AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾರುಖ್ ಖಾನ್​ಗೆ ಇರೋದು ಒಂದೇ ಕೆಟ್ಟ ಹವ್ಯಾಸ; ಏನದು?

ರಾಕೇಶ್ ರೋಷನ್ ಅವರು ಶಾರುಖ್ ಖಾನ್ ಜೊತೆಗಿನ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ‘ಕರಣ್ ಅರ್ಜುನ್’ ಮತ್ತು ‘ಕೊಯ್ಲಾ’ ಚಿತ್ರಗಳಲ್ಲಿ ಶಾರುಖ್ ಅವರೊಂದಿಗಿನ ಕೆಲಸದ ಬಗ್ಗೆ ಮಾತನಾಡಿದ್ದಾರೆ. ಶಾರುಖ್ ಖಾನ್ ಅವರ ಒಂದೇ ಒಂದು ಕೆಟ್ಟ ಅಭ್ಯಾಸದ ಬಗ್ಗೆ ರಾಕೇಶ್ ರೋಷನ್ ಮಾತನಾಡಿದ್ದಾರೆ.

ಶಾರುಖ್ ಖಾನ್​ಗೆ ಇರೋದು ಒಂದೇ ಕೆಟ್ಟ ಹವ್ಯಾಸ; ಏನದು?
ಶಾರುಖ್ ಖಾನ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jun 10, 2025 | 7:59 AM

ಶಾರುಖ್ ಖಾನ್ (Shah Rukh Khan) ಅವರು ಬಾಲಿವುಡ್​ನಲ್ಲಿ ಸಾಕಷ್ಟು ಯಶಸ್ಸು ಗಳಿಸಿದ್ದಾರೆ. ಅವರಿಗೆ ಸಾಕಷ್ಟು ಬೇಡಿಕೆ ಇದೆ. ಅವರು ಖ್ಯಾತ ನಿರ್ದೇಶಕ ‘ರಾಕೇಶ್ ರೋಷನ್’, ‘ಕರಣ್ ಅರ್ಜುನ್ ಹಾಗೂ ‘ಕೊಯ್ಲ’ ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ.  ಅವರು ಈ ಮೊದಲು ನೀಡಿದ ಸಂದರ್ಶನದಲ್ಲಿ ಶಾರುಖ್ ಖಾನ್ ಅವರ ಕೆಟ್ಟ ಹವ್ಯಾಸ ಏನು ಎಂಬುದನ್ನು ರಿವೀಲ್ ಮಾಡಿದ್ದರು. ಆ ವಿಚಾರ ಸಾಕಷ್ಟು ಚರ್ಚೆ ಆಗಿತ್ತು.

‘ನಾನು ಶಾರುಖ್ ಖಾನ್ ಅವರನ್ನು ರೆಸ್ಟೋರೆಂಟ್ ಒಂದರಲ್ಲಿ ಭೇಟಿ ಮಾಡಿದೆ. ಆಗ ವಿವೇಕ್ ಓಬೆರಾಯ್ ಅವರು ಶಾರುಖ್ ಜೊತೆ ಇದ್ದರು. ನಾನು ವಿವೇಕ್ ಬಳಿ ಶಾರುಖ್ ಬಗ್ಗೆ ವಿಚಾರಿಸಿದೆ. ಅವರು ಕಿರುತೆರೆ ನಟ ಎಂದು ವಿವೇಕ್ ನನಗೆ ವಿವರಿಸಿದರು. ನಾನು ಶಾರುಖ್ ಬಳಿ ಸಿನಿಮಾ ಮಾಡ್ತೀರಾ ಎಂದು ಕೇಳಿದೆ. ಆಫರ್ ಬರುತ್ತಿವೆ. ಆದರೆ, ಯಾವುದೂ ಫೈನಲ್ ಆಗಿಲ್ಲ ಎಂದು ನನಗೆ ಹೇಳಿದರು’ ಎಂದು ಹಳೆಯ ಘಟನೆ ನೆನಪಿಸಿಕೊಂಡಿದ್ದಾರೆ. ‘ಕಿಂಗ್ ಅಂಕಲ್ ಚಿತ್ರಕ್ಕೆ ನಾನು ಅವರ ಸಹಿ ಹಾಕಿಸಿದೆ. ಅವರು ನಿರಂತರವಾಗಿ ನನ್ನ ಮನೆಗೆ ಬರುತ್ತಿದ್ದರು. ಅವರು ನಮ್ಮ ಕುಟುಂಬದಲ್ಲೊಬ್ಬರಾದರು’ ಎಂಬುದು ಅವರ ಮಾತು.

