AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cinema Lovers Day: ಸಿನಿಪ್ರಿಯರಿಗೆ ಪಿವಿಆರ್​ ಬಂಪರ್​ ಆಫರ್​; ಜ.20ರಂದು ಸಿನಿಮಾ ಟಿಕೆಟ್​ ಬೆಲೆ ಕೇವಲ 99 ರೂಪಾಯಿ

Cinema Lovers Day PVR Offer: ಕೇವಲ 99 ರೂಪಾಯಿಗೆ ಮಲ್ಟಿಪ್ಲೆಕ್ಸ್​ನಲ್ಲಿ ಸಿನಿಮಾ ನೋಡಬಹುದು ಎಂದರೆ ಇದು ಸೂಪರ್​ ಆಫರ್​. ಆದರೆ ಒಂದಷ್ಟು ಷರತ್ತುಗಳು ಕೂಡ ಇವೆ.

Cinema Lovers Day: ಸಿನಿಪ್ರಿಯರಿಗೆ ಪಿವಿಆರ್​ ಬಂಪರ್​ ಆಫರ್​; ಜ.20ರಂದು ಸಿನಿಮಾ ಟಿಕೆಟ್​ ಬೆಲೆ ಕೇವಲ 99 ರೂಪಾಯಿ
ಮಲ್ಟಿಪ್ಲೆಕ್ಸ್ (ಸಾಂದರ್ಭಿಕ ಚಿತ್ರ)
TV9 Web
| Edited By: |

Updated on:Jan 18, 2023 | 9:19 AM

Share

ಚಿತ್ರಮಂದಿರಕ್ಕೆ ಜನರನ್ನು ಕರೆತರಲು ಹಲವು ಪ್ರಯತ್ನಗಳನ್ನು ಮಾಡಲಾಗುತ್ತದೆ. ಆ ನಿಟ್ಟಿನಲ್ಲಿ ಪಿವಿಆರ್​ (PVR) ಸಂಸ್ಥೆ ಒಂದು ಹೊಸ ಆಫರ್ ನೀಡಿದೆ. ಜನವರಿ 20ರಂದು ‘ಸಿನಿಮಾ ಲವರ್ಸ್​ ಡೇ’ (Cinema Lovers Day) ಆಚರಿಸಲಾಗುತ್ತಿದೆ. ಈ ಪ್ರಯುಕ್ತ ಅಂದು ಪಿವಿಆರ್​ನಲ್ಲಿ ಪ್ರದರ್ಶನ ಆಗುವ ಎಲ್ಲ ಸಿನಿಮಾಗಳ ಟಿಕೆಟ್​ ಬೆಲೆಯನ್ನು ಕೇವಲ 99 ರೂಪಾಯಿಗೆ ನಿಗದಿ ಮಾಡಲಾಗಿದೆ. ಈ ಆಫರ್​ ಪಡೆಯಲು ಸಿನಿಮಾಸಕ್ತರು ಉತ್ಸುಕರಾಗಿದ್ದಾರೆ. ಪಿವಿಆರ್​ ನೀಡುತ್ತಿರುವ ಈ ಅವಕಾಶವನ್ನು ಉಪಯೋಗಿಸಿಕೊಳ್ಳಲು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್​ ಬುಕ್​ ಮಾಡುವ ನಿರೀಕ್ಷೆ ಇದೆ. ಈಗಾಗಲೇ ಪಿವಿಆರ್​ ಮಲ್ಟಿಪ್ಲೆಕ್ಸ್​ನಲ್ಲಿ (PVR Multiplex) ಉತ್ತಮ ಪ್ರದರ್ಶನ ಕಾಣುತ್ತಿರುವ ಸಿನಿಮಾಗಳಿಗೆ ಇದರಿಂದ ಅನುಕೂಲ ಆಗಲಿದೆ.

ಕೇವಲ 99 ರೂಪಾಯಿಗೆ ಮಲ್ಟಿಪ್ಲೆಕ್ಸ್​ನಲ್ಲಿ ಸಿನಿಮಾ ನೋಡಬಹುದು ಎಂದರೆ ಇದು ಸೂಪರ್​ ಆಫರ್​. ಆದರೆ ಒಂದಷ್ಟು ಷರತ್ತುಗಳು ಕೂಡ ಇವೆ. ಈ ಆಫರ್​ ಇರುವುದು ಜ.20ರಂದು ಮಾತ್ರ. ಚಂಡಿಗಡ, ಪಠಾಣ್​ಕೋಟ್​ ಮತ್ತು ಪಾಂಡಿಚರಿಯಲ್ಲಿ ಈ ಆಫರ್​ ಅನ್ವಯ ಆಗುವುದಿಲ್ಲ. ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಕೇರಳದಲ್ಲಿ 100 ರೂಪಾಯಿ ಟಿಕೆಟ್​ ಬೆಲೆ ಜೊತೆಗೆ ಜಿಎಸ್​ಟಿ ಕೂಡ ಇರಲಿದೆ. ತೆಲಂಗಾಣದಲ್ಲಿ 112 + ಜಿಎಸ್​ಟಿ ಸೇರ್ಪಡೆ ಆಗಲಿದೆ. ನಾರ್ಮಲ್​ ಸ್ಕ್ರೀನ್​ಗಳಿಗೆ ಮಾತ್ರ ಈ ಆಫರ್​ ಇರುತ್ತದೆ. 4ಡಿಎಕ್ಸ್​, ಐಮ್ಯಾಕ್ಸ್​ ಮುಂತಾದ ಸ್ಕ್ರೀನ್​ಗಳಲ್ಲಿ ಎಂದಿನಂತೆ ದುಬಾರಿ ಟಿಕೆಟ್​ ಬೆಲೆ ಇರಲಿದೆ ಎಂದು ಪಿವಿಆರ್​ ತಿಳಿಸಿದೆ.

