AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಟಾರ್​ ಹೀರೋ ಜತೆಗಿನ ಜಗಳದ ಬಗ್ಗೆ ಮೌನ ಮುರಿದ ಅಜಯ್​ ದೇವಗನ್​: ‘ಇದೆಲ್ಲ ಫ್ಯಾನ್ಸ್​ ಕೆಲಸ’ ಎಂದ ನಟ

‘ಅಭಿಮಾನಿ ಸಂಘಗಳ ನಡುವೆ ಜಗಳ ಆಗುತ್ತದೆ. ಆಗ ಇಬ್ಬರು ಸ್ಟಾರ್ ನಟರ ನಡುವೆಯೇ ಜಗಳ ಆಗಿದೆ ಎಂಬ ರೀತಿಯಲ್ಲಿ ಬಿಂಬಿತ ಆಗುತ್ತದೆ’ ಎಂದು ಅಜಯ್​ ದೇವಗನ್​ ಹೇಳಿದ್ದಾರೆ.

ಸ್ಟಾರ್​ ಹೀರೋ ಜತೆಗಿನ ಜಗಳದ ಬಗ್ಗೆ ಮೌನ ಮುರಿದ ಅಜಯ್​ ದೇವಗನ್​: ‘ಇದೆಲ್ಲ ಫ್ಯಾನ್ಸ್​ ಕೆಲಸ’ ಎಂದ ನಟ
ಅಜಯ್ ದೇವಗನ್
Follow us
TV9 Web
| Updated By: ಮದನ್​ ಕುಮಾರ್​

Updated on: May 06, 2022 | 8:00 AM

ಬಾಲಿವುಡ್​ ನಟ ಅಜಯ್​ ದೇವಗನ್​ (Ajay Devgn) ಅವರು ಅನೇಕ ಕಾರಣಗಳಿಂದ ಹೈಲೈಟ್​ ಆಗುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಅವರು ರಾಷ್ಟ್ರ ಭಾಷೆ ಕುರಿತು ಕಮೆಂಟ್​ ಮಾಡಿ ಸುದ್ದಿ ಆಗಿದ್ದರು. ಅದರಲ್ಲೂ ಕಿಚ್ಚ ಸುದೀಪ್​ಗೆ ಟ್ವಿಟರ್​ನಲ್ಲಿ ಪಾಠ ಮಾಡಲು ಬಂದು, ನಂತರ ತಾವೇ ಪಾಠ ಕಲಿತು ಸೈಲೆಂಟ್​ ಆಗಿದ್ದರು. ಇದರ ಬೆನ್ನಲ್ಲೇ ಅವರು ನಟಿಸಿದ ‘ರನ್​ವೇ 34’ ಸಿನಿಮಾ (Runway 34 Movie) ಬಿಡುಗಡೆ ಆಯಿತು. ಏ.29ರಂದು ಬಿಡುಗಡೆಯಾದ ಈ ಚಿತ್ರಕ್ಕೆ ಅಜಯ್​ ದೇವಗನ್​ ಅವರೇ ನಿರ್ದೇಶನ ಕೂಡ ಮಾಡಿದ್ದಾರೆ. ಉತ್ತಮ ವಿಮರ್ಶೆ ಸಿಕ್ಕರೂ ಕೂಡ ಈ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಸೋಲುಂಡಿದೆ. ಈ ನಡುವೆ ಅವರು ಶಾರುಖ್​ ಖಾನ್​ (Shah Rukh Khan) ಬಗ್ಗೆ ಮಾತನಾಡಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಸೂಪರ್​ ಸ್ಟಾರ್​ ನಟನಾಗಿ ಗುರುತಿಸಿಕೊಂಡಿರುವ ಶಾರುಖ್​ ಜೊತೆ ಅಜಯ್​ ದೇವಗನ್​ ಅವರಿಗೆ ದುಶ್ಮನಿ ಇದೆ ಎಂದು ಬಹಳ ದಿನಗಳಿಂದಲೂ ಹೇಳಲಾಗುತ್ತಿತ್ತು. ಆ ಕುರಿತು ಈಗ ಅವರು ಮಾತನಾಡಿದ್ದಾರೆ. ಶಾರುಖ್​ ಖಾನ್​ ಮತ್ತು ತಮ್ಮ ನಡುವೆ ಯಾವುದೇ ಮನಸ್ತಾಪ ಇಲ್ಲ ಎಂದು ಅಜಯ್​ ದೇವಗನ್​ ಹೇಳಿದ್ದಾರೆ.

