Bawaal Teaser: ಗ್ಯಾಸ್​ ಚೇಂಬರ್​ ಹತ್ಯಾಕಾಂಡದ ಕಥೆ ಹೇಳುತ್ತಾ ‘ಬವಾಲ್​’? ವರುಣ್​ ಧವನ್​-ಜಾನ್ವಿ ಕಪೂರ್​ ಚಿತ್ರದ ಟೀಸರ್​ ವೈರಲ್​

Nitesh Tiwari: ‘ಬವಾಲ್​’ ಸಿನಿಮಾದ ಟೀಸರ್​ನ ಆರಂಭದಲ್ಲಿ ಪ್ರೇಮಕಥೆ ತೆರೆದುಕೊಳ್ಳುತ್ತದೆ. ಆದರೆ ಟೀಸರ್​ನ ಕೊನೆಯಲ್ಲಿ ಗ್ಯಾಸ್​ ಚೇಂಬರ್​ನ ಭೀಕರ ದೃಶ್ಯ ಕಾಣಿಸುತ್ತದೆ.

Bawaal Teaser: ಗ್ಯಾಸ್​ ಚೇಂಬರ್​ ಹತ್ಯಾಕಾಂಡದ ಕಥೆ ಹೇಳುತ್ತಾ ‘ಬವಾಲ್​’? ವರುಣ್​ ಧವನ್​-ಜಾನ್ವಿ ಕಪೂರ್​ ಚಿತ್ರದ ಟೀಸರ್​ ವೈರಲ್​
‘ಬವಾಲ್​’ ಸಿನಿಮಾದ ಟೀಸರ್​ನಲ್ಲಿನ ದೃಶ್ಯ
Follow us
|

Updated on: Jul 05, 2023 | 6:36 PM

ನಿರ್ದೇಶಕ ನಿತೇಶ್​ ತಿವಾರಿ (Nitesh Tiwari) ಅವರು ಬಾಲಿವುಡ್​ನಲ್ಲಿ ಭರವಸೆ ಮೂಡಿಸಿದ್ದಾರೆ. ಆಮಿರ್​ ಖಾನ್​ ನಟನೆಯ ‘ದಂಗಲ್​’, ಸುಶಾಂತ್​ ಸಿಂಗ್ ರಜಪೂತ್​ ಅಭಿನಯದ ‘ಚಿಚೋರೆ’ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದು ಇದೇ ನಿತೇಶ್​ ತಿವಾರಿ. ಇತ್ತೀಚಿನ ಕೆಲವು ದಿನಗಳಿಂದ ಅವರು ಹೆಚ್ಚು ಸುದ್ದಿ ಆಗಿದ್ದು ರಾಮಾಯಣ ಆಧರಿಸಿ ಸಿನಿಮಾದ ಗಾಸಿಪ್​ಗಳಿಂದ. ಆದರೆ ಈಗ ಅವರ ಹೊಸ ಸಿನಿಮಾ ‘ಬವಾಲ್​’ ಬಗ್ಗೆ ಹೈಪ್​ ಕ್ರಿಯೇಟ್​ ಆಗಿದೆ. ‘ಬವಾಲ್​’ ಸಿನಿಮಾದ (Bawaal Movie) ಟೀಸರ್​ ಬಿಡುಗಡೆ ಆಗಿದ್ದು, ಹೊಸ ಚರ್ಚೆ ಹುಟ್ಟುಹಾಕಿದೆ. ಈ ಸಿನಿಮಾದಲ್ಲಿ ವರುಣ್​ ಧವನ್​ ಮತ್ತು ಜಾನ್ವಿ ಕಪೂರ್​ ಅವರು ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಗ್ಯಾಸ್​ ಚೇಂಬರ್​ ಹತ್ಯಾಕಾಂಡದ (Holocaust) ಬಗ್ಗೆ ಹೇಳಲಾಗುತ್ತಿದೆಯೇ ಎಂಬ ಅನುಮಾನ ಮೂಡಿದೆ.

ಎರಡನೇ ಮಹಾಯುದ್ಧದ ಸಂದರ್ಭಗಳಲ್ಲಿ ಲಕ್ಷಾಂತರ ಯಹೂದಿಗಳನ್ನು ಹತ್ಯೆ ಮಾಡಲಾಗಿತ್ತು. ಹೆಂಗಸರು, ಮಕ್ಕಳು, ವೃದ್ಧರು ಎಂಬ ಕರುಣೆಯೂ ಇಲ್ಲದೇ ಎಲ್ಲರನ್ನೂ ಬೆತ್ತಲೆಗೊಳಿಸಿ ಗ್ಯಾಸ್​ ಚೇಂಬರ್​ನಲ್ಲಿ ಕೂಡಿಹಾಕಿ, ಅದರೊಳಗೆ ವಿಷಾನಿಲವನ್ನು ಹರಿಸುವ ಮೂಲಕ ಹತ್ಯಾಕಾಂಡ ನಡೆಸಲಾಗಿತ್ತು. ಆ ದುರಂತದ ಬಗ್ಗೆ ಹೇಳಿದರೆ ಇಡೀ ಮನುಷ್ಯ ಕುಲವೇ ಬೆಚ್ಚಿ ಬೀಳುತ್ತದೆ. ಈಗ ‘ಬವಾಲ್​’ ಸಿನಿಮಾದ ಕಥೆ ಕೂಡ ಇಂಥ ಗ್ಯಾಸ್​ ಚೇಂಬರ್​ ಹತ್ಯಾಕಾಂಡದ ಹಿನ್ನೆಲೆಯನ್ನು ಸಾಗುತ್ತದೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

