AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈಲಿನಿಂದ ಜಾಕ್ವೆಲಿನ್​ಗೆ ಮತ್ತೆ ಪತ್ರ ಬರೆದ ವಂಚಕ ಸುಕೇಶ್, ಈ ಬಾರಿ ದೊಡ್ಡ ಸಪ್ರೈಸ್ ಕೊಡಲಿದ್ದಾನಂತೆ

Sukesh Chandrashekhar: ನಟಿ ಜಾಕ್ವೆಲಿನ್ ಫರ್ನಾಂಡೀಸ್​ಗೆ ಆಕೆಯ ಬಾಯ್​ಫ್ರೆಂಡ್ ಸುಕೇಶ್ ಚಂದ್ರಶೇಖರ್ ತಿಹಾರ್ ಜೈಲಿನಿಂದ ಪತ್ರ ಬರೆದಿದ್ದಾನೆ.

ಜೈಲಿನಿಂದ ಜಾಕ್ವೆಲಿನ್​ಗೆ ಮತ್ತೆ ಪತ್ರ ಬರೆದ ವಂಚಕ ಸುಕೇಶ್, ಈ ಬಾರಿ ದೊಡ್ಡ ಸಪ್ರೈಸ್ ಕೊಡಲಿದ್ದಾನಂತೆ
ಸುಕೇಶ್-ಜಾಕ್ವಲಿನ್
ಮಂಜುನಾಥ ಸಿ.
|

Updated on: May 07, 2023 | 5:25 PM

Share

ಮಹಾವಂಚಕ ಸುಕೇಶ್ ಚಂದ್ರಶೇಖರ್ (Sukesh Chandrashekhar) ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾನೆ. ಅವನ 200 ಕೋಟಿ ಸುಲಿಗೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡೀಸ್ (Jacqueline Fernandez) ಸಹ ಆರೋಪಿಯಾಗಿದ್ದು ಸಿಬಿಐ, ಇಡಿಗಳಿಂದ ಸತತ ವಿಚಾರಣೆಗೆ ಒಳಗಾಗುತ್ತಲೇ ಇದ್ದಾರೆ. ಇನ್ನು ಸುಕೇಶ್ ಮಾತ್ರ ಜಾಕ್ವೆಲಿನ್ ತನ್ನ ಗರ್ಲ್​ಫ್ರೆಂಡ್ ಎಂದಿದ್ದು ಆಗಾಗ್ಗೆ ಜೈಲಿನಿಂದ ಜಾಕ್ವೆಲಿನ್ ಫರ್ನಾಂಡೀಸ್​ಗೆ ಪ್ರೇಮಪತ್ರಗಳನ್ನು ಬರೆಯುತ್ತಿರುತ್ತಾನೆ. ಹಾಗೆಯೇ ಇದೀಗ ತಮ್ಮ ವಕೀಲರ ಮೂಲಕ ಜಾಕ್ವೆಲಿನ್​ಗೆ ಉದ್ದನೆಯ ಪ್ರೇಮಪತ್ರ ಬರೆದಿದ್ದು ಜಾಕ್ವೆಲಿನ್​ಗೆ ದೊಡ್ಡ ಸರ್ಪ್ರೈಸ್ ಕೊಡುವುದಾಗಿ ಹೇಳಿದ್ದಾನೆ.