ಇದನ್ನೂ ಓದಿ: 75 ರೂ. ಟಿಕೆಟ್​ ಆಫರ್​: ಟಿಕೆಟ್ ಕಾಯ್ದಿರಿಸಲು ಮುಗಿಬಿದ್ದ ಪ್ರೇಕ್ಷಕರು; ಬಹುತೇಕ ಶೋಗಳು ಸೋಲ್ಡ್​ಔಟ್

ಇದನ್ನೂ ಓದಿ
Image
Avatar 2: 1650 ರೂ. ದಾಟಿದ ‘ಅವತಾರ್​ 2’ ಟಿಕೆಟ್​ ಬೆಲೆ; ಆದ್ರೂ ಮುಗಿಬಿದ್ದು ಬುಕ್​ ಮಾಡುತ್ತಿರುವ ಪ್ರೇಕ್ಷಕರು
Image
75 ರೂ. ಟಿಕೆಟ್​ ಆಫರ್​: ಟಿಕೆಟ್ ಕಾಯ್ದಿರಿಸಲು ಮುಗಿಬಿದ್ದ ಪ್ರೇಕ್ಷಕರು; ಬಹುತೇಕ ಶೋಗಳು ಸೋಲ್ಡ್​ಔಟ್
Image
ಮಲ್ಟಿಪ್ಲೆಕ್ಸ್​ನಲ್ಲಿ ಸಿನಿಮಾ ಟಿಕೆಟ್​ ಬೆಲೆ 75 ರೂಪಾಯಿ ಮಾತ್ರ; ವಿಶೇಷ ದಿನಕ್ಕೆ ಇಲ್ಲಿದೆ ಮಸ್ತ್​ ಆಫರ್​
Image
BookMyShowನಲ್ಲಿ ಇನ್ಮುಂದೆ ಹೊಸ ಸಿನಿಮಾಗಳನ್ನು ಖರೀದಿಸಿ ನೋಡಬಹುದು!

ಕಳೆದ ವಾರ ಸಂಕ್ರಾಂತಿ ಪ್ರಯುಕ್ತ ಅನೇಕ ಸಿನಿಮಾಗಳು ಬಿಡುಗಡೆ ಆದವು. ನಂದಮೂರಿ ಬಾಲಕೃಷ್ಣ ನಟನೆಯ ‘ವೀರ ಸಿಂಹ ರೆಡ್ಡಿ’, ಮೆಗಾಸ್ಟಾರ್​ ಚಿರಂಜೀವಿ ನಟನೆಯ ‘ವಾಲ್ತೇರು ವೀರಯ್ಯ’, ದಳಪತಿ ವಿಜಯ್​-ರಶ್ಮಿಕಾ ಮಂದಣ್ಣ ಜೋಡಿಯ ‘ವಾರಿಸು’, ಅಜಿತ್​ ಕುಮಾರ್​ ಅಭಿನಯದ ‘ತುನಿವು’ ಮುಂತಾದ ಚಿತ್ರಗಳು ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದಿವೆ. ಈ ಸಿನಿಮಾಗಳಿಗೆ ಜನವರಿ 20ರಂದು 99 ರೂಪಾಯಿ ಟಿಕೆಟ್​ ಬೆಲೆಯ ಆಫರ್​ನಿಂದ ಹೆಚ್ಚಿನ ಕಲೆಕ್ಷನ್​ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಮಲ್ಟಿಪ್ಲೆಕ್ಸ್​ನಲ್ಲಿ ಸಿನಿಮಾ ಟಿಕೆಟ್​ ಬೆಲೆ 75 ರೂಪಾಯಿ ಮಾತ್ರ; ವಿಶೇಷ ದಿನಕ್ಕೆ ಇಲ್ಲಿದೆ ಮಸ್ತ್​ ಆಫರ್​

ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರು ಒಟಿಟಿಗೆ ಹೆಚ್ಚು ಒಗ್ಗಿಕೊಳ್ಳುತ್ತಿದ್ದಾರೆ. ಮನೆಯಲ್ಲೇ ಕುಳಿತು ಸಿನಿಮಾ ನೋಡಲು ಬಯಸುತ್ತಿದ್ದಾರೆ. ಮಲ್ಟಿಪ್ಲೆಕ್ಸ್​ಗಳಲ್ಲಿ ಟಿಕೆಟ್​ ಬೆಲೆ ದುಬಾರಿ ಆಗಿರುವುದು ಕೂಡ ಇದಕ್ಕೆ ಮುಖ್ಯ ಕಾರಣ ಎಂಬ ಮಾತಿದೆ. ಟಿಕೆಟ್​ ಬೆಲೆ ತಗ್ಗಿಸಿದರೆ ಪ್ರೇಕ್ಷಕರು ಖಂಡಿತವಾಗಿ ಚಿತ್ರಮಂದಿರಗಳಿಗೆ ಮರಳಿ ಬರುತ್ತಾರೆ ಎಂಬುದು ಇತ್ತೀಚೆಗೆ ಸಾಬೀತಾಗಿತ್ತು. ಅದೇ ಸೂತ್ರವನ್ನು ಪಿವಿಆರ್​ ಮತ್ತೆ ಪ್ರಯೋಗಿಸುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:46 pm, Tue, 17 January 23

Follow Us
Web contact
Web contact

TV9 Kannada

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು