AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಟ್ಟಿಂಗ್ ಅಪ್ಲಿಕೇಶನ್ ಪ್ರಕರಣ: ನಟಿ ಊರ್ವಶಿ ರೌಟೆಲಾಗೆ ಇಡಿ ಸಮನ್ಸ್

Urvashi Rautela: ಬಲು ಜನಪ್ರಿಯವಾಗಿರುವ 1xbet ಹೆಸರಿನ ಬೆಟ್ಟಿಂಗ್ ಅಪ್ಲಿಕೇಶನ್​​ಗೆ ಸಂಬಂಧಿಸಿದಂತೆ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ನಟಿ ಊರ್ವಶಿ ರೌಟೆಲಾ ಮತ್ತು ಮಾಜಿ ಸಂಸದೆ ಹಾಗೂ ನಟಿ ಸಹ ಆಗಿರುವ ಮಿಮಿ ಚಕ್ರವರ್ತಿಗೆ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೂ ಸಹ ದಿನಾಂಕವನ್ನು ಸಹ ನೀಡಿದೆ.

ಬೆಟ್ಟಿಂಗ್ ಅಪ್ಲಿಕೇಶನ್ ಪ್ರಕರಣ: ನಟಿ ಊರ್ವಶಿ ರೌಟೆಲಾಗೆ ಇಡಿ ಸಮನ್ಸ್
Urvashi Rautela
ಮಂಜುನಾಥ ಸಿ.
|

Updated on: Sep 14, 2025 | 10:08 PM

Share

ಬೆಟ್ಟಿಂಗ್ ಅಪ್ಲಿಕೇಶನ್​​ಗಳನ್ನು, ಆನ್​​ಲೈನ್ ಜೂಜನ್ನು ಸಾರಾ ಸಗಟಾಗಿ ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. ಇದಕ್ಕೂ ಮುಂಚೆ ಕೇವಲ ಸ್ಕಿಲ್ ಗೇಮ್​​ಗಳಿಗೆ ಮಾತ್ರವೇ ಅವಕಾಶ ನೀಡಲಾಗಿತ್ತು. ಆದರೆ ಆಗಲೂ ಸಹ ಹಲವಾರು ಬೆಟ್ಟಿಂಗ್ ಆಪ್​​​ಗಳು ಕಳ್ಳದಾರಿಯಲ್ಲಿ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಇಂಥಹಾ ಬೆಟ್ಟಿಂಗ್ ಅಪ್ಲಿಕೇಶನ್​​ಗಳಿಗೆ ಖ್ಯಾತ ನಟ-ನಟಿಯರು ರಾಯಭಾರಿಗಳಾಗಿ ಪ್ರಚಾರ ನೀಡಿದ್ದರು. ಕೆಲವು ನಟ-ನಟಿಯರು ಹೂಡಿಕೆಯನ್ನೂ ಮಾಡಿದ್ದರು ಎನ್ನಲಾಗುತ್ತದೆ. ಬೆಟ್ಟಿಂಗ್ ಅಪ್ಲಿಕೇಶನ್ ಪ್ರಕರಣದಲ್ಲಿ ಹಲವಾರು ಬಾಲಿವುಡ್ ನಟ-ನಟಿಯರುಗಳಿಗೆ ಈ ಹಿಂದೆ ಸಮನ್ಸ್, ನೊಟೀಸುಗಳನ್ನು ನೀಡಲಾಗಿದೆ. ಇದೀಗ ನಟಿ ಊರ್ವಶಿ ರೌಟೆಲಾಗೂ ಸಹ ಬೆಟ್ಟಿಂಗ್ ಅಪ್ಲಿಕೇಶನ್ ಪ್ರಕರಣದಲ್ಲಿ ಇಡಿ ಸಮನ್ಸ್ ಜಾರಿ ಮಾಡಿದೆ.

