AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯಾ ಬಾಲನ್ ಕೈತಪ್ಪಿದ ‘ಕಹಾನಿ’, ಆದಿತ್ಯ ಧರ್ ಪತ್ನಿಯ ಪಾಲಾದ ಸಿನಿಮಾ

Yaami Gautham: ಮಹಿಳಾ ಪ್ರಧಾನ ಸಿನಿಮಾ ಆದರೂ ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಭಾವುಕತೆಯನ್ನು ಸೇರಿಸಿ ಕತೆ ಕಟ್ಟುವುದು ‘ಕಹಾನಿ’ ಸಿನಿಮಾದ ವಿಶೇಷ. 2012 ರಲ್ಲಿ ಈ ಸರಣಿಯ ಮೊದಲ ಸಿನಿಮಾ ರಿಲೀಸ್ ಆಗಿತ್ತು. 2016ರಲ್ಲಿ ಎರಡನೇ ಸಿನಿಮಾ ಬಿಡುಗಡೆ ಆಗಿತ್ತು. ಇದೀಗ ಮೂರನೇ ಸಿನಿಮಾ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗಿದೆ. ಆದರೆ ಸಿನಿಮಾನಲ್ಲಿ ವಿದ್ಯಾ ಬಾಲನ್ ನಾಯಕಿಯಲ್ಲ. ಬದಲಿಗೆ ‘ಧುರಂಧರ್’ ನಿರ್ದೇಶಕ ಆದಿತ್ಯ ಧರ್ ಪತ್ನಿ ನಟಿ ಯಾಮಿ ಗೌತಮ್ ನಾಯಕಿ.

ವಿದ್ಯಾ ಬಾಲನ್ ಕೈತಪ್ಪಿದ ‘ಕಹಾನಿ’, ಆದಿತ್ಯ ಧರ್ ಪತ್ನಿಯ ಪಾಲಾದ ಸಿನಿಮಾ
Yami Vidya
ಮಂಜುನಾಥ ಸಿ.
|

Updated on: Jul 28, 2026 | 1:01 PM

Share

‘ಕಹಾನಿ’ ಬಾಲಿವುಡ್​​ನ (Bollywood) ಜನಪ್ರಿಯ ಮತ್ತು ಯಶಸ್ವಿ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಒಂದು. ಈವರೆಗೆ ‘ಕಹಾನಿ’ ಸಿನಿಮಾದ ಎರಡು ಭಾಗಗಳು ಬಿಡುಗಡೆ ಆಗಿವೆ. ಎರಡೂ ಸಿನಿಮಾಗಳಲ್ಲಿ ವಿದ್ಯಾ ಬಾಲನ್ ನಾಯಕಿ. ಮಹಿಳಾ ಪ್ರಧಾನ ಸಿನಿಮಾ ಆದರೂ ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಭಾವುಕತೆಯನ್ನು ಸೇರಿಸಿ ಕತೆ ಕಟ್ಟುವುದು ‘ಕಹಾನಿ’ ಸಿನಿಮಾದ ವಿಶೇಷ. 2012 ರಲ್ಲಿ ಈ ಸರಣಿಯ ಮೊದಲ ಸಿನಿಮಾ ರಿಲೀಸ್ ಆಗಿತ್ತು. 2016ರಲ್ಲಿ ಎರಡನೇ ಸಿನಿಮಾ ಬಿಡುಗಡೆ ಆಗಿತ್ತು. ಇದೀಗ ಮೂರನೇ ಸಿನಿಮಾ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗಿದೆ. ಆದರೆ ಸಿನಿಮಾನಲ್ಲಿ ವಿದ್ಯಾ ಬಾಲನ್ ನಾಯಕಿಯಲ್ಲ. ಬದಲಿಗೆ ‘ಧುರಂಧರ್’ ನಿರ್ದೇಶಕ ಆದಿತ್ಯ ಧರ್ ಪತ್ನಿ ನಟಿ ಯಾಮಿ ಗೌತಮ್ ನಾಯಕಿ.

ಇತ್​ತೀಚೆಗಷ್ಟೆ ‘ಆರ್ಟಿಕಲ್ 370’ ಸಿನಿಮಾದ ನಟನೆಗಾಗಿ ರಾಷ್ಟ್ರಪ್ರಶಸ್ತಿ ಸಹ ಪಡೆದಿರುವ ಯಾಮಿ ಗೌತಮ್, ಇದೀಗ ‘ಕಹಾನಿ 3’ ಸಿನಿಮಾದ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಆ ಮೂಲಕ ವಿದ್ಯಾ ಬಾಲನ್ ಅವರಿಂದ ‘ಕಹಾನಿ’ ಕತೆ ಕೈತಪ್ಪಿದಂತಾಗಿದೆ. ‘ಕಹಾನಿ’ ಸಿನಿಮಾವು ಈ ಬಾರಿ ಯುವ ತಾಯಿಯ ಕತೆಯನ್ನು ತೆರೆ ಮೇಲೆ ತರುವ ಪ್ರಯತ್ನದಲ್ಲಿದೆಯಂತೆ. ಇದೇ ಕಾರಣಕ್ಕೆ ವಿದ್ಯಾ ಅವರಿಗಿಂತಲೂ ಕಿರಿಯರಾದ ಯಾಮಿ ಗೌತಮ್ ಅವರನ್ನು ಆಯ್ಕೆ ಮಾಡಿಕೊಂಡಿದೆ.