ಸಿನಿಮಾ ವಿಚಾರದಲ್ಲಿ ಅಜಯ್​ ದೇವಗನ್​ ಹಾಗೂ ಶಾರುಖ್​ ಖಾನ್​ ನಡುವೆ ವೈಮನಸ್ಸು ಮೂಡಿತ್ತು. 2012ರಲ್ಲಿ ಅಜಯ್​ ದೇವಗನ್​ ನಟನೆಯ ‘ಸನ್​ ಆಫ್​ ಸರ್ದಾರ್​’ ಹಾಗೂ ಶಾರುಖ್ ಖಾನ್​​ ನಟನೆಯ ‘ಜಬ್​ ತಕ್​ ಹೈ ಜಾನ್​’ ಸಿನಿಮಾಗಳು ಏಕಕಾಲಕ್ಕೆ ತೆರೆಕಂಡವು. ಆ ಸಂದರ್ಭದಲ್ಲಿ ಉಂಟಾದ ರಿಲೀಸ್​ ಕ್ಲ್ಯಾಶ್​ನಿಂದಾಗಿ ಇಬ್ಬರ ನಡುವೆ ಕಿರಿಕ್​ ಶುರುವಾಯಿತು ಎಂದು ಸುದ್ದಿ ಆಗಿತ್ತು. ಆದರೆ ಆ ಎಲ್ಲ ವಿಚಾರಗಳನ್ನು ಅಜಯ್​ ದೇವಗನ್​ ತಳ್ಳಿ ಹಾಕಿದ್ದಾರೆ.

ವಿಮಲ್​ ಪಾನ್​ ಮಸಾಲಾ ಜಾಹೀರಾತಿನಲ್ಲಿ ಅಜಯ್​ ದೇವಗನ್​ ಹಾಗೂ ಶಾರುಖ್​ ಖಾನ್​ ಜೊತೆಯಾಗಿ ನಟಿಸಿದ್ದಾರೆ. ಆ ಮೂಲಕ ತಮ್ಮ ನಡುವೆ ಯಾವುದೇ ಮನಸ್ತಾಪ ಇಲ್ಲ ಎಂಬುದನ್ನು ಅವರು ಈಗಾಗಲೇ ಹೇಳಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಶಾರುಖ್​ ಖಾನ್​ ಜೊತೆಗಿನ ತಮ್ಮ ಸ್ನೇಹದ ಬಗ್ಗೆ ವಿವರಿಸಿದ್ದಾರೆ.

ಇದನ್ನೂ ಓದಿ
Image
‘ಅಜಯ್​ ದೇವಗನ್​ ಹೇಳಿದ್ರಲ್ಲಿ ತಪ್ಪಿಲ್ಲ, ಆದ್ರೆ ಸಂಸ್ಕೃತ ರಾಷ್ಟ್ರ ಭಾಷೆ ಆಗಲಿ’: ಕಂಗನಾ ಹೊಸ ಟ್ವಿಸ್ಟ್​
Image
ಅಜಯ್​ ದೇವಗನ್​ಗೆ ಅಕ್ಷಯ್​ ಕುಮಾರ್ ಬೆಂಬಲ; ‘ಗುಟ್ಕಾ ಗ್ಯಾಂಗ್​’ ಎಂದು ತಿರುಗೇಟು ನೀಡಿದ ನೆಟ್ಟಿಗರು
Image
ಹಿಂದಿ ವಿವಾದ: ಸುದೀಪ್​ ವರ್ಸಸ್​ ಅಜಯ್​ ದೇವಗನ್​ ಕಾಂಟ್ರವರ್ಸಿ ಶುರು ಆಗಿದ್ದು ಹೇಗೆ? ಇಲ್ಲಿದೆ ವಿವರ..
Image
‘ಗಂಗೂಬಾಯಿ..’ ಚಿತ್ರಕ್ಕೆ 20 ಕೋಟಿ ರೂ. ಸಂಬಳ ಪಡೆದ ಆಲಿಯಾ ಭಟ್; ಅಜಯ್​ ದೇವಗನ್​ಗೆ ಸಿಕ್ಕಿದ್ದೆಷ್ಟು?

