ಸಲ್ಮಾನ್ ಖಾನ್ ಬೆಂಗಾವಲು ವಾಹನಕ್ಕೆ ಏಕಾಏಕಿ ನುಗ್ಗಿದ ಬೈಕ್ ಸವಾರ; ಮುಂದೇನಾಯ್ತು?

ನಟ ಸಲ್ಮಾನ್ ಖಾನ್​ಗೆ ಭೂಗತ ದುಷ್ಕರ್ಮಿಗಳಿಂದ ಜೀವ ಬೆದರಿಕೆ ಇದ್ದು ಅವರಿಗೆ ವಿಶೇಷ ಭದ್ರತೆ ಕಲ್ಪಿಸಲಾಗಿದೆ. ಯಾವಾಗ, ಎಲ್ಲಿ ಸಲ್ಮಾನ್ ಖಾನ್ ಮೇಲೆ ಗುಂಡು ಹಾರಿಸಲಾಗುತ್ತದೆಯೋ ಎಂಬ ಆತಂಕವಿದೆ. ಹೀಗಿರುವಾಗ ಸಲ್ಮಾನ್ ಖಾನ್ ಬೆಂಗಾವಲು ವಾಹನದ ಮೇಲೆ ಬೈಕ್ ಒಂದನ್ನು ನುಗ್ಗಿಸಲಾಗಿದೆ. ಇದು ಉದ್ದೇಶಪೂರ್ವಕವೋ? ಅಥವಾ ಅಪಘಾತವೋ?

ಸಲ್ಮಾನ್ ಖಾನ್ ಬೆಂಗಾವಲು ವಾಹನಕ್ಕೆ ಏಕಾಏಕಿ ನುಗ್ಗಿದ ಬೈಕ್ ಸವಾರ; ಮುಂದೇನಾಯ್ತು?
Follow us
| Updated By: ಮಂಜುನಾಥ ಸಿ.

Updated on: Sep 20, 2024 | 3:48 PM

ಬಾಲಿವುಡ್ ನಟ ಸಲ್ಮಾನ್ ಖಾನ್ ಈಗ ಎಲ್ಲೆಡೆ ಭದ್ರತೆಯಲ್ಲಿ ತೆರಳುತ್ತಿದ್ದಾರೆ. ಅವರಿಗೆ ಹಲವಾರು ಕೊಲೆ ಬೆದರಿಕೆಗಳು ಬಂದಿವೆ. ಹೀಗಾಗಿ ಅವರಿಗೆ ಮುಂಬೈ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಅವರ ಜತೆ ಕೆಲ ಖಾಸಗಿ ಭದ್ರತಾ ಸಿಬ್ಬಂದಿಯೂ ಇದ್ದಾರೆ. ಇದೇ ವೇಳೆ ಮುಂಬೈನಲ್ಲಿ ಅವರ ಭದ್ರತೆಯಲ್ಲಿ ಲೋಪವಾಗಿದೆ. ಸಲ್ಮಾನ್ ಖಾನ್ ಬೆಂಗಾವಲು ವಾಹನಕ್ಕೆ ಮೋಟಾರ್ ಸೈಕಲ್ ಸವಾರನೊಬ್ಬ ಇದ್ದಕ್ಕಿದ್ದಂತೆ ಪ್ರವೇಶಿಸಿದ್ದಾನೆ. ಕೂಡಲೇ ಸಲ್ಮಾನ್ ಭದ್ರತೆಗೆ ನಿಯೋಜಿಸಿದ್ದ ಪೊಲೀಸ್ ಸಿಬ್ಬಂದಿ ಆತನನ್ನು ಹಿಡಿದಿದ್ದಾರೆ. ಬಳಿಕ ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಈತನ ವಿರುದ್ಧ ಅಜಾಗರೂಕತೆಯಿಂದ ಚಾಲನೆ ಮಾಡಿದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇತ್ತೀಚೆಗೆ ಈ ಘಟನೆ ನಡೆದಿದೆ. ಮಧ್ಯಾಹ್ನ 12.15ರ ಸುಮಾರಿಗೆ ಈ ಘಟನೆ ಆಗಿದೆ. ಮುಂಬೈನ ಮಹುಬ್ ಸ್ಟುಡಿಯೋಸ್ ಬಳಿ ಸಲ್ಮಾನ್ ಖಾನ್ ಅವರ ವಾಹನ ಸಾಗುತ್ತಿದ್ದಾಗ ಉಜಿರೆ ಫೈಜ್ಮೊಯಿಯುದ್ದೀನ್ ಎಂಬ 21 ವರ್ಷದ ಬೈಕ್ ಸವಾರ ಸಲ್ಮಾನ್ ಖಾನ್ ಅವರ ಕಾರನ್ನು ಸಮೀಪಿಸಲು ಯತ್ನಿಸಿದ್ದಾನೆ. ಭದ್ರತಾ ಸಿಬ್ಬಂದಿಯೂ ಎಚ್ಚರಿಕೆ ನೀಡಿದರೂ ಆತ ಸಲ್ಮಾನ್ ಖಾನ್ ವಾಹನಕ್ಕೆ ಹತ್ತಿರವಾಗಲು ಯತ್ನಿಸುತ್ತಿದ್ದ. ಸಲ್ಮಾನ್ ಖಾನ್ ಅವರ ಮನೆ ತಲುಪಿದಾಗ ಎರಡು ಪೊಲೀಸ್ ವಾಹನಗಳು ಬೈಕ್ ಸವಾರನನ್ನು ಹಿಂಬಾಲಿಸಿ ಹಿಡಿದಿವೆ. ವಿಚಾರಣೆ ನಡೆಸಿದಾಗ ಆತ ಪಶ್ಚಿಮ ಬಾಂದ್ರಾ ನಿವಾಸಿ ಎಂದು ಹೇಳಿದ್ದಾನೆ. ಬಳಿಕ ಆತನ ವಿರುದ್ಧ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:Salman Khan: ಪ್ರಮುಖ ದಿನ ಮಿಸ್ ಮಾಡಿಕೊಳ್ಳಲಿದ್ದಾರೆ ಸಲ್ಮಾನ್ ಖಾನ್