‘ಕಹಾನಿ’ ಸಿನಿಮಾಗಳನ್ನು ಸುಜೋಯ್ ಘೋಷ್ ನಿರ್ದೇಶನ ಮಾಡುತ್ತಾ ಬರುತ್ತಿದ್ದಾರೆ. ‘ಕಹಾನಿ 3’ ಸಿನಿಮಾವನ್ನೂ ಸಹ ಸುಜೋಯ್ ಘೋಷ್ ಅವರೇ ನಿರ್ದೇಶನ ಮಾಡಲಿದ್ದಾರೆ. ನಾಯಕಿ ಪಾತ್ರಕ್ಕೆ ಮಾತ್ರ ವಿದ್ಯಾ ಬಾಲನ್ ಬದಲಿಗೆ ಯಾಮಿ ಗೌತಮ್ ಅವರು ನಟಿಸುತ್ತಿದ್ದಾರೆ. ಹೊಸ ಸಿನಿಮಾ ಬಗ್ಗೆ ಮಾತನಾಡಿರುವ ನಿರ್ದೇಶಕ ಸುಜೋಯ್, ‘ಕಹಾನಿ 3 ಸಂಪೂರ್ಣವಾಗಿ ಹೊಸ ಕಥೆ. ಮೊದಲೆರಡು ಕತೆಯ ಸಾರವನ್ನು ಉಳಿಸಿಕೊಂಡು ಫ್ರಾಂಚೈಸಿಯನ್ನು ಮುಂದಕ್ಕೆ ಕೊಂಡೊಯ್ಯುವುದು ಇದರ ಉದ್ದೇಶ. ಯಾಮಿ ಗೌತಮ್ ನಾಯಕಿಯಾಗಿ ನಟಿಸುತ್ತಿದ್ದಾರೆ, ಪಾತ್ರವು ತುಂಬಾ ಬಲವಾದ ವ್ಯಕ್ತಿತ್ವ ಹೊಂದಿರುತ್ತದೆ. ಚಿತ್ರವು ಇನ್ನೂ ಪ್ರೀ ಪ್ರೊಡಕ್ಷನ್​​ ಹಂತದಲ್ಲಿದೆ ಮತ್ತು ಶೀಘ್ರವೇ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ’ ಎಂದಿದ್ದಾರೆ.