ಬಲು ಜನಪ್ರಿಯವಾಗಿರುವ 1xbet ಹೆಸರಿನ ಬೆಟ್ಟಿಂಗ್ ಅಪ್ಲಿಕೇಶನ್​​ಗೆ ಸಂಬಂಧಿಸಿದಂತೆ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ನಟಿ ಊರ್ವಶಿ ರೌಟೆಲಾ ಮತ್ತು ಮಾಜಿ ಸಂಸದೆ ಹಾಗೂ ನಟಿ ಸಹ ಆಗಿರುವ ಮಿಮಿ ಚಕ್ರವರ್ತಿಗೆ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೂ ಸಹ ದಿನಾಂಕವನ್ನು ಸಹ ನೀಡಿದೆ.

ಇದನ್ನೂ ಓದಿ:ಊರ್ವಶಿಯಂತೆ ಕಂಗೊಳಿಸಿದ ನಟಿ ಊರ್ವಶಿ ರೌಟೆಲಾ

ಮಾಜಿ ಸಂಸದೆ ಮಿಮಿ ಚಕ್ರವರ್ತಿ ಸೆಪ್ಟೆಂಬರ್ 15 ರಂದು ಇಡಿ ಅಧಿಕಾರಿಗಳ ಮುಂದೆ ಹಾಜರಾಗಬೇಕಿದೆ. ಊರ್ವಶಿ ರೌಟೆಲಾ ಸೆಪ್ಟೆಂಬರ್ 16 ರಂದು ಇಡಿ ಅಧಿಕಾರಿಗಳ ಮುಂದೆ ಹಾಜರಾಗಬೇಕಿದೆ. ಈ ಇಬ್ಬರೂ ಸಹ 1xbet ಬೆಟ್ಟಿಂಗ್ ಅಪ್ಲಿಕೇಶನ್​​ ಪರವಾಗಿ ಪ್ರಚಾರ ಮಾಡಿದ್ದರು. ಅವರಿಂದ ಹಣ ಪಡೆದಿದ್ದರು ಎನ್ನಲಾಗುತ್ತಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ ತಿಂಗಳಲ್ಲಿ ಕ್ರಿಕೆಟಿಗ ಸುರೇಶ್ ರೈನಾ ಮತ್ತು ಶಿಖರ್ ಧವನ್ ಅವರಿಗೂ ಸಹ ಇಡಿ ಸಮನ್ಸ್ ನೀಡಿ ವಿಚಾರಣೆ ನಡೆಸಿತ್ತು.

ಕೆಲ ವಾರಗಳ ಹಿಂದಷ್ಟೆ ಹಲವು ತೆಲುಗು ನಟ-ನಟಿಯರಿಗೂ ಸಹ ಬೆಟ್ಟಿಂಗ್ ಆಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಟೀಸ್​​ಗಳನ್ನು ನೀಡಲಾಗಿತ್ತು. ನಟ ಪ್ರಕಾಶ್ ರೈ, ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ಮಂಚು ಲಕ್ಷ್ಮಿ ಇನ್ನೂ ಕೆಲವ ನಟ-ನಟಿಯರುಗಳಿಗೆ ನೊಟೀಸ್ ನೀಡಿ ವಿಚಾರಣೆಗೆ ಕರೆಯಲಾಗಿತ್ತು. ಇಡಿ ನೊಟೀಸ್​​ ಬಂದಾಗ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಲಕ್ಷ್ಮಿ ಮಂಚು, ಈ ಅಧಿಕಾರಿಗಳ ತನಿಖೆ ನನಗೆ ನಗು ತರಿಸುತ್ತದೆ. ಅವರು ಯಾವಾಗಲೂ ಪ್ರಕರಣದ ಕೊನೆಯ ವ್ಯಕ್ತಿಯನ್ನೇ ವಿಚಾರಿಸುತ್ತಾರೆ, ನಾವು ಜಾಹೀರಾತಿನಲ್ಲಿ ನಟಿಸಿದವರಷ್ಟೆ, ನೀವು ನೊಟೀಸ್ ನೀಡಿ ವಿಚಾರಣೆ ಮಾಡಬೇಕಿರುವುದು ಆ ಬೆಟ್ಟಿಂಗ್ ಅಪ್ಲಿಕೇಶನ್​​ಗಳನ್ನು ಪ್ರಾರಂಭ ಮಾಡಿದವರನ್ನು ಎಂದಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್