‘90ರ ದಶಕದಲ್ಲಿ ನಾನು ಮತ್ತು ಶಾರುಖ್​ ಖಾನ್​ ಒಟ್ಟಾಗಿ ವೃತ್ತಿಜೀವನ ಆರಂಭಿಸಿದವರು. ನಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯ ಇದೆ. ಮಾಧ್ಯಮದವರು ಬರೆಯುವ ರೀತಿಯಲ್ಲಿ ನಮ್ಮ ಮಧ್ಯೆ ಯಾವುದೇ ಜಗಳ ಆಗಿಲ್ಲ. ನಾವು ಈಗಲೂ ಫೋನ್​ನಲ್ಲಿ ಮಾತನಾಡುತ್ತೇವೆ. ನಾವು ಚೆನ್ನಾಗಿಯೇ ಇದ್ದೇವೆ. ನಮ್ಮಿಬ್ಬರಲ್ಲಿ ಒಬ್ಬರಿಗೆ ಏನೇ ಸಮಸ್ಯೆ ಎದುರಾದರೂ ಇನ್ನೊಬ್ಬರು ಸಹಾಯಕ್ಕೆ ಧಾವಿಸುತ್ತೇವೆ. ಇಬ್ಬರಿಗೂ ಪರಸ್ಪರ ನಂಬಿಕೆ ಇದೆ. ನಮ್ಮ ನಡುವೆ ಯಾವತ್ತೂ ಮನಸ್ತಾಪ ಇರಲೇ ಇಲ್ಲ’ ಎಂದಿದ್ದಾರೆ ಅಜಯ್​ ದೇವಗನ್​.

