AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಬೈ ಬುರ್ಜ್ ಖಲೀಫಾ ಮೇಲೆ ಸಿಸಿಎಲ್ ಪ್ರೋಮೋ; ಇತರ ಸ್ಟಾರ್ಸ್ ಜೊತೆ ಪೋಸ್​ ಕೊಟ್ಟ ಸುದೀಪ್   

ಪ್ರೋಮೋ ಬಿಡುಗಡೆ ವೇಳೆ ಕಿಚ್ಚ ಸುದೀಪ್ ಹೈಲೈಟ್ ಆಗಿದ್ದಾರೆ. ತೆಲುಗು ನಟ ಸುಧೀರ್ ಬಾಬು, ಬೆಂಗಾಲಿ ನಟ ಜಿಸ್ಸು ಸೇನ್‌ಗುಪ್ತಾ, ಸೋನು ಸೂದ್, ಮಲಯಾಳಂ ಚಿತ್ರರಂಗದ ಇಂದ್ರಜಿತ್ ಸುಕುಮಾರನ್ ಮತ್ತು ಉನ್ನಿ ಮುಕುಂದನ್ ಸೇರಿದಂತೆ ಸಿಸಿಎಲ್​ನ ಎಂಟೂ ತಂಡಗಳ ನಾಯಕರು, ಆಟಗಾರರು ಪೋಸ್ ಕೊಟ್ಟಿದ್ದಾರೆ.  

ದುಬೈ ಬುರ್ಜ್ ಖಲೀಫಾ ಮೇಲೆ ಸಿಸಿಎಲ್ ಪ್ರೋಮೋ; ಇತರ ಸ್ಟಾರ್ಸ್ ಜೊತೆ ಪೋಸ್​ ಕೊಟ್ಟ ಸುದೀಪ್   
ಸಿಸಿಎಲ್ ಟೀಂ
ರಾಜೇಶ್ ದುಗ್ಗುಮನೆ
|

Updated on:Feb 03, 2024 | 11:08 AM

Share

ಸಿನಿಮಾ ರಂಗಕ್ಕೂ ಕ್ರಿಕೆಟ್ ಲೋಕಕ್ಕೂ  ಒಳ್ಳೆಯ ಕನೆಕ್ಷನ್ ಇದೆ. ಈಗ ಭಾರತದ ವಿವಿಧ ಚಿತ್ರರಂಗದ ಪ್ರಮುಖ ಸೆಲೆಬ್ರಿಟಿಗಳು ಕ್ರಿಕೆಟ್ ಆಡಲು ರೆಡಿ ಆಗಿದ್ದಾರೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್​ನ (ಸಿಸಿಎಲ್) 10ನೇ ಆವೃತ್ತಿಗೆ ದಿನಗಣನೆ ಆರಂಭ ಆಗಿದೆ. ಫೆಬ್ರವರಿ 23ರಂದು ಸಿಸಿಎಲ್​ಗೆ ಚಾಲನೆ ಸಿಗಲಿದೆ. ಇದರ ಪ್ರೋಮೋ ದುಬೈನ ಬುರ್ಜ್ ಖಲೀಫಾ ಕಟ್ಟಡದ ಮೇಲೆ ರಿಲೀಸ್ ಮಾಡಲಾಗಿದೆ. ಕಿಚ್ಚ ಸುದೀಪ್ (Kichcha Sudeep)​, ಬಾಲಿವುಡ್ ನಟ ಸೊಹೈಲ್ ಖಾನ್, ತಮಿಳು ನಟ ಆರ್ಯ ಮೊದಲಾದವರು ಪೋಸ್​ ಕೊಟ್ಟಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಪ್ರೋಮೋ ರಿಲೀಸ್ ವೇಳೆ ಕಿಚ್ಚ ಸುದೀಪ್ ಹೈಲೈಟ್ ಆಗಿದ್ದಾರೆ. ತೆಲುಗು ನಟ ಸುಧೀರ್ ಬಾಬು, ಬೆಂಗಾಲಿ ನಟ ಜಿಸ್ಸು ಸೇನ್‌ಗುಪ್ತಾ, ಸೋನು ಸೂದ್, ಮಲಯಾಳಂ ಚಿತ್ರರಂಗದ ಇಂದ್ರಜಿತ್ ಸುಕುಮಾರನ್ ಮತ್ತು ಉನ್ನಿ ಮುಕುಂದನ್ ಸೇರಿದಂತೆ ಸಿಸಿಎಲ್​ನ ಎಂಟೂ ತಂಡಗಳ ನಾಯಕರು, ಆಟಗಾರರು ಪೋಸ್ ಕೊಟ್ಟಿದ್ದಾರೆ.

