AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಕ್ರವರ್ತಿ ಕಡೆಯಿಂದ ಮತ್ತೆ ರಿಪೀಟ್ ಆಯಿತು ತಪ್ಪು; ಕಿಚ್ಚನ ಬುದ್ಧಿವಾದಕ್ಕೆ ಬದಲಾಗಲಿಲ್ಲ ಚಂದ್ರಚೂಡ್

ಶಮಂತ್​ ಬ್ರೋ ಗೌಡ ಬಿಗ್​ ಬಾಸ್​ ಮನೆಯಲ್ಲಿ ಸಾಕಷ್ಟು ಹೈಲೈಟ್​ ಆಗುತ್ತಿದ್ದಾರೆ. ಈ ಮೊದಲು ಪ್ರಿಯಾಂಕಾ ತಿಮ್ಮೇಶ್​ ಜತೆ ಅವರು ಕ್ಲೋಸ್​ ಆಗಿದ್ದರು. ಈ ವಿಚಾರಕ್ಕೆ ಚಕ್ರವರ್ತಿ ಚಂದ್ರಚೂಡ್​ ಸಾಕಷ್ಟು ಉರಿದುಕೊಂಡಿದ್ದರು.

ಚಕ್ರವರ್ತಿ ಕಡೆಯಿಂದ ಮತ್ತೆ ರಿಪೀಟ್ ಆಯಿತು ತಪ್ಪು; ಕಿಚ್ಚನ ಬುದ್ಧಿವಾದಕ್ಕೆ ಬದಲಾಗಲಿಲ್ಲ ಚಂದ್ರಚೂಡ್
ಅಶ್ಲೀಲ ಸನ್ನೆ ಮಾಡಿ ಸಮತೋಲನದ ನೆಪ ಹೇಳಿದ ಚಕ್ರವರ್ತಿಗೆ ಸುದೀಪ್ ಸಖತ್​ ಕ್ಲಾಸ್​
TV9 Web
| Edited By: |

Updated on: Jul 14, 2021 | 2:59 PM

Share

ಚಕ್ರವರ್ತಿ ಚಂದ್ರಚೂಡ್​ ಕಳೆದವಾರದ ಎಪಿಸೋಡ್​ನಲ್ಲಿ ಬಾಯಿಗೆ ಬಂದಂತೆ ಮಾತನಾಡಿ ಕಿಚ್ಚ ಸುದೀಪ್​ ಕಡೆಯಿಂದ ಛೀಮಾರಿ ಹಾಕಿಸಿಕೊಂಡಿದ್ದರು. ನಂತರ ತಪ್ಪಿನ ಅರಿವಾಗಿ ಅವರು ಕ್ಷಮೆ ಕೇಳಿದ್ದರು. ಅಲ್ಲದೆ, ‘ಮುಂದಿನ ವಾರ ಹೊಸ ಚಕ್ರವರ್ತಿಯನ್ನು ನೀವು ನೋಡುತ್ತೀರಿ’ ಎಂದು ಪ್ರಾಮಿಸ್​ ಮಾಡಿದ್ದರು. ಆದರೆ, ಈಗ ಅವರು ಮತ್ತೆ ಹಳೆಯ ಚಾಳಿ ಮುಂದುವರಿಸಿದ್ದಾರೆ. ಶಮಂತ್​ ಬ್ರೋ ಗೌಡ ವಿರುದ್ಧ ವೈಯಕ್ತಿಕವಾಗಿ ಹರಿಹಾಯ್ದಿದ್ದಾರೆ.

ಶಮಂತ್​ ಬ್ರೋ ಗೌಡ ಬಿಗ್​ ಬಾಸ್​ ಮನೆಯಲ್ಲಿ ಸಾಕಷ್ಟು ಹೈಲೈಟ್​ ಆಗುತ್ತಿದ್ದಾರೆ. ಈ ಮೊದಲು ಪ್ರಿಯಾಂಕಾ ತಿಮ್ಮೇಶ್​ ಜತೆ ಅವರು ಕ್ಲೋಸ್​ ಆಗಿದ್ದರು. ಈ ವಿಚಾರಕ್ಕೆ ಚಕ್ರವರ್ತಿ ಚಂದ್ರಚೂಡ್​ ಸಾಕಷ್ಟು ಉರಿದುಕೊಂಡಿದ್ದರು. ಈಗ ದಿವ್ಯಾ ಸುರೇಶ್​ಗೆ ಶಮಂತ್ ಕ್ಲೋಸ್​ ಆಗುತ್ತಿದ್ದಾರೆ. ಈ ವಿಚಾರದಲ್ಲೂ ಚಕ್ರವರ್ತಿ ಸಿಟ್ಟು ಮಾಡಿಕೊಂಡಿದ್ದಾರೆ.