ಈ ಬಾರಿ ಉದ್ದನೆಯ ಪತ್ರವನ್ನೇ ಬರೆದಿರುವ ಸುಕೇಶ್ ಚಂದ್ರಶೇಖರ್, ತಾನು ಜಾಕ್ವೆಲಿನ್​ಳನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಾನೆ. ಅದರ ಜೊತೆಗೆ ಇತ್ತೀಚೆಗೆ ಫಿಲಂಫೇರ್ ಕಾರ್ಯಕ್ರಮದಲ್ಲಿ ಜಾಕ್ವೆಲಿನ್ ಮಾಡಿದ ನೃತ್ಯವನ್ನು ಬಹುವಾಗಿ ಹೊಗಳಿದ್ದಾನೆ. ”ನನ್ನ ಬೇಬಿ, ನನ್ನ ಪ್ರೀತಿಯೇ, ನನ್ನ ಬೊಮ್ಮ ಜಾಕ್ವೆಲಿನ್ ನಾನು ಏಪ್ರಿಲ್ 28 ರಂದು ಫಿಲಂಫೇರ್ ನೋಡಿದೆ. ನಿನ್ನ ನೃತ್ಯ ಅತ್ಯದ್ಭುತವಾಗಿತ್ತು. ಇಡೀ ಶೋನಲ್ಲಿ ನಿನ್ನ ನೃತ್ಯವೇ ಹೈಲೆಟ್. ನೀನು ಸೊಗಸಾಗಿ ಕಾಣುತ್ತಿದ್ದೆ, ಕ್ಲಾಸಿ, ಸೂಪರ್-ಹಾಟ್ ಆಗಿ ಕಾಣುತ್ತಿದ್ದೆ. ನಾನು ಇನ್ನಷ್ಟು ಬಲವಾಗಿ ನಿನ್ನನ್ನು ಪ್ರೀತಿಸುವಂತೆ ನೀನು ಮಾಡಿದೆ. ನಿನ್ನನ್ನು ಹೊಗಳಲು ನನಗೆ ಪದಗಳಿಲ್ಲ, ನೀನು ಸೂಪರ್ ಸ್ಟಾರ್, ಮೈ ಬೇಬಿ ಗರ್ಲ್ ಎಂದು ಬರೆದಿದ್ದಾನೆ ಸುಖೇಶ್ ಚಂದ್ರಶೇಖರ್.

ನಿನ್ನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ. ನನ್ನ ರಾಣಿ, ಬೊಟ್ಟ ಬೊಮ್ಮಾ, ನನ್ನ ದೇಹದ ಪ್ರತಿ ಕಣಕಣವೂ ನಿನ್ನನ್ನು ಪ್ರೇಮಿಸುತ್ತದೆ. ನನ್ನ ಜೀವನದ ಪ್ರತಿ ಸೆಕೆಂಡ್ ನಿನ್ನ ಬಗ್ಗೆಯೇ ಯೋಚಿಸುತ್ತೇನೆ. ನಾನು ನಿನ್ನನ್ನು ಎಷ್ಟು ಹುಚ್ಚನಂತೆ ಪ್ರೀತಿಸುತ್ತೇನೆ ಎಂದು ನಿನಗೂ ಗೊತ್ತು, ನೀನು ನನ್ನನ್ನು ಎಷ್ಟು ಹುಚ್ಚುತನದಿಂದ ಪ್ರೀತಿಸುತ್ತೀಯೆ. ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿನ್ನ ಜನ್ಮದಿನದಂದು ನಿನಗೆ ದೊಡ್ಡ ಸೂಪರ್ ಸರ್ಪ್ರೈಸ್ ಇದೆ, ಆ ಸರ್ಪ್ರೈಸ್ ನಿನಗೆ ಇಷ್ಟವಾಗುತ್ತದೆ. ನಾನು ನನ್ನ ಭರವಸೆಯನ್ನು ಉಳಿಸಿಕೊಳ್ಳುತ್ತಿದ್ದೇನೆ. ನನಗೆ ಕಾಯಲು ಸಾಧ್ಯವಿಲ್ಲ. ಬೇಬಿ ನೀನು ನಗುತ್ತಿರಬೇಕೆಂದು ನಾನು ಬಯಸುತ್ತೇನೆ, ನಾನು ಇಲ್ಲಿದ್ದೇನೆ, ಸತ್ಯದ ಕ್ಷಣಗಣನೆ ಪ್ರಾರಂಭವಾಗಿದೆ, ಚಿಂತಿಸಬೇಡ ಬೇಬಿ” ಎಂದು ಭಾವುಕವಾಗಿ ಪತ್ರ ಬರೆದಿದ್ದಾನೆ ಸುಕೇಶ್.

