AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿಥುನ್ ಚಕ್ರವರ್ತಿ ಜೊತೆ ಹುಚ್ಚು ಪ್ರೀತಿ, ರಹಸ್ಯ ಮದುವೆ; ಶ್ರೀದೇವಿ ಬಾಳಲ್ಲಿ ಬೀಸಿತ್ತು ಬಿರುಗಾಳಿ

Sridevi: ಶ್ರೀದೇವಿ ಮತ್ತು ಮಿಥುನ್ ಚಕ್ರವರ್ತಿಯವರ ರಹಸ್ಯ ಮದುವೆ ಬಗ್ಗೆ ಸುಜಾತಾ ಮೆಹ್ತಾ ನೆನಪು ಮಾಡಿಕೊಂಡಿದ್ದಾರೆ. ಮಿಥುನ್ ಚಕ್ರವರ್ತಿ ಜೊತೆ ಬ್ರೇಕ್ ಅಪ್ ಆದಾಗ ಶ್ರೀದೇವಿ ತೀವ್ರ ಶಾಕ್​ಗೆ ಒಳಗಾಗಿದ್ದರಂತೆ. ಮಿಥುನ್ ಚಕ್ರವರ್ತಿ ಜೊತೆ ಶ್ರೀದೇವಿ ರಹಸ್ಯ ಮದುವೆ ಮಾಡಿಕೊಂಡಿದ್ದರು ಎಂದು ಸುಜಾತಾ ಹೇಳಿದ್ದಾರೆ.

ಮಿಥುನ್ ಚಕ್ರವರ್ತಿ ಜೊತೆ ಹುಚ್ಚು ಪ್ರೀತಿ, ರಹಸ್ಯ ಮದುವೆ; ಶ್ರೀದೇವಿ ಬಾಳಲ್ಲಿ ಬೀಸಿತ್ತು ಬಿರುಗಾಳಿ
Sridevi Mithun
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Jan 01, 2025 | 6:38 PM

ಶ್ರೀದೇವಿ ಅವರು ಅದ್ಭುತ ನಟಿ ಎಂಬುದರಲ್ಲಿ ಎರಡು ಮಾತಿಲ್ಲ. ಅದೇ ರೀತಿ ಅವರು ವೈಯಕ್ತಿಕ ವಿಚಾರಗಳ ಕಾರಣಕ್ಕೆ ಸಾಕಷ್ಟು ಸುದ್ದಿ ಆಗುತ್ತಲೇ ಇದ್ದರು. ಅವರ ವಯಕ್ತಿ ಬದುಕಿನಲ್ಲಿ ಸಾಕಷ್ಟು ಏರಿಳಿತಗಳು ಇದ್ದವು. ಅವರ ಬಗ್ಗೆ ಹರಿದಾಡಿದ ಸುದ್ದಿ ಒಂದೆರಡಲ್ಲ. ಅವರು ಮಾಡಿಕೊಂಡ ವಿವಾದಗಳು ಹಲವು. ಅವರು ಮಿಥುನ್ ಚಕ್ರವರ್ತಿಯನ್ನು ವಿವಾಹ ಆಗಿದ್ದರು. ಈಗ ಹಿರಿಯ ನಟಿ ಸುಜಾತಾ ಮೆಹ್ತಾ ಅವರು ಶ್ರೀದೇವಿ ಬಗ್ಗೆ ಹಾಗೂ ಅವರ ಲವ್ಲೈಫ್ ಬಗ್ಗೆ ಮಾತನಾಡಿದ್ದಾರೆ. ಮಿಥುನ್ ಚಕ್ರವರ್ತಿ ಜೊತೆಗಿನ ಬ್ರೇಕಪ್ ಬಗ್ಗೆ ಮಾತನಾಡಿದ್ದಾರೆ.

‘ಮಿಥುನ್ ಚಕ್ರವರ್ತಿ ಜೊತೆಗಿನ ಬ್ರೇಕಪ್ ಬಳಿಕ ಶ್ರೀದೇವಿ ತುಂಬಾ ವಿಚಲಿತಳಾಗಿದ್ದರು. ಆದರೆ ಅವರು ತುಂಬಾ ವೃತ್ತಿಪರ ಆಗಿದ್ದರು. ಕ್ಯಾಮೆರಾ ಆನ್ ಆದ ಕ್ಷಣದಲ್ಲಿ ಅವರು ಕ್ಯಾಮರಾಗೆ ಮಾತ್ರ ಸೇರಿದ್ದರು. ಆದರೆ ಆ ಹೊಡೆತದ ನಂತರ ಅವರು ಒಂದು ಮೂಲೆಯಲ್ಲಿ ಶಾಂತವಾಗಿ ಕುಳಿತುಕೊಳ್ಳುತ್ತಿದ್ದರು’ ಎಂದು ಸುಜಾತಾ ನೆನಪಿಸಿಕೊಂಡರು. ‘ಮಿಥುನ್ ಅವರನ್ನು ಶ್ರೀದೇವಿ ಹುಚ್ಚುತನದಿಂದ ಪ್ರೀತಿಸುತ್ತಿದ್ದರು’ ಎಂದು ಹೇಳಿದ್ದಾರೆ.