ಆರಂಭದಲ್ಲಿ ಶಮಂತ್​ ಅವರನ್ನು ಕಂಡರೆ ದಿವ್ಯಾ ಸುರೇಶ್​ ಮಾರು ದೂರ ಹೋಗಿ ನಿಲ್ಲುತ್ತಿದ್ದರು. ಈಗ ಬಿಗ್​ ಬಾಸ್​ ಸೆಕೆಂಡ್ ಇನ್ನಿಂಗ್ಸ್​ನಲ್ಲಿ ಶಮಂತ್​ ಜತೆ ಒಳ್ಳೆಯ ಗೆಳೆತನ ಹೊಂದಿದ್ದಾರೆ ದಿವ್ಯಾ. ಈ ವಾರ ‘ನಿಂಗ್​ ಐತೆ’ ತಂಡದಲ್ಲಿ ಶಮಂತ್​ ಹಾಗೂ ದಿವ್ಯಾ ಸುರೇಶ್​ ಇಬ್ಬರೂ ಇದ್ದಾರೆ. ಈ ತಂಡಕ್ಕೆ ಬಿಗ್​ ಬಾಸ್​ ಚಾಲೆಂಜ್​ ಒಂದನ್ನು ನೀಡಿದ್ದರು.

ಈ ಟಾಸ್ಕ್​ನ ಅನುಸಾರ ನಿಂಗ್​ ಐತೆ ತಂಡದ ಇಬ್ಬರು 10 ಜತೆ ಬಟ್ಟೆಯಲ್ಲಿ ಮಿಂಚಬೇಕು. ಈ ಟಾಸ್ಕ್​ಗೆ ದಿವ್ಯಾ ಹಾಗೂ ಶಮಂತ್​ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಮ್ಯಾಚಿಂಗ್​ ಡ್ರೆಸ್​, ಸಮ್ಮರ್​ ಕಪಲ್​ ಲುಕ್ ಸೇರಿ ನಾನಾ ವಿಧವಾದ ಲುಕ್​ನಲ್ಲಿ ಇವರು ಮಿಂಚಿದ್ದಾರೆ. ಈ ವಿಚಾರದಲ್ಲಿ ಚಕ್ರವರ್ತಿ ಟಾಂಗ್​ ನೀಡಿದ್ದಾರೆ.

‘ನಾನಾ ರೀತಿಯ ಬಟ್ಟೆ ಹಾಕ್ಕೊಂಡು ಏನ್​ ಏನು ಮಾಡ್ತಾ ಇದೀಯಾ? ಇವನು ಯಾವಾಗಲೂ ಎರಡು ದೋಣಿ ಮೇಲೆ ಕಾಲಿಡೋದು. ಈ ಹುಡುಗ ಯಾವಾಗಲಾದರೂ ಒಂದು ದಾರೀಲಿ ನಡೆಯಲ್ಲ’ ಎಂದು ಹೇಳುವ ಮೂಲಕ ಚಕ್ರವರ್ತಿ ಮೊದಲಿನ ಚಾಳಿ ಮುಂದುವರಿಸಿದ್ದಾರೆ. ಪ್ರಿಯಾಂಕಾ ತಿಮ್ಮೇಶ್​ ಹಾಗೂ ದಿವ್ಯಾ ಜತೆ ಶಮಂತ್​ ಕ್ಲೋಸ್​ ಆಗಿರುವುದಕ್ಕೆ ಈ ಮಾತು ಬಂದಿದೆ.

ಇದನ್ನೂ ಓದಿ: ಅವಾಚ್ಯ ಶಬ್ದಗಳನ್ನು ಬಳಸಿದ ಚಕ್ರವರ್ತಿ ಚಂದ್ರಚೂಡ್​ಗೆ ಸುದೀಪ್​ ಹೇಳಿದ್ದೇನು?

‘72 ದಿನಗಳ ಕಾಲ ನೋಡಿದ ಕೆಪಿ ಹೀಗೆ ಇರಲಿಲ್ಲ’; ಚಕ್ರವರ್ತಿ ಪ್ರಭಾವಕ್ಕೊಳಗಾದ ಅರವಿಂದ್​ಗೆ ಸುದೀಪ್​ ಎಚ್ಚರಿಕೆ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್