AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಚ್​​ಮ್ಯಾನ್ ಇಟ್ಟುಕೊಳ್ಳಲು ಕರೀನಾ ಬಳಿ ದುಡ್ಡಿಲ್ಲ; ನಿರ್ದೇಶಕನ ಶಾಕಿಂಗ್ ಹೇಳಿಕೆ

ಸೈಫ್ ಅಲಿ ಖಾನ್ ಮನೆ ಮೇಲೆ ನಡೆದ ದಾಳಿಯ ನಂತರ, ನಿರ್ದೇಶಕ ಆಕಾಶ್ ದೀಪ್ ಸಬೀರ್ ಅವರು ಕರೀನಾ ಕಪೂರ್ ಅವರ ಭದ್ರತಾ ವ್ಯವಸ್ಥೆಯನ್ನು ಟೀಕಿಸಿದ್ದಾರೆ. ಕರೀನಾ ಅವರ ಬಳಿ ಸಾಕಷ್ಟು ಹಣ ಇದ್ದರೂ, ಸೂಕ್ತ ಭದ್ರತಾ ಸಿಬ್ಬಂದಿ ಇಲ್ಲದಿರುವುದು ಆಶ್ಚರ್ಯಕರ ಎಂದು ಅವರು ಹೇಳಿದ್ದಾರೆ. ಈ ಘಟನೆಯು ಭದ್ರತೆ ಮತ್ತು ಸೆಲೆಬ್ರಿಟಿಗಳ ಜೀವನಶೈಲಿ ಕುರಿತು ಚರ್ಚೆ ಹುಟ್ಟುಹಾಕಿದೆ.

ವಾಚ್​​ಮ್ಯಾನ್ ಇಟ್ಟುಕೊಳ್ಳಲು ಕರೀನಾ ಬಳಿ ದುಡ್ಡಿಲ್ಲ; ನಿರ್ದೇಶಕನ ಶಾಕಿಂಗ್ ಹೇಳಿಕೆ
ಕರೀನಾ-ಸೈಫ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Feb 10, 2025 | 7:54 AM

Share

ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ನಡೆದ ದಾಳಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಅವರ ಮನೆಯಲ್ಲಿ ಭದ್ರತಾ ಸಿಬ್ಬಂದಿಯೂ ಇರಲಿಲ್ಲವೇ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ. ಹೀಗಿರುವಾಗಲೇ ನಿರ್ದೇಶಕ ಆಕಾಶ್​ದೀಪ್ ಸಬೀರ್ ಹಾಗೂ ಅವರ ಪತ್ನಿ ಶೀಬಾ ಅವರು ಇತ್ತೀಚೆಗೆ ಸಂದರ್ಶನ ನೀಡಿದಿದ್ದು, ಕರೀನಾ ಬಗ್ಗೆ ಟೀಕೆ ಮಾಡಿದ್ದಾರೆ. ‘ಮನೆಗೆ ವಾಚ್​​ಮನ ಇಟ್ಟುಕೊಳ್ಳಲು ಪಾಪ ಹಣ ಇಲ್ಲ’ ಎಂದು ಟೀಕಿಸಿದ್ದಾರೆ.

‘ಕರೀನಾ ಕಪೂರ್ ಅವರು 21 ಕೋಟಿ ರೂಪಾಯಿ ಪ್ರೈಸ್ ಟ್ಯಾಗ್ ಹಾಕಿಕೊಂಡಿದ್ದಾರೆ. ಆದರೆ, ಮನೆಯ ಹೊರಗೆ ವಾಚ್​ಮ್ಯಾನ್ ಇಟ್ಟುಕೊಳ್ಳೋಕೆ ಅವರ ಬಳಿ ಸಾಧ್ಯವಾಗುತ್ತಿಲ್ಲ. ಒಂದೊಮ್ಮೆ 100 ಕೋಟಿ ರೂಪಾಯಿ ಕೊಟ್ಟರೆ ಆಗ ಅವರು ಭದ್ರತಾ ಸಿಬ್ಬಂದಿ ಹಾಗೂ ಕಾರ್​ ಡ್ರೈವರ್​​ನ ಇಟ್ಟುಕೊಳ್ಳಬಹುದು’ ಎಂದಿರುವ ಅವರು ‘ಆಟೋ’ ಎಂದು ಕೂಗಿ ಟೀಕೆ ಮಾಡಿದ್ದಾರೆ. ಸೈಫ್ ಮೇಲೆ ದಾಳಿ ನಡೆಯುವಾಗ ಯಾವುದೇ ಕಾರು ಚಾಲಕರು ಇರಲಿಲ್ಲ. ಹೀಗಾಗಿ, ಅವರು ಆಟೋದಲ್ಲಿ ಆಸ್ಪತ್ರೆ ಸೇರಬೇಕಾಯಿತು. ಈ ಕಾರಣದಿಂದ ಈ ದಂಪತಿ ‘ಆಟೋ’ ಎಂದು ಕೂಗಿ ಕರೆದಂತೆ ಅನುಕರಿಸಿ ಟೀಕೆ ಮಾಡಿದ್ದಾರೆ.

