AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dhanush: ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮೊಬೈಲ್​ಗೆ ಬಂತು ಧನುಷ್​ ಸಿನಿಮಾ ಕರ್ಣನ್​!

Karnan Movie Leak: ಲಾಕ್​ಡೌನ್​ ಬಳಿಕ ತೆರೆಕಂಡ ಎಲ್ಲ ದೊಡ್ಡ ಸಿನಿಮಾಗಳು ಕೂಡ ಪೈರಸಿ ಹಾವಳಿಗೆ ಬಲಿಯಾಗಿವೆ. ಈಗ ಧನುಷ್​ ನಟನೆಯ ಕರ್ಣನ್​ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ.

Dhanush: ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮೊಬೈಲ್​ಗೆ ಬಂತು ಧನುಷ್​ ಸಿನಿಮಾ ಕರ್ಣನ್​!
ಧನುಷ್​
ಮದನ್​ ಕುಮಾರ್​
|

Updated on: Apr 09, 2021 | 1:08 PM

Share

ಕೆಲವೇ ದಿನಗಳ ಹಿಂದೆ ನಟ ಧನುಷ್​ ಅವರು ‘ಅಸುರನ್​’ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡು ಬೀಗಿದ್ದರು. ಅದರ ಬೆನ್ನಲ್ಲೇ ಅವರ ಹೊಸ ಸಿನಿಮಾ ‘ಕರ್ಣನ್​’ ಬಿಡುಗಡೆ ಆಗಿದೆ. ಇಂದು (ಏ.9) ತೆರೆಕಂಡ ಈ ಚಿತ್ರಕ್ಕೆ ಪೈರಸಿ ಕಾಟ ಶುರುವಾಗಿದೆ. ಅಚ್ಚರಿ ಎಂದರೆ, ಸಿನಿಮಾ ತೆರೆಕಂಡ ಕೆಲವೇ ಗಂಟೆಗಳಲ್ಲಿ ಇದನ್ನು ಕದಿಯಲಾಗಿದೆ! ಹಲವು ಪೈರಸಿ ಜಾಲತಾಣಗಳಲ್ಲಿ ಈ ಚಿತ್ರ ಡೌನ್​ಲೋಡ್​ಗೆ ಲಭ್ಯವಿದೆ.

ಎಲ್ಲ ಭಾಷೆಯ ಚಿತ್ರರಂಗಗಳೂ ಈಗ ಸಂಕಷ್ಟದಲ್ಲಿವೆ. ಕೊರೊನಾ ಭೀತಿಯಿಂದಾಗಿ ಕೆಲವು ವರ್ಗದ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಅದರ ಜೊತೆಗೆ ಶೇ.50 ಆಸನ ಮಿತಿ ಆದೇಶ ಜಾರಿ ಆಗಿದೆ. ಈ ಸಂಕಷ್ಟಗಳ ನಡುವೆ ಒಂದು ಸಿನಿಮಾ ಗೆಲ್ಲುವುದು ಸುಲಭವಲ್ಲ. ಅಂಥದ್ದರಲ್ಲಿ ‘ಕರ್ಣನ್​’ ನಿರ್ಮಾಪಕರು ಧೈರ್ಯ ತೋರಿಸಿ ಈ ಚಿತ್ರವನ್ನು ಬಿಡುಗಡೆ ಮಾಡಿದ್ದರು. ಆದರೆ ಅವರ ಶ್ರಮವೆಲ್ಲ ಈಗ ನೀರಿನಲ್ಲಿ ಹೋಮ ಮಾಡಿದಂತೆ ಆಗಿದೆ.