ಹಾಗಾದರೆ, ಈ ಇಬ್ಬರು ಸ್ಟಾರ್​ ನಟರ ನಡುವೆ ಮನಸ್ತಾಪ ಇದೆ ಎಂದು ಸುದ್ದಿ ಹಬ್ಬಲು ಕಾರಣ ಏನಿರಬಹುದು. ಈ ವಿಚಾರದಲ್ಲಿ ಅಜಯ್​​ ದೇವಗನ್​ ಅವರು ಫ್ಯಾನ್ಸ್​ ಮೇಲೆ ಆರೋಪ ಹೊರಿಸಿದ್ದಾರೆ. ‘ಅಭಿಮಾನಿ ಸಂಘಗಳ ನಡುವೆ ಜಗಳ ಆಗುತ್ತದೆ. ಆಗ ಇಬ್ಬರು ಸ್ಟಾರ್ ನಟರ ನಡುವೆಯೇ ಜಗಳ ಆಗಿದೆ ಎಂಬ ರೀತಿಯಲ್ಲಿ ಬಿಂಬಿತ ಆಗುತ್ತದೆ’ ಎಂದು ಅಜಯ್​ ದೇವಗನ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಯಾದಗಿರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ; ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತ
ಯಾದಗಿರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ; ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತ
ಸಚಿವರ ಬೇಜವಾಬ್ದಾರಿತನಕ್ಕೆ ಅಸಮಾಧಾನ ಹೊರಹಾಕಿದ ಸಿದ್ದರಾಮಯ್ಯ
ಸಚಿವರ ಬೇಜವಾಬ್ದಾರಿತನಕ್ಕೆ ಅಸಮಾಧಾನ ಹೊರಹಾಕಿದ ಸಿದ್ದರಾಮಯ್ಯ
ಪರಿಸರ ಮಾಲಿನ್ಯ ಹೆಚ್ಚುತ್ತಿರುವ ಬೆಂಗಳೂರಿಗೆ ಬೇಕು ಎಲೆಕ್ಟ್ರಿಕ್ ಬಸ್​ಗಳು
ಪರಿಸರ ಮಾಲಿನ್ಯ ಹೆಚ್ಚುತ್ತಿರುವ ಬೆಂಗಳೂರಿಗೆ ಬೇಕು ಎಲೆಕ್ಟ್ರಿಕ್ ಬಸ್​ಗಳು
ಕರಾವಳಿ ಪ್ರಾಂತ್ಯದ ಗಲಭೆಗಳಿಗೆ ಸಾಮಾಜಿಕ ಜಾಲತಾಣ ದೂರಿದ ಗುಂಡೂರಾವ್
ಕರಾವಳಿ ಪ್ರಾಂತ್ಯದ ಗಲಭೆಗಳಿಗೆ ಸಾಮಾಜಿಕ ಜಾಲತಾಣ ದೂರಿದ ಗುಂಡೂರಾವ್
ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಮೇಲೆ ಕುಳಿತು ವ್ಯಕ್ತಿಯ ಹುಚ್ಚಾಟ
ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಮೇಲೆ ಕುಳಿತು ವ್ಯಕ್ತಿಯ ಹುಚ್ಚಾಟ
ಮೂರುಬಾರಿ ಶಾಸಕನಾದರೆ ಮಂತ್ರಿ ಮಾಡುವ ಪರಿಪಾಠ ಇಲ್ಲವಾಗಿದೆ: ಗೋಪಾಲಕೃಷ್ಣ
ಮೂರುಬಾರಿ ಶಾಸಕನಾದರೆ ಮಂತ್ರಿ ಮಾಡುವ ಪರಿಪಾಠ ಇಲ್ಲವಾಗಿದೆ: ಗೋಪಾಲಕೃಷ್ಣ
Daily Devotional: ಬೂದುಗುಂಬಳ ಕಾಯಿಯ ಮಹತ್ವ ಹಾಗೂ ಅದರ ಉಪಯೋಗ ತಿಳಿಯಿರಿ
Daily Devotional: ಬೂದುಗುಂಬಳ ಕಾಯಿಯ ಮಹತ್ವ ಹಾಗೂ ಅದರ ಉಪಯೋಗ ತಿಳಿಯಿರಿ
Daily Horoscope: ಕೆಲಸದಲ್ಲಿನ ನಿಮ್ಮ ಚುರುಕುತನದಿಂದ ಮೆಚ್ಚುಗೆ ಗಳಿಸುವಿರಿ
Daily Horoscope: ಕೆಲಸದಲ್ಲಿನ ನಿಮ್ಮ ಚುರುಕುತನದಿಂದ ಮೆಚ್ಚುಗೆ ಗಳಿಸುವಿರಿ
ಸಾಧು ಕೋಕಿಲ ಸಿನಿಮಾ ಕಡಿಮೆ ಆಗಿದ್ದು ಯಾಕೆ? ಕಾರಣ ತಿಳಿಸಿದ ಕಾಮಿಡಿ ಕಿಂಗ್
ಸಾಧು ಕೋಕಿಲ ಸಿನಿಮಾ ಕಡಿಮೆ ಆಗಿದ್ದು ಯಾಕೆ? ಕಾರಣ ತಿಳಿಸಿದ ಕಾಮಿಡಿ ಕಿಂಗ್
ಜಾನಪದವೇ ಎಲ್ಲ ಕಲೆಗಳ ಮೂಲ, ಅದು ಜಾನಪದವಲ್ಲ ಜ್ಞಾನಪದ: ವೆಂಕಪ್ಪ
ಜಾನಪದವೇ ಎಲ್ಲ ಕಲೆಗಳ ಮೂಲ, ಅದು ಜಾನಪದವಲ್ಲ ಜ್ಞಾನಪದ: ವೆಂಕಪ್ಪ