಗಿಯ ಡ್ಯಾನ್ಸ್​ ಕಾಪಿ ಮಾಡಿದ ಮಾಧುರಿ ದೀಕ್ಷಿತ್​; ನೆಟ್ಟಿಗರಿಂದ ಬುದ್ಧಿಮಾತು

‘ಆ ದೃಶ್ಯದಲ್ಲಿ ಬ್ಲೌಸ್​ ತೆಗೆಯಬೇಕು ಮತ್ತು ನಿಮ್ಮನ್ನು ಜನರು ಮೊದಲ ಬಾರಿಗೆ ಬ್ರಾನಲ್ಲಿ ನೋಡುತ್ತಾರೆ ಎಂದು ಮಾಧುರಿಗೆ ನಾನು ಮೊದಲೇ ಹೇಳಿದ್ದೆ. ಹೀರೋನನ್ನು ಕಾಪಾಡಲು ಆಕೆ ತನ್ನನ್ನು ತಾನು ವಿಲನ್​ಗೆ ಒಪ್ಪಿಸಿಕೊಳ್ಳುವ ದೃಶ್ಯ ಅದಾಗಿತ್ತು. ಅದು ಸಿನಿಮಾದ ಪ್ರಮುಖ ದೃಶ್ಯವಾಗಿದ್ದು, ಅದನ್ನು ಮೊದಲ ದಿನವೇ ಚಿತ್ರೀಕರಿಸಲು ನಾನು ನಿರ್ಧರಿಸಿದ್ದೆ. ಅದಕ್ಕೆ ಮಾಧುರಿ ಕೂಡ ಒಪ್ಪಿಕೊಂಡಿದ್ದರು. ಆದರೆ ಶೂಟಿಂಗ್​ ಸಂದರ್ಭದಲ್ಲಿ ತಕರಾರು ತೆಗೆದರು’ ಎಂದು ಟಿನು ಆನಂದ್​ ಹೇಳಿದ್ದಾರೆ.

‘ಏಕ್​ ದೋ ತೀನ್​..’ ಹಾಡಿಗೆ ಡ್ಯಾನ್ಸ್ ಮಾಡಿದ ರವೀನಾ ಟಂಡನ್​; ಮಾಧುರಿ ದೀಕ್ಷಿತ್​ ಮೆಚ್ಚುಗೆ

‘ಏನಾಯಿತು ಎಂದು ಮಾಧುರಿಗೆ ಕೇಳಿದೆ. ಈ ಸೀನ್​ ಮಾಡಲು ತಾವು ಸಿದ್ಧರಿಲ್ಲ ಎಂದು ಅವರು ಹೇಳಿದರು. ನೀವು ಈ ಸೀನ್​ ಮಾಡಲೇಬೇಕು ಅಂತ ನಾನು ಹೇಳಿದೆ. ಆಗಲೂ ಅವರು ಒಪ್ಪಲಿಲ್ಲ. ಹಾಗಿದ್ದರೆ ಈ ಸಿನಿಮಾಗೆ ನೀವು ವಿದಾಯ ಹೇಳಿ, ನಾನು ಶೂಟಿಂಗ್ ಕ್ಯಾನ್ಸಲ್​ ಮಾಡುತ್ತೇನೆ ಅಂತ ಹೇಳಿದೆ. ಅವರಿಗೆ ಆ ದೃಶ್ಯದ ಬಗ್ಗೆ ತಕರಾರು ಇದ್ದರೆ ಒಪ್ಪಂದಕ್ಕೆ ಸಹಿ ಹಾಕುವುದಕ್ಕಿಂತ ಮುನ್ನವೇ ಅದನ್ನು ಹೇಳಬೇಕಿತ್ತು’ ಎಂದು ಆ ದಿನದ ಘಟನೆಯನ್ನು ಟಿನು ಆನಂದ್​ ನೆನಪಿಸಿಕೊಂಡಿದ್ದಾರೆ.

ಬಾಲಿವುಡ್​ನಲ್ಲಿ ನಟನಾಗಿ ಮತ್ತು ನಿರ್ದೇಶಕನಾಗಿ ಟಿನು ಆನಂದ್​ ಗುರುತಿಸಿಕೊಂಡಿದ್ದಾರೆ. ಈಗ ಅವರು ‘ಸಲಾರ್​’ ಸಿನಿಮಾದಲ್ಲೂ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಬಿಡುಗಡೆ ಆಗಿರುವ ಟೀಸರ್​ನಲ್ಲಿ ಅವರ ಪಾತ್ರ ಹೈಲೈಟ್​ ಆಗಿದೆ. ಈ ಸಿನಿಮಾ ಮೇಲೆ ಪ್ರಭಾಸ್​ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
Krunal Pandya: 9 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕೃನಾಲ್ ಪಾಂಡ್ಯ
Krunal Pandya: 9 ವರ್ಷಗಳ ಬಳಿಕ ಅರ್ಧಶತಕ ಬಾರಿಸಿದ ಕೃನಾಲ್ ಪಾಂಡ್ಯ
‘ಬಾಯ್ಸ್ vs ಗರ್ಲ್ಸ್’ನಲ್ಲಿ ಹೆಚ್ಚು ವೋಟ್ ಬಿದ್ದಿದ್ದು ಯಾರಿಗೆ?
‘ಬಾಯ್ಸ್ vs ಗರ್ಲ್ಸ್’ನಲ್ಲಿ ಹೆಚ್ಚು ವೋಟ್ ಬಿದ್ದಿದ್ದು ಯಾರಿಗೆ?
VIDEO: ಏಟಿಗೆ ಎದಿರೇಟು... ಆಕ್ರೋಶಭರಿತರಾಗಿ ಸಂಭ್ರಮಿಸಿದ ವಿರಾಟ್ ಕೊಹ್ಲಿ
VIDEO: ಏಟಿಗೆ ಎದಿರೇಟು... ಆಕ್ರೋಶಭರಿತರಾಗಿ ಸಂಭ್ರಮಿಸಿದ ವಿರಾಟ್ ಕೊಹ್ಲಿ