ಪೈರಸಿ ಎಂಬುದು ಹೊಸ ಸಂಕಷ್ಟವೇನಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಪೈರಸಿ ಕಾಟ ಮಿತಿ ಮೀರಿದೆ. ಕಾನೂನು ಎಷ್ಟೇ ಬಿಗಿಯಾಗಿದ್ದರೂ, ನಿರ್ಮಾಪಕರು ಎಷ್ಟೇ ಮುನ್ನೆಚ್ಚರಿಕೆ ತೆಗೆದುಕೊಂಡರೂ ಕೂಡ ಅದಕ್ಕೆ ಎರಡರಷ್ಟು ಚಾಲಾಕಿತನದೊಂದಿಗೆ ಪೈರಸಿ ಮಾಡಲಾಗುತ್ತಿದೆ. ಲಾಕ್​ಡೌನ್​ ಬಳಿಕ ತೆರೆಕಂಡ ಎಲ್ಲಾ ದೊಡ್ಡ ಸಿನಿಮಾಗಳು ಕೂಡ ಈ ಹಾವಳಿಗೆ ಬಲಿಯಾಗಿವೆ. ಈಗ ಧನುಷ್​ ನಟನೆ ಕರ್ಣನ್​ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ.

ಕನ್ನಡದಲ್ಲಿ ತೆರೆಕಂಡ ರಾಬರ್ಟ್​, ಪೊಗರು, ಯುವರತ್ನ ಚಿತ್ರಗಳು ಕೂಡ ಪೈರಸಿಗೆ ತುತ್ತಾದವು. ರೂಹಿ, ದಿ ಬಿಗ್​ ಬುಲ್​, ಮುಂಬೈ ಸಾಗಾ ಮುಂತಾದ ಬಾಲಿವುಡ್​ ಸಿನಿಮಾಗಳಿಗೂ ಈ ಕಾಟ ತಪ್ಪಿಲ್ಲ. ಹಾಲಿವುಡ್​ನ ಗಾಡ್ಜಿಲಾ ವರ್ಸಸ್​ ಕಾಂಗ್​ ಸಹ ಪೈರಸಿ ವೆಬ್​ಸೈಟ್​ಗಳಲ್ಲಿ ಡೌನ್​ಲೋಡ್​ಗೆ ಲಭ್ಯವಿದೆ. ಈಗ ಕರ್ಣನ್​ ಚಿತ್ರವನ್ನು ಕಳ್ಳರು ಟಾರ್ಗೆಟ್​ ಮಾಡಿದ್ದಾರೆ. ತಮಿಳ್​ ರಾಕರ್ಸ್​ ಮುಂತಾದ ವೆಬ್​ಸೈಟ್​ಗಳಲ್ಲಿ ಎಚ್​​ಡಿ ಕಾಪಿ ಸಿಗುತ್ತಿದೆ. ಇದರಿಂದ ಧನುಷ್​ ಚಿತ್ರಕ್ಕೆ ಬಾಕ್ಸ್​ ಆಫೀಸ್​ನಲ್ಲಿ ತೀವ್ರ ಹಿನ್ನಡೆ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಯುವರತ್ನಕ್ಕೆ ಮೊದಲ ದಿನವೇ ಶುರುವಾಯ್ತು ಪೈರಸಿ ಕಾಟ; ಎಲ್ಲೇ ಪೈರಸಿ ಲಿಂಕ್ ಸಿಕ್ಕರೂ ರಿಪೋರ್ಟ್ ಮಾಡಿ ಎಂದ ಚಿತ್ರತಂಡ

ಸಿಕ್ಕಿಬಿದ್ದ ‘ರಾಬರ್ಟ್​’ ಪೈರಸಿ ಮಾಡುತ್ತಿದ್ದ ವ್ಯಕ್ತಿ! ‘ದುಡ್ಡು ಕೊಟ್ಟರೆ ಹೊಸ ಕಾಪಿ ಶೇರ್ ಮಾಡ್ತೀನಿ’ ಎನ್ನುತ್ತಿದ್ದ ಆರೋಪಿ!

(Dhanush starrer Karnan Movie Leaked Online and Full HD film available for download)

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