AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಂದ ಗೋಕುಲ’: ನಡೆದೇ ಬಿಡ್ತು ವಲ್ಲಭ-ಅಮೂಲ್ಯ ಮದುವೆ; ತಲೆತಿರುಗಿ ಬಿದ್ದ ನಂದ

ನಂದ ಗೋಕುಲ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್! ಶತ್ರುಗಳಾಗಿದ್ದ ಅಮೂಲ್ಯ ಮತ್ತು ವಲ್ಲಭ ಈಗ ಪತಿ-ಪತ್ನಿಯರಾಗಿದ್ದಾರೆ. ಸಿದ್ದು ಮೋಸದಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಅಮೂಲ್ಯಳನ್ನು ವಲ್ಲಭನ ತಾಯಿ ಮನೆಗೆ ಕರೆತಂದು ಮದುವೆ ಮಾಡಿಸಿದ್ದಾರೆ. ಈ ಮದುವೆಯಿಂದ ನಂದ ಮತ್ತು ಅಮೂಲ್ಯರ ಕುಟುಂಬಕ್ಕೆ ತೀವ್ರ ಆಘಾತವಾಗಿದೆ.

‘ನಂದ ಗೋಕುಲ’: ನಡೆದೇ ಬಿಡ್ತು ವಲ್ಲಭ-ಅಮೂಲ್ಯ ಮದುವೆ; ತಲೆತಿರುಗಿ ಬಿದ್ದ ನಂದ
ನಂದ ಗೋಕುಲ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Oct 16, 2025 | 10:24 AM

Share

‘ನಂದ ಗೋಕುಲ’ ಧಾರಾವಾಹಿಯಲ್ಲಿ ನಂದನ ಮನೆಗೂ ಹಾಗೂ ಆತನ ಸಹೋದರನ ಮನೆ ಮಧ್ಯೆ ದೊಡ್ಡ ಅಂತರ ಬೆಳೆದಿತ್ತು. ಈ ಅಂತರ ದೂರ ಆಗುವ ಸಮಯ ಬಂದೇ ಬಿಟ್ಟಿದೆ ಎಂದು ಎಲ್ಲರೂ ಭಾವಿಸಿದ್ದರು. ಇದಕ್ಕೆ ಕಾರಣ ಆಗಿದ್ದು, ಅಮೂಲ್ಯ ಮದುವೆ ಮುರಿದು ಬಿದ್ದಿದ್ದು. ಆ ಸಂದರ್ಭದಲ್ಲಿ ನಂದ ತನ್ನ ಸಹೋದರರ ಪರವಾಗಿ ಮಾತನಾಡಿದ್ದ. ಆತ್ಮಹತ್ಯೆಗೆ ಹೊರಟವನ ಬದುಕಿಸಿದ್ದಾಗ. ಹೀಗಿರುವಾಗಲೇ ವಲ್ಲಭ ಹಾಗೂ ಅಮೂಲ್ಯ ವಿವಾಹ ನಡೆದಿದೆ.

‘ನಂದ ಗೋಕುಲ’ ಧಾರಾವಾಹಿಯಲ್ಲಿ ಅಮೂಲ್ಯ ಹಾಗೂ ಸಿದ್ಧು ಪರಸ್ಪರ ಪ್ರೀತಿಸುತ್ತಾ ಇದ್ದರು. ಆದರೆ, ಸಿದ್ದು ಕೇವಲ ಹಣದ ಆಸೆಗೆ ಪ್ರೀತಿ ಮಾಡಿದ್ದ. ಆ ವಿಚಾರ ರಿವೀಲ್ ಆಗಿದೆ. ಅಷ್ಟೇ ಅಲ್ಲ, ಆಕೆಗೆ ಫಿಕ್ಸ್ ಆಗಿದ್ದ ಮದುವೆಯನ್ನು ಮುರಿದು ಓಡಿಸಿಕೊಂಡು ಹೋಗಿದ್ದ. ಹೀಗೆ ಓಡಿಸಿಕೊಂಡು ಹೋಗುವಾಗ ಆಕೆ ಬಳಿ ಚಿನ್ನ ತರುವಂತೆ ಹೇಳಿದ್ದ.

ಈ ಚಿನ್ನವನ್ನು ಅಮೂಲ್ಯ ಬಳಿಯಿಂದ ಕಸಿದುಕೊಂಡು ಸಿದ್ಧು ಪರಾರಿಯಾಗಿದ್ದಾನೆ. ಈ ವೇಳೆ ದಿಕ್ಕು ತೋಚದೆ ಆಕೆ ಆತ್ಮಹತ್ಯೆಗೆ ಮುಂದಾಗಿದ್ದಾಳೆ. ಈ ಸಮಯಕ್ಕೆ ಸರಿಯಾಗಿ ಚಿನ್ನು ಅವಳನ್ನು ಕಾಪಾಡಿದ್ದಾಳೆ. ಆಗ ವಲ್ಲಭ ಹಾಗೂ ಅವನ ತಾಯಿ ಸಿಕ್ಕಿದ್ದಾಳೆ. ಈ ವೇಳೆ ವಲ್ಲಭನ ತಾಯಿ ದೊಡ್ಡ ನಿರ್ಧಾರ ತೆಗೆದುಕೊಂಡಳು. ವಲ್ಲಭ ಹಾಗೂ ಅಮೂಲ್ಯನನ್ನು ಮದುವೆ ಮಾಡಲು ನಿರ್ಧರಿಸಿದಳು.

ಇದನ್ನೂ ಓದಿ
Image
ಆಲಿಯಾ ಹೊಸ ಮನೆಯಲ್ಲಿ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಗಣಪತಿ ಮೂರ್ತಿ
Image
ಸಪ್ತಪದಿ ತುಳಿಯುವಾಗಲೇ ಕರ್ಣನಿಗೆ ಗೊತ್ತಾಯ್ತು ನಿಧಿ ಪ್ರೆಗ್ನೆನ್ಸಿ ವಿಚಾರ
Image
ಬಕ್ರಾ ಮಾಡಲು ಬಂದ ಜಾನ್ವಿ-ಅಶ್ವಿನಿಗೆ ಮಣ್ಣು ಮುಕ್ಕಿಸಿದ ರಕ್ಷಿತಾ ಶೆಟ್ಟಿ
Image
ಬಿಗ್ ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್; ಆ ಇಬ್ಬರು ಔಟ್?

ಈ ಮದುವೆ ಯಶಸ್ವಿಯಾಗಿ ಆಗಿದೆ. ಅಮೂಲ್ಯ ಹಾಗೂ ವಲ್ಲಭ ಹಾವು ಮುಂಗುಸಿಯಂತೆ ಕಿತ್ತಾಡಿಕೊಂಡಿದ್ದವರು. ಈಗ ಇವರು ಒಂದಾಗುತ್ತಾರೆ ಎಂದಾಗ ಒಂದಷ್ಟು ಫನ್ ನಿರೀಕ್ಷಿಸಬಹುದು. ಅದಕ್ಕೂ ಮೊದಲು ಮನೆಯವರನ್ನು ಎದುರಿಸಬೇಕಿದೆ. ಈ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.

ಇದನ್ನೂ ಓದಿ: ‘ನಂದ ಗೋಕುಲ’ ಧಾರಾವಾಹಿಯಲ್ಲಿ ವಲ್ಲಭ-ಅಮೂಲ್ಯ ವಿವಾಹ; ದೊಡ್ಡ ಟ್ವಿಸ್ಟ್

ಅಮೂಲ್ಯ ಹಾಗೂ ವಲ್ಲಭ ಮದುವೆ ಆಗಿ ಮನೆಗೆ ಬಂದಿದ್ದಾರೆ. ಇದನ್ನು ನೋಡಿ ನಂದ ತಲೆತಿರುಗಿ ಬಿದ್ದಿದ್ದಾನೆ. ಅಮೂಲ್ಯಾ ಮನೆಯವರಿಗೂ ಇದು ಶಾಕಿಂಗ್ ಎನಿಸಿದೆ. ಮಗಳನ್ನು ಕೊಲ್ಲಲು ಮುಂದಾದವರು ಈಗ ಅಮೂಲ್ಯ-ವಲ್ಲಭನ ಮದುವೆ ನೋಡಿ ಮತ್ತಷ್ಟು ಕೋಪಗೊಳ್ಳುವ ಸಾಧ್ಯತೆ ಇದೆ. ದೊಡ್ಡ ಟ್ವಿಸ್ಟ್​ನಿಂದ ಧಾರಾವಾಹಿ ಕಥೆ ಬೇರೆ ದಿಕ್ಕಲ್ಲಿ ಸಾಗೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!