AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sanjay Dutt: ಸಂಜಯ್ ದತ್ ಹೆಸರಿಗೆ 72 ಕೋಟಿ ರೂಪಾಯಿ ಆಸ್ತಿ ಬರೆದಿಟ್ಟು ಮೃತಪಟ್ಟಿದ್ದ ವೃದ್ಧೆ

ನಿಶಾ ಪಾಟೀಲ್ ಹೆಸರಿನ 62 ವರ್ಷದ ವೃದ್ಧೆ ಮುಂಬೈನಲ್ಲಿ ವಾಸವಾಗಿದ್ದರು. ಅವರು ಸಂಜಯ್ ದತ್​ ಅವರ ಹುಚ್ಚು ಅಭಿಮಾನಿ. ಈ ಕಾರಣಕ್ಕೆ ಅವರು ಆಸ್ತಿಯನ್ನು ಸಂಜಯ್ ದತ್ ಹೆಸರಿಗೆ ಬರೆದಿದ್ದರು.

Sanjay Dutt: ಸಂಜಯ್ ದತ್ ಹೆಸರಿಗೆ 72 ಕೋಟಿ ರೂಪಾಯಿ ಆಸ್ತಿ ಬರೆದಿಟ್ಟು ಮೃತಪಟ್ಟಿದ್ದ ವೃದ್ಧೆ
ಸಂಜಯ್ ದತ್
TV9 Web
| Edited By: |

Updated on: Jan 25, 2023 | 2:23 PM

Share

ನೆಚ್ಚಿನ ಸೆಲೆಬ್ರಿಟಿಗಳ ಟ್ಯಾಟೂನ ದೇಹದ ಮೇಲೆ ಹಾಕಿಸಿಕೊಳ್ಳುವವರಿದ್ದಾರೆ. ಮನೆಯಲ್ಲಿ ನೆಚ್ಚಿನ ಸ್ಟಾರ್​ನ ಫೋಟೋ ಹಾಕಿಕೊಳ್ಳುವವರೂ ಇದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಮಕ್ಕಳಿಗೆ ನೆಚ್ಚಿನ ಹೀರೋ ಹೆಸರನ್ನು ಇಟ್ಟವರಿದ್ದಾರೆ. ಆದರೆ, ಇಲ್ಲೋರ್ವ ವೃದ್ಧೆ ಸಾಯುವುದಕ್ಕೂ ಮುನ್ನ ತನ್ನ 72 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ನಟ ಸಂಜಯ್ ದತ್ (Sanjay Dutt) ಹೆಸರಿಗೆ ಬರೆದಿದ್ದರು. ಈ ಘಟನೆ ನಡೆದಿದ್ದು 2018ರಲ್ಲಿ. ಕೆಲ ಅಭಿಮಾನಿಗಳು ಈ ಘಟನೆಯನ್ನು ಈಗ ಸೋಶಿಯಲ್ ಮೀಡಿಯಾದಲ್ಲಿ (Social Media) ನೆನಪಿಸಿಕೊಂಡಿದ್ದಾರೆ.

ನಿಶಾ ಪಾಟೀಲ್ ಹೆಸರಿನ 62 ವರ್ಷದ ವೃದ್ಧೆ ಮುಂಬೈನಲ್ಲಿ ವಾಸವಾಗಿದ್ದರು. ಅವರು ಸಂಜಯ್ ದತ್​ ಅವರ ಹುಚ್ಚು ಅಭಿಮಾನಿ. ಅವರು 2018ರ ಜನವರಿ 15ರಂದು ವಯೋಸಹಜ ಕಾಯಿಲೆಯಿಂದ ಮೃತಪಟ್ಟರು. ತಮ್ಮ ಆಸ್ತಿಯನ್ನು ಅವರು ಮಕ್ಕಳಿಗೆ ಬರೆದಿಟ್ಟಿರಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅವರು ತಮ್ಮ ಎಲ್ಲಾ ಆಸ್ತಿಯನ್ನು ಸಂಜಯ್ ದತ್​ಗೆ ನೀಡುವ ನಿರ್ಧಾರ ತೆಗೆದುಕೊಂಡಿದ್ದರು.

ನಿಶಾ ಮೃತಪಟ್ಟ ನಂತರದಲ್ಲಿ ಪೊಲೀಸರಿಗೆ ವಿಲ್ ವಿಚಾರ ಗೊತ್ತಾಗಿದೆ. ಹೀಗಾಗಿ, ಸಂಜಯ್ ದತ್​ಗೆ ಕರೆ ಮಾಡಿ ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬ್ಯಾಂಕ್​ನಲ್ಲಿರುವ ಹಣ, ಜ್ಯುವೆಲರಿ, ಮನೆ ಸೇರಿ 72 ಕೋಟಿ ಮೌಲ್ಯದ ಆಸ್ತಿಯನ್ನು ನಿಶಾ ಹೊಂದಿದ್ದರು. ಎಲ್ಲವೂ ಸಂಜಯ್ ದತ್ ಹೆಸರಿಗೆ ಅವರು ಬರೆದಿದ್ದರು.

ಈ ವಿಚಾರ ತಿಳಿದ ನಂತರದಲ್ಲಿ ಸಂಜಯ್ ದತ್​ಗೆ ಶಾಕ್ ಆಗಿತ್ತು. ಅವರು ಈ ಹಣವನ್ನು ಮುಟ್ಟಿಲ್ಲ. ಬದಲಿಗೆ ನಿಶಾ ಪಾಟಿಲ್ ಅವರ ಮಕ್ಕಳ ಹೆಸರಿಗೆ ಇದನ್ನು ವರ್ಗಾವಣೆ ಮಾಡಿದ್ದರು. 2018ರಲ್ಲಿ ಈ ವಿಚಾರ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು.

ಸಂಜಯ್ ದತ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಅವರನ್ನು ಕಂಡರೆ ಅನೇಕರಿಗೆ ಇಷ್ಟ. ಅವರಿಗೆ ಈ ರೀತಿಯ ಹುಚ್ಚು ಅಭಿಮಾನ ತೋರುವವರೂ ಇದ್ದಾರೆ ಎಂಬುದು 2018ರಲ್ಲಿ ಗೊತ್ತಾಗಿತ್ತು.

ಇದನ್ನೂ ಓದಿ: ದಕ್ಷಿಣ ಭಾರತದ ಸಿನಿಮಾಗಳನ್ನು ಕೊಂಡಾಡಿದ ಸಂಜಯ್ ದತ್; ‘ಕೆಡಿ’ ವೇದಿಕೆ ಮೇಲೆ ಬಾಲಿವುಡ್​ ಹೀರೋ ಹೇಳಿದ್ದಿಷ್ಟು

ಸಂಜಯ್ ದತ್ ಅವರು ‘ಕೆಜಿಎಫ್ 2’ ಚಿತ್ರದಿಂದ ಕನ್ನಡಕ್ಕೆ ಕಾಲಿಟ್ಟರು. ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ‘ಕೆಡಿ’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್