AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೂಪರ್ ಹಿಟ್ ಸಿನಿಮಾದಿಂದ ಹಿಂದೆ ಸರಿಯಲು ಮುಂದಾಗಿದ್ದ ಶಾರುಖ್ ಖಾನ್; ಆದರೂ ಬಿಡಲಿಲ್ಲ ನಿರ್ದೇಶಕರು

‘ಶಾರುಖ್ ಖಾನ್ ಅವರು ಸಿನಿಮಾ ಶೂಟಿಂಗ್​ಗೆ ನಾಲ್ಕು ದಿನ ಇರುವಾಗ ಅನಾರೋಗ್ಯಕ್ಕೆ ಒಳಗಾದರು. ತಮ್ಮನ್ನು ಸಿನಿಮಾದಿಂದ ಹೊರಗೆ ಇಡಲು ಕೋರಿದ್ದರು. ನಾವು ಇದಕ್ಕೆ ನೋ ಎಂದೆವು. ಶಾರುಖ್ ಖಾನ್ ಅವರೇ ಬೇಕು ಎನ್ನುವ ಕಾರಣಕ್ಕೆ ಸಿನಿಮಾದ ಕೆಲಸ ಆರು ತಿಂಗಳು ವಿಳಂಬ ಆಯಿತು’ ಎಂದಿದ್ದಾರೆ ನಿರ್ದೇಶಕ ನಿಖಿಲ್ ಅಡ್ವಾಣಿ.

ಸೂಪರ್ ಹಿಟ್ ಸಿನಿಮಾದಿಂದ ಹಿಂದೆ ಸರಿಯಲು ಮುಂದಾಗಿದ್ದ ಶಾರುಖ್ ಖಾನ್; ಆದರೂ ಬಿಡಲಿಲ್ಲ ನಿರ್ದೇಶಕರು
ಶಾರುಖ್​ ಖಾನ್​, ‘ಕಲ್​ ಹೋ ನಾ ಹೋ’ ಪೋಸ್ಟರ್​
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 19, 2023 | 7:29 PM

Share

ಶಾರುಖ್ ಖಾನ್ (Shah Rukh Khan), ಪ್ರೀತಿ ಜಿಂಟಾ ಹಾಗೂ ಸೈಫ್ ಅಲಿ ಖಾನ್ ನಟನೆಯ ‘ಕಲ್​ ಹೋ ನ ಹೋ’ ಚಿತ್ರ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು. ಈ ಚಿತ್ರವನ್ನು ಪ್ರೇಕ್ಷಕರು ಸಾಕಷ್ಟು ಇಷ್ಟಪಟ್ಟಿದ್ದರು. ಲವ್ ಟ್ರಯಾಂಗಲ್ ರೀತಿಯಲ್ಲಿ ಸಿನಿಮಾ ಮೂಡಿಬಂದಿತ್ತು. ಈ ಸಿನಿಮಾ ರಿಲೀಸ್ ಆಗಿ 20 ವರ್ಷ ಪೂರ್ಣಗೊಳ್ಳುತ್ತಾ ಬಂದಿದೆ. ನಿಖಿಲ್ ಅಡ್ವಾಣಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಸಂದರ್ಭದಲ್ಲಿ ಈ ಚಿತ್ರವನ್ನು ಎಲ್ಲರೂ ನೆನಪಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ‘ಕಲ್​ ಹೋ ನ ಹೋ’ (Kal ho Naa Ho) ಚಿತ್ರದ ಕುರಿತು ಹಲವು ಅಪರೂಪದ ವಿಚಾರಗಳು ಹೊರಬರುತ್ತಿವೆ.

‘ಕಲ್ ಹೋ ನ ಹೋ’ ಸಿನಿಮಾ ನವೆಂಬರ್ 2003ರ ನವೆಂಬರ್ 28ರಂದು ರಿಲೀಸ್ ಆಯಿತು. ನಿಖಿಲ್ ಅಡ್ವಾಣಿ ನಿರ್ದೇಶನದ ಮೊದಲ ಸಿನಿಮಾ ಇದು. ಯಶ್ ಜೋಹರ್ ನಿರ್ಮಾಣದ ಈ ಸಿನಿಮಾಗೆ ಕರಣ್​ ಜೋಹರ್ ಕಥೆ ಬರೆದಿದ್ದರು. ಈಗ ನಿಖಿಲ್ ಅವರು ಒಂದು ವಿಚಾರ ಹೇಳಿಕೊಂಡಿದ್ದಾರೆ. ಸಿನಿಮಾ ಶೂಟಿಂಗ್ ಆರಂಭ ಆಗುವುದಕ್ಕೆ ಕೆಲವೇ ದಿನಗಳ ಮೊದಲು ಶಾರುಖ್ ಖಾನ್ ಅವರು ಸಿನಿಮಾದಿಂದ ಹೊರ ಬರಲು ನಿರ್ಧರಿಸಿದ್ದರಂತೆ.

ಇದನ್ನೂ ಓದಿ:  ‘ಜವಾನ್’ ಸಿನಿಮಾದಲ್ಲಿ ಶಾರುಖ್ ಇಲ್ಲದೇ ಇದ್ದಿದ್ದರೆ ಸಿಗುತ್ತಿರಲಿಲ್ಲ ಯಶಸ್ಸು?

