AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೆಜಿಎಫ್ 2’ ಚಿತ್ರಕ್ಕೆ ಹೆದರಿದ ಟಾಲಿವುಡ್​; ಎರಡು ಸಿನಿಮಾಗಳ ರಿಲೀಸ್ ಡೇಟ್ ಮುಂದಕ್ಕೆ

ನಮ್ಮ ಸಿನಿಮಾಗಳ ಅಬ್ಬರ ನೋಡಿಕೊಂಡು ಪರಭಾಷೆಯವರು ಚಿತ್ರಗಳನ್ನು ರಿಲೀಸ್ ಮಾಡಿಕೊಳ್ಳುತ್ತಿದ್ದಾರೆ. ‘ಕೆಜಿಎಫ್ 2’ ವಿಚಾರದಲ್ಲಿ ಇದು ಅಕ್ಷರಶಃ ಸಾಬೀತಾಗಿದೆ.

‘ಕೆಜಿಎಫ್ 2’ ಚಿತ್ರಕ್ಕೆ ಹೆದರಿದ ಟಾಲಿವುಡ್​; ಎರಡು ಸಿನಿಮಾಗಳ ರಿಲೀಸ್ ಡೇಟ್ ಮುಂದಕ್ಕೆ
ಯಶ್
TV9 Web
| Edited By: |

Updated on: Apr 19, 2022 | 4:06 PM

Share

‘ಕೆಜಿಎಫ್ ಚಾಪ್ಟರ್​ 2’ ಸಿನಿಮಾ (KGF Chapter 2)  ಅಬ್ಬರಕ್ಕೆ ಭಾರತೀಯ ಚಿತ್ರರಂಗವೇ ಒಮ್ಮೆ ಶೇಕ್​ ಆಗಿದೆ. ಬಾಲಿವುಡ್ (Bollywood) ಮಂದಿ ಮಾಡಿದ್ದ ದಾಖಲೆಗಳು ಧೂಳಿಪಟ ಆಗಿವೆ. ಎಲ್ಲ ಕಡೆಗಳಲ್ಲಿ ರಾಕಿ ಭಾಯ್ ಹೊಸಹೊಸ ದಾಖಲೆಗಳನ್ನು ಬರೆದುಕೊಂಡು ಬರುತ್ತಿದ್ದಾರೆ. ‘ಕೆಜಿಎಫ್​ 2’ ಬರುವ ಅಬ್ಬರ ನೋಡಿಯೇ ‘ಜೆರ್ಸಿ’ ಸಿನಿಮಾದ (Jersey Movie) ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿತ್ತು. ಈಗ ಈ ವಾರ ತೆರೆಗೆ ಬರುವ ಚಿತ್ರಗಳು ರಿಲೀಸ್​ ದಿನಾಂಕವನ್ನು ಮುಂದೂಡಿಕೊಂಡು ಸೈಲೆಂಟ್ ಆಗಿವೆ. ಟಾಲಿವುಡ್​ನಲ್ಲಂತೂ ‘ಕೆಜಿಎಫ್ 2’ ಹೊಡೆತಕ್ಕೆ ಸಿಲುಕಿಕೊಳ್ಳದೆ, ಎರಡು ಸಿನಿಮಾಗಳ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿವೆ.

ಸಾಮಾನ್ಯವಾಗಿ ಪರಭಾಷೆಯ ಸಿನಿಮಾಗಳು ತೆರೆಗೆ ಬರುತ್ತಿವೆ ಎಂದರೆ ಕನ್ನಡ ಸಿನಿಮಾಗಳ ಎತ್ತಂಗಡಿ ಆಗುತ್ತಿತ್ತು. ಆದರೆ, ಈಗ ಕಾಲ ಬದಲಾಗಿದೆ. ನಮ್ಮ ಸಿನಿಮಾಗಳ ರಿಲೀಸ್​ ದಿನಾಂಕ, ನಮ್ಮ ಸಿನಿಮಾಗಳ ಅಬ್ಬರ ನೋಡಿಕೊಂಡು ಪರಭಾಷೆಯವರು ಚಿತ್ರಗಳನ್ನು ರಿಲೀಸ್ ಮಾಡಿಕೊಳ್ಳುತ್ತಿದ್ದಾರೆ. ‘ಕೆಜಿಎಫ್ 2’ ವಿಚಾರದಲ್ಲಿ ಇದು ಅಕ್ಷರಶಃ ಸಾಬೀತಾಗಿದೆ.