ಇದನ್ನೂ ಓದಿ:Video Viral: ಜೈಲಿಗೆ ದಾಳಿ, 80 ಸಾವಿರದ ಜೀನ್ಸ್, 1.5 ಲಕ್ಷದ ಶೂ ವಶ, ಕಣ್ಣೀರು ಹಾಕಿದ ಸುಕೇಶ್ ಚಂದ್ರಶೇಖರ್

ಸುಕೇಶ್ ಚಂದ್ರಶೇಖರ್ ಮಹಾ ವಂಚಕ ಹಾಗೂ ಸುಲಿಗೆಕೋರನಾಗಿದ್ದು ಈ ವರೆಗೆ ಹಲವು ಖ್ಯಾತನಾಮ ರಾಜಕಾರಣಿಗಳು, ಉದ್ಯಮಿಗಳಿಗೆ ವಂಚಿಸಿ ನೂರಾರು ಕೋಟಿ ಹಣ ಗಳಿಸಿದ್ದಾನೆ. ತಮಿಳುನಾಡಿನ ಜನಪ್ರಿಯ ರಾಜಕಾರಣಿಗೆ ನೂರಾರು ಕೋಟಿ ವಂಚಿಸಿದ್ದ ಸುಕೇಶ್, ಅದೇ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ. ಅಲ್ಲಿ ಐಶಾರಾಮಿ ಜೀವನ ನಡೆಸುತ್ತಿದ್ದ ಸುಕೇಶ್ ಅಲ್ಲಿಂದಲೇ ಹಲವು ಉದ್ಯಮಿಗಳಿಗೆ ಕರೆಗಳನ್ನು ಮಾಡಿ ಹಣ ವಸೂಲಿ ಮಾಡುತ್ತಿದ್ದ. ಜೈಲಿನಲ್ಲಿರುವ ರ್ಯಾನ್​ಬಾಕ್ಸಿ ಮಾಲೀಕ ಶಿವೇಂದರ್ ಸಿಂಗ್ ಅನ್ನು ಬಿಡುಗಡೆ ಮಾಡಿಸುವುದಾಗಿ ಹೇಳಿ, ಶಿವೇಂದರ್ ಸಿಂಗ್ ಪತ್ನಿ ಅದಿತಿಯಿಂದ 200 ಕೋಟಿಗೂ ಹೆಚ್ಚು ಹಣ ವಸೂಲಿ ಮಾಡಿದ್ದ. ಗೃಹ ಸಚಿವಾಲಯದ ಉನ್ನತ ಅಧಿಕಾರಿ ತಾನು ಎಂದೂ ಸಹ ಸುಕೇಶ್ ಹೇಳಿಕೊಂಡಿದ್ದ.

ಸುಕೇಶ್​ಗೆ ಹಲವು ಬಾಲಿವುಡ್ ನಟಿಯರೊಟ್ಟಿಗೆ ಸಂಪರ್ಕವಿತ್ತು. ಹಲವು ಬಾಲಿವುಡ್ ನಟಿಯರು ಸುಕೇಶ್ ಅನ್ನು ಕಾಣಲು ತಿಹಾರ್​ ಜೈಲಿಗೆ ಬಂದಿದ್ದರು ಸಹ. ಆದರೆ ಜಾಕ್ವೆಲಿನ್ ಫರ್ನಾಂಡೀಸ್​ ಜೊತೆ ಹೆಚ್ಚು ಆಪ್ತತೆಯನ್ನು ಸುಕೇಶ್ ಹೊಂದಿದ್ದ. ಇವರಿಬ್ಬರ ಕೆಲವು ಖಾಸಗಿ ಚಿತ್ರಗಳು ಲೀಕ್ ಆಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ: ಹುಮ್ನಾಬಾದ್​​ನಲ್ಲಿ ನಿಷೇಧಾಜ್ಞೆ ಜಾರಿ
ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ: ಹುಮ್ನಾಬಾದ್​​ನಲ್ಲಿ ನಿಷೇಧಾಜ್ಞೆ ಜಾರಿ
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