‘ಬವಾಲ್​’ ಸಿನಿಮಾದ ಟೀಸರ್​ನ ಆರಂಭದಲ್ಲಿ ಪ್ರೇಮಕಥೆ ತೆರೆದುಕೊಳ್ಳುತ್ತದೆ. ಆದರೆ ಟೀಸರ್​ನ ಕೊನೆಯಲ್ಲಿ ಗ್ಯಾಸ್​ ಚೇಂಬರ್​ನ ಭೀಕರ ದೃಶ್ಯ ಕಾಣಿಸುತ್ತದೆ. ಅದನ್ನು ಕಪ್ಪು-ಬಿಳುಪಿನಲ್ಲಿ ತೋರಿಸಲಾಗಿದೆ. ಗ್ಯಾಸ್​ ಚೇಂಬರ್​ ಒಳಗೆ ಸಿಲುಕಿದ ಜಾನ್ವಿ ಕಪೂರ್​ ಮತ್ತು ವರುಣ್​ ಧವನ್​ ಅವರು ಕೂಗಾಡುವ ದೃಶ್ಯ ಇದರಲ್ಲಿ ಇದೆ. ಆ ಕಾರಣದಿಂದ ‘ಬವಾಲ್​’ ಚಿತ್ರದ ಟೀಸರ್​ ವೈರಲ್​ ಆಗಿದೆ.

ಇದನ್ನೂ ಓದಿ: ಜಲಿಯನ್ ವಾಲಾ ಬಾಗ್ ಹತ್ಯಾಕಾಂಡಕ್ಕೆ 104 ವರ್ಷ, ಬೈಸಾಕಿ ಯುಗಾದಿ ದಿನ ನಡೆದಿದ್ದು ಮಾರಣಹೋಮ

ಯಹೂದಿಗಳ ಹತ್ಯಾಕಾಂಡದ ವಿಷಯವನ್ನು ಇಟ್ಟುಕೊಂಡು ನಿತೇಶ್​​ ತಿವಾರಿ ಅವರು ಪ್ರೇಮಕಥೆಯ ಸಿನಿಮಾ ಮಾಡುತ್ತಾರೆ ಎಂದಾದರೆ ಅದಕ್ಕೆ ಬಹಳ ಪ್ರಬುದ್ಧತೆ ಬೇಕಾಗುತ್ತದೆ. ಪ್ರಪಂಚದ ಎದುರಿನಲ್ಲಿ ನಗೆಪಾಟಲಿಗೆ ಒಳಗಾಗುವಂತೆ ಮಾಡಬಾರದು ಎಂದು ಒಂದು ವರ್ಗದ ನೆಟ್ಟಿಗರು ಅಭಿಪ್ರಾಯ ತಿಳಿಸುತ್ತಿದ್ದಾರೆ. ನಿತೇಶ್​ ತಿವಾರಿ ಅವರಿಗೆ ಸೂಕ್ಷ್ಮತೆಗಳು ಅರ್ಥ ಆಗುತ್ತವೆ. ಅವರ ಹಿಂದಿನ ಸಿನಿಮಾಗಳೇ ಅದಕ್ಕೆ ಸಾಕ್ಷಿ ಎಂದು ಇನ್ನೊಂದು ವರ್ಗದ ನೆಟ್ಟಿಗರು ನಿರ್ದೇಶಕರ ಬೆಂಬಲಕ್ಕೆ ನಿಂತಿದ್ದಾರೆ.

ಇದನ್ನೂ ಓದಿ: 750 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾಗುತ್ತಿದೆ ಸಿನಿಮಾ; ಈ ಸ್ಟಾರ್​ ನಟರ ಸಂಭಾವನೆ 75 ಕೋಟಿ

ಜುಲೈ 21ರಂದು ನೇರವಾಗಿ ಅಮೇಜಾನ್​ ಪ್ರೈಂ ವಿಡಿಯೋ ಒಟಿಟಿ ಮೂಲಕ ‘ಬವಾಲ್​’ ಸಿನಿಮಾ ಬಿಡುಗಡೆ ಆಗಲಿದೆ. ಸಾಜಿದ್​ ನಾಡಿಯದ್ವಾಲಾ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಪ್ಯಾರಿಸ್​, ಬರ್ಲಿನ್​, ಪೋಲ್ಯಾಂಡ್​, ಆಮ್​ಸ್ಟರ್​​ಡ್ಯಾಮ್​, ವಾರ್​ಸಾ, ಲಖನೌ ಮುಂತಾದ ಕಡೆಗಳಲ್ಲಿ ಈ ಸಿನಿಮಾವನ್ನು ಚಿತ್ರಿಸಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