‘ಜಾಗ್ ಉಟಾ ಇನ್ಸಾನ್’ ಸೆಟ್‌ನಲ್ಲಿ ಮಿಥುನ್ ಮತ್ತು ಶ್ರೀದೇವಿ ಭೇಟಿಯಾದರು. ಇಬ್ಬರೂ 1985ರಲ್ಲಿ ರಹಸ್ಯವಾಗಿ ವಿವಾಹವಾದರು ಎಂದು ಆರೋಪಿಸಲಾಗಿದೆ. ಇಬ್ಬರೂ 1985ರಿಂದ 1988ರವರೆಗೆ ಸಂಸಾರ ನಡೆಸಿದರು ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಮಿಥುನ್ ಯೋಗೀತಾ ಬಾಲಿ ಅವರನ್ನು ಮದುವೆಯಾಗಿದ್ದರು.

ಇದನ್ನೂ ಓದಿ:ತೆಲಂಗಾಣ ಪೊಲೀಸರು ಸ್ವರ್ಗಕ್ಕೆ ಹೋಗಿ ಶ್ರೀದೇವಿ ಅರೆಸ್ಟ್ ಮಾಡ್ತಾರಾ? ಆರ್​ಜಿವಿ ಪ್ರಶ್ನೆ

1987ರಲ್ಲಿ ಬೋನಿ ಕಪೂರ್ ಅವರು ಶ್ರೀದೇವಿಗೆ ಹತ್ತಿರವಾದರು. ಆಗ, ಮಿಥುನ್ ರಹಸ್ಯೆ ಮದುವೆ ವಿಚಾರ ಹೊರಬಿತ್ತು. ಮಿಥುನ್ ಅವರ ಪತ್ನಿ ಯೋಗೀತಾ ಬಾಲಿಗೆ ಈ ವಿಚಾರ ತಿಳಿಯಿತು. ನಂತರ ಬೋನಿ ಕಪೂರ್ ಮತ್ತು ಮಿಥುನ್ ಚಕ್ರವರ್ತಿ ಅವರ ಸ್ನೇಹವೂ ಹಳಸಿತ್ತು ಎನ್ನಲಾಗಿದೆ. ಶ್ರೀದೇವಿ 1988ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು ಮತ್ತು ಮಿಥುನ್‌ನಿಂದ ಬೇರ್ಪಟ್ಟರು ಎಂದು ಹೇಳಲಾಗಿದೆ.