ಏಪ್ರಿಲ್​ 22ರಂದು ತೆಲುಗಿನಲ್ಲಿ ವಿಶ್ವಕ್ ಸೇನ್​ ಅವರ ‘ಅಶೋಕ ವನಂ ಲೋ ಅರ್ಜುನ ಕಲ್ಯಾಣಂ’ ಹಾಗೂ ನಾಗ ಶೌರ್ಯ ಅವರ ‘ಕೃಷ್ಣ ವೃಂದ ವಿಹಾರಿ’ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ, ಈ ಎರಡೂ ಚಿತ್ರಗಳು ಈಗ ರಿಲೀಸ್​ ದಿನಾಂಕವನ್ನು ಮುಂದೂಡಿಕೊಳ್ಳುತ್ತಿವೆ. ಈಗಾಗಲೇ ‘ಅಶೋಕ ವನಂ ಲೋ ಅರ್ಜುನ ಕಲ್ಯಾಣಂ’ ಸಿನಿಮಾದ ರಿಲೀಸ್ ದಿನಾಂಕವನ್ನು ಮೇ 6ಕ್ಕೆ ಮುಂದೂಡಿರುವ ಬಗ್ಗೆ ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ. ‘ಕೃಷ್ಣ ವೃಂದ ವಿಹಾರಿ’ ಕೂಡ ಇದೇ ಆಲೋಚನೆಯಲ್ಲಿದ್ದು, ಈ ಬಗ್ಗೆ ಶೀಘ್ರವೇ ಘೋಷಣೆ ಆಗಲಿದೆ.

ಏಪ್ರಿಲ್ 29ರಂದು ರಾಮ್​ ಚರಣ್ ಹಾಗೂ ಚಿರಂಜೀವಿ ನಟನೆಯ ‘ಆಚಾರ್ಯ’ ಸಿನಿಮಾ ತೆರೆಗೆ ಬರುತ್ತಿದೆ. ಈ ಸಿನಿಮಾದ ಅಬ್ಬರ ಒಂದು ವಾರಗಳ ಕಾಲವಂತೂ ಇದ್ದೇ ಇರುತ್ತದೆ. ಹೀಗಾಗಿ, ಮೇ 6ರ ಬಳಿಕ ಚಿತ್ರಗಳನ್ನು ರಿಲೀಸ್ ಮಾಡುವುದು ಉತ್ತಮ ಎನ್ನುವ ನಿರ್ಧಾರಕ್ಕೆ ಈ ಚಿತ್ರಗಳು ಬಂದಿವೆ ಎಂದು ವರದಿ ಆಗಿದೆ.

‘ಕೆಜಿಎಫ್ 2’ ಸಿನಿಮಾ ಬಾಲಿವುಡ್​ನಲ್ಲಿ ಹೊಸಹೊಸ ದಾಖಲೆ ಬರೆಯುತ್ತಿದೆ. ಈ ಸಿನಿಮಾ ಮೂರು ದಿನಕ್ಕೆ 200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಚಿತ್ರದ ಗಳಿಕೆ ನೋಡಿ ಬಾಲಿವುಡ್​ ಮಂದಿ ಕಣ್ಣರಳಿಸಿದ್ದಾರೆ. ಸಿನಿಮಾದ ನಾಗಾಲೋಟ ಇನ್ನೂ ಕೆಲವು ವಾರಗಳ ಕಾಲ ಮುಂದುವರಿಯಲಿದೆ.

ಇದನ್ನೂ ಓದಿ: KGF 2 Collection: ಸೋಮವಾರದ ಪರೀಕ್ಷೆಯಲ್ಲಿ ‘ಕೆಜಿಎಫ್​ 2’ ಪಾಸ್; ಹಿಂದಿ ಮಾರುಕಟ್ಟೆಯಲ್ಲಿ 5 ದಿನಕ್ಕೆ 219.56 ಕೋಟಿ ರೂ. ಕಲೆಕ್ಷನ್​

ತಮಿಳುನಾಡಿನಲ್ಲಿ ‘ಕೆಜಿಎಫ್ 2’ ಎದುರು ಮಕಾಡೆ ಮಲಗಿದ ‘ಬೀಸ್ಟ್​’; ಕಲೆಕ್ಷನ್ ಅಂತರ ಎಷ್ಟು?

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?