1995ರಲ್ಲಿ ‘ಕರಣ್ ಅರ್ಜುನ್’ ಹೆಸರಿನ ಸಿನಿಮಾ ಬಂತು. ಇದರಲ್ಲಿ ಶಾರುಖ್ ನಟಿಸಿದ್ದಾರೆ. ಇದು ಪುನರ್ಜನ್ಮದ ಕಥೆ.  ‘ಶಾರುಖ್ ಖಾನ್​ಗೆ ನಾನು ಕಥೆ ಹೇಳಿದೆ. ಆದರೆ, ಅವರಿಗೆ ಪುನರ್ಜನ್ಮದಲ್ಲಿ ನಂಬಿಕೆ ಇರಲಿಲ್ಲ. ಆದರೆ, ನಾನು ಸಿನಿಮಾ ಮಾಡುತ್ತಿದ್ದೇನೆ ಎನ್ನುವ ಕಾರಣಕ್ಕೆ ಅವರು ಒಪ್ಪಿಕೊಂಡರು. ಸ್ಕ್ರಿಪ್ಟ್​ನ ಅವರಿಗೆ ನೀಡಿದೆ. ಅವರು ಓದಿದರು. ಶೂಟಿಂಗ್ ಆರಂಭ ಆದ ಬಳಿಕ ಒಂದೇ ಒಂದು ಪ್ರಶ್ನೆ ಕೇಳಿಲ್ಲ. ಅವರು ನನ್ನನ್ನು ಅಷ್ಟು ನಂಬಿದ್ದರು’ ಎಂದಿದ್ದಾರೆ ರಾಕೇಶ್.

ಇದನ್ನೂ ಓದಿ
Image
ಒಂದೇ ವರ್ಷ, ಮೂರು ಖ್ಯಾತ ನಿರ್ದೇಶಕರು ಮತ್ತು ನಾಲ್ಕು ಡಿಸಾಸ್ಟರ್ ಸಿನಿಮಾ
Image
ಸಿನಿಮಾ ಇಲ್ಲದೆ ಕಷ್ಟದಲ್ಲಿರೋ ತ್ರಿವಿಕ್ರಂಗೆ ದೊಡ್ಡ ಸಲಹೆ ಕೊಟ್ಟ ಪವನ್
Image
ಹೊಸ ಅಧ್ಯಾಯ ಆರಂಭಿಸಿದ ಜೀ ಕನ್ನಡ; ವಿನೂತನ ಲೋಗೋ, ಹೊಸ ಅಧ್ಯಾಯ
Image
‘ಸರಿಗಮಪ’ ವಿನ್ನರ್ ಶಿವಾನಿಗೆ ಸಿಕ್ಕ ಹಣ ಎಷ್ಟು? ಬಾಳು ಬೆಳಗುಂದಿಗೂ ಬಂಪರ್