ಈ ವಿಚಾರವನ್ನು ಮಿಥುನ್ ನೇರವಾಗಿ ಒಪ್ಪಿಕೊಳ್ಳಲೂ ಇಲ್ಲ, ಅಲ್ಲಗಳೆಯಲೂ ಇಲ್ಲ. ‘ಇವುಗಳ ಪೈಕಿ ಕೆಲವು ಸತ್ಯ, ಕೆಲವು ಸುಳ್ಳು’ ಎಂದು ಮಿಥುನ್ ಚಕ್ರವರ್ತಿ ಅವರು ಹೇಳಿದ್ದರು. ಆ ಬಳಿಕ ಶ್ರಿದೇವಿ ಅವರು ಬೋನಿ ಕಪೂರ್​ ಅನ್ನು ಮದುವೆ ಆದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರಾವಳಿ ಪ್ರಾಂತ್ಯದ ಅಲ್ಪಸಂಖ್ಯಾತರು ಆತಂಕದಲ್ಲಿದ್ದಾರೆ: ಡಿಕೆ ಶಿವಕುಮಾರ್
ಕರಾವಳಿ ಪ್ರಾಂತ್ಯದ ಅಲ್ಪಸಂಖ್ಯಾತರು ಆತಂಕದಲ್ಲಿದ್ದಾರೆ: ಡಿಕೆ ಶಿವಕುಮಾರ್
ಮಂಗಳೂರು: ಭಾರಿ ಮಳೆಗೆ ದ್ವೀಪದಂತಾದ ಜಪ್ಪಿನಮೊಗರು
ಮಂಗಳೂರು: ಭಾರಿ ಮಳೆಗೆ ದ್ವೀಪದಂತಾದ ಜಪ್ಪಿನಮೊಗರು
ಕೋಮು ಗಲಭೆಗಳ ವಿಷಯದಲ್ಲಿ ಜಾಗರೂಕರಾಗಿರಲು ಅಧಿಕಾರಿಗಳಿಗೆ ಸಿಎಂ ಸೂಚನೆ
ಕೋಮು ಗಲಭೆಗಳ ವಿಷಯದಲ್ಲಿ ಜಾಗರೂಕರಾಗಿರಲು ಅಧಿಕಾರಿಗಳಿಗೆ ಸಿಎಂ ಸೂಚನೆ
Video: ಪ್ರಾಣ ಹೋದರೂ ಕೊಟ್ಟ ಮಾತು ತಪ್ಪೆನು: ಮೋದಿ
Video: ಪ್ರಾಣ ಹೋದರೂ ಕೊಟ್ಟ ಮಾತು ತಪ್ಪೆನು: ಮೋದಿ
ಶಾಂತಿ ಕದಡುವ ಯಾವುದೇ ಪ್ರಯತ್ನವನ್ನು ಸರ್ಕಾರ ಇನ್ನು ಸಹಿಸಲ್ಲ: ಪರಮೇಶ್ವರ್
ಶಾಂತಿ ಕದಡುವ ಯಾವುದೇ ಪ್ರಯತ್ನವನ್ನು ಸರ್ಕಾರ ಇನ್ನು ಸಹಿಸಲ್ಲ: ಪರಮೇಶ್ವರ್
ಸಲೂನ್​ಗೆ ನುಗ್ಗಿ ದಾಂದಲೆ: ಹಲ್ಲೆಗೊಳಗಾದ ವ್ಯಕ್ತಿ ಹೇಳಿದ್ದಿಷ್ಟು
ಸಲೂನ್​ಗೆ ನುಗ್ಗಿ ದಾಂದಲೆ: ಹಲ್ಲೆಗೊಳಗಾದ ವ್ಯಕ್ತಿ ಹೇಳಿದ್ದಿಷ್ಟು
‘ನೀವು ಅರ್ಜುನ್ ಜನ್ಯ ಡ್ರೀಮ್ ಲೇಡಿ’; ಅನುಶ್ರೀ ಬಗ್ಗೆ ವಿಜಯ್ ಪ್ರಕಾಶ್ ಮಾತು
‘ನೀವು ಅರ್ಜುನ್ ಜನ್ಯ ಡ್ರೀಮ್ ಲೇಡಿ’; ಅನುಶ್ರೀ ಬಗ್ಗೆ ವಿಜಯ್ ಪ್ರಕಾಶ್ ಮಾತು
ಸಿಕ್ಕಿಂ: ತೀಸ್ತಾ ನದಿಗೆ ಉರುಳಿದ ಬಸ್, ಇಬ್ಬರ ರಕ್ಷಣೆ, 9 ಮಂದಿ ನಾಪತ್ತೆ
ಸಿಕ್ಕಿಂ: ತೀಸ್ತಾ ನದಿಗೆ ಉರುಳಿದ ಬಸ್, ಇಬ್ಬರ ರಕ್ಷಣೆ, 9 ಮಂದಿ ನಾಪತ್ತೆ
ಅಹ್ಮದಾಬಾದ್​​ನಲ್ಲಿ ಕನಡಿಗರ ಬಹುದಿನಗಳ ಆಸೆ ಈಡೇರಿಸುತ್ತಾ ಆರ್​ಸಿಬಿ? 
ಅಹ್ಮದಾಬಾದ್​​ನಲ್ಲಿ ಕನಡಿಗರ ಬಹುದಿನಗಳ ಆಸೆ ಈಡೇರಿಸುತ್ತಾ ಆರ್​ಸಿಬಿ? 
ಅನಾರೋಗ್ಯದಲ್ಲಿ ಕೈ ಹಿಡಿದ RCBಗೆ ಕಪ್ ಗೆಲ್ಲಿಸಿ ಕೊಡುವುದೇ ಗುರಿ..!
ಅನಾರೋಗ್ಯದಲ್ಲಿ ಕೈ ಹಿಡಿದ RCBಗೆ ಕಪ್ ಗೆಲ್ಲಿಸಿ ಕೊಡುವುದೇ ಗುರಿ..!