‘ಶಾರುಖ್ ಖಾನ್ ಅವರು ಸಿನಿಮಾ ಶೂಟಿಂಗ್​ಗೆ ನಾಲ್ಕು ದಿನ ಇರುವಾಗ ಅನಾರೋಗ್ಯಕ್ಕೆ ಒಳಗಾದರು. ನನ್ನನ್ನು ಸಿನಿಮಾದಿಂದ ಹೊರಗೆ ಇಡಿ ಎಂದು ಕೋರಿದ್ದರು. ನಾವು ಇದಕ್ಕೆ ನೋ ಎಂದೆವು. ಶಾರುಖ್ ಖಾನ್ ಅವರೇ ಬೇಕು ಎನ್ನುವ ಕಾರಣಕ್ಕೆ ಸಿನಿಮಾದ ಕೆಲಸ ಆರು ತಿಂಗಳು ವಿಳಂಬ ಆಯಿತು’ ಎಂದಿದ್ದಾರೆ ನಿಖಿಲ್. ‘ನನ್ನ ಮೇಲೆ ಸಾಕಷ್ಟು ಒತ್ತಡ ಇತ್ತು. ‘ಕುಚ್​ ಕುಚ್​ ಹೋತಾ ಹೈ’ ಹಾಗೂ ‘ಕಭಿ ಖುಷಿ ಕಭಿ ಗಮ್’ ಸಿನಿಮಾ ಹಿಟ್ ಆಗಿತ್ತು. ಧರ್ಮ ಪ್ರೊಡಕ್ಷನ್​ ಅಡಿಯಲ್ಲಿ ಸಿನಿಮಾ ಬಂದು ಹಿಟ್ ಆಗಿಲ್ಲ ಎಂದರೆ ಅದು ನನ್ನ ಮೇಲೆ ಬರುತ್ತಿತ್ತು. ಹೀಗಾಗಿ, ನನಗೆ ಒತ್ತಡ ಇತ್ತು’ ಎಂದಿದ್ದಾರೆ ಅವರು.

ಇದನ್ನೂ ಓದಿ: ದಾಖಲೆ ಬರೆದ ಡಂಕಿ ಸಿನಿಮಾ ಟೀಸರ್: ಮತ್ತೊಂದು ಬ್ಲಾಕ್​ ಬಸ್ಟರ್​ಗೆ ಶಾರುಖ್ ಖಾನ್ ರೆಡಿ

‘ಕಲ್ ಹೋ ನ ಹೋ’ ಸಿನಿಮಾದ ಕಥೆ ನ್ಯೂಯಾರ್ಕ್​ನಲ್ಲಿ ಸಾಗುತ್ತದೆ. ಈ ಚಿತ್ರದ ಶೂಟಿಂಗ್​ ಮಾಡುವಾಗ ಸಾಕಷ್ಟು ಚಾಲೆಂಜ್​ಗಳು ಎದುರಾಗಿತ್ತಂತೆ. ‘ಭಾರತದವರು ನ್ಯೂಯಾರ್ಕ್​ನಲ್ಲಿ ಸಿನಿಮಾ ಶೂಟ್ ಮಾಡಿರಲಿಲ್ಲ. ಲಂಡನ್, ಸ್ವಿಜರ್​ಲೆಂಡ್, ಯೂರೋಪ್​ಗಳಲ್ಲಿ ಸಿನಿಮಾ ಶೂಟ್ ಮಾಡಲಾಗಿತ್ತು. ನ್ಯೂಯಾರ್ಕ್​ನಲ್ಲಿ ಶೂಟ್​ ಮಾಡೋದು ಸಖತ್ ದುಬಾರಿ ಆಗಿತ್ತು. ಮೊದಲ ನಿರ್ದೇಶನಕ್ಕೆ ದೊಡ್ಡ ಮಟ್ಟದಲ್ಲಿ ಹಣ ಹೂಡಲಾಗಿತ್ತು. ಆದರೆ, ಯಶ್ ಜೋಹರ್ ಚಾಲೆಂಜ್​ನ ತೆಗೆದುಕೊಂಡರು’ ಎಂದಿದ್ದಾರೆ ನಿಖಿಲ್.

ಇದನ್ನೂ ಓದಿ:  ಹಾಲಿವುಡ್ ನಿರ್ದೇಶಕರಿಗೂ ಶಾರುಖ್ ಖಾನ್ ಜೊತೆ ಕೆಲಸ ಮಾಡುವಾಸೆ, ಎಸ್​ಆರ್​ಕೆ ಲೆಜೆಂಡ್ ಎಂದ ನಿರ್ದೇಶಕಿ

ವಿಮರ್ಶಕರಿಂದ ‘ಕಲ್​ ಹೋ ನ ಹೋ’ ಸಿನಿಮಾ ಮೆಚ್ಚುಗೆ ಪಡೆಯಿತು. ಕಮರ್ಷಿಯಲಿ ಹಿಟ್ ಆಯಿತು. ಆ ವರ್ಷದ ಸೂಪರ್ ಹಿಟ್ ಚಿತ್ರ ಎನಿಸಿಕೊಂಡಿತು. ಆಗಿನ ಕಾಲದಲ್ಲೇ ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿತ್ತು. ಈ ಸಿನಿಮಾದಿಂದ ಅನೇಕರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ಈ ಚಿತ್ರದಲ್ಲಿ ನೈನಾ ಪಾತ್ರವನ್ನು ಕರೀನಾ ಕಪೂರ್ ನಟಿಸಬೇಕಿತ್ತು. ಆದರೆ, ಅವರು ಸಿನಿಮಾನ ರಿಜೆಕ್ಟ್ ಮಾಡಿದರು. ಈ ಕಾರಣಕ್ಕೆ ಪ್ರೀತಿ ಜಿಂಟಾಗೆ ಸಿನಿಮಾ ಆಫರ್ ಹೋಯಿತು. ಅವರಿಗೆ ಈ ಚಿತ್ರದಿಂದ ದೊಡ್ಡ ಗೆಲುವು ಸಿಕ್ಕಿತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?