ಇದನ್ನೂ ಓದಿ: ‘ಮನ್ನತ್’ ನವೀಕರಣ ಮಾಡ್ತೀನಿ ಎಂದು ಹೊರಟ ಶಾರುಖ್​ಗೆ ಹಿನ್ನಡೆ; ಬಿತ್ತು ಕೇಸ್

ಶಾರುಖ್‌ಗೆ ಒಂದೇ ಒಂದು ಕೆಟ್ಟ ಅಭ್ಯಾಸವಿತ್ತು. ಅವರು ತಡವಾಗಿ ಏಳುತ್ತಿದ್ದರು. ಹಾಗಾಗಿ ಕಿಂಗ್ ಅಂಕಲ್ ಚಿತ್ರೀಕರಣದ ಸಮಯದಲ್ಲಿ, ನಾನು ಅವರ  ಕೋಣೆಗೆ ಹೋಗಿ ಅವರನ್ನು ಎಬ್ಬಿಸುತ್ತಿದ್ದೆ. ಅವನ ಇತರ ಚಿತ್ರಗಳಲ್ಲೂ ಇದು ಮುಂದುವರೆಯಿತು. ಕರಣ್ ಅರ್ಜುನ್ ಮತ್ತು ಕೊಯ್ಲಾ ಚಿತ್ರೀಕರಣದ ಸಮಯದಲ್ಲಿಯೂ ಅವರನ್ನು ಎಬ್ಬಿಸುವುದು ನನ್ನ ಕರ್ತವ್ಯವಾಯಿತು. ಏಕೆಂದರೆ ಈ ಮೂರು ಚಿತ್ರಗಳು ವಿದೇಶಗಳಲ್ಲಿ ಚಿತ್ರೀಕರಣಗೊಂಡಿವೆ’ ಎಂದಿದ್ದಾರೆ ರಾಕೇಶ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನಟಿ ರಚಿತಾ ರಾಮ್ ವಿರುದ್ಧ ಕ್ರಮ ಕೈಗೊಳ್ಳುತ್ತಾ ಚಲನಚಿತ್ರ ವಾಣಿಜ್ಯ ಮಂಡಳಿ?
ನಟಿ ರಚಿತಾ ರಾಮ್ ವಿರುದ್ಧ ಕ್ರಮ ಕೈಗೊಳ್ಳುತ್ತಾ ಚಲನಚಿತ್ರ ವಾಣಿಜ್ಯ ಮಂಡಳಿ?
ಪ್ರಕೃತಿಯ ಶಕ್ತಿ ಮುಂದೆ ನಾವೇನೂ ಅಲ್ಲ!; ಈ ವಿಡಿಯೋ ನೋಡಿ
ಪ್ರಕೃತಿಯ ಶಕ್ತಿ ಮುಂದೆ ನಾವೇನೂ ಅಲ್ಲ!; ಈ ವಿಡಿಯೋ ನೋಡಿ
ಬಿಹಾರದಲ್ಲಿ ಭಾರೀ ಮಳೆಯಿಂದ ಆರೆಂಜ್ ಅಲರ್ಟ್ ಘೋಷಣೆ;  14 ಜನರು ಸಾವು
ಬಿಹಾರದಲ್ಲಿ ಭಾರೀ ಮಳೆಯಿಂದ ಆರೆಂಜ್ ಅಲರ್ಟ್ ಘೋಷಣೆ;  14 ಜನರು ಸಾವು
ಮಧ್ಯಾಹ್ನ ಬೆಂಗಳೂರಿಂದ ಲಂಡನ್​ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ರದ್ದು
ಮಧ್ಯಾಹ್ನ ಬೆಂಗಳೂರಿಂದ ಲಂಡನ್​ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ರದ್ದು
ನಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗಿದೆ: ಸತೀಶ್ ಜಾರಕಿಹೊಳಿ
ನಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗಿದೆ: ಸತೀಶ್ ಜಾರಕಿಹೊಳಿ
‘ಥಗ್ ಲೈಫ್’ ರಿಲೀಸ್ ಆದರೂ ನೋಡಬೇಡಿ: ಶ್ರೀನಗರ ಕಿಟ್ಟಿ
‘ಥಗ್ ಲೈಫ್’ ರಿಲೀಸ್ ಆದರೂ ನೋಡಬೇಡಿ: ಶ್ರೀನಗರ ಕಿಟ್ಟಿ
ಗುಡ್ಡ ಕುಸಿತ: ಮನೆಗೆ ನುಗ್ಗಿದ ನೀರು,ಮಣ್ಣು:ಮನೆಯವರ ಪ್ರಾಣ ಉಳಿಸಿತು ಮದ್ವೆ!
ಗುಡ್ಡ ಕುಸಿತ: ಮನೆಗೆ ನುಗ್ಗಿದ ನೀರು,ಮಣ್ಣು:ಮನೆಯವರ ಪ್ರಾಣ ಉಳಿಸಿತು ಮದ್ವೆ!
ರಾಜ್ಯ ಬಿಜೆಪಿ ಶುದ್ಧೀಕರಣಯಾಗದ ಹೊರತು ವಾಪಸ್ಸು ಹೋಗಲ್ಲ: ಈಶ್ವರಪ್ಪ
ರಾಜ್ಯ ಬಿಜೆಪಿ ಶುದ್ಧೀಕರಣಯಾಗದ ಹೊರತು ವಾಪಸ್ಸು ಹೋಗಲ್ಲ: ಈಶ್ವರಪ್ಪ
ಮೃತ ರೇಣುಕಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು
ಮೃತ ರೇಣುಕಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು
ಮಹಿಳೆಯ ಚಿಕಿತ್ಸೆಗೆ ಹಣ ನೀಡಿರುವ ಯುವ ರಾಜ್​ಕುಮಾರ್ ತಂಡ
ಮಹಿಳೆಯ ಚಿಕಿತ್ಸೆಗೆ ಹಣ ನೀಡಿರುವ ಯುವ ರಾಜ್​ಕುಮಾರ್ ತಂಡ