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಿಂದ ಸಲ್ಮಾನ್ ಖಾನ್ ಗೆ ಹಲವಾರು ಬೆದರಿಕೆಗಳು ಬಂದಿವೆ. ಈ ಕಾರಣಕ್ಕಾಗಿ ಅವರು Y+ ಭದ್ರತೆಯನ್ನು ಪಡೆದುಕೊಂಡಿದ್ದಾರ. ಇದರೊಂದಿಗೆ ಮುಂಬೈ ಪೊಲೀಸರು ಕೂಡ ಸಲ್ಮಾನ್ಗೆ ಭದ್ರತೆ ಒದಗಿಸಿದ್ದಾರೆ. ಈ ವರ್ಷದ ಎಪ್ರಿಲ್‌ನಲ್ಲಿ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ದ್ವಿಚಕ್ರ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದಾಗ ಅವರ ಭದ್ರತೆಗೆ ತೀವ್ರ ತೊಂದರೆಯಾಗಿತ್ತು.

ಈ ಹಿಂದೆ ಸಲ್ಮಾನ್ ಖಾನ್ ಗೆ ಹಲವು ಬೆದರಿಕೆಗಳು ಬಂದಿದ್ದವು. ಅವರ ತಂದೆ, ಬರಹಗಾರ ಸಲೀಂ ಖಾನ್ಗೆ ಬಿಷ್ಣೋಯ್ ಎಂಬ ಹೆಸರಿನಿಂದ ಬೆದರಿಕೆ ಹಾಕಿದ್ದಾರೆ. ಜೂನ್ 2022ರಲ್ಲಿ ಸಲೀಂ ಖಾನ್ ಬೆಳಗಿನ ನಡಿಗೆಯ ನಂತರ ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿ ಬೆಂಚ್ ಮೇಲೆ ಕುಳಿತಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬರು ಅವರನ್ನು ಮತ್ತು ಅವರ ಮಗ ಸಲ್ಮಾನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಪತ್ರವನ್ನು ನೀಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