ಇದನ್ನೂ ಓದಿ:ಸಿನಿಮಾ ಪೈರಸಿ ತಡೆಯಲು ಹೊಸ ಪ್ಲ್ಯಾನ್​​ನೊಂದಿಗೆ ಬಂದ ಕೇಂದ್ರ ಸರ್ಕಾರ

2012 ರಲ್ಲಿ ಬಿಡುಗಡೆ ಆದ ಮೊದಲ ‘ಕಹಾನಿ’ ಸಿನಿಮಾ 100 ಕೋಟಿ ಗಳಿಸಿತ್ತು. ಆ ಸಿನಿಮಾನಲ್ಲಿ ಕೊಲೆಯಾದ ಪತಿಯ ರಹಸ್ಯವನ್ನು ಅನ್ವೇಷಿಸುವ ಪತ್ನಿಯ ಕತೆ ಒಳಗೊಂಡಿತ್ತು. 2016 ರಲ್ಲಿ ಬಿಡುಗಡೆ ಆದ ‘ಕಹಾನಿ 2’ ಸಿನಿಮಾ ಅಪಹರಣಕ್ಕೆ ಒಳಗಾದ ಅಂಗವಿಕಲ ಮಗಳ ಹುಡುಕುವ ತಾಯಿಯ ಕತೆಯನ್ನು ಒಳಗೊಂಡಿತ್ತು. ಎರಡೂ ಸಿನಿಮಾಗಳಲ್ಲಿ ವಿದ್ಯಾ ಬಾಲನ್ ಅದ್ಭುತ ನಟನೆ ಮಾಡಿದ್ದರು. ಈಗ ಮೂರನೇ ಸಿನಿಮಾಕ್ಕೆ ಯಾಮಿ ಗೌತಮ್ ನಾಯಕಿ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಳೆ ಅಭಾವ: ತುಮಕೂರಲ್ಲಿ ಸಂಪೂರ್ಣ ಬತ್ತಿದ 300ಕ್ಕೂ ಹೆಚ್ಚು ಕೆರೆಗಳು
ಮಳೆ ಅಭಾವ: ತುಮಕೂರಲ್ಲಿ ಸಂಪೂರ್ಣ ಬತ್ತಿದ 300ಕ್ಕೂ ಹೆಚ್ಚು ಕೆರೆಗಳು
ಅಳ್ನಾವರದಲ್ಲಿ ನಾಲ್ಕು ಗಂಟೆಗೂ ಹೆಚ್ಚು ರೈಲುಗಳ ನಿಲುಗಡೆ: ಪ್ರಯಾಣಿಕರ ಪರದಾಟ
ಅಳ್ನಾವರದಲ್ಲಿ ನಾಲ್ಕು ಗಂಟೆಗೂ ಹೆಚ್ಚು ರೈಲುಗಳ ನಿಲುಗಡೆ: ಪ್ರಯಾಣಿಕರ ಪರದಾಟ
ಆರ್​ಎಸ್​ಎಸ್ ನೋಂದಣಿ ಬಗ್ಗೆ ರಾಷ್ಟ್ರಮಟ್ಟದಲ್ಲಿ ಅಭಿಯಾನ
ಆರ್​ಎಸ್​ಎಸ್ ನೋಂದಣಿ ಬಗ್ಗೆ ರಾಷ್ಟ್ರಮಟ್ಟದಲ್ಲಿ ಅಭಿಯಾನ
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕನ್ನಡತಿ; ಭಾರತೀಯ ವನಿತೆಯರ ಕಮಾಲ್
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕನ್ನಡತಿ; ಭಾರತೀಯ ವನಿತೆಯರ ಕಮಾಲ್
ಚಾಮರಾಜೇಶ್ವರಸ್ವಾಮಿ ಆಷಾಢ ಮಾಸದ ರಥೋತ್ಸವಕ್ಕೆ ಕ್ಷಣಗಣನೆ ಆರಂಭ
ಚಾಮರಾಜೇಶ್ವರಸ್ವಾಮಿ ಆಷಾಢ ಮಾಸದ ರಥೋತ್ಸವಕ್ಕೆ ಕ್ಷಣಗಣನೆ ಆರಂಭ
‘ಟಾಕ್ಸಿಕ್ ನೋಡಿದವರು ವಾಟ್​ ದಿ ಹೆಲ್​ ವಾಸ್ ದ್ಯಾಟ್ ಅಂತ ಹೊರಗೆ ಬರ್ತಾರೆ’
‘ಟಾಕ್ಸಿಕ್ ನೋಡಿದವರು ವಾಟ್​ ದಿ ಹೆಲ್​ ವಾಸ್ ದ್ಯಾಟ್ ಅಂತ ಹೊರಗೆ ಬರ್ತಾರೆ’
ಸಿಟಿ ರವಿ ಚಿಕ್ಕಮಗಳೂರಿಗೆ ಬರದಂತೆ ತಡೀತೇವೆ, ಮುಸ್ಲಿಂ ಮುಖಂಡರ ಎಚ್ಚರಿಕೆ
ಸಿಟಿ ರವಿ ಚಿಕ್ಕಮಗಳೂರಿಗೆ ಬರದಂತೆ ತಡೀತೇವೆ, ಮುಸ್ಲಿಂ ಮುಖಂಡರ ಎಚ್ಚರಿಕೆ
ಭೀಕರ ಬರಕ್ಕೆ ತುತ್ತಾದ ರಾಯಚೂರು, ಲಿಂಗಸೂರಿನಲ್ಲಿ ಗುಳೆ ಹೊರಟ 40 ಸಾವಿರ ಜನ
ಭೀಕರ ಬರಕ್ಕೆ ತುತ್ತಾದ ರಾಯಚೂರು, ಲಿಂಗಸೂರಿನಲ್ಲಿ ಗುಳೆ ಹೊರಟ 40 ಸಾವಿರ ಜನ
ಬೆಂಗಳೂರು: ಕ್ಯಾಬ್ಗೆ ಕಾಯುತ್ತಿದ್ದ ಯುವತಿ ಜೊತೆ ವ್ಯಕ್ತಿ ಅಸಭ್ಯ ವರ್ತನೆ
ಬೆಂಗಳೂರು: ಕ್ಯಾಬ್ಗೆ ಕಾಯುತ್ತಿದ್ದ ಯುವತಿ ಜೊತೆ ವ್ಯಕ್ತಿ ಅಸಭ್ಯ ವರ್ತನೆ
ಸುಬ್ರಹ್ಮಣ್ಯ, ಹನುಮನ ಲಹರಿ ಇರುವ ಪರ್ವ ದಿನ: 12 ರಾಶಿಗಳ ದಿನ ಭವಿಷ್ಯ
ಸುಬ್ರಹ್ಮಣ್ಯ, ಹನುಮನ ಲಹರಿ ಇರುವ ಪರ್ವ ದಿನ: 12 ರಾಶಿಗಳ ದಿನ ಭವಿಷ್ಯ