‘ನಾನು ಕರೀನಾ ಅವರನ್ನು ಭೇಟಿ ಮಾಡಿದಾಗ ಅವರಿನ್ನೂ ಚಿಕ್ಕವರು. ಸೈಫ್ ಹಾಗೂ ಕರೀನಾ ಮದುವೆ ಆದಾಗ ನಾನು ಟಿವಿ ಡಿಬೇಟ್​ನಲ್ಲಿ ಕುಳಿತು ಅವರ ಪರ ಮಾತನಾಡಿದ್ದೆ. ನಾನು ಕರೀಷ್ಮಾ ಕಪೂರ್ ಅವರ ಮೊದಲ ಚಿತ್ರ ‘ಸಹಾರ’ ನಿರ್ಮಾಣ ಹಾಗೂ ನಿರ್ದೇಶನ ಮಾಡಿದ್ದೆ. ಆಗ ಕರೀನಾ ನಟಿ ಆಗಿರಲಿಲ್ಲ, ಮಗುವಾಗಿದ್ದಳು’ ಎಂದು ಆಕಾಶ್​ದೀಪ್ ಹೇಳಿದ್ದಾರೆ.

‘ಕರೀನಾ ಮನೆಯಲ್ಲಿ ಭದ್ರತಾ ಸಿಬ್ಬಂದಿ ಏಕಿಲ್ಲ ಎಂಬುದು ನನ್ನ ಪ್ರಶ್ನೆ. ಮನೆಯಲ್ಲಿ 30 ಸಿಸಿಟಿವಿ ಇರಬಹುದು. ಆದರೆ, ಅವುಗಳು ಕಳ್ಳನನ್ನು ತಡೆದು ನಿಲ್ಲಿಸುತ್ತವೆಯೇ? ನಡೆದ ಅಪರಾಧವನ್ನು ಪತ್ತೆಹಚ್ಚಲು ಮಾತ್ರ ಅದು ಸಹಕಾರಿ ಆಗುತ್ತದೆಯೇ ಹೊರತು, ಅಪರಾಧ ನಡೆಯದಂತೆ ಸಿಸಿಟಿವಿ ತಡೆಯುವುದಿಲ್ಲ. ಕರೀನಾ ದಂಪತಿ ಯಾಕೆ ಫುಲ್ ಟೈಮ್ ಡ್ರೈವರ್​ನ ತಮ್ಮ ಬಳಿ ಇರಿಸಿಕೊಂಡಿಲ್ಲ’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಸೈಫ್ ಅಲಿ ಖಾನ್ ಅಟ್ಯಾಕ್ ಬಳಿಕ ಕರೀನಾ ದೂಷಿಸಿದವರಿಗೆ ಟ್ವಿಂಕಲ್ ಖನ್ನಾ ಕ್ಲಾಸ್

ಸದ್ಯ ಆಕಾಶ್​ದೀಪ್ ನೀಡಿದ ಹೇಳಿಕ ಚರ್ಚೆ ಆಗುತ್ತಿದೆ. ಅವರು ಕರೀನಾ ಅವರನ್ನು ಸರಿಯಾಗಿ ಪ್ರಶ್ನಿಸಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:45 am, Tue, 4 February 25

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!