ಈ ಮೊದಲು ಕಿಚ್ಚ ಸುದೀಪ್ ಅವರ ಸಿನಿಮಾ ಪೋಸ್ಟರ್ ಬುರ್ಜ್ ಖಲೀಫಾದಲ್ಲಿ ರಿಲೀಸ್ ಆಗಿತ್ತು. ಈಗ ಅವರು ಕ್ರಿಕೆಟ್ ಕಾರಣಕ್ಕೆ ಮತ್ತೆ ಇಲ್ಲಿಗೆ ಭೇಟಿ ನೀಡಿದ್ದಾರೆ. ಇದರಿಂದ ಅವರ ಸಂತಸ ಹೆಚ್ಚಿದೆ. ಫೆಬ್ರವರಿ 23ರಂದು ಸಿಸಿಎಲ್ ಆರಂಭ ಆಗಲಿದೆ. ಮಾರ್ಚ್ 17ರವರೆಗೆ ಪಂದ್ಯಗಳು ನಡೆಯಲಿವೆ. ಲೀಗ್ ಹಂತದಲ್ಲಿ  16 ಪಂದ್ಯಗಳು ನಡೆಯಲಿವೆ. ಮಾರ್ಚ್ 10ರವರೆಗೆ ಲೀಗ್ ಪಂದ್ಯಗಳು ಇರಲಿವೆ. ಮೊದಲ ಪಂದ್ಯ ಯುಎಇಯ ಶಾರ್ಜಾದಲ್ಲಿ ನಡೆಯಲಿದೆ. ಮೊದಲ ಪಂದ್ಯ ಮುಂಬೈ ಹೀರೋಸ್ ಮತ್ತು ಕೇರಳ ಸ್ಟ್ರೈಕರ್ಸ್ ಮಧ್ಯೆ ನಡೆಯಲಿದೆ.

ಇದನ್ನೂ ಓದಿ: ಬಿಗ್​ಬಾಸ್ 10 ಸ್ಪರ್ಧಿಗಳೊಟ್ಟಿಗೆ ಕಿಚ್ಚ ಸುದೀಪ್ ಪಾರ್ಟಿ: ಇಲ್ಲಿವೆ ಚಿತ್ರಗಳು

ಜಿಯೋ ಸಿನಿಮಾದಲ್ಲಿ ಈ ಬಾರಿಯ ಸಿಸಿಎಲ್ ಪ್ರಸಾರ ಕಾಣಲಿದೆ. ಭಾರತದ ಐದು ಸ್ಥಳಗಳಲ್ಲಿ 24 ದಿನಗಳ ಕಾಲ ಕ್ರಿಕೆಟ್ ಪಂದ್ಯ ನಡೆಯಲಿದೆ. ಬೆಂಗಳೂರು, ಹೈದರಾಬಾದ್, ಚಂಡೀಗಢ, ತಿರುವನಂತಪುರ ಮತ್ತು ವಿಶಾಖಪಟ್ಟಣದಲ್ಲಿ ಮ್ಯಾಚ್​ಗಳನ್ನು ಆಯೋಜನೆ ಮಾಡಲಾಗಿದೆ. ಶನಿವಾರ ಹಾಗೂ ಭಾನುವಾರ ಮಾತ್ರ ಪಂದ್ಯಗಳು ನಡೆಯಲಿವೆ

ತಂಡಗಳ ಹೆಸರು..

 ಕರ್ನಾಟಕ ಬುಲ್ಡೋಜರ್ಸ್

ಮುಂಬೈ ಹೀರೋಸ್

ಕೇರಳ ಸ್ಟ್ರೈಕರ್ಸ್

ತೆಲುಗು ವಾರಿಯರ್ಸ್

ಬೆಂಗಾಲ್ ಟೈಗರ್ಸ್

ಭೋಜ್ಪುರಿ ದಬಾಂಗ್ಸ್

ಚೆನ್ನೈ ರೈನೋಸ್

ಪಂಜಾಬ್ ದಿ ಶೇರ್

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:40 am, Sat, 3 February 24

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